AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೆ ವಯಸ್ಸಾಗಿದೆ ಅಂದ್ರೆ ಯಾರು ನಂಬ್ತಾರೆ’? ಲಕ್ಷ್ಮೀ-ಶಿವಣ್ಣ ಡ್ಯಾನ್ಸ್ ನೋಡಿ ರವಿಚಂದ್ರನ್ ಮಾತು

ಜಡ್ಜ್​ಗಳಾದ ರವಿಚಂದ್ರನ್, ಶಿವರಾಜ್​ಕುಮಾರ್, ರಕ್ಷಿತಾ, ಲಕ್ಷ್ಮೀ ಹಾಗೂ ರಚಿತಾ ರಾಮ್ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡರು. ವಿಶೇಷ ಎಂದರೆ, ಲಕ್ಷ್ಮೀ ಹಾಗೂ ಶಿವಣ್ಣ ‘ನಾ ನಿನ್ನ ಮರೆಯಲಾರೆ..’ ಹಾಡಿಗೆ ಹೆಜ್ಜೆ ಹಾಕಿದರು. ‘

‘ನಿಮಗೆ ವಯಸ್ಸಾಗಿದೆ ಅಂದ್ರೆ ಯಾರು ನಂಬ್ತಾರೆ’? ಲಕ್ಷ್ಮೀ-ಶಿವಣ್ಣ ಡ್ಯಾನ್ಸ್ ನೋಡಿ ರವಿಚಂದ್ರನ್ ಮಾತು
ಶಿವಣ್ಣ-ಲಕ್ಷ್ಮೀ ಮತ್ತು ರವಿ ಚಂದ್ರನ್
TV9 Web
| Edited By: |

Updated on:Jun 06, 2022 | 3:01 PM

Share

ಎರಡು ರಿಯಾಲಿಟಿ ಶೋಗಳ ಸ್ಪರ್ಧಿಗಳು ಹಾಗೂ ಜಡ್ಜ್​​ಗಳು ಒಂದೇ ವೇದಿಕೆ ಏರಿದರೆ ವೀಕ್ಷಕರಿಗೆ ಡಬಲ್ ಮಜಾ ಗ್ಯಾರಂಟಿ. ಕಳೆದ ವಾರಾಂತ್ಯದಲ್ಲಿ ಜೀ ಕನ್ನಡ (Zee Kannada) ವಾಹಿನಿಯಲ್ಲಿ ‘ಡ್ರಾಮಾ ಜ್ಯೂನಿಯರ್ಸ್​ 4’ ಮತ್ತು ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ 6’ನ ಶೋಗಳು ಒಂದಾಗಿವೆ. ಈ ಮಹಾ ಸಂಗಮದ ಬಗ್ಗೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬಾಲ್ಯದ ಸ್ನೇಹಿತರಾಗಿರುವ ರವಿಚಂದ್ರನ್ (Ravichandran) ಹಾಗೂ ಶಿವಣ್ಣ (Shivarajkumar) ಅವರು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಇವರ ಡ್ಯಾನ್ಸ್ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.

‘ಡ್ರಾಮಾ ಜ್ಯೂನಿಯರ್ಸ್​’ ಅನೇಕ ಟ್ಯಾಲೆಂಟ್​ಗಳಿಗೆ ವೇದಿಕೆ ಆಗಿದೆ. ಇದರಿಂದ ಅನೇಕ ಕಲಾವಿದರು ಬಾಳು ಕಟ್ಟಿಕೊಂಡಿದ್ದಾರೆ. ಇನ್ನು, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ನಿಂದ’ ಸಾಕಷ್ಟು ಡ್ಯಾನ್ಸರ್​ಗಳಿಗೆ ತಮ್ಮ ಕಲೆಯನ್ನು ಅಭಿವ್ಯಕ್ತಿಪಡಿಸಲು ಅವಕಾಶ ಸಿಕ್ಕಿದೆ. ಈ ವರ್ಷ ಈ ಎರಡೂ ರಿಯಾಲಿಟಿ ಶೋಗಳು ಒಟ್ಟೊಟ್ಟಿಗೆ ನಡೆಯುತ್ತಿವೆ. ಈ ಕಾರಣಕ್ಕೆ ವಾಹಿನಿಯವರು ಮಹಾಸಂಗಮ ಏರ್ಪಡಿಸಿದ್ದರು.

ಇದನ್ನೂ ಓದಿ
Image
ಸೋತ ಸಿನಿಮಾಗಳ ಹೊಣೆ ನನ್ನದೇ ಎಂದ ರವಿಚಂದ್ರನ್
Image
ಎಸ್​ಎಸ್​ಎಲ್​ಸಿಯಲ್ಲಿ ಶೇ.99 ಅಂಕ ಪಡೆದ ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ಮಹತಿ ಭಟ್
Image
ಅಮ್ಮನನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಶಿವಣ್ಣ; ಕ್ಷಮೆ ಕೇಳಿದ ಅನುಶ್ರೀ
Image
ರವಿಚಂದ್ರನ್​ ಬಳಿಕ ರಚಿತಾ ರಾಮ್​ ಕಿಡ್ನಾಪ್​; ಈ ಡ್ರಾಮಾದ ಹೊಣೆ ಹೊತ್ತುಕೊಂಡ ಹಿರಿಯ ನಟಿ ಲಕ್ಷ್ಮೀ

ಜಡ್ಜ್​ಗಳಾದ ರವಿಚಂದ್ರನ್, ಶಿವರಾಜ್​ಕುಮಾರ್, ರಕ್ಷಿತಾ, ಲಕ್ಷ್ಮೀ ಹಾಗೂ ರಚಿತಾ ರಾಮ್ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡರು. ವಿಶೇಷ ಎಂದರೆ, ಲಕ್ಷ್ಮೀ ಹಾಗೂ ಶಿವಣ್ಣ ‘ನಾ ನಿನ್ನ ಮರೆಯಲಾರೆ..’ ಹಾಡಿಗೆ ಹೆಜ್ಜೆ ಹಾಕಿದರು. ‘ರಾಜ್​ಕುಮಾರ್ ಅವರು ಮತ್ತೆ ನೆನಪಾದರು. ನಿಮಗೆ ವಯಸ್ಸಾಗಿದೆ ಎಂದರೆ ಯಾರು ನಂಬುತ್ತಾರೆ’ ಎಂದು ರವಿಚಂದ್ರನ್ ಮೆಚ್ಚುಗೆ ಸೂಚಿಸಿದರು. ಈ ವೇಳೆ ಲಕ್ಷ್ಮೀ ಅವರು ನಾಚಿ ನೀರಾದರು.

ಒಂದು ವಾರದಿಂದಲೇ ಜೀ ಕನ್ನಡ ವಾಹಿನಿ ಈ ಮಹಾಸಂಗಮಕ್ಕೆ ಸಂಬಂಧಿಸಿದ ಪ್ರೋಮೋಗಳನ್ನು ಹಂಚಿಕೊಳ್ಳುತ್ತಲೇ ಬರುತ್ತಲಿತ್ತು. ಹೀಗಾಗಿ, ಈ ಮಹಾಸಂಗಮದ ಬಗ್ಗೆ ನಿರೀಕ್ಷೆ ಮೂಡಿತ್ತು. ವೀಕೆಂಡ್​ನಲ್ಲಿ ಮನೆ ಮಂದಿ ಈ ಮಹಾಸಂಗಮ ನೋಡಿ ಸಖತ್ ಖುಷಿಪಟ್ಟಿದ್ದಾರೆ. ರಾತ್ರಿ 7.30ರಿಂದ ರಾತ್ರಿ 10.30ರವರೆಗೆ ಈ ಶೋ ಪ್ರಸಾರವಾಗಿದೆ.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: ರವಿಚಂದ್ರನ್​ ಬಳಿಕ ರಚಿತಾ ರಾಮ್​ ಕಿಡ್ನಾಪ್​; ಈ ಡ್ರಾಮಾದ ಹೊಣೆ ಹೊತ್ತುಕೊಂಡ ಹಿರಿಯ ನಟಿ ಲಕ್ಷ್ಮೀ

ಮಾರ್ಚ್ 19ರಿಂದ ‘ಡ್ರಾಮಾ ಜ್ಯೂನಿಯರ್ಸ್ 4’ ಪ್ರಸಾರ ಶುರು ಆಗಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಬಿತ್ತರ ಆಗುತ್ತಿದೆ. ಈ ಬಾರಿ ಮಕ್ಕಳ ಡ್ರಾಮಾ ಸಿಕ್ಕಾಪಟ್ಟೆ ಜೋರಾಗಿಯೇ ಇದೆ.  ಇದೇ ಮೊದಲ ಬಾರಿಗೆ ‘ಡ್ರಾಮಾ ಜ್ಯೂನಿಯರ್ಸ್’ ಜಡ್ಜ್ ಸ್ಥಾನಕ್ಕೆ ರವಿಚಂದ್ರನ್ ಮತ್ತು ರಚಿತಾ ರಾಮ್ ಆಗಮಿಸಿರುವುದು ವಿಶೇಷ. ‘ಡಿಕೆಡಿ 6’ರಲ್ಲಿ ಶಿವಣ್ಣ ಹಾಗೂ ರಕ್ಷಿತಾ ರಾಮ್ ಜಡ್ಜ್​ ಸ್ಥಾನ ಅಲಂಕರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:58 pm, Mon, 6 June 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು