AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Michael Ajay: ಒಂದೇ ಮಾತಲ್ಲಿ ಸುದೀಪ್ ಮನಸ್ಸು ಗೆದ್ದ ಮೈಕಲ್ ಅಜಯ್

ಮೈಕಲ್ ಅವರ ತಂದೆ ನೈಜೀರಿಯಾ ಮೂಲದವರು. ಹೀಗಾಗಿ, ಮೈಕಲ್​ಗೆ ಸರಿಯಾಗಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ, ದೊಡ್ಮನೆ ಒಳಗೆ ಹೋದ ಬಳಿಕ ಅವರು ಕನ್ನಡ ಕಲಿಯಲು ಸಾಕಷ್ಟು ಪ್ರಯತ್ನಿಸಿದರು. ಈಗ ಅವರು ಸುದೀಪ್ ಮನಸ್ಸು ಗೆದ್ದಿದ್ದಾರೆ.

Michael Ajay: ಒಂದೇ ಮಾತಲ್ಲಿ ಸುದೀಪ್ ಮನಸ್ಸು ಗೆದ್ದ ಮೈಕಲ್ ಅಜಯ್
ಮೈಕಲ್-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Jan 08, 2024 | 7:31 AM

ಮೈಕಲ್ ಅಜಯ್ (Michael Ajay) ಅವರು ‘ಬಿಗ್ ಬಾಸ್​ ಕನ್ನಡ ಸೀಸನ್ 10’ರಿಂದ ಎಲಿಮಿನೇಟ್ ಆಗಿದ್ದಾರೆ. ಕನ್ನಡ ಸರಿಯಾಗಿ ಬರದೇ ಇರುವುದು ಮೈಕಲ್​ಗೆ ಹಿನ್ನಡೆ ಆಗಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ಕನ್ನಡ ಕಲಿಯಲು ಅವರು ಸಾಕಷ್ಟು ಪ್ರಯತ್ನಿಸಿದ್ದರು. ಒಳ್ಳೆಯ ರೀತಿಯಲ್ಲಿ ಟಾಸ್ಕ್ ಆಡಿದ್ದರು. ಹೀಗಾಗಿ 90 ದಿನಗಳ ಕಾಲ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದರು. ಈಗ ಅವರ ಎಲಿಮಿನೇಷನ್ ಅನೇಕರಿಗೆ ಬೇಸರ ತಂದಿದೆ. ಎಲಿಮಿನೇಟ್ ಆದ ಬಳಿಕ ವೇದಿಕೆಗೆ ಬಂದ ಮೈಕಲ್ ಅವರು ಸುದೀಪ್ ಅವರ ಮನಸ್ಸು ಗೆದ್ದಿದ್ದಾರೆ.

ಮೈಕಲ್ ಅವರ ತಂದೆ ನೈಜೀರಿಯಾ ಮೂಲದವರು. ಹೀಗಾಗಿ, ಮೈಕಲ್​ಗೆ ಸರಿಯಾಗಿ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ, ದೊಡ್ಮನೆ ಒಳಗೆ ಹೋದ ಬಳಿಕ ಅವರು ಕನ್ನಡ ಕಲಿಯಲು ಸಾಕಷ್ಟು ಪ್ರಯತ್ನಿಸಿದರು. ಈ ಕಾರಣಕ್ಕೆ ಅವರಿಗೆ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತ್ತು. ಈಗ ಅವರು ಕಡಿಮೆ ವೋಟ್ ಪಡೆದು ಎಲಿಮಿನೇಟ್ ಆಗಿದ್ದಾರೆ. ಅವರು ಹೊರ ಹೋಗುವಾಗ ಪ್ರತಿಯೊಬ್ಬ ಸ್ಪರ್ಧಿಯೂ ಕಣ್ಣೀರು ಹಾಕಿದ್ದಾರೆ. ಮೈಕಲ್ ಅವರಿಗೂ ದುಃಖ ತಡೆದುಕೊಳ್ಳಲು ಆಗಲಿಲ್ಲ.

ಎಲಿಮಿನೇಟ್ ಆದ ಬಳಿಕ ಮೈಕಲ್ ಅವರು ವೇದಿಕೆ ಮೇಲೆ ಬಂದರು. ಈ ವೇಳೆ ಅವರು ಸುದೀಪ್ ಅವರಿಗೆ ಹಗ್ ಕೊಟ್ಟರು. ಆಗ ಅವರು ಒಂದು ಮಾತನ್ನು ಹೇಳಿದರು. ‘ಸುದೀಪ್ ಅವರನ್ನು ಕಂಡರೆ ಭಯ ಆಗುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ, ನನಗೆ ಯಾವಾಗಲೂ ಆ ರೀತಿ ಅನಿಸಲೇ ಇಲ್ಲ. ಯಾವುದೋ ಹಳೆಯ ಗೆಳೆಯನ ಭೇಟಿ ಮಾಡುತ್ತಿದ್ದೇನೆ ಅನಿಸುತ್ತದೆ’ ಎಂದಿದ್ದಾರೆ ಮೈಕಲ್. ಈ ಮಾತನ್ನು ಕೇಳಿ ಸುದೀಪ್​ಗೆ ಖುಷಿ ಆಯಿತು. ಅವರು ಮತ್ತೊಮ್ಮೆ ಮೈಕಲ್​ನ ಖುಷಿಯಿಂದ ತಬ್ಬಿಕೊಂಡರು.

ಇದನ್ನೂ ಓದಿ: ‘ಇನ್ನು ಬಾಕಿ ಉಳಿದಿರೋದು ಒಂದು ಮಾತ್ರ’; ಟಾರ್ಗೆಟ್ ತಿಳಿಸಿದ ಮೈಕಲ್ ಅಜಯ್

‘ಹೋಗುವಾಗ ಕನ್ನಡ ಮಾತನಾಡೋಕೆ ಒದ್ದಾಡುತ್ತಿದ್ದಿರಿ. ಈಗ ಮರಳಿ ಬರುವಾಗ ದೊಡ್ಡ ಅಭಿಮಾನಿ ಬಳಗ ಪಡೆದಿದ್ದೀರಿ. ಮಣ್ಣಿನ ಮಗ ಆಗಿದ್ದೀರಿ’ ಎಂದು ಮೈಕಲ್ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಿದರು. ‘ಬಿಗ್ ಬಾಸ್’ ಮನೆಯಲ್ಲಿ ಸದ್ಯ 8 ಮಂದಿ ಇದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್