ರೊಮ್ಯಾಂಟಿಕ್​ ಡ್ಯಾನ್ಸ್​ ಮಾಡಿದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ.​; ಇಲ್ಲಿದೆ ವಿಡಿಯೋ

ಬಿಗ್​ ಬಾಸ್​ ಮುಗಿದ ನಂತರ ಅರವಿಂದ್​ ಹಾಗೂ ದಿವ್ಯಾ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಯಾವುದೇ ವಾಹಿನಿಗೆ ಅವರು ಒಟ್ಟಾಗಿ ಸಂದರ್ಶನ ನೀಡಿಲ್ಲ. ಈಗ ಇವರು ಕಲರ್ಸ್​ ಕನ್ನಡ ವೇದಿಕೆಯನ್ನು ಒಟ್ಟಾಗಿ ಏರಿದ್ದಾರೆ.

ರೊಮ್ಯಾಂಟಿಕ್​ ಡ್ಯಾನ್ಸ್​ ಮಾಡಿದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ.​; ಇಲ್ಲಿದೆ ವಿಡಿಯೋ
ದಿವ್ಯಾ-ಅರವಿಂದ್​ ಕೆಪಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Oct 13, 2021 | 4:16 PM

ಅರವಿಂದ್​ ಕೆ.ಪಿ. ಮತ್ತು ದಿವ್ಯಾ ಉರುಡುಗ ಈಗ ಸೆಲೆಬ್ರಿಟಿ ಕಪಲ್​ ಆಗಿದ್ದಾರೆ. ಇವರ ಬಗ್ಗೆ ಬರುವ ಅಪ್​ಡೇಟ್​ ತಿಳಿದುಕೊಳ್ಳೋಕೆ ಅಭಿಮಾನಿಗಳು ಕಾತುರರಾಗಿರುತ್ತಾರೆ. ಈ ಕಾರಣಕ್ಕೆ ಅವರ ಸೋಶಿಯಲ್​ ಮೀಡಿಯಾ ಹಿಂಬಾಲಕರ ಸಂಖ್ಯೆ ಹೆಚ್ಚಿದೆ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಅರವಿಯಾ ಎಂದು ಕರೆಯುತ್ತಿದ್ದಾರೆ. ಈಗ ಇಬ್ಬರೂ ರೊಮ್ಯಾಂಟಿಕ್​ ಡ್ಯಾನ್ಸ್​ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಬಿಗ್​ ಬಾಸ್​ ಮುಗಿದ ನಂತರ ಅರವಿಂದ್​ ಹಾಗೂ ದಿವ್ಯಾ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಯಾವುದೇ ವಾಹಿನಿಗೆ ಅವರು ಒಟ್ಟಾಗಿ ಸಂದರ್ಶನ ನೀಡಿಲ್ಲ. ಈಗ ಇವರು ಕಲರ್ಸ್​ ಕನ್ನಡ ವೇದಿಕೆಯನ್ನು ಒಟ್ಟಾಗಿ ಏರಿದ್ದಾರೆ. ಅಲ್ಲಿ ಅದ್ಭುತವಾಗಿ ಅವರು ಡ್ಯಾನ್ಸ್​ ಮಾಡಿದ್ದಾರೆ. ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ.

‘ಅನುಬಂಧ’ ಅವಾರ್ಡ್ಸ್​ ಕಾರ್ಯಕ್ರಮ ಅಕ್ಟೋಬರ್ 15,16 ಮತ್ತು 17ರಂದು ಪ್ರಸಾರವಾಗಲಿದೆ. ಕಲರ್ಸ್​ ಕುಟುಂಬದ ಎಲ್ಲರೂ ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಅರವಿಂದ್ ಹಾಗೂ ದಿವ್ಯಾ ಬಿಗ್​ ಬಾಸ್​ ಸೀಸನ್​ 8ರಲ್ಲಿ ಸ್ಪರ್ಧಿಯಾಗಿ ತೆರಳುವ ಮೂಲಕ ಕಲರ್ಸ್ ಕನ್ನಡದ ಭಾಗವಾಗಿದ್ದಾರೆ. ಹೀಗಾಗಿ, ಇವರು ಕೂಡ ಕಲರ್ಸ್​ ವಾಹಿನಿಯ ಅನುಬಂಧ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

r

ಈ ಬಾರಿಯ ಅನುಬಂಧವನ್ನು ಅದ್ದೂರಿಯಾಗಿ ನಡೆಸಲಾಗಿದೆ. ಈಗಾಗಲೇ ಇದರ ಶೂಟಿಂಗ್​ ಪೂರ್ಣಗೊಂಡಿದೆ. ಅರವಿಂದ್ ಮತ್ತು ದಿವ್ಯಾ ಇಬ್ಬರೂ ‘ಯಾರೋ ನೀನು..’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅರವಿಂದ್ ಅವರು ವೇದಿಕೆಗೆ ತಮ್ಮ ಬೈಕ್​ ಮೇಲೆಯೇ ಬಂದಿದ್ದು ವಿಶೇಷವಾಗಿತ್ತು. ಇವರ ಡ್ಯಾನ್ಸ್​ ಪೂರ್ತಿಯಾಗಿ ನೋಡೋಕೆ ಅನುಬಂಧ ಕಾರ್ಯಕ್ರಮ ಪ್ರಸಾರವಾಗುವವರೆಗೆ ಕಾಯಬೇಕಿದೆ. ಇತ್ತೀಚೆಗೆ ಕಲರ್ಸ್​ ಕನ್ನಡ ವಾಹಿನಿ ‘ಅನುಬಂಧ’  ಮೇಕಿಂಗ್​ ವಿಡಿಯೋ ಪ್ರಸಾರ ಮಾಡಿತ್ತು. ಈ ವಿಡಿಯೋದಲ್ಲಿ ಅರವಿಂದ್ ಕೆ.ಪಿ. ವೇದಿಕೆ ಮೇಲೆ ಬೈಕ್​ನಲ್ಲಿಯೇ ಆಗಮಿಸುವುದಾಗಿ ತಿಳಿಸಿದ್ದರು.

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಫಿನಾಲೆ ಆಗಸ್ಟ್ 8ರಂದು ನಡೆದಿತ್ತು. ಮಂಜು ಪಾವಗಡ ಈ ಸೀಸನ್​ ವಿನ್ನರ್​ ಆಗಿ ಹೊರಹೊಮ್ಮಿದರು. ಅರವಿಂದ್ ಅವರು ಮೊದಲ ರನ್ನರ್​ ಅಪ್​ ಹಾಗೂ ದಿವ್ಯಾ ಉರುಡುಗ ಸೆಕೆಂಡ್​ ರನ್ನರ್​ ಅಪ್​ ಆಗಿದ್ದರು.

ಇದನ್ನೂ ಓದಿ: ‘ಮದುವೆ ಯಾವಾಗ’ ಎನ್ನುವ ಪ್ರಶ್ನೆಗೆ ದಿವ್ಯಾ ಉರುಡುಗ ಪಕ್ಕದಲ್ಲೇ ನಿಂತು ಉತ್ತರಿಸಿದ ಅರವಿಂದ್​ ಕೆಪಿ

ನನ್ನ ಮದುವೆ ಆಗಿಹೋಗಿದೆ ಅಂತ ಎಲ್ಲರೂ ಹೇಳ್ತಾ ಇದಾರೆ ಎಂದ ಅರವಿಂದ್​ ಕೆಪಿ; ದಿವ್ಯಾ ರಿಯಾಕ್ಷನ್​ ಹೇಗಿತ್ತು?

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ