AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್​ಗೆ ತುಕಾಲಿ ಸಂತು ಕೊಟ್ಟರು ಒಂದು ಬ್ರಿಲಿಯಂಟ್ ಐಡಿಯಾ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 10 ಫಿನಾಲೆ ವಾರ ತಲುಪಿದೆ. ಇನ್ನು ಎರಡು ದಿನದಲ್ಲಿ ವಿನ್ನರ್ ಘೋಷಣೆ ಆಗಲಿದೆ. ಇದೀಗ ತುಕಾಲಿ ಸಂತು, ಬಿಗ್​ಬಾಸ್​ಗೆ ಒಂದು ಒಳ್ಳೆಯ ಐಡಿಯಾ ನೀಡಿದ್ದಾರೆ.

ಬಿಗ್​ಬಾಸ್​ಗೆ ತುಕಾಲಿ ಸಂತು ಕೊಟ್ಟರು ಒಂದು ಬ್ರಿಲಿಯಂಟ್ ಐಡಿಯಾ
ತುಕಾಲಿ ಸಂತೋಷ್
Follow us
ಮಂಜುನಾಥ ಸಿ.
|

Updated on: Jan 26, 2024 | 10:07 AM

ಬಿಗ್​ಬಾಸ್ ಕನ್ನಡ ಸೀಸನ್ 10 (BiggBoss) ಫಿನಾಲೆ ವಾರ ನಡೆಯುತ್ತಿದೆ. ಇನ್ನು ಎರಡು ದಿನದಲ್ಲಿ ಫಿನಾಲೆ ವಿನ್ನರ್ ಘೋಷಣೆ ಆಗಲಿದೆ. ಮನೆಯಲ್ಲಿ ಸದ್ಯಕ್ಕೆ ಆರು ಮಂದಿ ಇದ್ದಾರೆ. ಇದರಲ್ಲಿ ಒಬ್ಬರು ಮಾತ್ರವೇ ವಿಜೇತರಾಗಲಿದ್ದಾರೆ. ಗುರುವಾರ ನಡೆದ ಎಪಿಸೋಡ್​ನಲ್ಲಿ ಡ್ರೋನ್ ಪ್ರತಾಪ್ ಮಿಡ್ ವೀಕ್ ಎಲಿಮಿನೇಷನ್ ಆಗಿ ಹೊರಗೆ ಹೋಗಿದ್ದರು. ಆದರೆ ಸುದೀಪ್ ಅವರಿಂದಾಗಿ ಪ್ರತಾಪ್ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಅರ್ಹತೆ ಇರುವ ಆರೂ ಮಂದಿ ಫಿನಾಲೆ ವರೆಗೆ ಇರಬೇಕೆಂದು ಇದೇ ಮೊದಲನೇ ಬಾರಿಗೆ ಆರು ಮಂದಿಯನ್ನು ಫಿನಾಲೆಗೆ ಉಳಿಸಿಕೊಳ್ಳಲಾಗಿದೆ.

ಗುರುವಾರದ ಎಪಿಸೋಡ್​ನಲ್ಲಿ ಪ್ರತಾಪ್ ಇನ್ನೇನೆ ಎಲಿಮಿನೇಟ್ ಆಗಿ ಹೋಗುವುದರಲ್ಲಿದ್ದಾಗ ತುಕಾಲಿ ಸಂತು ಸೇರಿದಂತೆ ಮನೆಯ ಇತರೆ ಸದಸ್ಯರು ಬೇಸರದಿಂದ ಬೀಳ್ಕೊಟ್ಟರು. ಆದರೆ ಪ್ರತಾಪ್ ಸಹ ಫಿನಾಲೆಗೆ ಉಳಿದುಕೊಳ್ಳಲಿದ್ದಾರೆ ಎಂದು ಘೋಷಣೆಯಾಗಿ ಮನೆಯ ಸದಸ್ಯರು ನಿರಾಳವಾದರು. ಅದರ ಬಳಿಕ ತುಕಾಲಿ ಸಂತು ಬಿಗ್​ಬಾಸ್​ಗೆ ಒಂದು ಬ್ರಿಲಿಯಂಟ್ ಐಡಿಯಾ ಕೊಟ್ಟರು.

ತೂಗುಯ್ಯಾಲೆ ಮೇಲೆ ವರ್ತೂರು ಸಂತು ಜೊತೆಗೆ ಕೂತಿದ್ದ ತುಕಾಲಿ ಸಂತು, ಮಿಮಿಕ್ರಿ ಮಾಡುತ್ತಾ, ‘ಮನೆಯವರ ಎಲಿಮಿನೇಷನ್ ಪ್ರಕಾರ ಪ್ರತಾಪ್ ಮನೆಯಿಂದ ಹೊರಗೆ ಹೋಗುತ್ತಿದ್ದರು ಆದರೆ ಎಲ್ಲರಿಗೂ ಶಾಕ್ ನೀಡಿ ಟಾಪ್ 6 ಎಂದು ಆರೂ ಮಂದಿಯನ್ನು ಉಳಿಸಿಕೊಂಡರಲ್ಲ ಬಿಗ್​ಬಾಸ್, ನಿಮ್ಮನ್ನು ನೋಡಿದರೆ ಬಹಳ ಖುಷಿಯಾಗುತ್ತೆ. ಅದೇ ರೀತಿ, ಕಪ್ ಅನ್ನೂ ಸಹ ಆರೂ ಜನಕ್ಕೆ ಹಂಚಿ ಕೊಟ್ಟು ಕಳಿಸಿದರೆ ಎಲ್ಲರಿಗೂ ಖುಷಿಯಾಗುತ್ತೆ ಬಿಗ್​ಬಾಸ್. ಇದೊಂದು ಇತಿಹಾಸವನ್ನು ಸೃಷ್ಟಿಮಾಡಿಬಿಡಿ’ ಎಂದಿದ್ದಾರೆ.

ಇದನ್ನೂ ಓದಿ:ಆಸೆಗಳ ಬಿಚ್ಚಿಟ್ಟ ಮನೆ ಮಂದಿ, ಈಡೇರಿಸುತ್ತಾರಾ ಬಿಗ್​ಬಾಸ್? ಯಾರ ಆಸೆ ಏನು?

ಮುಂದುವರೆದು, ‘ಐವತ್ತು ಲಕ್ಷ ಹಣವನ್ನು ಒಬ್ಬೊಬ್ಬರಿಗೆ ಎಂಟೆಂಟು ಲಕ್ಷದಂತೆ ಹಂಚಿಬಿಡಿ, ಒಂದು ಕಪ್​ನ ಜೆರಾಕ್ಸ್ ಮಾಡಿ ಆರು ಕಪ್ ಗಳನ್ನಾಗಿ ಮಾಡಿ ಆರೂ ಜನಕ್ಕೆ ಹಂಚಿಬಿಡಿ. ಗೆದ್ದ ಒಬ್ಬರಿಗೆ ಒಂದು ಕಾರು ನೀಡುವ ಬದಲಿಗೆ ಆರು ಕಾರು ತರಿಸಿ, ಒಬ್ಬೊಬ್ಬರನ್ನು ಒಂದೊಂದರಲ್ಲಿ ಕೂರಿಸಿ ಕಳಿಸಿಬಿಡಿ. ಇದರಿಂದ ಯಾರಿಗೂ ಬೇಜಾರಾಗೊಲ್ಲ ಬಿಗ್​ಬಾಸ್’ ಎಂದಿದ್ದಾರೆ ತುಕಾಲಿ.

ಸದ್ಯಕ್ಕೆ ಸಂಗೀತಾ, ವಿನಯ್, ಡ್ರೋನ್ ಪ್ರತಾಪ್, ಕಾರ್ತಿಕ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರುಗಳು ಬಿಗ್​ಬಾಸ್ ಮನೆಯಲ್ಲಿದ್ದಾರೆ. ಈ ಆರೂ ಜನ ಫಿನಾಲೆಗೆ ತಲುಪಿದ್ದು, ಫಿನಾಲೆ ದಿನ ಇದರಲ್ಲಿ ನಾಲ್ವರು ಹೊರಗೆ ಹೋಗಲಿದ್ದಾರೆ. ಕೊನೆಗೆ ಉಳಿವ ಇಬ್ಬರಲ್ಲಿ ಒಬ್ಬರು ಟೈಟಲ್ ಗೆಲ್ಲಲಿದ್ದಾರೆ. ಗೆದ್ದವರಿಗೆ 50 ಲಕ್ಷ ಹಣದ ಜೊತೆಗೆ ಒಂದು ಕಾರು ಉಡುಗೊರೆಯಾಗಿ ಸಿಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ