‘ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ, ಅದಕ್ಕೆ ಕಿಸ್​ ಮಾಡೋಕೆ ಬಿಟ್ಟೆ’; ರಾಕೇಶ್​ ಎದುರು ಎಲ್ಲವನ್ನೂ ಹೇಳಿಕೊಂಡ ಶಮಿತಾ ಶೆಟ್ಟಿ

ರಾಕೇಶ್​ ಜೋಕ್​ ಮಾಡುತ್ತಾ ಶಮಿತಾ ಕಾಲೆಳೆದಿದ್ದಾರೆ. ನೀವು ನನ್ನ ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ ರಾಕೇಶ್​. ಆದರೆ, ಇದು ಶಮಿತಾಗೆ ಇಷ್ಟವಾಗಿಲ್ಲ.

‘ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ, ಅದಕ್ಕೆ ಕಿಸ್​ ಮಾಡೋಕೆ ಬಿಟ್ಟೆ’; ರಾಕೇಶ್​ ಎದುರು ಎಲ್ಲವನ್ನೂ ಹೇಳಿಕೊಂಡ ಶಮಿತಾ ಶೆಟ್ಟಿ
ಶಮಿತಾ ಶೆಟ್ಟಿ, ರಾಕೇಶ್ ಬಾಪಟ್
Follow us
| Updated By: ರಾಜೇಶ್ ದುಗ್ಗುಮನೆ

Updated on:Sep 01, 2021 | 8:01 PM

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಜೈಲು ಪಾಲಾಗಿದ್ದಾರೆ. ಮತ್ತೊಂದೆಡೆ ಶಿಲ್ಪಾ ಸಹೋದರಿ ಶಮಿತಾ ಶೆಟ್ಟಿ ‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಮಿಂಚುತ್ತಿದ್ದಾರೆ. ಈ ಮಧ್ಯೆ ರಾಕೇಶ್​ ಬಾಪಟ್​ ಹಾಗೂ ಶಮಿತಾ ಶೆಟ್ಟಿ ನಡುವೆ ಒಂದು ಆಪ್ತತೆ ಬೆಳೆಯುತ್ತಿರುವುದು ಅಭಿಮಾನಿಗಳಿಗೆ ಗೊತ್ತಾಗುತ್ತಿತ್ತು. ಈಗ ಇದು ಸ್ಪಷ್ಟವಾಗಿದೆ. ಇಬ್ಬರ ನಡುವೆ ನಡೆದ ಫೈಟ್ ವೇಳೆ ಶಮಿತಾ ಅಸಲಿ ವಿಚಾರ ಬಾಯ್ಬಿಟ್ಟಿದ್ದಾರೆ.

ರಾಕೇಶ್​ ಜೋಕ್​ ಮಾಡುತ್ತಾ ಶಮಿತಾ ಕಾಲೆಳೆದಿದ್ದಾರೆ. ನೀವು ನನ್ನ ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ ರಾಕೇಶ್​. ಆದರೆ, ಇದು ಶಮಿತಾಗೆ ಇಷ್ಟವಾಗಿಲ್ಲ. ಹೀಗಾಗಿ, ಬೆಡ್​​ರೂಮ್​ನಿಂದ ಹೊರ ನಡೆದಿದ್ದಾರೆ. ಈ ವಿಚಾರ ರಾಕೇಶ್​ಗೆ ಬೇಸರ ತರಿಸಿದೆ. ಅಲ್ಲದೆ, ಶಮಿತಾ ಮನವೊಲಿಸಲು ಅವರು ಪ್ರಯತ್ನಿಸಿದ್ದಾರೆ. ಆದರೆ ಇದು ಸಾಧ್ಯವಾಗಿಲ್ಲ. ‘ನಾನು ನಿನ್ನ ಜತೆ ಮಾತನಾಡಲು ಬಯಸುವುದಿಲ್ಲ. ನಿನಗಾಗಿ ನಾನು ನನ್ನ ತಾಯಿಯ ಪತ್ರವನ್ನು ಹರಿದು ಹಾಕಿದೆ. ಆದರೆ, ಈಗ ನೀನು ನನಗೆ ಇದನ್ನೆಲ್ಲ ಹೇಳುತ್ತಿದ್ದೀಯಲ್ಲ’ ಎಂದು ರಾಕೇಶ್​ ವಿರುದ್ಧ ಬೇಸರ ಹೊರ ಹಾಕಿದ್ದಾರೆ ಶಮಿತಾ. ಇತ್ತೀಚೆಗೆ ಶಮಿತಾ ಅವರು ರಾಕೇಶ್​ ಅವರನ್ನು ನಾಮಿನೇಷನ್​ನಿಂದ ಬಚಾವ್​ ಮಾಡಿದ್ದರು ಮತ್ತು ಮನೆಯಿಂದ ಬಂದ ಪತ್ರವನ್ನು ಹರಿದು ಹಾಕಿದ್ದರು. ಈ ಮೂಲಕ ತಾವೇ ಎಲಿಮಿನೇಷನ್​ಗೆ ನಾಮಿನೇಟ್​ ಆಗಿದ್ದರು.

ದಿವ್ಯಾ ಅಗರ್​​ವಾಲ್​ ಜೊತೆ ರಾಕೇಶ್​ ಮಾತನಾಡುವುದನ್ನು ಶಮಿತಾ ತಡೆಯುತ್ತಿದ್ದಾರೆ. ಇದು ರಾಕೇಶ್​​ಗೆ ಇಷ್ಟವಾಗಲಿಲ್ಲ. ಈ ವಿಚಾರವಾಗಿ ಶಮಿತಾ ಜತೆ ಮಾತನಾಡಿದ ರಾಕೇಶ್​ ‘ದಿವ್ಯಾ ಎಂದರೆ ನನಗೆ ಇಷ್ಟವಿಲ್ಲ. ಅವಳು ನನಗೆ ಮುಖ್ಯಳಲ್ಲ. ಆದರೆ ಒಂದೇ ಮನೆಯಲ್ಲಿರುವಾಗ ಅವಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ರಾಕೇಶ್​.

ಈ ವೇಳೆ ಶಮಿತಾ ಕಣ್ಣೀರು ಹಾಕುತ್ತಲೇ ರಾಕೇಶ್​​ ಅವರನ್ನು ಇಷ್ಟಪಡುವುದನ್ನು ಒಪ್ಪಿಕೊಂಡಿದ್ದಾರೆ. ‘ನಾನು ಮೊದಲ ದಿನದಿಂದಲೂ ನಿನ್ನ ಜತೆ ನಡೆದುಕೊಂಡಿದ್ದ ರೀತಿ ನಕಲಿ ಅಲ್ಲ. ನನ್ನ ಕೈಗೆ, ಕತ್ತಿಗೆ ಕಿಸ್​ ಮಾಡೋಕೆ ಅವಕಾಶ ಕೊಟ್ಟೆ. ಇದಕ್ಕೆ ಕಾರಣ ನಾನು ನಿನ್ನನ್ನು ಇಷ್ಟಪಡುತ್ತಿದ್ದೇನೆ’ ಎಂದು ಅವರು ಒಪ್ಪಿಕೊಂಡರು.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿಗೆ ಮುತ್ತಿನ ಮಳೆ; ‘ಬಿಗ್​ ಬಾಸ್​ ಮನೆಗೆ ಬಂದು ಮೂರ್ಖಳಾದೆ’ ಎಂದ ನಟಿ 

ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್​ ಮಾಡು’ ಎಂದ ಶಮಿತಾ ವಿಡಿಯೋ ವೈರಲ್​

Published On - 8:01 pm, Wed, 1 September 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ