AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu: ವಸುಗೆ ಬರೆದ ಲವ್ ಲೆಟರ್ ರಹಸ್ಯ ಬಯಲು; ಜಗತಿ ಕೈಗೆ ಸಿಕ್ಕಿಬಿದ್ದ ರಿಷಿ

Honganasu Serial Update: ರಿಷಿ ಮದುವೆ ವಿಚಾರವನ್ನು ಜಗತಿ ಮತ್ತು ಮಹೇಂದ್ರ ಬಳಿ ದೇವಯಾನಿ ಮಾತನಾಡಿದಳು. ‘ಆ ವಿಚಾರ ರಿಷಿಗೆ ಬಿಟ್ಟಿದ್ದು’ ಎಂದು ಜಗತಿ ತಿರುಗೇಟು ನೀಡಿದಳು.

Honganasu: ವಸುಗೆ ಬರೆದ ಲವ್ ಲೆಟರ್ ರಹಸ್ಯ ಬಯಲು; ಜಗತಿ ಕೈಗೆ ಸಿಕ್ಕಿಬಿದ್ದ ರಿಷಿ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 29, 2022 | 6:52 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಗೌತಮ್ ಲವ್ ಪ್ರಪೋಸಲ್‌ ರಿಜೆಕ್ಟ್ ಮಾಡಿದ ವಸುಧರಾ ನೋಡಿ ಪುಲ್ ಖುಷ್ ಆದ ರಿಷಿ. ವಸುಧರಾ ಮನಸ್ಸಲ್ಲಿ ಯಾರೋ ಇದ್ದಾರೆ. ಯಾರು ಅಂತ ಗೊತ್ತಾಗಿಲ್ಲ ಎಂದು ಗೌತಮ್ ರಿಷಿಗೆ ಹೇಳಿದ. ವಸು ಮನಸ್ಸಲ್ಲಿ ಯಾರಿದ್ದಾರೆ ಎಂದು ಮೊದಲು ತಿಳಿದುಕೊಳ್ಳಬೇಕೆಂದು ನಿರ್ಧರಿಸಿದ ರಿಷಿ. ಇತ್ತ ಗೌತಮ್ ನೀಡಿದ ಪೇಟಿಂಗ್ ಹಿಡಿದು ಇದನ್ನು ಯಾರು ಬಿಡಿಸಿದ್ದು ಅಂತ ಕಂಡುಹಿಡಿಯಲೇ ಬೇಕೆಂದು ಯೋಚಿಸುತ್ತಿದ್ದಾಳೆ ವಸು.

ವಸುಗೆ ಲವ್ ಲೆಟರ್ ಬರೆದಿದ್ದು ಯಾರು ಅಂತ ಜಗತಿಗೆ ಗೊತ್ತಾಗಿರಲಿಲ್ಲ. ಹರಿದು ಬಿಸಾಕಿದ್ದ ಲೆಟರ್ ಅನ್ನು ಮತ್ತೆ ಅಂಟಿಸಿ ಇಟ್ಟುಕೊಂಡಿದ್ದ ರಿಷಿ. ತಾನು ಮಲಗುವ ಬೆಡ್ ಮೇಲೆ ಲೆಟರ್ ಹಿಡಿದು ಕುಳಿತಿದ್ದ ರಿಷಿ ಫೋನ್ ಬಂತು ಎಂದು ಹಾಗೆ ರೂಮಿನಿಂದ ಹೊರಟ. ಅಷ್ಟೊತ್ತಿಗೆ ಜಗತಿ ಮತ್ತು ಮಹೇಂದ್ರ ರಿಷಿ ರೂಮಿಗೆ ಎಂಟ್ರಿ ಕೊಟ್ಟರು. ಬೆಡ್ ಮೇಲೆ ಲವ್ ಲೆಟರ್ ನೋಡಿ ಇಬ್ಬರೂ ಶಾಕ್ ಆದರು. ಅವತ್ತು ಕಾಲೇಜಿನಲ್ಲಿ ಸಿಕ್ಕ ಲೆಟರ್ ಇದೇ ಎಂದು ಜಗತಿಗೆ ಗೊತ್ತಾಯಿತು. ಅದನ್ನು ಬರೆದಿದ್ದು ರಿಷಿನಾ ಎಂದು ಮಹೇಂದ್ರ ಮತ್ತು ಜಗತಿಗೆ ಅಚ್ಚರಿ ಪಟ್ಟರು. ಲವ್ ಲೆಟರ್‌‌ನ ಫೋಟೋ ಕ್ಲಿಕ್ಕಿಸಿಕೊಂಡು ಇಬ್ಬರೂ ರೂಮಿನಿಂದ ಹೊರಟರು.

ತನ್ನ ಚೇಂಬರ್‌ಗೆ ಎಂಟ್ರಿ ಕೊಡುತ್ತಿದ್ದಂತೆ ವಸುನಾ ನೋಡಿ ಖುಷಿಯಾದ ರಿಷಿ. ವಸುಧರಾ ಆಗಲೇ ಕಾಲೇಜಿಗೆ ಬಂದು ಕೆಲಸ ಮಾಡುತ್ತಿದ್ದಳು. ವಸುಧರಾ ಜೊತೆಗಿದ್ದರೆ ರಿಷಿಗೆ ಏನೋ ಖುಷಿ. ಆದರೆ ಅದನ್ನು ಬಾಯ್ಬಿಟ್ಟು ಹೇಳಿಕೊಳ್ಳುತ್ತಿಲ್ಲ ರಿಷಿ. ಮನಸ್ಸಲ್ಲೇ ಖುಷಿ ಪಡುತ್ತಾ ವಸು ಜೊತೆ ಮಾತನಾಡಿದ. ಆದರೆ ಇಬ್ಬರ ರೊಮ್ಯಾಂಟಿಕ್ ಮಾತುಕತೆಯನ್ನು ಬ್ರೇಕ್ ಮಾಡಿದಳು ಸಾಕ್ಷಿ.  ವಸುಧರಾ ಮನಸ್ಸಲ್ಲಿ ಯಾರಿದ್ದಾರೆ ಎಂದು ನೇರವಾಗಿ ಕೇಳಬೇಕು ಅಂದುಕೊಳ್ಳುತ್ತಿದ್ದ ರಿಷಿ. ಆಗ ಸಾಕ್ಷಿ ಬರುತ್ತಿರುವುದನ್ನು ನೋಡಿದ. ಸಾಕ್ಷಿ ಬಂದಿದ್ದು ನೋಡಿ ವಸುಧರಾ ಕೈ ಹಿಡಿದು ಅಲ್ಲಿಂದ ಹೋಗೋಣ ಬಾ ಎಂದು ಎಳೆದುಕೊಂಡು ಹೊರಟ.

ರಿಷಿ ವರ್ತನೆ ನೋಡಿ ಗಾಬರಿಯಾದಳು ವಸು. ಎಲ್ಲಿಗೆ, ಏನಾಯಿತು ಅಂತ ವಸು ಕೇಳಿದರೂ ಹೇಳದೆ ಕೈ ಹಿಡಿದು ಹೊರಟ ರಿಷಿ. ತನ್ನ ಚೇಂಬರ್‌ಗೆ ಬೀಗ ಹಾಕಿ ಲಾಕ್ ಮಾಡುವಂತೆ ಕೆಲಸದವರಿಗೆ ಹೇಳಿ ಲೈಬ್ರರಿಗೆ ಹೋದ. ಸಾಕ್ಷಿ ಬಂದವಳೇ ರಿಷಿ ಎಲ್ಲಿ ಎಂದು ಕೆಲಸದವರ ಬಳಿ ಕೇಳಿದಳು. ರಿಷಿ ಸರ್ ಹೊರ ಹೋದರು ಎಂದು ಹೇಳಿದ. ಎಲ್ಲೋದ ಎಂದು ಯೋಚಿಸುತ್ತಾ ಮನೆ ಕಡೆ ಹೊರಟಳು ಸಾಕ್ಷಿ. ಬಳಿಕ ರಿಷಿ ವಸುಧರಾಳನ್ನು ಕರ್ಕೊಂಡು ಕಾರಿನಲ್ಲಿ ಹೊರಟ. ತನಗೆ ಸಹಾಯ ಮಾಡುವಂತೆ ವಸುನಾ ಕೇಳಿಕೊಂಡ. ವಿಷಯ ಹೇಳದೆ ವಸು ಬಳಿ ಸಹಾಯ ಮಾಡುವಂತೆ ಕೇಳಿಕೊಂಡ ರಿಷಿ. ವಸುಧರಾ ರಿಷಿಗೆ ಸಲಹೆ ನೀಡಿದಳು. ವಸು ಮಾತು ರಿಷಿಗೆ ಖುಷಿ ನೀಡಿತು.

ಇತ್ತ ಜಗತಿ ಮತ್ತು ಮಹೇಂದ್ರ ಇಬ್ಬರೂ ವಸುಧರಾ ಮನೆಗೆ ಎಂಟ್ರಿ ಕೊಟ್ಟಿದ್ದರು. ವಸುಧರಾಗೆ ಗೌತಮ್ ಕೊಟ್ಟಿದ್ದ ಪೇಂಟಿಂಗ್ ನೋಡಿ ಇಬ್ಬರೂ ಅಚ್ಚರಿ ಪಟ್ಟರು. ಅಷ್ಟೊತ್ತಿಗೆ ವಸು ಬಂದಳು. ಪೇಂಟಿಂಗ್ ಮಾಡಿದ್ದು ಯಾರು ಎಂದು ವಸುನಾ ಕೇಳಿದಳು ಜಗತಿ. ವಸು ಗೌತಮ್ ಪ್ರಪೋಸ್ ಮಾಡಿದ ವಿಚಾರವನ್ನು ಬಾಯ್ಬಿಟ್ಟಳು. ರಿಷಿ ಮತ್ತು ವಸು ನಡುವೆ ಪ್ರೀತಿ ಇದ್ದರೂ ಇಬ್ಬರೂ ಹೇಳಿಕೊಳ್ಳುತ್ತಿಲ್ಲ ಎಂದು ಜಗತಿ ಮತ್ತು ಮಹೇಂದ್ರ ಇಬ್ಬರೂ ಲವ್ ಲೆಟರ್ ಅನ್ನು ಸೆಂಡ್ ಮಾಡಿದರು. ಲವ್ ಲೆಟರ್ ಮತ್ತು ಪೇಂಟಿಂಗ್ ಎರಡನ್ನೂ ಹಿಡಿದು ಇದರ ಹಿಂದೆ ಇರೋರು ಒಬ್ರೇನಾ ಅಥವಾ ಬೇರೆ ಬೇರೆನಾ ಎಂದು ಯೋಚಿಸಿದಳು ವಸು. ಇದಲ್ಲಾ ರಿಷಿದೇ ಕೆಲಸ ಎಂದು ವಸುಗೆ ಗೊತ್ತಾಗುತ್ತಾ? ಗೌತಮ್ ಹಾಗೆ ರಿಷಿ ಕೂಡ ವಸುಗೆ ಲವ್ ಪ್ರಪೋಸ್ ಮಾಡ್ತಾನಾ? ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್
ಯಡಿಯೂರಪ್ಪ ಕುಟುಂಬ ವಿರುದ್ಧ ಮಾತಾಡಿದ್ದಕ್ಕೆ ಕ್ಷಮೆ ಕೇಳಲ್ಲ: ಯತ್ಮಾಳ್
ಉಗ್ರರ ದಾಳಿ ಬಳಿಕ ಪಹಲ್ಗಾಮ್​ನ ಬೇತಾಬ್ ಕಣಿವೆ ಪ್ರವಾಸಿಗರಿಗೆ ಓಪನ್
ಉಗ್ರರ ದಾಳಿ ಬಳಿಕ ಪಹಲ್ಗಾಮ್​ನ ಬೇತಾಬ್ ಕಣಿವೆ ಪ್ರವಾಸಿಗರಿಗೆ ಓಪನ್