AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೆಟ್​ನಲ್ಲಿ ಹೊಡಿತೀನಿ ಎಂದಿದ್ದು ಸರಿ, ಬುರುಡೆ ಒಡಿತೀನಿ ಎಂದಿದ್ದು ತಪ್ಪಾ?’ ಮಂಜು-ರಜತ್ ಮಧ್ಯೆ ಮಾತಿನ ಚಕಮಕಿ

ಮಣ್ಣಿನಿಂದ ಗುರಾಣಿಗಳ ಮಾದರಿಯನ್ನು ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಮಂಜು ಹಾಗೂ ರಜತ್ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಮಂಜು ಹಾಗೂ ರಜತ್ ಒಂದೇ ತಂಡದಲ್ಲಿದ್ದಾಗಲೇ ಕಿತ್ತಾಡಿಕೊಂಡವರು. ಇನ್ನು ಬೇರೆ ಬೇರೆ ತಂಡದಲ್ಲಿ ಇದ್ದರೆ ಕೇಳಬೇಕೆ? ಅಂದುಕೊಂಡಿದ್ದಕ್ಕಿಂತಲೂ ಜೋರಾಗಿಯೇ ಕಿತ್ತಾಟ ನಡೆದಿದೆ.

‘ಮೆಟ್​ನಲ್ಲಿ ಹೊಡಿತೀನಿ ಎಂದಿದ್ದು ಸರಿ, ಬುರುಡೆ ಒಡಿತೀನಿ ಎಂದಿದ್ದು ತಪ್ಪಾ?’ ಮಂಜು-ರಜತ್ ಮಧ್ಯೆ ಮಾತಿನ ಚಕಮಕಿ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Nov 29, 2024 | 6:56 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ವೈಲ್ಡ್​ಕಾರ್ಡ್ ಮೂಲಕ ಬಂದ ಬಳಿಕ ವಾತಾವರಣ ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗಿದೆ. ಶೋಭಾ ಶೆಟ್ಟಿ ಅವರು ತಮ್ಮ ಉಗ್ರ ಸ್ವರೂಪ ತೋರಿಸುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ರಜತ್ ಅವರು ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಮಂಜು ಹಾಗೂ ಅವರ ಮಧ್ಯೆ ಕಾದಾಟ ನಡೆಯುತ್ತಿದೆ. ಈಗ ಮಂಜು ಹಾಗೂ ರಜತ್ ಮಧ್ಯೆ ಮತ್ತೆ ಮಾತಿನ ಫೈಟ್ ನಡೆದಿದೆ.

ಮಣ್ಣಿನಿಂದ ಗುರಾಣಿಗಳ ಮಾದರಿಯನ್ನು ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಮಂಜು ಹಾಗೂ ರಜತ್ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಮಂಜು ಹಾಗೂ ರಜತ್ ಒಂದೇ ತಂಡದಲ್ಲಿದ್ದಾಗಲೇ ಕಿತ್ತಾಡಿಕೊಂಡವರು. ಇನ್ನು ಬೇರೆ ಬೇರೆ ತಂಡದಲ್ಲಿ ಇದ್ದರೆ ಕೇಳಬೇಕೆ? ಅಂದುಕೊಂಡಿದ್ದಕ್ಕಿಂತಲೂ ಜೋರಾಗಿಯೇ ಕಿತ್ತಾಟ ನಡೆದಿದೆ.

‘ಬಿಗ್ ಬಾಸ್’ನ ನವೆಂಬರ್ 28ರ ಎಪಿಸೋಡ್​ನ ಟಾಸ್ಕ್​ನಲ್ಲಿ ‘ಬುರುಡೆ ಒಡೆಯುತ್ತೇನೆ’ ಎಂಬ ಪದ ರಜತ್ ಬಾಯಿ ಇಂದ ಬಂದಿದೆ. ಇದು ಮಂಜುನ ಕೆರಳಿಸಿದೆ. ಮಂಜು ಕೋಪದಲ್ಲಿ ರಜತ್ ವಿರುದ್ಧ ಕೂಗಾಡಿದ್ದಾರೆ. ಇದಕ್ಕೆ ರಜತ್ ಅವರು ಕೌಂಟರ್ ಕೊಡುವ ಪ್ರಯತ್ನ ಮಾಡಿದ್ದಾರೆ.

‘ನೀನು ಬುರುಡೆ ಒಡೆಯುತ್ತೇನೆ’ ಎಂದಿದ್ದು ತಪ್ಪು ಎಂದು ರಜತ್​ಗೆ ಹೇಳಿದರು ಮಂಜು. ‘ಹನುಮಂತಗೆ ಮೆಟ್​ನಲ್ಲಿ ಹೊಡೆಯುತ್ತೇನೆ ಎಂದು ಹೇಳಿದೆ. ಇದು ಎಷ್ಟು ಸರಿ? ನಾವು ಅದನ್ನು ಎಷ್ಟು ಹೈಲೈಟ್ ಮಾಡಬಹುದಿತ್ತು. ಬುರುಡೆ ಒಡೆದು ಹಾಕುತ್ತೀನಿ ಅನ್ನೋದು ನಿನಗೆ ದೊಡ್ಡದಾಗೋಯ್ತಾ’ ಎಂದು ರಜತ್ ಹೇಳಿದರು. ಇದಕ್ಕೆ ಕೌಂಟರ್ ಕೊಡೋಕೆ ಹೋದ ಮಂಜು ‘ಹೌದು, ರಾಜನಿಗೆ ಅವಮಾನ ಮಾಡಿದರೆ ಶಿಕ್ಷೆ ಕೊಡ್ತೀವಿ’ ಎಂದರು. ‘ರಾಜ ಮೆಟ್​ನಲ್ಲಿ ಹೊಡೆಯುತ್ತಾನಾ?’ ಎಂದು ರಜತ್ ಕೇಳಿದ್ದಾರೆ.

ಇದನ್ನೂ ಓದಿ:  ಬಿಗ್ ಬಾಸ್ ಮನೆ ರಣರಂಗ ಆಗುವಂತಿದೆ ರಜತ್ ಮಾತು; ಹೆಚ್ಚಿದ ಗಲಾಟೆ

ಈ ಮಾತಿಗೆ ಮಂಜು ಸಮಜಾಯಿಶಿ ಕೊಡುವ ಪ್ರಯತ್ನ ಮಾಡಿದರು. ‘ನಾನು ಆಡು ಭಾಷೆಯಲ್ಲಿ ಹೇಳಿದ್ದು’ ಎಂದರು. ರಜತ್ ಕೂಡ, ‘ನನಗೂ ಅಷ್ಟೇ ಆಡು ಭಾಷೆಯಲ್ಲಿ ಬಂದು ಬಿಡ್ತು’ ಎಂದು ಹೇಳಿದರು. ಒಟ್ಟಾರೆ ಇವರ ಮಧ್ಯೆ ಕಿತ್ತಾಟ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ