AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜಾ-ರಾಣಿ ಸೀಸನ್​ 2’ ಗ್ರ್ಯಾಂಡ್​ ಓಪನಿಂಗ್​ಗೆ ದಿನಗಣನೆ; ಈ ಬಾರಿ ಇರಲಿದೆ ಇನ್ನಷ್ಟು ಮನರಂಜನೆ

Raja Rani Season 2: ಈ ಬಾರಿ ಹೆಚ್ಚಿನ ಮನರಂಜನೆ ನೀಡುವ ಉದ್ದೇಶದಿಂದ ‘ರಾಜಾ ರಾಣಿ ಸೀಸನ್​ 2’ ವೇದಿಕೆ ಸಜ್ಜಾಗಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಈ ಶೋ ಪ್ರಸಾರ ಆಗಲಿದೆ.

‘ರಾಜಾ-ರಾಣಿ ಸೀಸನ್​ 2’ ಗ್ರ್ಯಾಂಡ್​ ಓಪನಿಂಗ್​ಗೆ ದಿನಗಣನೆ; ಈ ಬಾರಿ ಇರಲಿದೆ ಇನ್ನಷ್ಟು ಮನರಂಜನೆ
ತಾರಾ, ಸೃಜನ್​ ಲೋಕೇಶ್
TV9 Web
| Edited By: |

Updated on: Jun 06, 2022 | 11:58 AM

Share

ಕನ್ನಡ ಕಿರುತೆರೆಯಲ್ಲಿ ಎಲ್ಲ ವಾಹಿನಿಗಳ ನಡುವೆ ಪೈಪೋಟಿ ಇದೆ. ಧಾರಾವಾಹಿ ಮಾತ್ರವಲ್ಲದೇ ರಿಯಾಲಿಟಿ ಶೋಗಳ (Reality Show) ವಿಚಾರದಲ್ಲೂ ಸಖತ್​ ಸ್ಪರ್ಧೆ ಏರ್ಪಟ್ಟಿದೆ. ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡಲು ಎಲ್ಲ ಚಾನೆಲ್​ಗಳು ಪ್ರಯತ್ನಿಸುತ್ತಿವೆ. ಕಲರ್ಸ್​ ಕನ್ನಡ (Colors Kannada) ವಾಹಿನಿಯಲ್ಲಿ ಹಲವು ನಾನ್​-ಫಿಕ್ಷನ್​ ಶೋಗಳು ಗಮನ ಸೆಳೆಯುತ್ತಿವೆ. ಆ ಪೈಕಿ ‘ರಾಜಾ ರಾಣಿ’ ಕಾರ್ಯಕ್ರಮಕ್ಕೆ ತನ್ನದೇ ಆದ ಚಾರ್ಮ್​ ಇದೆ. ಈಗಾಗಲೇ ಒಂದು ಸೀಸನ್​ ಅನ್ನು ಯಶಸ್ವಿಯಾಗಿ ಮುಗಿಸಿರುವ ಈ ಕಾರ್ಯಕ್ರಮದ ಎರಡನೇ ಸೀಸನ್​ಗೆ ಸಕಲ ತಯಾರಿ ನಡೆದಿದೆ. ‘ರಾಜಾ ರಾಣಿ ಸೀಸನ್​ 2’ (Raja Rani Season 2) ಆರಂಭಿಸಲು ದಿನಾಂಕ ಕೂಡ ನಿಗದಿ ಆಗಿದೆ. ಜೂನ್​ 11ರಂದು ಅದ್ದೂರಿಯಾಗಿ ಇದರ ಗ್ರ್ಯಾಂಡ್​ ಓಪನಿಂಗ್​ ಆಗಲಿದೆ. ಈ ಬಾರಿ ಕೂಡ ಕಿರುತೆರೆ ಲೋಕದ ರಿಯಲ್​ ಲೈಫ್​ ಜೋಡಿಗಳು ಪ್ರೇಕ್ಷಕರನ್ನು ರಂಜಿಸಲಿವೆ.

ಕಲರ್ಸ್​ ಕನ್ನಡದ ಸೋಶಿಯಲ್​ ಮೀಡಿಯಾದ ಖಾತೆಗಳಲ್ಲಿ ‘ರಾಜಾ ರಾಣಿ ಸೀಸನ್​ 2’ ಕಾರ್ಯಕ್ರಮದ ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದೆ. ಈ ಹೊಸ ಸೀಸನ್​ನಲ್ಲಿ ಭಾಗವಹಿಸುವ ಜೋಡಿಗಳ ಬಗ್ಗೆ ಮಾಹಿತಿ ಇದರಲ್ಲಿ ಇದೆ. ಈಗಾಗಲೇ ಕೆಲವು ಎಪಿಸೋಡ್​ಗಳ ಶೂಟಿಂಗ್​ ಕೂಡ ಮಾಡಲಾಗಿದೆ. ಕಳೆದ ಸೀಸನ್​ಗಿಂತಲೂ ಈ ಬಾರಿ ಹೆಚ್ಚಿನ ಮನರಂಜನೆ ನೀಡುವ ಉದ್ದೇಶದಿಂದ ವೇದಿಕೆ ಸಜ್ಜಾಗಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಈ ಶೋ ಪ್ರಸಾರ ಆಗಲಿದೆ.

ಇದನ್ನೂ ಓದಿ
Image
ಕಲರ್ಸ್​ನಲ್ಲಿ ಮತ್ತೆ ಬರ್ತಿದೆ ‘ರಾಜಾ-ರಾಣಿ’ ರಿಯಾಲಿಟಿ ಶೋ; ‘ಬಿಗ್​ ಬಾಸ್​’ ಬಗ್ಗೆ ಪ್ರಶ್ನೆ ಇಟ್ಟ ಫ್ಯಾನ್ಸ್
Image
ಕಿರುತೆರೆ ನಟಿ ಸುನೇತ್ರಾ ಅಪಘಾತಕ್ಕೆ ಒಳಗಾದ ಘಟನೆಯ ಸಿಸಿಟಿವಿ ದೃಶ್ಯ ಇಲ್ಲಿದೆ
Image
ಲವ್​ ಕಹಾನಿ ಹೇಳುವಂತೆ ಬೇಡಿಕೆ ಇಟ್ಟ ಅಭಿಮಾನಿ; ಕಿರುತೆರೆ ನಟಿ ಕೊಟ್ರು ಖಡಕ್ ಉತ್ತರ
Image
‘ರಾಜಾ-ರಾಣಿ’ ಕಿರೀಟ ತೊಟ್ಟ ನೇಹಾ ಗೌಡ-ಚಂದನ್; ಫಿನಾಲೆಯಲ್ಲಿ ಗೆದ್ದ ‘ಗೊಂಬೆ’ ದಂಪತಿ

ಇದನ್ನೂ ಓದಿ: ‘ರಾಜಾ-ರಾಣಿ’ ಕಿರೀಟ ತೊಟ್ಟ ನೇಹಾ ಗೌಡ-ಚಂದನ್; ಫಿನಾಲೆಯಲ್ಲಿ ಗೆದ್ದ ‘ಗೊಂಬೆ’ ದಂಪತಿ

ಈ ಬಾರಿ ಕೂಡ ಸೃಜನ್​ ಲೋಕೇಶ್​ ಮತ್ತು ನಟಿ ತಾರಾ ಅವರು ಜಡ್ಜ್​ ಆಗಿರಲಿದ್ದಾರೆ. ಕಳೆದ ಸೀಸನ್​ಗೆ ಅನುಪಮಾ ಗೌಡ ಅವರು ನಿರೂಪಕಿ ಆಗಿದ್ದರು. ಈ ಬಾರಿ ಕೂಡ ಅವರೇ ನಿರೂಪಣೆ ಮಾಡಬೇಕು ಎಂದು ಕಮೆಂಟ್​ಗಳ ಮೂಲಕ ವೀಕ್ಷಕರು ಒತ್ತಾಯಿಸಿದ್ದಾರೆ. ಮೊದಲ ಸೀಸನ್​ನಲ್ಲಿ ನೇಹಾ ಗೌಡ ಮತ್ತು ಚಂದನ್​ ವಿನ್ನರ್​ ಆಗಿದ್ದರು. ಹೊಸ ಸೀಸನ್​ನಲ್ಲಿ ಅವರೇನಾದರೂ ಅತಿಥಿಗಳಾಗಿ ಬಂದು ಹೋಗುತ್ತಾರಾ ಎಂಬ ಕೌತುಕ ಕೂಡ ಮೂಡಿದೆ.

ಶಾಲಿನಿ-ಧನರಾಜ್​, ವೀಣಾ-ಸುಂದರ್​, ಅರುಣ್​ ಮಾಧುರ್ಯಾ, ಸಂದೇಶ್​-ಮನೀಷಾ, ಕಾವ್ಯಾ-ಕುಮಾರ್​, ಸುಜಾತಾ-ಅಕ್ಷಯ್​, ಮುಂತಾದ ದಂಪತಿಗಳು ಈ ಸೀಸನ್​ನಲ್ಲಿ ಭಾಗವಹಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್