AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರದ್ದೋ ಹಠಕ್ಕೆ ಇನ್ಯಾರೋ ಬಲಿ: ಎಲಿಮಿನೇಟ್ ಆಗಿದ್ದು ಯಾರು?

Bigg Boss Kannada 12: ಭಾನುವಾರದ ಎಪಿಸೋಡ್​​ನಲ್ಲಿ ಮತ್ತೊಂದು ಎಲಿಮಿನೇಷನ್ ನಡೆದಿದೆ. ಆದರೆ ಈ ಎಲಿಮಿನೇಷನ್ ಬಹಳ ನಾಟಕೀಯವಾಗಿ ಆಗಿದೆ. ಸೇಫ್ ಆಗಿದ್ದವರು ಇನ್ಯಾರದ್ದೊ ಹಠಕ್ಕೆ ನಾಮಿನೇಟ್ ಆಗಿ ಈಗ ನೇರವಾಗಿ ಮನೆಯಿಂದಲೇ ಹೊರಗೆ ಹೋಗಿದ್ದಾರೆ. ಈ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ನೀಡಿದೆ. ಅಷ್ಟಕ್ಕೂ ಮನೆಯಿಂದ ಹೊರ ಹೋಗಿದ್ದು ಯಾರು?

ಯಾರದ್ದೋ ಹಠಕ್ಕೆ ಇನ್ಯಾರೋ ಬಲಿ: ಎಲಿಮಿನೇಟ್ ಆಗಿದ್ದು ಯಾರು?
Bigg Boss Eviction
ಮಂಜುನಾಥ ಸಿ.
| Edited By: |

Updated on:Nov 17, 2025 | 7:25 AM

Share

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಭಾನುವಾರದ ಎಪಿಸೋಡ್​​ನಲ್ಲಿ ಮತ್ತೊಂದು ಎಲಿಮಿನೇಷನ್ ನಡೆದಿದೆ. ಆದರೆ ಈ ಎಲಿಮಿನೇಷನ್ ಬಹಳ ನಾಟಕೀಯವಾಗಿ ಆಗಿದೆ. ಸೇಫ್ ಆಗಿದ್ದವರು ಇನ್ಯಾರದ್ದೊ ಹಠಕ್ಕೆ ನಾಮಿನೇಟ್ ಆಗಿ ಈಗ ನೇರವಾಗಿ ಮನೆಯಿಂದಲೇ ಹೊರಗೆ ಹೋಗಿದ್ದಾರೆ. ಈ ಎಲಿಮಿನೇಷನ್ ಮನೆ ಮಂದಿಗೆ ಶಾಕ್ ನೀಡಿದೆ. ಅಷ್ಟಕ್ಕೂ ಮನೆಯಿಂದ ಹೊರ ಹೋಗಿದ್ದು ಯಾರು?

ಬಿಗ್​ಬಾಸ್ ಮನೆಯ ಎಂಟರ್ಟೈನರ್​​ಗಳಲ್ಲಿ ಒಬ್ಬರಾಗಿದ್ದ ಕಾಕ್ರೂಚ್ ಸುಧಿ ಅವರು ಈ ವಾರ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ. ಅಸಲಿಗೆ ಅವರಿಗಿಂತಲೂ ಕಳಪೆಯಾಗಿ ಆಡುತ್ತಿದ್ದ ಕೆಲವರು ಈಗಲೂ ಮನೆಯಲ್ಲಿದ್ದಾರೆ. ಆದರೆ ಸುಧಿ ಅವರ ದುರಾದೃಷ್ಟದಿಂದಾಗಿ ಅವರು ಈ ವಾರ ಮನೆಯಿಂದ ಹೊರ ಹೋಗಿದ್ದಾರೆ.

ಅಸಲಿಗೆ ವಾರದ ಆರಂಭದಲ್ಲಿ ಅವರು ಸೇಫ್ ಆಗಿದ್ದರು. ಈ ಮೂಲಕ ಸೇಫ್ ತಂಡ ಸೇರಿಕೊಂಡರು. ಆ ಬಳಿಕ ಸೇಫ್ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಬೇಕು ಎಂದು ಬಂತು. ಅವರ ತಂಡದವರು ಸುಧಿ ಹೆಸರು ತೆಗೆದುಕೊಂಡರು. ಇದಕ್ಕೆ ಸುಧಿ ಒಪ್ಪಲಿಲ್ಲ. ಆ ಬಳಿಕ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ ಆಗಿಲ್ಲ. ಹೀಗಾಗಿ, ನಾಮಿನೇಟ್ ಮಾಡುವ ಅಧಿಕಾರವನ್ನು ಕ್ಯಾಪ್ಟನ್ ಮಾಳು ಅವರಿಗೆ ಬಿಗ್ ಬಾಸ್ ನೀಡಿದರು. ಈ ವೇಳೆ ಮಾಳು ಅವರು ಸುಧಿ ಹೆಸರು ಸೂಚಿಸಿದರು. ಇದರಿಂದ ಅವರು ನಾಮಿನೇಟ್ ಆದರು. ಆದರೆ ವೀಕ್ಷಕರು ಮತ ಹಾಕಿ ಗೆಲ್ಲಿಸುತ್ತಾರೆ ಎಂಬ ಆಸೆ ಸುಧಿ ಅವರಿಗೆ ಇದ್ದಂತಿತ್ತು. ಆದರೆ ಅದು ಸಹ ಸುಳ್ಳಾಗಿದ್ದು, ಸುಧಿ ಅವರು ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.

ಶನಿವಾರವೇ ಕೆಲವರು ನಾಮಿನೇಷನ್​​ ಇಂದ ಪಾರಾಗಿದ್ದರು. ಭಾನುವಾರದ ಎಪಿಸೋಡ್​​ನಲ್ಲಿ ರಾಶಿಕಾ, ಧ್ರುವಂತ್ ಮೊದಲು ಸೇಫ್ ಆದರು. ಅಂತಿಮವಾಗಿ ಜಾನ್ವಿ, ರಿಶಾ, ರಘು ಮತ್ತು ಕಾಕ್ರೂಚ್ ಸುಧಿ ಉಳಿದುಕೊಂಡಿದ್ದರು. ಎಲ್ಲರೂ ಸಹ ರಿಶಾ ಅಥವಾ ಜಾನ್ವಿ ಈ ಬಾರಿ ಮನೆಯಿಂದ ಹೊರಗೆ ಹೋಗುತ್ತಾರೆ ಎಂದುಕೊಂಡಿದ್ದರು. ಅದರಂತೆ ಸುದೀಪ್ ಅವರು, ನಾಲ್ಕೂ ಜನರು ಬಿಗ್​​ಬಾಸ್​​ನ ಮುಖ್ಯ ದ್ವಾರದ ಹೊರಗೆ ಸಾಲಾಗಿ ನಿಲ್ಲುವಂತೆ ಹೇಳಿದರು. ನಾಲ್ವರಿಗೂ ಕಣ್ಣಿಗೆ ಬಟ್ಟೆ ಸಹ ಕಟ್ಟಲಾಯ್ತು. ಮೂರು ಬಾರಿ ಬಾಗಿಲು ಹಾಕಿ ತೆಗೆಯಲಾಯ್ತು. ಮೂರನೇ ಬಾರಿ ಬಾಗಿಲು ತೆರೆದಾಗ ಕಾಕ್ರೂಚ್ ಸುಧಿ ಅಲ್ಲಿರಲಿಲ್ಲ. ಅವರು ಎಲಿಮಿನೇಟ್ ಆಗಿದ್ದರು.

ಸುಧಿ ಎಲಿಮಿನೇಟ್ ಆಗಿದ್ದು ಜಾನ್ವಿಗೆ ಸಹಿಸಿಕೊಳ್ಳಲಾಗಲಿಲ್ಲ. ಅವರು ಧಾರಾಕಾರವಾಗಿ ಅತ್ತರು. ‘ಯಾರದ್ದೋ ಹಠದಿಂದಾಗಿ ಸುಧಿ ಇಂದು ಹೊರಗೆ ಹೋಗುವಂತಾಯ್ತು ಎಂದು ಅವರು ಕಣ್ಣೀರು ಹಾಕಿದರು. ಅಶ್ವಿನಿ, ರಿಶಾ ಅವರುಗಳು ಸಹ ಕಣ್ಣೀರು ಹಾಕಿದರು. ಹೊರಗೆ ಬಂದ ಬಳಿಕ ಸುದೀಪ್ ಜೊತೆ ಮಾತನಾಡಿದ ಸುಧಿ, ಇನ್ನಷ್ಟು ಚೆನ್ನಾಗಿ ಆಡಬಹುದಿತ್ತು, ಆದರೆ ಈ ವರೆಗೆ ಆಡಿದ್ದೂ ಸಹ ಖುಷಿ ಇದೆ ಎಂದರು. ಸುದೀಪ್ ಸಹ, ‘ನೀವು ಒಳ್ಳೆಯ ವ್ಯಕ್ತಿ, ನೀವು ಒಳ್ಳೆಯ ಸ್ಪರ್ಧಿ, ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗಲಿ’ ಎಂದು ಹಾರೈಸಿ ಅವರನ್ನು ಬೀಳ್ಕೊಟ್ಟರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:52 pm, Sun, 16 November 25

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್