AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಬೇಡವಾದ ಚೈತ್ರಾ ಕುಂದಾಪುರ; ಇದು ಹೀನಾಯ ಸ್ಥಿತಿ

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಚೈತ್ರಾ ಕುಂದಾಪುರ ಅವರು ಸ್ಪರ್ಧಿಸುತ್ತಿದ್ದಾರೆ. ಎಲ್ಲ ವಾರದಂತೆ ಕಳೆದ ವಾರ ಕೂಡ ಅವರ ನಾಮಿನೇಟ್ ಆಗಿ ನಂತರ ಬಚಾವ್ ಆಗಿದ್ದರು. ಈಗ ಅವರು ಯಾರಿಗೂ ಬೇಡವಾದ ಸ್ಪರ್ಧಿ ಆಗಿದ್ದಾರೆ. ಗುರುವಾರದ (ಅಕ್ಟೋಬರ್​ 31) ಸಂಚಿಕೆಯಲ್ಲಿ ಅದಕ್ಕೆ ಸಾಕ್ಷಿ ಸಿಕ್ಕಿದೆ. ಆ ಕುರಿತು ಇಲ್ಲಿದೆ ಹೆಚ್ಚಿನ ವಿವರ..

ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಬೇಡವಾದ ಚೈತ್ರಾ ಕುಂದಾಪುರ; ಇದು ಹೀನಾಯ ಸ್ಥಿತಿ
ಚೈತ್ರಾ ಕುಂದಾಪುರ
ಮದನ್​ ಕುಮಾರ್​
|

Updated on: Oct 31, 2024 | 10:22 PM

Share

ದಿನ ಕಳೆದಂತೆಲ್ಲ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ವ್ಯಕ್ತಿತ್ವಗಳು ಬಯಲಾಗುತ್ತಿವೆ. ಮೊದಲಿಗೆ ಇದ್ದ ಹುಸಿ ಬಾಂಧವ್ಯಗಳು ಈಗ ಉಳಿದಿಲ್ಲ. ಏನೇ ಇದ್ದರೂ ನೇರವಾಗಿ ಮುಖಕ್ಕೆ ಹೊಡೆದಂತೆ ಮಾತನಾಡುವುದನ್ನು ಎಲ್ಲರೂ ರೂಢಿಸಿಕೊಂಡಿದ್ದಾರೆ. ಈ ಮೊದಲು ಸೈಲೆಂಟ್ ಆಗಿದ್ದ ಮೋಕ್ಷಿತಾ ಪೈ, ಧರ್ಮ ಕೀರ್ತಿರಾಜ್, ಹನುಮಂತ ಕೂಡ ಈಗ ಏಟಿಗೆ ತಿರುಗೇಟು ಕೊಟ್ಟು ಆಟ ಆಡುತ್ತಿದ್ದಾರೆ. ಬರೀ ತಂತ್ರಗಾರಿಕೆ ಮಾತ್ರವಲ್ಲದೇ ಟಾಸ್ಕ್​ಗಳಲ್ಲಿ ಕೂಡ ಉತ್ತಮವಾಗಿ ಆಡಬೇಕು. ಅದಕ್ಕಾಗಿ ತಂಡಗಳನ್ನು ಮಾಡಬೇಕು. ಅ.31ರ ಎಪಿಸೋಡ್​ನಲ್ಲಿ ಟೀಮ್ ಮಾಡುವಾಗ ಚೈತ್ರಾ ಕುಂದಾಪುರ ಅವರನ್ನು ಯಾರೂ ಕೂಡ ಆಯ್ಕೆ ಮಾಡಿಕೊಂಡಿಲ್ಲ.

ಹೊಸ ಟಾಸ್ಕ್​ ಸಲುವಾಗಿ ಎರಡು ತಂಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದರು. ಭವ್ಯಾ ಮತ್ತು ಗೌತಮಿ ಜಾಧವ್ ಅವರು ಎರಡು ಟೀಮ್​ಗಳನ್ನು ಆಯ್ಕೆ ಮಾಡಿಕೊಂಡರು. ಟೀಮ್ ಮಾಡುವಾಗ ಎಲ್ಲರೂ ಆಯ್ಕೆಯಾಗಿ ಕೊನೆಯಲ್ಲಿ ಉಳಿದುಕೊಂಡಿದ್ದು ಚೈತ್ರಾ ಕುಂದಾಪುರ! ಇನ್ನೇನು ಬೇರೆ ಆಪ್ಷನ್ ಇಲ್ಲದೇ ಅಂತಿಮವಾಗಿ ಗೌತಮಿಯ ಟೀಮ್​ಗೆ ಚೈತ್ರಾ ಅವರ ಹೋಗಬೇಕಾಯಿತು.

ಹೊರಗಡೆ ಇದ್ದಾಗ ಮಾತುಗಾರಿಕೆಯಿಂದ ಚೈತ್ರಾ ಕುಂದಾಪುರ ಗುರುತಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಕೇವಲ ಮಾತು ಉಪಯೋಗಕ್ಕೆ ಬರುವುದಿಲ್ಲ. ‘ನನಗೆ ಮಾತನಾಡಲು ಬಿಟ್ಟರೆ ಬೇರೇನೋ ಗೊತ್ತಿಲ್ಲ’ ಎಂದು ಚೈತ್ರಾ ಅವರೇ ಕೆಲವು ಬಾರಿ ದೊಡ್ಮನೆಯಲ್ಲಿ ಹೇಳಿಕೊಂಡಿದ್ದುಂಟು. ಆದರೆ ಮಾತಿನಿಂದಲೇ ಅವರು ಹಿನ್ನಡೆ ಕೂಡ ಅನುಭವಿಸಿದ್ದಾರೆ. ‘ಅವರು ಬೇರೆಯವರ ಮಾತನ್ನು ಕೇಳಿಸಿಕೊಳ್ಳಲ್ಲ’ ಎಂಬ ಕಾರಣದಿಂದಲೇ ಅನೇಕರು ಚೈತ್ರಾ ಅವರನ್ನು ನಾಮಿನೇಟ್ ಮಾಡಿದ ಉದಾಹರಣೆ ಕೂಡ ಇದೆ.

ಇದನ್ನೂ ಓದಿ: ಸುದೀಪ್ ಎಚ್ಚರಿಕೆ ನೀಡಿದ ಮೇಲೂ ಉದ್ಧಟತನ ಮುಂದುವರಿಸಿದ ಚೈತ್ರಾ ಕುಂದಾಪುರ

ಟೀಮ್​ ಮಾಡುವಾಗ ತಮ್ಮನ್ನು ಯಾರೂ ಕೂಡ ಸೆಲೆಕ್ಟ್​ ಮಾಡಿಕೊಳ್ಳಲಿಲ್ಲ ಎಂಬುದನ್ನು ಚೈತ್ರಾ ಅವರು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದು ಒಂದು ಇಂಡಿಕೇಷನ್​. ಮುಂದಿನ ದಿನಗಳಲ್ಲಿ ಮಾತು ಮತ್ತು ಆಟದ ಶೈಲಿ ಬದಲಿಸಿಕೊಂಡರೆ ಮಾತ್ರ ಚೈತ್ರಾ ಅವರಿಗೆ ಅನುಕೂಲ ಆಗಬಹುದು. ಇಲ್ಲದಿದ್ದರೆ ಅವರು ಯಾರಿಗೂ ಬೇಡದವರಾಗಿಯೇ ಡೋಂಜರ್​ ಝೋನ್​ಗೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್