AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ಮ ತಿರುಗಿ ಬಂತು: ಹೀನಾಯವಾಗಿ ಸೋತು ಬಾತ್​ರೂಮ್​ ಸೇರಿಕೊಂಡ ಚೈತ್ರಾ

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂದು ಅನೇಕರು ಹೇಳಿದ್ದಾರೆ. ಅದು ಮತ್ತೊಮ್ಮೆ ಸಾಬೀತಾಗಿದೆ. ಟಾಸ್ಕ್ ಆಡುವಾಗ ಅವರು ಹೀನಾಯ ಪ್ರದರ್ಶನ ನೀಡಿದ್ದಾರೆ. ಇದರಿಂದ ಅವರ ತಂಡಕ್ಕೆ ಹಿನ್ನಡೆ ಆಗಿದೆ. ಸೋತ ಬಳಿಕ ಚೈತ್ರಾ ಅವರು ಕಣ್ಣೀರು ಹಾಕಿದ್ದಾರೆ. ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ಇದು ಕರ್ಮದ ಫಲ ಎಂದು ದೊಡ್ಮನೆ ಮಂದಿ ಹೇಳಿದ್ದಾರೆ.

ಕರ್ಮ ತಿರುಗಿ ಬಂತು: ಹೀನಾಯವಾಗಿ ಸೋತು ಬಾತ್​ರೂಮ್​ ಸೇರಿಕೊಂಡ ಚೈತ್ರಾ
Bigg Boss Kannada 11
ಮದನ್​ ಕುಮಾರ್​
|

Updated on: Dec 19, 2024 | 10:29 PM

Share

ತಮ್ಮನ್ನು ಮಾನಸಿಕವಾಗಿ ಯಾರೂ ಕುಗ್ಗಿಸಲು ಸಾಧ್ಯವಿಲ್ಲ ಎಂಬ ಭ್ರಮೆ ಚೈತ್ರಾ ಕುಂದಾಪುರ ಅವರಿಗೆ ಇತ್ತು. ಆದರೆ ಆ ಭ್ರಮೆ ಈಗ ಕಳಚಿದೆ. ಬಿಗ್ ಬಾಸ್ ಮನೆಯು ಅವರಿಗೆ ಹಲವು ಪಾಠಗಳನ್ನು ಕಲಿಸಿದೆ. ಚೈತ್ರಾ ಎಷ್ಟು ದುರ್ಬಲ ವ್ಯಕ್ತಿ ಎಂಬುದು ಟಾಸ್ಕ್​ಗಳ ಮೂಲಕ ಗೊತ್ತಾಗಿದೆ. ಇತ್ತೀಚೆಗೆ ಬಿಗ್ ಬಾಸ್ ನೀಡಿದ ಟಾಸ್ಕ್​ನಲ್ಲಿ ಚೈತ್ರಾ ಕುಂದಾಪುರ ಅವರು ತುಂಬ ಕಳಪೆ ಪ್ರದರ್ಶನ ನೀಡಿದರು. ಅಲ್ಲದೇ ಉಸ್ತುವಾರಿ ನಿಭಾಯಿಸುವಾಗ ಪಕ್ಷಪಾತ ಕೂಡ ಮಾಡಿದರು. ಅದರ ಕರ್ಮ ತಿರುಗಿ ಬಂದಿದೆ. ತುಂಬ ಹೀನಾಯವಾಗಿ ಸೋತಿದ್ದರಿಂದ ಅವರು ಬಾತ್​ ರೂಮ್​ನಲ್ಲಿ ಕುಳಿತು ಅಳುವಂತಾಯಿತು.

ಎರಡು ಟೀಮ್​ನಲ್ಲಿ ಟಾಸ್ಕ್​ ನಡೆಯುತ್ತಿತ್ತು. ಒಂದು ಟೀಮ್​ಗೆ ಚೈತ್ರಾ ಕುಂದಾಪುರ ಅವರು ಉಸ್ತುವಾರಿ ಮಾಡುತ್ತಿದ್ದರು. ಆಗ ತಮ್ಮ ಟೀಮ್​ಗೆ ಅನುಕೂಲ ಆಗುವ ರೀತಿಯಲ್ಲಿ ಚೈತ್ರಾ ಅವರು ಪಕ್ಷಪಾತ ಮಾಡಿದರು. ಎದುರಾಳಿ ತಂಡಕ್ಕೆ ಬೇಕಂತಲೇ ಫೌಲ್ ನೀಡಿದ್ದರು. ಪದೇ ಪದೇ ಫೌಲ್​ ನೀಡಿ ಆಟವನ್ನು ಸೋಲಿಸಿದರು. ಇನ್ನೊಂದು ಟಾಸ್ಕ್​ ರದ್ದು ಕೂಡ ಆಯಿತು. ಇಂಥ ಬುದ್ಧಿ ತೋರಿಸಿದ್ದಕ್ಕೆ ಬಹುತೇಕರು ಗರಂ ಆದರು.

ನಂತರ ನೀಡಿದ ಟಾಸ್ಕ್​ನಲ್ಲಿ ಚೈತ್ರಾ ಅವರು ತುಂಬಾ ಹೀನಾಯ ಪ್ರದರ್ಶನ ನೀಡಿದರು. ಅವರ ಕಳಪೆ ಆಟದಿಂದಾಗಿ ಇಡೀ ತಂಡ ಸೋಲಬೇಕಾಯಿತು. ಒಂದು ಅಂಕ ಕೂಡ ಗಳಿಸಲು ಸಾಧ್ಯವಾಗದೇ ಕೈ ಚೆಲ್ಲಿದ ಚೈತ್ರಾಗೆ ಅವರದ್ದೇ ತಂಡದವರು ಕ್ಲಾಸ್ ತೆಗೆದುಕೊಂಡರು. ಇದರಿಂದ ಚೈತ್ರಾ ಮನಸ್ಸಿಗೆ ತುಂಬ ನೋವಾಯಿತು. ರಾತ್ರಿ ಅವರು ಬಾತ್​ ರೂಮ್​ಗೆ ಹೋಗಿ ಅಳುತ್ತಾ ಕುಳಿತು. ‘ಇದು ಕರ್ಮದ ಫಲ’ ಎಂದು ರಜತ್, ಐಶ್ವರ್ಯಾ ಮುಂತಾದವರು ಮಾತನಾಡಿಕೊಂಡರು.

ಇದನ್ನೂ ಓದಿ: ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್

ಈ ವಾರ ಪೈಪೋಟಿ ಜಾಸ್ತಿ ಆಗಿದೆ. ರಜತ್, ಮೋಕ್ಷಿತಾ ಪೈ, ಹನುಮಂತ ಮತ್ತು ತ್ರಿವಿಕ್ರಮ್ ಅವರು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರ ಜರ್ನಿ ಈ ವಾರ ಅಂತ್ಯ ಆಗಲಿದೆ. ಫಿನಾಲೆ ಹತ್ತಿರ ಆದಂತೆಲ್ಲ ಪೈಪೋಟಿ ಜಾಸ್ತಿ ಆಗುತ್ತಿದೆ. 81 ದಿನಗಳ ಪೂರ್ಣಗೊಂಡಿವೆ. ರಜತ್, ತ್ರಿವಿಕ್ರಮ್, ಮಂಜು, ಹನುಮಂತ ಟಫ್​ ಸ್ಪರ್ಧೆ ನೀಡುತ್ತಿದ್ದಾರೆ. ಈ ವಾರ ಚೈತ್ರಾ ಕುಂದಾಪುರ ನಾಮಿನೇಟ್ ಆಗಿಲ್ಲ. ಆದರೆ ಅವರು ಕಳಪೆ ಪಟ್ಟ ಪಡೆಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಅವರಿಗೆ 3 ಬಾರಿ ಕಳಪೆ ಪಟ್ಟ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!