AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಳ್ಮೆ ಕಳೆದುಕೊಂಡ ತುಕಾಲಿ ಸಂತು, ಮೈಖಲ್​ಗೆ ಬಿತ್ತು ಏಟು

Tukali Santhosh: ಬಿಗ್​ಬಾಸ್ ಮನೆಯಲ್ಲಿ ನಗುತ್ತಾ, ನಗಿಸುತ್ತಾ ಜಾಲಿಯಾಗಿರುವ ತುಕಾಲಿ ಸಂತು, ಇಂದಿನ ಟಾಸ್ಕ್​ನಲ್ಲಿ ತಾಳ್ಕೆ ಕಳೆದುಕೊಂಡು ಮೈಖಲ್​ಗೆ ಹೊಡೆದೇ ಬಿಟ್ಟರು.

ತಾಳ್ಮೆ ಕಳೆದುಕೊಂಡ ತುಕಾಲಿ ಸಂತು, ಮೈಖಲ್​ಗೆ ಬಿತ್ತು ಏಟು
ಮೈಖಲ್-ತುಕಾಲಿ
ಮಂಜುನಾಥ ಸಿ.
|

Updated on: Dec 20, 2023 | 11:42 PM

Share

ಬಿಗ್​ಬಾಸ್ (BiggBoss) ಮನೆಯಲ್ಲಿ ತುಕಾಲಿ ಸಂತು ಸದಾ ಕಾಮಿಡಿ ಮಾಡುತ್ತಾ, ಅವರಿವರ ಕಾಲೆಳೆಯುತ್ತಾ, ನಾಮಿನೇಷನ್ ಬಂದಾಗಷ್ಟೆ ನೇರವಾಗಿ, ತುಸು ಗಟ್ಟಿಯಾಗಿ ಮಾತನಾಡುತ್ತಾರೆ. ಆದರೆ ತುಕಾಲಿ ಬುಧವಾರ ಪ್ರಸಾರವಾದ ಎಪಿಸೋಡ್​ನಲ್ಲಿ ತುಸು ಅಗ್ರೆಸಿವ್ ಆಗಿದ್ದರು, ತಾಳ್ಮೆ ಕಳೆದುಕೊಂಡು ಮೈಖಲ್​ಗೆ ಒಂದು ಏಟು ಸಹ ಹೊಡೆದೇ ಬಿಟ್ಟರು.

ಆಗಿದ್ದಿಷ್ಟು ಕೊಳೆ ಒಳ್ಳೆಯದಲ್ಲ ಎಂಬ ಟಾಸ್ಕ್​ ಅನ್ನು ಬಿಗ್​ಬಾಸ್ ಸ್ಪರ್ಧಿಗಳಿಗೆ ನೀಡಿದ್ದರು. ಆ ಟಾಸ್ಕ್​ನ ಪ್ರಕಾರ, ಎರಡು ಗುಂಪುಗಳವರು ಎದುರಾಳಿ ಗುಂಪಿನ ಬಳಿ ಇರುವ ಬಟ್ಟೆಯನ್ನು ಬಣ್ಣಗಳಿಂದ ಕೊಳೆ ಮಾಡಬೇಕು, ಆ ಕೊಳೆಯಾದ ಬಟ್ಟೆಯನ್ನು ಒಗೆದು ಮತ್ತೆ ಒಣಗಿ ಹಾಕಬೇಕು, ಬಜರ್ ಆದಾಗ ಯಾರ ಬಟ್ಟೆಗಳು ಕಡಿಮೆ ಕೊಳೆಯಾಗಿರುತ್ತವೆಯೋ ಆ ತಂಡ ಗೆಲ್ಲುತ್ತದೆ. ಈ ಟಾಸ್ಕ್​ನ ಎರಡನೇ ರೌಂಡ್ ಆಡುವಾಗ ಬಹಳ ಅಗ್ರೆಸಿವ್ ಆಗಿ ಆಡಿದ ವಿನಯ್ ಬೆರಳು ಮುರಿದುಕೊಂಡು ಆಟದಿಂದ ಹೊರಗೆ ಉಳಿದರು. ಕಾರ್ತಿಕ್​ಗೆ ಸಹ ಏಟಾದ ಕಾರಣ ಅವರೂ ಸಹ ಆಟದಿಂದ ಹೊರಗೆ ಉಳಿದರು.

ಆಟಗಾರರ ಸಂಖ್ಯೆ ಕಡಿಮೆ ಆದ ಕಾರಣ ಬಿಗ್​ಬಾಸ್ ಆಟಗಾರರ ಸಂಖ್ಯೆ ಕಡಿಮೆ ಮಾಡಿದರು. ಆಗ ಎದುರಾಳಿ ತಂಡದ ಬಟ್ಟೆ ಕೊಳೆ ಮಾಡಲು ತುಕಾಲಿ ಸಂತು ಹೋದರು, ರಕ್ಷಿಸಲು ಮೈಖಲ್ ಬಂದರು. ಆರಂಭದಲ್ಲಿ ಮೈಖಲ್ ತುಕಾಲಿಯನ್ನು ಕೈಗಳಿಂದ ಮುಟ್ಟದೆ ತಳ್ಳಿದರು, ಅವರನ್ನು ಎತ್ತಿಕೊಂಡು ಬಂದು ಮೈದಾನದ ಮಧ್ಯದಲ್ಲಿಟ್ಟರು. ಇದು ತುಕಾಲಿಗೆ ಹಿಡಿಸಲಿಲ್ಲ, ತುಕಾಲಿ, ಬಲಶಾಲಿಯಾದ ಮೈಖಲ್ ಅನ್ನು ತಳ್ಳಲು ಮೊಣಕೈ ಬಳಸಿದರು. ಇದರಿಂದ ಸಿಟ್ಟಾದ ಮೈಖಲ್, ನನಗೂ ಕೈ ಬಳಸಲು ಬರುತ್ತದೆ ಎಂದು ಮೂರು ಬಾರಿ ತುಸು ಜೋರಾಗಿ ತುಕಾಲಿಯನ್ನು ತಳ್ಳಿದರು. ಇದರಿಂದ ಸಿಟ್ಟಾದ ಮೈಖಲ್, ‘ನೀನು ಇಲ್ಲಿ ಆಡಬಹುದು, ನನಗೆ ಆಡಲು ಹೊರಗೆ ಜನರಿದ್ದಾರೆ’ ಎಂದು ಬೆದರಿಕೆ ಹಾಕಿದರು. ಬಳಿಕ ಮಾತು ಮುಂದುವರೆದಂತೆ, ಮುಷ್ಟಿಯಲ್ಲಿ ಮೈಖಲ್ ಎದೆಗೆ ಗುದ್ದಿದರು.

ಇದನ್ನೂ ಓದಿ:‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’: ತುಕಾಲಿ ಸಂತು ಸಿನಿಮಾಗೆ ಸಿರಿ, ಭಾಗ್ಯಶ್ರೀ ಹೀರೋಯಿನ್​

ಅಲ್ಲಿಯೇ ಇದ್ದ ಉಸ್ತುವಾರಿ ಸಿರಿ ಅವರು ಇಬ್ಬರನ್ನೂ ತಡೆದು ಎರಡು ನಿಮಿಷಗಳ ಕಾಲ ಇಬ್ಬರನ್ನೂ ಆಟದಿಂದ ಹೊರಗಿಟ್ಟರು. ತುಕಾಲಿ ಹೊಡೆದಿದ್ದನ್ನು ಮೈಖಲ್ ಗಂಭೀರವಾಗಿ ಪರಿಗಣಿಸಲಿಲ್ಲವಾದ್ದರಿಂದ ಆಟ ಹಾಗೆಯೇ ಮುಂದುವರೆಯಿತು. ಆ ಟಾಸ್ಕ್​ನಲ್ಲಿ ತುಕಾಲಿ ತಂಡದವರು ಸೋಲು, ಮೈಖಲ್ ತಂಡದವರು ಗೆದ್ದರು. ಇದರಿಂದ ಇನ್ನಷ್ಟು ಬೇಸರಗೊಂಡ ತುಕಾಲಿ, ಸಿರಿ ಅವರ ಉಸ್ತುವಾರಿ ಸರಿಯಿಲ್ಲವೆಂದು, ಅಸಲಿಗೆ ಈ ಟಾಸ್ಕ್​ ನಾವು ಗೆದ್ದಿದ್ದೇವೆಂದು ವಾದ ಮಂಡಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ