AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಂಗನಸು: ಗೌತಮ್‌ಗೆ ಲೈಬ್ರರಿಯಲ್ಲಿ ರಿಷಿ-ವಸುಧರಾ ಮಧ್ಯೆ ಏನ್ ನಡೀತು ಎನ್ನುವುದೇ ಯೋಚನೆ

Honganasu Kannada Serial: ಲೈಬ್ರರಿಯಲ್ಲಿ ಏನ್ ನಡೆಯಿತು ಎಂದು ಯೋಚಿಸುತ್ತಾ ಗೌತಮ್‌ ಕುಳಿತಿದ್ದ. ಆಗ ರಿಷಿ ಎಂಟ್ರಿ ಕೊಟ್ಟ. ಗೌತಮ್‌ನನ್ನು ಮಾತಾಡಿಸಬೇಕು ಎನ್ನುವಷ್ಟರಲ್ಲಿ ಪೇಂಟಿಂಗ್ ಮಾಯವಾಗಿದ್ದನ್ನು ಗಮನಿಸಿದ.

ಹೊಂಗನಸು: ಗೌತಮ್‌ಗೆ ಲೈಬ್ರರಿಯಲ್ಲಿ ರಿಷಿ-ವಸುಧರಾ ಮಧ್ಯೆ ಏನ್ ನಡೀತು ಎನ್ನುವುದೇ ಯೋಚನೆ
ಹೊಂಗನಸು ಸೀರಿಯಲ್
TV9 Web
| Updated By: ಮದನ್​ ಕುಮಾರ್​|

Updated on: Oct 13, 2022 | 9:45 AM

Share

ಲೈಬ್ರರಿಯೊಳಗೆ ರಿಷಿ ಮಾತ್ರ ಲಾಕ್ ಆಗಿದ್ದಾನೆ ಎಂದುಕೊಂಡಿದ್ದ ಗೌತಮ್‌ಗೆ ವಸೂಧರಾಳನ್ನು ನೋಡಿ ಶಾಕ್ ಆಯ್ತು. ನೀನೇನಿಲ್ಲಿ ಎಂದು ಪ್ರಶ್ನೆ ಮಾಡಿದ. ಗೌತಮ್ ಪ್ರಶ್ನೆಗೆ ಉತ್ತರಿಸಿದ ರಿಷಿ ‘ನಾವಿಬ್ಬರೂ ಲೈಬ್ರರಿಯಲ್ಲಿ ಲಾಕ್ ಆಗಿದ್ವಿ, ಲೈಬ್ರರಿಯನ್ ನೋಡದೆ ಲಾಕ್ ಮಾಡಿ ಹೋಗಿದ್ದಾನೆ’ ಎಂದು ವಿವರಣೆ ನೀಡಿದ. ವಸೂಧರಾಳಿಗೆ ಭಯ ಆಯಿತಾ ಎಂದು ಗೌತಮ್ ವಿಚಾರಿಸಿದ. ಆದರೆ ವಸು, ‘ರಿಷಿ ಸರ್ ಜೊತೆಯಲ್ಲೇ ಇರುವಾಗ ಭಯ ಯಾಕೆ’ ಎಂದು ಹೇಳಿ ಗೌತಮ್ ಬಾಯಿ ಮುಚ್ಚಿಸಿದಳು. ಈ ವಿಚಾರವನ್ನು ಇಲ್ಲಿಗೆ ಬಿಡಿ ಇದನ್ನು ದೊಡ್ಡದು ಮಾಡಬೇಡಿ ಎಂದು ಲೈಬ್ರರಿಯನ್ ಮತ್ತು ಗೌತಮ್ ಬಳಿ ರಿಷಿ ಕೇಳಿಕೊಂಡ. ಎಲ್ಲರೂ ಕಾಲೇಜಿನಿಂದ ಹೊರಟರು. ಆದರೆ ಗೌತಮ್‌ಗೆ ಇಬ್ಬರೂ ಲೈಬ್ರರಿಯಲ್ಲಿ ಏನು ಮಾಡುತ್ತಿದ್ರು, ಏನ್ ಮಾತನಾಡಿರಬಹುದು ಎನ್ನುವುದೇ ಚಿಂತೆ. ಇಂಥ ಗೋಲ್ಡನ್ ಅವಕಾಶ ನನಗೆ ಯಾಕೆ ಸಿಗ್ತಿಲ್ಲ ಎಂದು ನೊಂದುಕೊಳ್ಳುತ್ತಾ ರಿಷಿ ಬಳಿ ತನ್ನ ನೋವವನ್ನು ತೋಡಿಕೊಂಡ.

ರಿಷಿ ಇನ್ನೂ ಮನೆಗೆ ಬಂದಿಲ್ಲ ಎಂದು ದೇವಯಾನಿ ಮಹೇಂದ್ರ ಬಳಿ ವಿಚಾರಿಸಿದಿಯಾ ಅಂತ ಕೇಳಿದಳು. ಆದರೆ ಮಹೇಂದ್ರ ‘ಅವನಿನ್ನೂ ಚಿಕ್ಕವನಲ್ಲ, ಬರ್ತಾನೆ ಬಿಡಿ’ ಎಂದು ಅತ್ತಿಗೆಗೆ ಟಾಂಗ್ ಕೊಟ್ಟ. ಅಷ್ಟರಲ್ಲೇ ರಿಷಿ ಮತ್ತು ಗೌತಮ್ ಇಬ್ಬರೂ ಮನೆಗೆ ಎಂಟ್ರಿ ಕೊಟ್ಟರು. ಮಹೇಂದ್ರನ ಮುಂದೆ ದೇವಯಾನಿ ಬೇಕಂತಲೇ ರಿಷಿ ಮೇಲೆ ಅತಿಯಾದ ಪ್ರೀತಿ ತೋರಿಸುವ ನಾಟಕ ಆಡಿದಳು. ಇತ್ತ ಗೌತಮ್‌ಗೆ ಲೈಬ್ರರಿಯಲ್ಲಿ ಏನಾಯಿತು ಎಂದು ತಿಳಿದುಕೊಳ್ಳುವ ಕುತೂಹಲ ತಡೆಯಲಾಗದೆ ವಸೂಧರಾಗೆ ಫೋನ್ ಮಾಡಿದ. ಲೈಬ್ರರಿಯಲ್ಲಿ ಏನಾಯಿತು ಎಂದು ವಿಚಾರಿಸುತ್ತಿದ್ದ ಅಷ್ಟರಲ್ಲೇ ಜಗತಿ ವಸು ರೂಮಿಗೆ ಎಂಟ್ರಿ ಕೊಟ್ಟಳು. ಬಳಿಕ ಗೌತಮ್ ಲೈಬ್ರರಿ ವಿಷಯವನ್ನು ಜಗತಿಗೆ ತಿಳಿಸಿದ. ಈ ವಿಚಾರ ಯಾಕೆ ಹೇಳಿಲ್ಲ ಎಂದು ಜಗತಿ ವಸುನಾ ಕೇಳಿದಳು. ಬಳಿಕ ವಸು ಎಲ್ಲಾ ವಿಚಾರವನ್ನು ಜಗತಿ ಮೇಡಮ್ಗೆ ವಿವರಿಸಿದಳು. ವಸು ಹೇಳುತ್ತಿದ್ದಂತೆ ರಿಷಿಗೆ ಫೋನ್ ಮಾಡು ಎಂದು ಜಗತಿ ಹೇಳಿದಳು. ಯಾಕಿರಬಹುದೆಂದು ವಸುಧರಾ ಗಾಬರಿಯಲ್ಲೇ ಫೋನ್ ಮಾಡಿದಳು.

ರಿಷಿ ಫೋನ್ ರಿಸೀವ್ ಮಾಡುತ್ತಿದ್ದಂತೆ ಜಗತಿ ಧನ್ಯವಾದ ತಿಳಿಸಿದಳು. ಅಚ್ಚರಿಯಾದ ರಿಷಿ ಯಾಕೆಂದು ಕೇಳುವಷ್ಟರಲ್ಲಿ ಲೈಬ್ರರಿಯಲ್ಲಿ ವಸುಧರಾಳನ್ನು ಸೇವ್ ಮಾಡಿದ್ದಕ್ಕೆ ಧನ್ಯವಾದ ಎಂದು ಜಗತಿ ಹೇಳಿದಳು. ವಸುಧರಾ ಎಲ್ಲಾ ವಿಚಾರವನ್ನು ಜಗತಿಗೆ ಯಾಕೆ ಹೇಳಿದಳೆಂದು ರಿಷಿ ಕೋಪಿಸಿಕೊಂಡ. ವಸು ಮೇಲೆ ಕೂಗಾಡಿದ. ಈ ವಿಚಾರ ಹೇಳಿದ್ದು ನಾನಲ್ಲ ಎಂದು ವಸು ಹೇಳಿದರೂ ಸಹ ರಿಷಿ ಕೇಳಿಸಿಕೊಂಡಿಲ್ಲ. ಮಾತಿನ ಭರದಲ್ಲಿ ರಿಷಿ ಈ ಹಿಂದೆ ವಸುಧರಾಳನ್ನು ಹಾಸ್ಟೆಲ್‌ಗೆ ಸೇರಿಸುವಂತೆ ಹೇಳಿದ್ದ ವಿಚಾರವನ್ನು ಬಾಯ್ಬಿಟ್ಟ. ವಸುಧರಾ ಹಾಸ್ಟೆಲ್ ವಿಷಯ ಏನೆಂದು ಕೇಳುತ್ತಿದ್ದಂತೆ ರಿಷಿ ಫೋನ್ ಕಟ್ ಮಾಡಿದ.

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ಇತ್ತ ಗೌತಮ್‌ ಲೈಬ್ರರಿಯಲ್ಲಿ ಏನ್ ನಡೆಯಿತು ಎಂದು ಯೋಚಿಸುತ್ತಾ ಕುಳಿತಿದ್ದ. ಅಷ್ಟೊತ್ತಿಗೆ ರಿಷಿ ರೂಮಿಗೆ ಎಂಟ್ರಿ ಕೊಟ್ಟ. ಗೌತಮ್‌ನನ್ನು ಮಾತಾಡಿಸಬೇಕು ಎನ್ನುವಷ್ಟೊತ್ತಿಗೆ ವಸುಧರಾ ಪೇಂಟಿಂಗ್ ಮಾಯವಾಗಿದ್ದನ್ನು ಗಮನಿಸಿದ. ಎಲ್ಲಿ ಎಂದು ಗೌತಮ್‌ನ ಕೇಳಿದ, ಆದರೆ ಗೊತ್ತಿಲ್ಲ ಎಂದು ಹೇಳಿ ಗೌತಮ್ ಮಲಗಿದ. ಕಾಲೇಜಿನಲ್ಲಿ ಮಹೇಂದ್ರ ಎಲ್ಲಾ ಚಾಟ್ ಓಪನ್ ಮಾಡಿ ನೋಡುತ್ತಿದ್ದ. ಗೌತಮ್ ಮಿಸ್ ಆಗಿದ್ದ ಪೇಂಟಿಂಗ್ ಅನ್ನು ಹುಡುಕುತ್ತಾ ಮಹೇಂದ್ರ ಬಳಿ ಬಂದು ಕುಳಿತ. ಮಹೇಂದ್ರ ಬಳಿ ಇದ್ದ ಚಾಟ್‌ಗಳನ್ನು ನೋಡಿ ವಸುಧರಾ ಪೇಂಟಿಂಗ್ ತೆಗೆದುಕೊಂಡು ಹೊರಟ. ಗೌತಮ್ ನಡವಳಿಕೆ ಮಹೇಂದ್ರನಿಗೆ ಅನುಮಾನ ಮೂಡಿಸಿತು. ಗೌತಮ್ ಏನೋ ಕುಚೇಷ್ಟೆ ಮಾಡುತ್ತಿದ್ದಾನೆ. ಅದನ್ನು ಕಂಡು ಹಿಡಿಯಬೇಕೆಂದು ಯೋಚಿಸಿದ. ಗೌತಮ್ ಪ್ರೀತಿಯ ವಿಚಾರ ಮಹೇಂದ್ರನಿಗೆ ಗೊತ್ತಾಗುತ್ತಾ? ವಸುಧರಾಳಿಗೆ ಗೌತಮ್ ಪ್ರಪೋಸ್ ಮಾಡ್ತಾನಾ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ