AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಕ್ಕಳ ಥರ ಆಡಬಾರದು’; ಕ್ಯಾತೆ ತೆಗೆದು ಟಾರ್ಚರ್ ಕೊಡೋಕೆ ಬಂದ ರಕ್ಷಕ್​ಗೆ ಪ್ರತಾಪ್ ಮಾತಿನ ಚಾಟಿ

ರಾತ್ರಿ ಎಲ್ಲರೂ ಮಲಗುವವರಿದ್ದರು. ಈ ವೇಳೆ ಪ್ರತಾಪ್ ಅವರ ಬಳಿ ಬಂದ ರಕ್ಷಕ್, ‘ನನ್ನ ಬೆಡ್​ಶೀಟ್ ನೀಡಿ, ನನ್ನ ಬೆಡ್​ಶೀಟ್ ನೀಡಿ’ ಎಂದು ಕಾಡಿಸೋಕೆ ಶುರು ಮಾಡಿದರು. ಇದಕ್ಕೆ ಡ್ರೋನ್ ಪ್ರತಾಪ್ ಉತ್ತರ ಕೊಟ್ಟಿದ್ದಾರೆ.

‘ಮಕ್ಕಳ ಥರ ಆಡಬಾರದು’; ಕ್ಯಾತೆ ತೆಗೆದು ಟಾರ್ಚರ್ ಕೊಡೋಕೆ ಬಂದ ರಕ್ಷಕ್​ಗೆ ಪ್ರತಾಪ್ ಮಾತಿನ ಚಾಟಿ
ಪ್ರತಾಪ್-ರಕ್ಷಕ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 18, 2024 | 8:12 AM

Share

ಬುಲೆಟ್ ರಕ್ಷಕ್ ಅವರು ದೊಡ್ಮನೆಗೆ ಬಂದಿದ್ದರು. ಈ ಸೀಸನ್​ನಲ್ಲಿ ಅವರು ಕೊನೆಯ ತನಕ ಇರಬಹುದು ಎಂಬುದು ಅನೇಕರ ಊಹೆ ಆಗಿತ್ತು. ಆದರೆ, ಒಂದೇ ತಿಂಗಳಿಗೆ ಔಟ್ ಆದರು. ಈ ಬಗ್ಗೆ ಅವರಿಗೆ ಬೇಸರ ಇದೆ. ಈಗ ಬಿಗ್ ಬಾಸ್ ಮನೆಯಲ್ಲಿ ರೀಯೂನಿಯನ್ ಆಗಿದೆ. ಈ ವೇಳೆ ರಕ್ಷಕ್ (Rakshak) ಕೂಡ ದೊಡ್ಮನೆಗೆ ಆಗಮಿಸಿದ್ದರು. ಅವರು ಪ್ರತಾಪ್​ಗೆ ಟಾರ್ಚರ್ ಕೊಡೋಕೆ ಹೋಗಿದ್ದಾರೆ. ಇದನ್ನು ಕೆಲವರು ಖಂಡಿಸಿದ್ದಾರೆ. ಪ್ರತಾಪ್ ಮಾತಲ್ಲೇ ಚಾಟಿ ಬೀಸಿದ್ದಾರೆ.

ಬೆಡ್​ಶೀಟ್ ಪ್ರಸಂಗ

ವಿನಯ್ ಗೌಡ ಗ್ರೂಪ್​ನಲ್ಲಿ ಗುರುತಿಸಿಕೊಂಡವರೆಲ್ಲ ಒಬ್ಬೊಬ್ಬರೇ ಔಟ್ ಆಗುತ್ತಾರೆ ಎನ್ನುವ ಆರೋಪವನ್ನು ಡ್ರೋನ್ ಪ್ರತಾಪ್ ಮಾಡಿದ್ದರು. ಇದು ಅನೇಕರಿಗೆ ನಿಜ ಎನಿಸಿದೆ. ಕೆಲ ವಾರಗಳ ಹಿಂದೆ ನಡೆದ ಘಟನೆ ಇದು. ವೀಕೆಂಡ್ ಎಪಿಸೋಡ್ ಸಂದರ್ಭದಲ್ಲಿ ಎಲ್ಲರಿಗೂ ಒಂದೊಂದು ಕಾರ್ಡ್ ನೀಡಬೇಕಿತ್ತು. ‘ತುಳಿದು ಮೇಲೆ ಬರೋದು ಹೇಗೆ’ ಎನ್ನುವ ಕಾರ್ಡ್​ನ ವಿನಯ್​ಗೆ ಪ್ರತಾಪ್ ನೀಡಿದರು. ‘ವಿನಯ್ ಜೊತೆ ಇದ್ದವರೆಲ್ಲ ಒಬ್ಬೊಬ್ಬರೇ ಎಲಿಮಿನೇಟ್ ಆದರು. ಎಲಿಮಿನೇಟ್ ಆದವರ ಬೆಡ್​ಶೀಟ್ ವಿನಯ್ ಬೆಡ್ ಸೇರಿತು’ ಎಂದು ಹೇಳಿದ್ದರು ಪ್ರತಾಪ್.

ರಕ್ಷಕ್ ಪೋಸ್ಟ್

ಬಿಗ್ ಬಾಸ್​ನಿಂದ ಒಂದು ತಿಂಗಳಿಗೆ ರಕ್ಷಕ್ ಎಲಿಮಿನೇಟ್ ಆದರು. ಅವರೂ ವಿನಯ್ ಗ್ರೂಪ್​ನಲ್ಲಿ ಗುರುತಿಸಿಕೊಂಡಿದ್ದರು. ಪ್ರತಾಪ್ ಆರೋಪದ ಬಳಿಕ ರಕ್ಷಕ್ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. ‘ಎಲ್ಲರಿಗೂ ನಮಸ್ಕಾರ. ತಂಡ ಕಟ್ಟೋಕೆ ಅಥವಾ ಯಾವುದೇ ಗುಂಪುಗಾರಿಕೆ ಮಾಡೋಕೆ ಬಿಗ್ ಬಾಸ್ ಮನೆ ಒಳಗೆ ನಾನು ಹೋಗಿಲ್ಲ. ಜನರ ವಿಶ್ವಾಸ ಮತ್ತು ಜನರ ಪ್ರೀತಿ ಗಳಿಸಲು ನಾನು ಅಲ್ಲಿಗೆ ಹೋಗಿದ್ದೆ. ನನ್ನ ಬೆಡ್​ಶೀಟ್ ನನ್ನ ಹತ್ತಿರ ಜೋಪಾನವಾಗಿ ಇದೆ’ ಎಂದಿದ್ದರು ರಕ್ಷಕ್.

ಬಿಗ್ ಬಾಸ್ ಮನೆಯಲ್ಲಿ

ಬಿಗ್ ಬಾಸ್ ಮನೆಗೆ ಮರಳಿದ ಬಳಿಕ ರಕ್ಷಕ್ ಅವರು ಈ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ರಾತ್ರಿ ಎಲ್ಲರೂ ಮಲಗುವವರಿದ್ದರು. ಈ ವೇಳೆ ಪ್ರತಾಪ್ ಅವರ ಬಳಿ ಬಂದ ರಕ್ಷಕ್, ‘ನನ್ನ ಬೆಡ್​ಶೀಟ್ ನೀಡಿ, ನನ್ನ ಬೆಡ್​ಶೀಟ್ ನೀಡಿ’ ಎಂದು ಕಾಡಿಸೋಕೆ ಶುರು ಮಾಡಿದರು. ಆಗ ಪ್ರತಾಪ್ ಅವರು ಕೂಲ್ ಆಗಿಯೇ ಉತ್ತರಿಸೋಕೆ ಶುರು ಮಾಡಿದರು. ‘ಯಾವ ಬೆಡ್​ಶೀಟ್’ ಎಂದು ಪ್ರತಾಪ್ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಡ್ರೋನ್ ಪ್ರತಾಪ್ ಬಿಗ್​ಬಾಸ್ ಮನೆಯಲ್ಲಿ ಮಾತ್ರೆ ಸೇವಿಸುತ್ತಿದ್ದರೇ? ರಕ್ಷಕ್ ಹೇಳಿದ್ದು ಹೀಗೆ

‘ಹೇಳಿಕೆ ನೀಡೋ ಮೊದಲು ಯೋಚನೆ ಮಾಡಬೇಕು’ ಎಂದು ರಕ್ಷಕ್ ಆವಾಜ್ ಹಾಕೋಕೆ ಬಂದರು. ‘ಮಕ್ಕಳ ತರ ಆಡಬೇಡಿ. ಹೋಗಿ ಸುಮ್ಮನೆ ಮಲಗಿಕೊಳ್ಳಿ’ ಎಂದು ಪ್ರತಾಪ್ ಬುದ್ಧಿವಾದ ಹೇಳಿದರು. ಆ ಬಳಿಕ ರಕ್ಷಕ್ ಅಲ್ಲಿಂದ ತೆರಳಿದರು. ಮರುದಿನ ಸ್ನೇಹಿತ್ ಅವರು ಈ ವಿಚಾರವನ್ನು ಮೈಕಲ್ ಬಳಿ ಚರ್ಚಿಸಿದ್ದಾರೆ. ‘ರಕ್ಷಕ್ ಹೋಗಿ ಪ್ರತಾಪ್​ಗೆ ಟಾರ್ಚರ್ ಮಾಡಿದ್ದು ನನಗೆ ಸರಿ ಎನಿಸಲಿಲ್ಲ’ ಎಂದಿದ್ದಾರೆ. ಇದನ್ನು ಮೈಕಲ್ ಕೂಡ ಒಪ್ಪಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 17ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋಕೆ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:04 am, Thu, 18 January 24

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ