AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಳ್ಮೆ ಕಳೆದುಕೊಂಡ ತುಕಾಲಿ ಸಂತು, ಮೈಖಲ್​ಗೆ ಬಿತ್ತು ಏಟು

Tukali Santhosh: ಬಿಗ್​ಬಾಸ್ ಮನೆಯಲ್ಲಿ ನಗುತ್ತಾ, ನಗಿಸುತ್ತಾ ಜಾಲಿಯಾಗಿರುವ ತುಕಾಲಿ ಸಂತು, ಇಂದಿನ ಟಾಸ್ಕ್​ನಲ್ಲಿ ತಾಳ್ಕೆ ಕಳೆದುಕೊಂಡು ಮೈಖಲ್​ಗೆ ಹೊಡೆದೇ ಬಿಟ್ಟರು.

ತಾಳ್ಮೆ ಕಳೆದುಕೊಂಡ ತುಕಾಲಿ ಸಂತು, ಮೈಖಲ್​ಗೆ ಬಿತ್ತು ಏಟು
ಮೈಖಲ್-ತುಕಾಲಿ
Follow us
ಮಂಜುನಾಥ ಸಿ.
|

Updated on: Dec 20, 2023 | 11:42 PM

ಬಿಗ್​ಬಾಸ್ (BiggBoss) ಮನೆಯಲ್ಲಿ ತುಕಾಲಿ ಸಂತು ಸದಾ ಕಾಮಿಡಿ ಮಾಡುತ್ತಾ, ಅವರಿವರ ಕಾಲೆಳೆಯುತ್ತಾ, ನಾಮಿನೇಷನ್ ಬಂದಾಗಷ್ಟೆ ನೇರವಾಗಿ, ತುಸು ಗಟ್ಟಿಯಾಗಿ ಮಾತನಾಡುತ್ತಾರೆ. ಆದರೆ ತುಕಾಲಿ ಬುಧವಾರ ಪ್ರಸಾರವಾದ ಎಪಿಸೋಡ್​ನಲ್ಲಿ ತುಸು ಅಗ್ರೆಸಿವ್ ಆಗಿದ್ದರು, ತಾಳ್ಮೆ ಕಳೆದುಕೊಂಡು ಮೈಖಲ್​ಗೆ ಒಂದು ಏಟು ಸಹ ಹೊಡೆದೇ ಬಿಟ್ಟರು.

ಆಗಿದ್ದಿಷ್ಟು ಕೊಳೆ ಒಳ್ಳೆಯದಲ್ಲ ಎಂಬ ಟಾಸ್ಕ್​ ಅನ್ನು ಬಿಗ್​ಬಾಸ್ ಸ್ಪರ್ಧಿಗಳಿಗೆ ನೀಡಿದ್ದರು. ಆ ಟಾಸ್ಕ್​ನ ಪ್ರಕಾರ, ಎರಡು ಗುಂಪುಗಳವರು ಎದುರಾಳಿ ಗುಂಪಿನ ಬಳಿ ಇರುವ ಬಟ್ಟೆಯನ್ನು ಬಣ್ಣಗಳಿಂದ ಕೊಳೆ ಮಾಡಬೇಕು, ಆ ಕೊಳೆಯಾದ ಬಟ್ಟೆಯನ್ನು ಒಗೆದು ಮತ್ತೆ ಒಣಗಿ ಹಾಕಬೇಕು, ಬಜರ್ ಆದಾಗ ಯಾರ ಬಟ್ಟೆಗಳು ಕಡಿಮೆ ಕೊಳೆಯಾಗಿರುತ್ತವೆಯೋ ಆ ತಂಡ ಗೆಲ್ಲುತ್ತದೆ. ಈ ಟಾಸ್ಕ್​ನ ಎರಡನೇ ರೌಂಡ್ ಆಡುವಾಗ ಬಹಳ ಅಗ್ರೆಸಿವ್ ಆಗಿ ಆಡಿದ ವಿನಯ್ ಬೆರಳು ಮುರಿದುಕೊಂಡು ಆಟದಿಂದ ಹೊರಗೆ ಉಳಿದರು. ಕಾರ್ತಿಕ್​ಗೆ ಸಹ ಏಟಾದ ಕಾರಣ ಅವರೂ ಸಹ ಆಟದಿಂದ ಹೊರಗೆ ಉಳಿದರು.

ಆಟಗಾರರ ಸಂಖ್ಯೆ ಕಡಿಮೆ ಆದ ಕಾರಣ ಬಿಗ್​ಬಾಸ್ ಆಟಗಾರರ ಸಂಖ್ಯೆ ಕಡಿಮೆ ಮಾಡಿದರು. ಆಗ ಎದುರಾಳಿ ತಂಡದ ಬಟ್ಟೆ ಕೊಳೆ ಮಾಡಲು ತುಕಾಲಿ ಸಂತು ಹೋದರು, ರಕ್ಷಿಸಲು ಮೈಖಲ್ ಬಂದರು. ಆರಂಭದಲ್ಲಿ ಮೈಖಲ್ ತುಕಾಲಿಯನ್ನು ಕೈಗಳಿಂದ ಮುಟ್ಟದೆ ತಳ್ಳಿದರು, ಅವರನ್ನು ಎತ್ತಿಕೊಂಡು ಬಂದು ಮೈದಾನದ ಮಧ್ಯದಲ್ಲಿಟ್ಟರು. ಇದು ತುಕಾಲಿಗೆ ಹಿಡಿಸಲಿಲ್ಲ, ತುಕಾಲಿ, ಬಲಶಾಲಿಯಾದ ಮೈಖಲ್ ಅನ್ನು ತಳ್ಳಲು ಮೊಣಕೈ ಬಳಸಿದರು. ಇದರಿಂದ ಸಿಟ್ಟಾದ ಮೈಖಲ್, ನನಗೂ ಕೈ ಬಳಸಲು ಬರುತ್ತದೆ ಎಂದು ಮೂರು ಬಾರಿ ತುಸು ಜೋರಾಗಿ ತುಕಾಲಿಯನ್ನು ತಳ್ಳಿದರು. ಇದರಿಂದ ಸಿಟ್ಟಾದ ಮೈಖಲ್, ‘ನೀನು ಇಲ್ಲಿ ಆಡಬಹುದು, ನನಗೆ ಆಡಲು ಹೊರಗೆ ಜನರಿದ್ದಾರೆ’ ಎಂದು ಬೆದರಿಕೆ ಹಾಕಿದರು. ಬಳಿಕ ಮಾತು ಮುಂದುವರೆದಂತೆ, ಮುಷ್ಟಿಯಲ್ಲಿ ಮೈಖಲ್ ಎದೆಗೆ ಗುದ್ದಿದರು.

ಇದನ್ನೂ ಓದಿ:‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್​’: ತುಕಾಲಿ ಸಂತು ಸಿನಿಮಾಗೆ ಸಿರಿ, ಭಾಗ್ಯಶ್ರೀ ಹೀರೋಯಿನ್​

ಅಲ್ಲಿಯೇ ಇದ್ದ ಉಸ್ತುವಾರಿ ಸಿರಿ ಅವರು ಇಬ್ಬರನ್ನೂ ತಡೆದು ಎರಡು ನಿಮಿಷಗಳ ಕಾಲ ಇಬ್ಬರನ್ನೂ ಆಟದಿಂದ ಹೊರಗಿಟ್ಟರು. ತುಕಾಲಿ ಹೊಡೆದಿದ್ದನ್ನು ಮೈಖಲ್ ಗಂಭೀರವಾಗಿ ಪರಿಗಣಿಸಲಿಲ್ಲವಾದ್ದರಿಂದ ಆಟ ಹಾಗೆಯೇ ಮುಂದುವರೆಯಿತು. ಆ ಟಾಸ್ಕ್​ನಲ್ಲಿ ತುಕಾಲಿ ತಂಡದವರು ಸೋಲು, ಮೈಖಲ್ ತಂಡದವರು ಗೆದ್ದರು. ಇದರಿಂದ ಇನ್ನಷ್ಟು ಬೇಸರಗೊಂಡ ತುಕಾಲಿ, ಸಿರಿ ಅವರ ಉಸ್ತುವಾರಿ ಸರಿಯಿಲ್ಲವೆಂದು, ಅಸಲಿಗೆ ಈ ಟಾಸ್ಕ್​ ನಾವು ಗೆದ್ದಿದ್ದೇವೆಂದು ವಾದ ಮಂಡಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ