AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಂಟಿಗಳಿಗಿಂತ ಒಂಟಿಗಳೇ ವರ್ಸ್ಟ್ ಎಂದು ನೇರವಾಗಿ ಬೈದ ಕಿಚ್ಚ ಸುದೀಪ್

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12ರ ಮೊದಲ ವಾರದ ಪಂಚಾಯಿತಿಯನ್ನು ಸುದೀಪ್ ಇಂದು ನಡೆಸಿಕೊಟ್ಟಿದ್ದಾರೆ. ಮೊದಲ ವಾರದಲ್ಲಿ ಸ್ಪರ್ಧಿಗಳು ಮಾಡಿದ ತಪ್ಪುಗಳನ್ನು ಅವರ ಮುಖಕ್ಕೆ ಹಿಡಿದಿದ್ದಾರೆ. ಅದರಲ್ಲೂ ಈ ಬಾರಿ ಜಂಟಿ ಮತ್ತು ಒಂಟಿ ಎಂದಿತ್ತು. ಎರಡು ಗುಂಪುಗಳಲ್ಲಿ ಜಂಟಿಗಿಂತಲೂ ಒಂಟಿಗಳೇ ವರ್ಸ್ಟ್ ಎಂದು ಸುದೀಪ್ ಬೈದರು.

ಜಂಟಿಗಳಿಗಿಂತ ಒಂಟಿಗಳೇ ವರ್ಸ್ಟ್ ಎಂದು ನೇರವಾಗಿ ಬೈದ ಕಿಚ್ಚ ಸುದೀಪ್
ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 04, 2025 | 11:13 PM

Share

ಈ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಜಂಟಿ ಹಾಗೂ ಒಂಟಿ ಎಂದು ವಿಂಗಡಿಸಿ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆ ಒಳಗೆ ಕಳುಹಿಸಲಾಗಿತ್ತು. ಎಲ್ಲರಿಗೂ ಬಿಗ್ ಬಾಸ್ ಮನೆ ಹೊಸದು. ಹೀಗಾಗಿ, ತಪ್ಪುಗಳಿ ನಡೆದಿವೆ. ಈ ವಾರದ ಆಟ ನೋಡಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡರು. ಈ ವೇಳೆ ಜಂಟಿಗಳನ್ನು ಬೈದರು. ಆ ಬಳಿಕ ಜಂಟಿಗಳ ಜೊತೆ ಒಂಟಿಗಳಿಗೂ ಅವರು ಬೈದರು. ಅಷ್ಟಕ್ಕೂ ಕಾರಣ ಏನು? ಆ ಬಗ್ಗೆ ಇಲ್ಲಿದೆ ವಿವರ.

ಈ ವಾರ ದೊಡ್ಮನೆಯಲ್ಲಿ ಒಂದು ಟಾಸ್ಕ್ ನೀಡಲಾಯಿತು. ಒಂಟಿಗಳು ಅರಸ-ಅರಸಿಯರಾದರೆ, ಜಂಟಿಗಳು ಸೇವಕರಾಗಿದ್ದರು. ಮನೆಯ ಕೆಲಸವನ್ನು ಜಂಟಿಗಳು ಮಾಡಬೇಕಿತ್ತು. ಆಗ ಒಂದು ಘಟನೆ ನಡೆಯಿತು. ಒಂಟಿಗಳು ತಮ್ಮ ತಂಡದ ಅಶ್ವಿನಿ ಅವರಿಗೆ ರಾಜಮಾತೆ ಎಂಬ ಪಟ್ಟ ಕೊಟ್ಟರು. ಅವರು ಹೇಳಿದಂತೆ ನಡೆದುಕೊಂಡರು. ಇದು ಸುದೀಪ್​ಗೆ ಇಷ್ಟ ಆಗಿಲ್ಲ.

‘ರಾಜಮಾತೆಯನ್ನು ನೇಮಿಸಿ ಎಂದು ಬಿಗ್ ಬಾಸ್ ಹೇಳಿದ್ರಾ? ಆದರೂ ನೀವು ರಾಜಮಾತೆಯನ್ನು ಆಯ್ಕೆ ಮಾಡಿಕೊಂಡಿರಿ. ಹೀಗಿರುವಾಗ ನಿಮ್ಮ ಇಂಡಿಶ್ಯುವಾಲಿಟಿ ಎಲ್ಲಿದೆ? ರಾಜಮಾತೆ ಎಂದು ನಿಮಗೆ ನೀವೇ ಆಯ್ಕೆ ಮಾಡಿಕೊಂಡಿರಿ. ಒಂಟಿಯವರು ಜಂಟಿಯವರಿಗಿಂತ ಕೆಟ್ಟದಾಗಿ ಆಡಿದಿರಿ. ಜಂಟಿಯವರಾದರೆ ಇಬ್ಬರೇ ಚೈನ್ ಕಟ್ಟಿಕೊಂಡಿದ್ದಾರೆ. ಇಲ್ಲಿ ಆರು ಜನ ಚೈನ್ ಹಾಕ್ಕೊಂಡು ಆಡಿದಂತೆ ಕಂಡುಬಂತು. ಇದರಲ್ಲಿ ಅಶ್ವಿನಿ ಅವರ ತಪ್ಪಿಲ್ಲ. ಎಲ್ಲರೂ ಸೇರಿ ಅವರಿಗೆ ಪಟ್ಟ ಕೊಟ್ಟರು. ಅವರು ಎಂಜಾಯ್ ಮಾಡಿದರು’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ 12: ಕನ್ನಡಿಗರಿಗೆ ಸಿಕ್ತು ಕಿಚ್ಚನ ಚಪ್ಪಾಳೆ, ಕಾರಣ?

ಆ ಬಳಿಕ ಮಲ್ಲಮ್ಮ ಅವರನ್ನು ಹೊಗಳಿದರು ಸುದೀಪ್. ‘ಇಡೀ ಮನೆಯಲ್ಲಿ ಮಲ್ಲಮ್ಮ ಮಾತ್ರ ಚೆನ್ನಾಗಿ ಆಡಿದರು. ಅವರು ಒಂಟಿಯಾಗಿ ಆಡಿದರು. ಉಳಿದವರು ಇಡೀ ವಾರವನ್ನು ವೇಸ್ಟ್ ಮಾಡಿದರು’ ಎಂದು ಸುದೀಪ್ ಹೇಳಿದರು. ಮಲ್ಲಮ್ಮ ಅವರು ಯಾರ ಸಹಾಯವೂ ಇಲ್ಲದೇ ದೊಡ್ಮನೆಯಲ್ಲಿ ಆಟ ಆಡುತ್ತಿದ್ದಾರೆ. ಈ ವಾರ ಮೊದಲು ಸೇವ್ ಆದವರ ಪೈಕಿ ಮಲ್ಲಮ್ಮ ಮೊದಲಿಗರು ಅನ್ನೋದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಮಳೆ ಅಬ್ಬರಕ್ಕೆ ಭೋರ್ಗರೆಯುತ್ತಿರುವ ಹೊಗೇನಕಲ್ ಜಲಪಾತ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಯಾದಗಿರಿ: ರಾಸಾಯನಿಕ ಸೋರಿಕೆ ದುರಂತ, ಮೂವರು ಕಾರ್ಮಿಕರ ದುರ್ಮರಣ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಉದಯನಿಧಿ ಬಿಡುಗಡೆ; ವಿಜಯ್​​ನ ಡಮ್ಮಿ ಸಿಎಂ ಎಂದ ಸ್ಟಾಲಿನ್ ಪುತ್ರ
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಕೆಎಸ್​ಆರ್​ಟಿಸಿ ಬಸ್​ ತಡೆದು ಸುಬ್ಬಾರೆಡ್ಡಿ ಬೆಂಬಲಿಗರ ಆಕ್ರೋಶ!
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಸುಬ್ಬಾರೆಡ್ಡಿ ಬೆಂಬಲಿಸಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ಸ್ತಬ್ಧ
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಕೊಪ್ಪಳ ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಗೊಂಡಬಾಳ್ ರಾಜೀನಾಮೆ!
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ