AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಹೀರೋ, ಧೀಮಂತ ಆಟಗಾರ’; ಹನುಮಂತನ ಬಾಯ್ತುಂಬ ಹೊಗಳಿದ ಬಿಗ್ ಬಾಸ್

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ ಅವರು ತಮ್ಮ ಆಟದ ಶೈಲಿಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ನೇರ ಮತ್ತು ಪ್ರಾಮಾಣಿಕ ವ್ಯಕ್ತಿತ್ವದಿಂದ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಬಿಗ್ ಬಾಸ್ ಅವರ ಆಟವನ್ನು ಮೆಚ್ಚಿ ಅಭಿನಂದಿಸಿದ್ದಾರೆ. ಹನುಮಂತ ಈಗ ಗೆಲುವಿನ ಹಾದಿಯಲ್ಲಿದ್ದಾರೆ.

‘ನಮ್ಮ ಹೀರೋ, ಧೀಮಂತ ಆಟಗಾರ’; ಹನುಮಂತನ ಬಾಯ್ತುಂಬ ಹೊಗಳಿದ ಬಿಗ್ ಬಾಸ್
ಹನುಮಂತ
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 27, 2025 | 12:28 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಹನುಮಂತ ಎಲ್ಲರ ಗಮನ ಸೆಳೆದರು. ಅವರು ಆಡಿದ ರೀತಿ ಅನೇಕರಿಗೆ ಇಷ್ಟ ಆಗಿದೆ. ಹೊಸ ರೀತಿಯಲ್ಲಿ ಆಟ ಆಡುವ ಮೂಲಕ ಅವರು ಎಲ್ಲರ ಫೇವರಿಟ್ ಎನಿಸಿಕೊಂಡಿದ್ದಾರೆ. ಮೋಸ, ವಂಚನೆ, ಕಪಟ ಏನೂ ಅರಿಯದೆ ಅವರು ದೊಡ್ಮನೆಯಲ್ಲಿ ಇಷ್ಟು ದಿನ ಬಂದಿದ್ದಾರೆ. ಹೀಗಿರುವಾಗಲೇ ಅವರಿಗೆ ಬಿಗ್ ಬಾಸ್ ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.

ಬಿಗ್ ಬಾಸ್​ನಲ್ಲಿ ಈ ಬಾರಿ ಹೊಸ ಹೊಸ ಪ್ರಯತ್ನ ಮಾಡಲಾಗಿದೆ. ಇದರಲ್ಲಿ ಅಭಿಮಾನಿಗಳನ್ನು ಕರೆಸಿದ್ದು ಕೂಡ ಒಂದು. ಹೌದು, ಅಭಿಮಾನಿಗಳನ್ನು ಬಿಗ್ ಬಾಸ್ ಮನೆ ಒಳಗೆ ಆಹ್ವಾನಿಸಲಾಗಿದೆ. ಪ್ರತಿ ಸ್ಪರ್ಧಿಯನ್ನು ಗಾರ್ಡನ್ ಏರಿಯಾಗೆ ಕರೆಸಲಾಗಿದೆ. ಈ ವೇಳೆ ಅಲ್ಲಿ ಸ್ಪರ್ಧಿಗಳ ಅಭಿಮಾನಿಗಳನ್ನು ಕರೆಸಲಾಗಿದೆ. ಅವರ ಎದುರು ಸ್ಪರ್ಧಿಯನ್ನು ಹೊಗಳಿ, ರಿಕ್ಯಾಪ್ ಹಾಕುವ ಕೆಲಸ ಆಗಿದೆ.

ಬಿಗ್ ಬಾಸ್ ಹನುಮಂತ ಅವರ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ‘ಹನುಮಂತ ಮೊದಲ ಟಾಸ್ಕ್​ನಲ್ಲಿ ಆಟ ಆಡುವಾಗ ಸುಸ್ತಾಗಿ ಬಿದ್ದಿದ್ದು ನೋಡಿ ಸುತ್ತಲೂ ಇದ್ದ ಪ್ರತಿಯೊಬ್ಬರ ಮನದಲ್ಲಿ ಇದ್ದಿದ್ದು ಒಂದೇ ಪ್ರಶ್ನೆ. ಈಗೇನ್ ಮಾಡ್ತಾನೆ ನಿಮ್ಮ ಹೀರೋ ಅಂತ. ಆಗ ಹೀರೋ ಮಾತನಾಡಲ್ಲ. ಮನೆಯ ಪ್ರತಿ ಸದಸ್ಯರನ್ನು ಹಿಮ್ಮೆಟ್ಟಿಸಿ ಟಿಕೆಟ್​ ಟು ಫಿನಾಲೆ ಪಡೆದು ಮೊದಲ ಸದಸ್ಯನಾಗುವ ಮೂಲಕ ಮಾತನಾಡಿದ್ದರೂ ಮಾಡಿ ತೋರಿಸುವಲ್ಲಿ ತಪ್ಪಲಿಲ್ಲ ನಮ್ಮ ಹೀರೋ’ ಎಂದರು ಬಿಗ್ ಬಾಸ್.

‘ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಶೈಲಿಯಲ್ಲಿ ಆಟ ಆಡುವ ಮೂಲಕ ನೋಡುಗರಿಗೆ ಬದುಕಿನ ಪಾಠ ಕಲಿಸಿದ್ದೀರಿ. ಆಟ ಅಂತ ಬಂದಾಗ ದೋಸ್ತಾ ಅನ್ನೋದು ನೋಡಿಲ್ಲ. ದೋಸ್ತನ ವಿಷಯದಾಗ ಯಾವುದೇ ಆಟ ಆಡಿಲ್ಲ. ಬಿಗ್ ಬಾಸ್ ಮನೆಯಲ್ಲಿ ಧೀಮಂತ ಆಟ ಆಡಿದ ಹನುಮಂತ ನಿಮ್ಮ ಲುಂಗಿ ಲಾಂಚನ ಎಂದಿಗೂ ಬಾಗದಿರಲಿ. ಮನದಾಳದ ಅಭಿನಂದನೆಗಳು’ ಎಂದರು ಬಿಗ್ ಬಾಸ್.

ಇದನ್ನೂ ಓದಿ: ‘ನೀನು ಮಾಡೋ ಡವ್ ಸೂಪರ್’; ಭವ್ಯಾಗೆ ಓಪನ್ ಆಗಿ ಕಾಲೆಳೆದ ಹನುಮಂತ

ಹನುಮಂತ ಅವರು ಈ ಬಾರಿ ಕಪ್ ಗೆಲ್ಲುವ ರೇಸ್​ನಲ್ಲಿ ಇದ್ದಾರೆ. ಅವರಿಗೆ ಕಪ್ ಸಿಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಅವರ ಜೊತೆ ಇರುವ ಉಳಿದ ಐವರು ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಹೀಗಾಗಿ, ಕಪ್ ಯಾರಿಗೆ ಒಲಿಯುತ್ತದೆ ಎಂದು ಹೇಳುವುದು ಅಷ್ಟು ಸುಲಭವಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:53 am, Fri, 24 January 25

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ