AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೆಟ್​ನಲ್ಲಿ ಹೊಡಿತೀನಿ ಎಂದಿದ್ದು ಸರಿ, ಬುರುಡೆ ಒಡಿತೀನಿ ಎಂದಿದ್ದು ತಪ್ಪಾ?’ ಮಂಜು-ರಜತ್ ಮಧ್ಯೆ ಮಾತಿನ ಚಕಮಕಿ

ಮಣ್ಣಿನಿಂದ ಗುರಾಣಿಗಳ ಮಾದರಿಯನ್ನು ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಮಂಜು ಹಾಗೂ ರಜತ್ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಮಂಜು ಹಾಗೂ ರಜತ್ ಒಂದೇ ತಂಡದಲ್ಲಿದ್ದಾಗಲೇ ಕಿತ್ತಾಡಿಕೊಂಡವರು. ಇನ್ನು ಬೇರೆ ಬೇರೆ ತಂಡದಲ್ಲಿ ಇದ್ದರೆ ಕೇಳಬೇಕೆ? ಅಂದುಕೊಂಡಿದ್ದಕ್ಕಿಂತಲೂ ಜೋರಾಗಿಯೇ ಕಿತ್ತಾಟ ನಡೆದಿದೆ.

‘ಮೆಟ್​ನಲ್ಲಿ ಹೊಡಿತೀನಿ ಎಂದಿದ್ದು ಸರಿ, ಬುರುಡೆ ಒಡಿತೀನಿ ಎಂದಿದ್ದು ತಪ್ಪಾ?’ ಮಂಜು-ರಜತ್ ಮಧ್ಯೆ ಮಾತಿನ ಚಕಮಕಿ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on: Nov 29, 2024 | 6:56 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ವೈಲ್ಡ್​ಕಾರ್ಡ್ ಮೂಲಕ ಬಂದ ಬಳಿಕ ವಾತಾವರಣ ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗಿದೆ. ಶೋಭಾ ಶೆಟ್ಟಿ ಅವರು ತಮ್ಮ ಉಗ್ರ ಸ್ವರೂಪ ತೋರಿಸುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ರಜತ್ ಅವರು ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಮಂಜು ಹಾಗೂ ಅವರ ಮಧ್ಯೆ ಕಾದಾಟ ನಡೆಯುತ್ತಿದೆ. ಈಗ ಮಂಜು ಹಾಗೂ ರಜತ್ ಮಧ್ಯೆ ಮತ್ತೆ ಮಾತಿನ ಫೈಟ್ ನಡೆದಿದೆ.

ಮಣ್ಣಿನಿಂದ ಗುರಾಣಿಗಳ ಮಾದರಿಯನ್ನು ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಮಂಜು ಹಾಗೂ ರಜತ್ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಮಂಜು ಹಾಗೂ ರಜತ್ ಒಂದೇ ತಂಡದಲ್ಲಿದ್ದಾಗಲೇ ಕಿತ್ತಾಡಿಕೊಂಡವರು. ಇನ್ನು ಬೇರೆ ಬೇರೆ ತಂಡದಲ್ಲಿ ಇದ್ದರೆ ಕೇಳಬೇಕೆ? ಅಂದುಕೊಂಡಿದ್ದಕ್ಕಿಂತಲೂ ಜೋರಾಗಿಯೇ ಕಿತ್ತಾಟ ನಡೆದಿದೆ.

‘ಬಿಗ್ ಬಾಸ್’ನ ನವೆಂಬರ್ 28ರ ಎಪಿಸೋಡ್​ನ ಟಾಸ್ಕ್​ನಲ್ಲಿ ‘ಬುರುಡೆ ಒಡೆಯುತ್ತೇನೆ’ ಎಂಬ ಪದ ರಜತ್ ಬಾಯಿ ಇಂದ ಬಂದಿದೆ. ಇದು ಮಂಜುನ ಕೆರಳಿಸಿದೆ. ಮಂಜು ಕೋಪದಲ್ಲಿ ರಜತ್ ವಿರುದ್ಧ ಕೂಗಾಡಿದ್ದಾರೆ. ಇದಕ್ಕೆ ರಜತ್ ಅವರು ಕೌಂಟರ್ ಕೊಡುವ ಪ್ರಯತ್ನ ಮಾಡಿದ್ದಾರೆ.

‘ನೀನು ಬುರುಡೆ ಒಡೆಯುತ್ತೇನೆ’ ಎಂದಿದ್ದು ತಪ್ಪು ಎಂದು ರಜತ್​ಗೆ ಹೇಳಿದರು ಮಂಜು. ‘ಹನುಮಂತಗೆ ಮೆಟ್​ನಲ್ಲಿ ಹೊಡೆಯುತ್ತೇನೆ ಎಂದು ಹೇಳಿದೆ. ಇದು ಎಷ್ಟು ಸರಿ? ನಾವು ಅದನ್ನು ಎಷ್ಟು ಹೈಲೈಟ್ ಮಾಡಬಹುದಿತ್ತು. ಬುರುಡೆ ಒಡೆದು ಹಾಕುತ್ತೀನಿ ಅನ್ನೋದು ನಿನಗೆ ದೊಡ್ಡದಾಗೋಯ್ತಾ’ ಎಂದು ರಜತ್ ಹೇಳಿದರು. ಇದಕ್ಕೆ ಕೌಂಟರ್ ಕೊಡೋಕೆ ಹೋದ ಮಂಜು ‘ಹೌದು, ರಾಜನಿಗೆ ಅವಮಾನ ಮಾಡಿದರೆ ಶಿಕ್ಷೆ ಕೊಡ್ತೀವಿ’ ಎಂದರು. ‘ರಾಜ ಮೆಟ್​ನಲ್ಲಿ ಹೊಡೆಯುತ್ತಾನಾ?’ ಎಂದು ರಜತ್ ಕೇಳಿದ್ದಾರೆ.

ಇದನ್ನೂ ಓದಿ:  ಬಿಗ್ ಬಾಸ್ ಮನೆ ರಣರಂಗ ಆಗುವಂತಿದೆ ರಜತ್ ಮಾತು; ಹೆಚ್ಚಿದ ಗಲಾಟೆ

ಈ ಮಾತಿಗೆ ಮಂಜು ಸಮಜಾಯಿಶಿ ಕೊಡುವ ಪ್ರಯತ್ನ ಮಾಡಿದರು. ‘ನಾನು ಆಡು ಭಾಷೆಯಲ್ಲಿ ಹೇಳಿದ್ದು’ ಎಂದರು. ರಜತ್ ಕೂಡ, ‘ನನಗೂ ಅಷ್ಟೇ ಆಡು ಭಾಷೆಯಲ್ಲಿ ಬಂದು ಬಿಡ್ತು’ ಎಂದು ಹೇಳಿದರು. ಒಟ್ಟಾರೆ ಇವರ ಮಧ್ಯೆ ಕಿತ್ತಾಟ ಜೋರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ