AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಂಟಿಗಳಿಗಿಂತ ಒಂಟಿಗಳೇ ವರ್ಸ್ಟ್ ಎಂದು ನೇರವಾಗಿ ಬೈದ ಕಿಚ್ಚ ಸುದೀಪ್

Bigg Boss Kannada season 12: ಬಿಗ್​​ಬಾಸ್ ಕನ್ನಡ ಸೀಸನ್ 12ರ ಮೊದಲ ವಾರದ ಪಂಚಾಯಿತಿಯನ್ನು ಸುದೀಪ್ ಇಂದು ನಡೆಸಿಕೊಟ್ಟಿದ್ದಾರೆ. ಮೊದಲ ವಾರದಲ್ಲಿ ಸ್ಪರ್ಧಿಗಳು ಮಾಡಿದ ತಪ್ಪುಗಳನ್ನು ಅವರ ಮುಖಕ್ಕೆ ಹಿಡಿದಿದ್ದಾರೆ. ಅದರಲ್ಲೂ ಈ ಬಾರಿ ಜಂಟಿ ಮತ್ತು ಒಂಟಿ ಎಂದಿತ್ತು. ಎರಡು ಗುಂಪುಗಳಲ್ಲಿ ಜಂಟಿಗಿಂತಲೂ ಒಂಟಿಗಳೇ ವರ್ಸ್ಟ್ ಎಂದು ಸುದೀಪ್ ಬೈದರು.

ಜಂಟಿಗಳಿಗಿಂತ ಒಂಟಿಗಳೇ ವರ್ಸ್ಟ್ ಎಂದು ನೇರವಾಗಿ ಬೈದ ಕಿಚ್ಚ ಸುದೀಪ್
ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 04, 2025 | 11:13 PM

Share

ಈ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದವು. ಜಂಟಿ ಹಾಗೂ ಒಂಟಿ ಎಂದು ವಿಂಗಡಿಸಿ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆ ಒಳಗೆ ಕಳುಹಿಸಲಾಗಿತ್ತು. ಎಲ್ಲರಿಗೂ ಬಿಗ್ ಬಾಸ್ ಮನೆ ಹೊಸದು. ಹೀಗಾಗಿ, ತಪ್ಪುಗಳಿ ನಡೆದಿವೆ. ಈ ವಾರದ ಆಟ ನೋಡಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡರು. ಈ ವೇಳೆ ಜಂಟಿಗಳನ್ನು ಬೈದರು. ಆ ಬಳಿಕ ಜಂಟಿಗಳ ಜೊತೆ ಒಂಟಿಗಳಿಗೂ ಅವರು ಬೈದರು. ಅಷ್ಟಕ್ಕೂ ಕಾರಣ ಏನು? ಆ ಬಗ್ಗೆ ಇಲ್ಲಿದೆ ವಿವರ.

ಈ ವಾರ ದೊಡ್ಮನೆಯಲ್ಲಿ ಒಂದು ಟಾಸ್ಕ್ ನೀಡಲಾಯಿತು. ಒಂಟಿಗಳು ಅರಸ-ಅರಸಿಯರಾದರೆ, ಜಂಟಿಗಳು ಸೇವಕರಾಗಿದ್ದರು. ಮನೆಯ ಕೆಲಸವನ್ನು ಜಂಟಿಗಳು ಮಾಡಬೇಕಿತ್ತು. ಆಗ ಒಂದು ಘಟನೆ ನಡೆಯಿತು. ಒಂಟಿಗಳು ತಮ್ಮ ತಂಡದ ಅಶ್ವಿನಿ ಅವರಿಗೆ ರಾಜಮಾತೆ ಎಂಬ ಪಟ್ಟ ಕೊಟ್ಟರು. ಅವರು ಹೇಳಿದಂತೆ ನಡೆದುಕೊಂಡರು. ಇದು ಸುದೀಪ್​ಗೆ ಇಷ್ಟ ಆಗಿಲ್ಲ.

‘ರಾಜಮಾತೆಯನ್ನು ನೇಮಿಸಿ ಎಂದು ಬಿಗ್ ಬಾಸ್ ಹೇಳಿದ್ರಾ? ಆದರೂ ನೀವು ರಾಜಮಾತೆಯನ್ನು ಆಯ್ಕೆ ಮಾಡಿಕೊಂಡಿರಿ. ಹೀಗಿರುವಾಗ ನಿಮ್ಮ ಇಂಡಿಶ್ಯುವಾಲಿಟಿ ಎಲ್ಲಿದೆ? ರಾಜಮಾತೆ ಎಂದು ನಿಮಗೆ ನೀವೇ ಆಯ್ಕೆ ಮಾಡಿಕೊಂಡಿರಿ. ಒಂಟಿಯವರು ಜಂಟಿಯವರಿಗಿಂತ ಕೆಟ್ಟದಾಗಿ ಆಡಿದಿರಿ. ಜಂಟಿಯವರಾದರೆ ಇಬ್ಬರೇ ಚೈನ್ ಕಟ್ಟಿಕೊಂಡಿದ್ದಾರೆ. ಇಲ್ಲಿ ಆರು ಜನ ಚೈನ್ ಹಾಕ್ಕೊಂಡು ಆಡಿದಂತೆ ಕಂಡುಬಂತು. ಇದರಲ್ಲಿ ಅಶ್ವಿನಿ ಅವರ ತಪ್ಪಿಲ್ಲ. ಎಲ್ಲರೂ ಸೇರಿ ಅವರಿಗೆ ಪಟ್ಟ ಕೊಟ್ಟರು. ಅವರು ಎಂಜಾಯ್ ಮಾಡಿದರು’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ 12: ಕನ್ನಡಿಗರಿಗೆ ಸಿಕ್ತು ಕಿಚ್ಚನ ಚಪ್ಪಾಳೆ, ಕಾರಣ?

ಆ ಬಳಿಕ ಮಲ್ಲಮ್ಮ ಅವರನ್ನು ಹೊಗಳಿದರು ಸುದೀಪ್. ‘ಇಡೀ ಮನೆಯಲ್ಲಿ ಮಲ್ಲಮ್ಮ ಮಾತ್ರ ಚೆನ್ನಾಗಿ ಆಡಿದರು. ಅವರು ಒಂಟಿಯಾಗಿ ಆಡಿದರು. ಉಳಿದವರು ಇಡೀ ವಾರವನ್ನು ವೇಸ್ಟ್ ಮಾಡಿದರು’ ಎಂದು ಸುದೀಪ್ ಹೇಳಿದರು. ಮಲ್ಲಮ್ಮ ಅವರು ಯಾರ ಸಹಾಯವೂ ಇಲ್ಲದೇ ದೊಡ್ಮನೆಯಲ್ಲಿ ಆಟ ಆಡುತ್ತಿದ್ದಾರೆ. ಈ ವಾರ ಮೊದಲು ಸೇವ್ ಆದವರ ಪೈಕಿ ಮಲ್ಲಮ್ಮ ಮೊದಲಿಗರು ಅನ್ನೋದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ