AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ಒಬ್ಬನೇ ನನ್ನ ರಿಯಲ್ ಫ್ರೆಂಡ್; ಕಾರಣ ಹೇಳಿದ ರಿಷಾ ಗೌಡ

ಸಾಮಾನ್ಯವಾಗಿ ಬಿಗ್ ಬಾಸ್ ಆಟ ಎಂದಾಗ ಹಿಂದಿನಿಂದ ಮಾತನಾಡುವವರೇ ಹೆಚ್ಚಿರುತ್ತಾರೆ. ಅಲ್ಲಿ ಯಾರೊಬ್ಬರೂ ಎದುರಿಗೆ ಬಂದು ಮುಖಕ್ಕೆ ಹೊಡೆದಂತೆ ಹೇಳೋದಿಲ್ಲ. ಈ ವಿಷಯ ರಿಷಾಗೂ ಅನುಭವಕ್ಕೆ ಬಂದಿದೆ. ಹೊರಗೆ ಬಂದ ಬಳಿಕ ಯಾರ ಮುಖ ಹೇಗೆ ಅನ್ನೋದು ಗೊತ್ತಾಗಿದೆ. ಗಿಲ್ಲಿ ಮಾತ್ರ ಅವರು ಹಿಂದಿನಿಂದ ಮಾತನಾಡಿಲ್ಲ ಎಂಬ ಅಭಿಪ್ರಾಯ ಅವರದ್ದು.

ಗಿಲ್ಲಿ ಒಬ್ಬನೇ ನನ್ನ ರಿಯಲ್ ಫ್ರೆಂಡ್; ಕಾರಣ ಹೇಳಿದ ರಿಷಾ ಗೌಡ
ರಿಷಾ-ಗಿಲ್ಲಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 10, 2025 | 7:58 AM

Share

ರಿಷಾ ಗೌಡ (Risha Gowda) ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಗಿಲ್ಲಿ ಜೊತೆ ಸಾಕಷ್ಟು ಕಿತ್ತಾಡಿಕೊಂಡಿದ್ದರು. ವೈಲ್ಡ್ ಕಾರ್ಡ್ ಅಲ್ಲಿ ಬಂದಾಗ ಗಿಲ್ಲಿ ಹಾಗೂ ರಿಷಾ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ, ದಿನ ಕಳೆದಂತೆ ಅದು ಹಾಳಾಯಿತು. ಹೊರ ಬಂದ ಬಳಿಕ ರಿಷಾ ಅವರು ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ಅವನು ನನ್ನ ನಿಜವಾದ ಗೆಳೆಯ ಎಂದು ಹೇಳಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಅವರಿಗೆ ಈ ವಿಷಯ ಅರಿವಾಗಿದೆ.

ಸಾಮಾನ್ಯವಾಗಿ ಬಿಗ್ ಬಾಸ್ ಆಟ ಎಂದಾಗ ಹಿಂದಿನಿಂದ ಮಾತನಾಡುವವರೇ ಹೆಚ್ಚಿರುತ್ತಾರೆ. ಅಲ್ಲಿ ಯಾರೊಬ್ಬರೂ ಎದುರಿಗೆ ಬಂದು ಮುಖಕ್ಕೆ ಹೊಡೆದಂತೆ ಹೇಳೋದಿಲ್ಲ. ಈ ವಿಷಯ ರಿಷಾಗೂ ಅನುಭವಕ್ಕೆ ಬಂದಿದೆ. ಹೊರಗೆ ಬಂದ ಬಳಿಕ ಯಾರ ಮುಖ ಹೇಗೆ ಅನ್ನೋದು ಗೊತ್ತಾಗಿದೆ. ಗಿಲ್ಲಿ ಮಾತ್ರ ಅವರು ಹಿಂದಿನಿಂದ ಮಾತನಾಡಿಲ್ಲ ಎಂಬ ಅಭಿಪ್ರಾಯ ಅವರದ್ದು.

ಬಿಗ್ ಬಾಸ್​ ಇಂದ ಹೊರ ಬಂದ ಬಳಿಕ ರಿಷಾ ಅವರು ಎಪಿಸೋಡ್​ಗಳನ್ನಿ ನೋಡಿದಂತೆ ಕಾಣುತ್ತದೆ. ಅವರು ಬಿಗ್ ಬಾಸ್ ಎಪಿಸೋಡ್ ನೋಡಿ ಸಂದರ್ಶನದಲ್ಲಿ ಹೇಳಿದ್ದಾರೆ. ‘ನಾನು ಓಪನ್ ಆಗಿ ಹೇಳುತ್ತೇನೆ. ಗಿಲ್ಲ ನನ್ನ ನಿಜವಾದ ಗೆಳೆಯ. ಅವರು ವಿಷಯವನ್ನು ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ. ಆಗ ಅಲ್ಲಿದ್ದಾಗ ನನಗೆ ಅದು ಇಷ್ಟ ಆಗುತ್ತಾ ಇರಲಿಲ್ಲ. ಆದರೆ, ಹೊರಗೆ ಬಂದಮೇಲೆ ನೋಡಿದೆ. ಅವನು ಮಾತ್ರ ನನ್ನ ಹಿಂದೆ ಮಾತನಾಡಿಲ್ಲ. ಉಳಿದವರೆಲ್ಲರೂ ಮಾತನಾಡಿದ್ದಾರೆ’ ಎಂದರು ರಿಷಾ.

ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ಗೆಲ್ಲೋದು ಯಾರು ಎಂದು ಹೇಳಿದ ರಿಷಾ

ರಿಷಾ ಅವರಿಗೆ ಇನ್ನಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂಬ ಆಸೆ ಇತ್ತು. ಆದರೆ, ಇದಕ್ಕೆ ಅವಕಾಶ ಸಿಗಲೇ ಇಲ್ಲ. ಅವರಿಗೆ ಕಡಿಮೆ ವೋಟ್ ಬಿದ್ದ ಕಾರಣ ಕೆಲ ವಾರಗಳ ಹಿಂದೆ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರಬೇಕಾಯಿತು. ಅವರು ಈ ಮೊದಲು ಗಿಲ್ಲಿ ಮೇಲೆ ಹಲ್ಲೆ ಮಾಡಿ ಸುದ್ದಿ ಆಗಿದ್ದರು. ಆದರೂ ಅವರನ್ನು ಬಿಗ್ ಬಾಸ್ ಅಲ್ಲಿ ಉಳಿಸಿಕೊಳ್ಳಲಾಯಿತು. ರಿಷಾ ಬಟ್ಟೆಯನ್ನು ಗಿಲ್ಲಿ ಮುಟ್ಟಿದ್ದಕ್ಕೆ ಗಿಲ್ಲಿ ಮೇಲೆ ಕೇಸ್ ಆಗಿದೆ. ಈ ವಿಷಯ ತಿಳಿದು ರಿಷಾ ಬೇಸರಗೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!