AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರದ್ಧಾಂಜಲಿಗೂ ಪೋಸ್ಟರ್ ಹಾಕ್ತಾರೆ; ಗಿಲ್ಲಿ ತಿರುಗೇಟಿಗೆ ಮಂಕಾದ ಅಶ್ವಿನಿ ಗೌಡ

ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವೆ ಕಳಪೆ ವಿಷಯವಾಗಿ ನಡೆದ ಜಗಳ ತೀವ್ರವಾಗಿದೆ. ಅಶ್ವಿನಿ ಗಿಲ್ಲಿಯನ್ನು 'ಜೋಕರ್' ಎಂದಾಗ, ಗಿಲ್ಲಿ ಪ್ರತಿವಾದಿಯಾಗಿ ಕ್ಯಾಪ್ಟನ್ ಆಗದ ಬಗ್ಗೆ ಕುಟುಕಿದರು. ಕೊನೆಯಲ್ಲಿ, ಅಶ್ವಿನಿ ಪೋಸ್ಟರ್ ಕುರಿತು ಬೀಗಿದಾಗ, ಗಿಲ್ಲಿ ‘ಶ್ರದ್ಧಾಂಜಲಿಗೂ ಪೋಸ್ಟರ್ ಹಾಕ್ತಾರೆ’ ಎಂದು ಖಾರವಾಗಿ ಉತ್ತರಿಸಿ ಅಶ್ವಿನಿಯನ್ನು ಮಂಕಾಗಿಸಿದರು.

ಶ್ರದ್ಧಾಂಜಲಿಗೂ ಪೋಸ್ಟರ್ ಹಾಕ್ತಾರೆ; ಗಿಲ್ಲಿ ತಿರುಗೇಟಿಗೆ ಮಂಕಾದ ಅಶ್ವಿನಿ ಗೌಡ
ಗಿಲ್ಲಿ-ಅಶ್ವಿನಿ
ರಾಜೇಶ್ ದುಗ್ಗುಮನೆ
|

Updated on:Jan 03, 2026 | 11:17 AM

Share

ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಮಧ್ಯೆ ಬಿಗ್ ಬಾಸ್ (Bigg Boss) ಅಲ್ಲಿ ಒಳ್ಳೆಯ ಕಾಂಪಿಟೇಷನ್ ಬೆಳೆದಿದೆ. ಇಬ್ಬರ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತಲೇ ಇರುತ್ತವೆ. ಜನವರಿ 2ರ ಎಪಿಸೋಡ್​​ನಲ್ಲಿ ಇಬ್ಬರ ಮಧ್ಯೆ ಕಿರಕ್ ಆಗಿದೆ. ಕಳಪೆ ಕೊಡೋ ವಿಷಯದಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಘನಘೋರ ಜಗಳ ನಡೆದಿದೆ. ಅಶ್ವಿನಿ ಟ್ರಿಗರ್ ಮಾಡಿ, ಅವರಿಗೆ ತಿರುಗೇಟು ನೀಡಿದ್ದಾರೆ ಗಿಲ್ಲಿ.

ಅಶ್ವಿನಿ ಗೌಡ ಅವರು ಮೊದಲು ಗಿಲ್ಲಿಗೆ ಕಳಪೆ ನೀಡಿದರು. ಇದಕ್ಕೆ ಅವರು ಕೊಟ್ಟ ಕಾರಣ ಸೂಕ್ತ ಆಗಿರಲಿಲ್ಲ ಎಂದು ಗಿಲ್ಲಿಗೆ ಅನಿಸಿದೆ. ಇಬ್ಬರ ಮಧ್ಯೆ ಈ ವಿಯಕ್ಕೆ ಚರ್ಚೆಗಳು ನಡೆದವು. ಆ ಬಳಿಕ ಗಿಲ್ಲಿ ನಟ ಅವರು ಕಳಪೆಗೆ ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡರು. ಈ ವೇಳೆ ಏಟಿನ ಮೇಲೆ ಏಟನ್ನು ಕೊಟ್ಟಿದ್ದಾರೆ.

‘ನೀನು ಜೋಕರ್’ ಎಂದು ಅಶ್ವಿನಿ ಅವರು ಗಿಲ್ಲಿಗೆ ಹೇಳಿದರು. ಇದಕ್ಕೆ ತಿರುಗೇಟು ಕೊಟ್ಟ ಗಿಲ್ಲಿ, ‘ಹೌದು ನಾನು ಜೋಕರ್’ ಎಂಬುದನ್ನು ಒಪ್ಪಿಕೊಂಡರು. ಹಾಸ್ಯ ಶೋಗಳನ್ನು ಮಾಡುತ್ತಾ ಎಲ್ಲರನ್ನೂ ನಗಿಸೋ ಕೆಲಸ ಗಿಲ್ಲಿಯದ್ದು. ಈ ಕಾರಣದಿಂದಲೇ ಅವರು ತಮ್ಮನ್ನು ತಾವು ಜೋಕರ್ ಎಂದು ಕರೆದುಕೊಂಡರು.

ಅಶ್ವಿನಿ ಗೌಡ ಅವರು ಈವರೆಗೆ ಕ್ಯಾಪ್ಟನ್ ಆಗಿಯೇ ಇಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. ಈ ವಿಷಯ ಇಟ್ಟುಕೊಂಡು ಗಿಲ್ಲಿ ಕೌಂಟರ್ ಕೊಟ್ಟರು. ‘ನಿಮಗೆ ಈವರೆಗೆ ಕ್ಯಾಪ್ಟನ್ ಆಗೋಕೆ ಸಾಧ್ಯವಾಗಿಲ್ಲ’ ಎಂದರು. ಈ ಮಾತು ಅಶ್ವಿನಿಗೆ ಚುಚ್ಚಿದೆ.

ಇದನ್ನೂ ಓದಿ: ಈ ವಾರ ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ

ಫೈನಲ್ ಟಾಸ್ಕ್ ಅಲ್ಲಿ ಅಶ್ವಿನಿ ಹಾಗೂ ಧನುಷ್ ಆಡಬೇಕಿತ್ತು. ಇದಕ್ಕಾಗಿ ಪೋಸ್ಟರ್ ಹಾಕಲಾಗಿತ್ತು. ಇದನ್ನು ಅಶ್ವಿನಿ ಹೈಲೈಟ್ ಮಾಡಿದರು. ‘ನನ್ನ ಫೋಟೋ ಕೊನೆಪಕ್ಷ ಪೋಸ್ಟರ್​ ಅಲ್ಲಾದರೂ ಬಂತು’ ಎಂದು ಹೆಮ್ಮೆಯಿಂದ ಬೀಗಿದರು. ಇದಕ್ಕೆ ಗಿಲ್ಲಿ ನಟ ಕೊಟ್ಟ ಕೌಂಟರ್ ಅವರಿಂದ ಸಹಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ‘ಶ್ರದ್ಧಾಂಜಲಿಗೂ ಪೋಸ್ಟರ್ ಹಾಕ್ತಾರೆ ಅದ್ರಲ್ಲೇನಿದೆ’ ಎಂದರು. ಈ ಡೈಲಾಗ್​​ಗೆ ಅವರಿಂದ ಉತ್ತರ ಹೇಳಲು ಸಾಧ್ಯವಾಗಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:17 am, Sat, 3 January 26

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?
ಸಾವಿನ ಕೊನೆ ಗಳಿಗೆಯಲ್ಲಿ ಬಾಯಿಗೆ ಗಂಗಾಜಲ ಯಾಕೆ ಬಿಡ್ತಾರೆ ಗೊತ್ತಾ?
ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ
ಇಂದು ಈ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಲಿವೆ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
ಪ್ರಮಾಣವಚನಕ್ಕೂ ಮುನ್ನವೇ ಡಿಕೆಶಿ​​​ ನಿವಾಸಕ್ಕೆ ಭದ್ರತೆ ಹೇಗಿದೆ ನೋಡಿ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ