AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu Serial: ರಿಷಿಗೆ ಸಹಾಯ ಮಾಡ್ತಾಳಾ ವಸು? ಕುತೂಹಲ ಮೂಡಿಸಿದ ಮಹೇಂದ್ರನ ಮುಂದಿನ ನಡೆ

Honganasu Serial Update: ಅಪ್ಪನನ್ನು ವಾಪಸ್ ಮನೆಗೆ ಕರೆದುಕೊಂಡು ಬರಲು ರಿಷಿ ಹರಸಾಹಸ ಮಾಡುತ್ತಿದ್ದಾನೆ. ತಂದೆಯ ನಿರ್ಧಾರದಿಂದ ತಲೆ ಕೆಡಿಸಿಕೊಂಡಿರುವ ಆತ ಸಹಾಯಕ್ಕಾಗಿ ವಸು ಬಳಿ ಬಂದಿದ್ದಾನೆ.

Honganasu Serial: ರಿಷಿಗೆ ಸಹಾಯ ಮಾಡ್ತಾಳಾ ವಸು? ಕುತೂಹಲ ಮೂಡಿಸಿದ ಮಹೇಂದ್ರನ ಮುಂದಿನ ನಡೆ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 04, 2022 | 8:40 AM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್​ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ರಿಷಿಯ ನಿರ್ಧಾರದಿಂದ ಕೋಪಕೊಂಡಿರುವ ಮಹೇಂದ್ರ ಮನೆ ಬಿಟ್ಟು ಹೊರಟಿದ್ದಾನೆ. ಅಪ್ಪ ಮನೆಯಲ್ಲಿ ಇಲ್ಲ ಎನ್ನುವ ವಿಚಾರ ಗೊತ್ತಾಗಿ ರಿಷಿ ಕುಸಿದು ಹೋಗಿದ್ದಾನೆ. ತಂದೆಯನ್ನು ಮನೆಗೆ ವಾಪಸ್ ಕರೆದುಕೊಂಡು ಬರುವುದು ಹೇಗೆಂದು ರಿಷಿ ಯೋಚಿಸುತ್ತಿದ್ದಾನೆ. ತಂದೆಯ ಕೋಪ ಕಮ್ಮಿ ಮಾಡಲು ರಿಷಿ ವಸುಧರಳಾ ಸಹಾಯ ಕೇಳಲು ಬಂದಿದ್ದಾನೆ.

ಅಪ್ಪನನ್ನು ವಾಪಸ್ ಮನೆಗೆ ಕರೆದುಕೊಂಡು ಬರಲು ರಿಷಿ ಹರಸಾಹಸ ಮಾಡುತ್ತಿದ್ದಾನೆ. ತಂದೆಯ ನಿರ್ಧಾರದಿಂದ ತಲೆ ಕೆಡಿಸಿಕೊಂಡಿರುವ ರಿಷಿ ಸಹಾಯಕ್ಕಾಗಿ ವಸು ಬಳಿ ಬಂದಿದ್ದಾನೆ. ವಸುಧರಾ ಕೆಲಸ ಮಾಡುತ್ತಿದ್ದ ರೆಸ್ಟೊರೆಂಟ್‌ಗೆ ಬಂದು ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದಾನೆ. ಮಧ್ಯದಾರಿಯಲ್ಲೇ ಕಾರು ನಿಲ್ಲಿಸಿ ಮೌನವಾಗಿದ್ದ ವಸುಧರಾಗೆ ‘ಯಾಕೆ ಏನು ಮಾತನಾಡುತ್ತಿಲ್ಲ’ ಎಂದು ರಿಷಿ ಕೇಳಿದ. ತಂದೆಯ ನಿರ್ಧಾರ ಸರಿನಾ ತಪ್ಪಾ ಎಂದು ವಸು ಬಳಿ ಕೇಳುತ್ತಿದ್ದಾನೆ ರಿಷಿ. ‘ವಿದ್ಯಾರ್ಥಿಯಾಗಿ ಅಲ್ಲ ಸ್ನೇಹಿತೆಯಾಗಿ ನಿನ್ನ ಸಲಹೆ ಬೇಕು’ ಎಂದು ವಸುಧರಾ ಬಳಿ ರಿಷಿ ಕೇಳಿಕೊಂಡ. ಆದರೆ ಆ ವಿಚಾರದಲ್ಲಿ ತಾನೇನೂ ಮಾತಾಡಲ್ಲ ಎಂದು ವಸು ಹೇಳಿದಳು. ತಪ್ಪು ಯಾರದ್ದೆಂದು ರಿಷಿ ಎಷ್ಟೇ ಕೇಳಿದರೂ ವಸು ಯಾರ ಪರನೂ ಮಾತನಾಡಲಾಗದೇ ಸಂಕಷ್ಟಕ್ಕೆ ಸಿಲುಕ್ಕಿದ್ದಳು.

ಇತ್ತ ಮನೆ ಬಿಟ್ಟು ಬಂದಿರುವ ಮಹೇಂದ್ರನಿಗೆ ಮಗ ರಿಷಿದೇ ನೆನಪು. ನಾನು ಊಟ ಮಾಡದೇ ರಿಷಿ ಊಟನೇ ಮಾಡುತ್ತಿರಲಿಲ್ಲ ಎಂದು ಜಗತಿಗೆ ಹೇಳಿ ಭಾವುಕನಾಗಿದ್ದಾನೆ ಮಹೇಂದ್ರ. ಅಷ್ಟೊತ್ತಿಗೆ ಜಗತಿ ಮನೆ ಮುಂದೆ ಬಂದು ನಿಂತ ರಿಷಿ. ಮಗನ ಕಾರಿನ ಸೌಂಡ್ ಕೇಳುತ್ತಿದ್ದಂತೆ ರಿಷಿ ಎಂದು ಮಹೇಂದ್ರ ಓಡಿ ಹೋದ. ಆದರೆ ಅಷ್ಟರಲ್ಲೇ ರಿಷಿ ವಸುಧರಾಳನ್ನು ಡ್ರಾಪ್ ಮಾಡಿ ಹೊರಟು ಹೋದ. ಸ್ವಲ್ಪ ಮುಂದೆ ಹೋಗಿದ್ದ ರಿಷಿ ಮತ್ತೆ ತಂದೆಯನ್ನು ನೋಡಲು ವಾಪಸ್ ಬಂದ. ಕಾರಿನಿಂದ ಇಳಿದು ಬಂದ ರಿಷಿ ಮಾತ್ರೆಗಳನ್ನು ವಸು ಕೈಗೆ ಕೊಟ್ಟು ಮಾತ್ರೆಗಳ ಮೇಲೆ ಕೋಪ ತೋರಿಸಬಾರದೆಂದು ಹೇಳಿ ಹೊರಟ.

ರಿಷಿ ಮನೆಗೆ ಬರುತ್ತಿದ್ದಂತೆಯೇ ಉರಿಯುತ್ತಿದ್ದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದಳು ದೇವಯಾನಿ. ಊಟ ಬೇಡ ಎಂದ ರಿಷಿ ಮುಂದೆ ದೇವಯಾನಿ ತನ್ನ ನಾಟಕ ಮುಂದುವರೆಸಿದ್ದಳು. ದೊಡ್ಡಮ್ಮನನ್ನು ಸಮಾಧಾನ ಮಾಡಿ ರಿಷಿ ತನ್ನ ರೂಮಿಗೆ ಹೋದ. ತಂದೆಯ ನೆನಪಲ್ಲೇ ಕೊರಗುತ್ತಿದ್ದ ರಿಷಿ, ವಸುಗೆ ಫೋನ್ ಮಾಡಿ ವಿಚಾರಿಸಿದ. ಆದರೆ ವಸು ಪಕ್ಕದಲ್ಲೇ ಇದ್ದ ಮಹೇಂದ್ರಗೆ ಫೋನ್ ಕೊಟ್ಟಳು. ಮಗನ ಜೊತೆ ಮಾತನಾಡಲು ಆಗದೆ ಮಹೇಂದ್ರ ಅಳುತ್ತಾ ಫೋನ್ ಕಟ್ ಮಾಡಿದ.

ಬೆಳಗ್ಗೆ ಕಾಲೇಜಿಗೆ ಬಂದ ರಿಷಿ, ವಸುಧರಾ ಇನ್ನೂ ಬಂದಿಲ್ಲ ಎಂದು ಹುಡುಕುತ್ತಿದ್ದ. ಅಷ್ಟರಲ್ಲೇ ಗೌತಮ್ ಜೊತೆ ವಸು ಎಂಟ್ರಿ ಕೊಟ್ಟಳು. ಇಬ್ಬರೂ ಒಟ್ಟಿಗೆ ಕಾರಿನಲ್ಲಿ ಎಂಟ್ರಿ ಕೊಟ್ಟಿದ್ದು ನೋಡಿ ರಿಷಿ ಶಾಕ್ ಆದ. ಕಾರು ಬರುತ್ತಿದ್ದಂತೆ ತಂದೆಯೇ ಬಂದರು ಎನ್ನುವ ಖುಷಿಯಲ್ಲಿ ನೋಡಿದ ರಿಷಿ. ಆದರೆ ಕಾರಿನಿಂದ ಇಳಿದ ಗೌತಮ್ ಮತ್ತು ವಸು ನೋಡಿ ರಿಷಿಗೆ ಅಚ್ಚರಿಯಾಯಿತು. ಮೊದಲೇ ಕೋಪದಲ್ಲಿದ್ದ ರಿಷಿಗೆ ಇಬ್ಬರನ್ನು ಒಟ್ಟಿಗೆ ನೋಡಿ ಕೋಪ ನೆತ್ತಿಗೇರಿತು.

ಊಟ ಮಾಡುತ್ತ ತನ್ನ ತಂದೆಯ ಬಗ್ಗೆ ವಸು ಬಳಿ ವಿಚಾರಿಸಿದ ರಿಷಿ. ‘ಮಹೇಂದ್ರ ಸರ್‌ ಕಾಲೇಜನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದಳು. ತಂದೆಯ ಬಗ್ಗೆ ಕೇಳಿ ರಿಷಿ ಭಾವುಕನಾದ. ಬಳಿಕ ವಸುಧರಾ ಬಳಿ ನಿನ್ನ ಸಲಹೆ ಬೇಕೆಂದು ಕೇಳಿದ. ಆದರೆ ವಸು ಸರಿಯಾಗೇ ಟಾಂಗ್ ಕೊಟ್ಟು ಮಾತನಾಡಿದಳು. ವಸು ಮಾತನಿಂದ ರಿಷಿ ಸೈಲೆಂಟ್ ಆದ. ಕಾಲೇಜಿನಲ್ಲಿ ಕುಳಿತರೂ ರಿಷಿಗೆ ತಂದೆಯ ಬಗ್ಗೆಯೇ ಯೋಚನೆ. ಅಪ್ಪ ಊಟ ಮಾಡಿದ್ರಾ, ಮಾತ್ರೆ ತೆಗೆದುಕೊಂಡ್ರಾ ಎನ್ನುವ ಚಿಂತೆಯಲ್ಲೇ ಇದ್ದಾನೆ ರಿಷಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.