AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಂಜುನ ಮುಗಿಸಬೇಕು, ಇಲ್ಲದಿದ್ದರೆ ಉಳಿಗಾಲ ಇಲ್ಲ; ಝೇಂಡೆಗೆ ಶುರುವಾಯ್ತು ಟೆನ್ಷನ್

ವರ್ಧನ್ ಕಂಪೆನಿಯಲ್ಲಿ ಝೇಂಡೆ ಸಾಕಷ್ಟು ಅಕ್ರಮ ಮಾಡಿದ್ದ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ಕಂಪೆನಿಯ ದುಡ್ಡನ್ನು ಬೇರೆಡೆ ಕಳಿಸುವ ಕೆಲಸ ಆಗುತ್ತಿತ್ತು. ಈ ವಿಚಾರವನ್ನು ಸಂಜು ಹೊರಗೆ ತೆಗೆದಿದ್ದ. ಕಂಪನಿಗೆ ಬಂದ ಮೊದಲ ದಿನವೇ ಆತ ಈ ಕೆಲಸ ಮಾಡಿದ್ದ. ಈ ವಿಚಾರ ಈಗ ಝೇಂಡೆಗೆ ಗೊತ್ತಾಗಿದೆ.

‘ಸಂಜುನ ಮುಗಿಸಬೇಕು, ಇಲ್ಲದಿದ್ದರೆ ಉಳಿಗಾಲ ಇಲ್ಲ; ಝೇಂಡೆಗೆ ಶುರುವಾಯ್ತು ಟೆನ್ಷನ್
‘ಜೊತೆ ಜೊತೆಯಲಿ’ ಧಾರಾವಾಹಿ
TV9 Web
| Edited By: |

Updated on: Nov 10, 2022 | 9:55 AM

Share

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಅನು ಜತೆ ಕ್ಲೋಸ್ ಆಗಬೇಕು ಎಂದು ಸಂಜು ಯೋಚಿಸುತ್ತಿದ್ದ. ಆದರೆ, ಅಲ್ಲಿ ಆಗಿದ್ದೇ ಬೇರೆ. ಸಂಜು ಹಾಗೂ ಆತನ ಪತ್ನಿ ಆರಾಧನಾಳನ್ನು ಒಂದು ಮಾಡಲು ಅನು ಪ್ಲ್ಯಾನ್ ರೂಪಿಸಿದ್ದಳು. ಆರಾಧನಾಳನ್ನು ಮನೆಗೆ ಕರೆದುಕೊಂಡು ಬಂದಿದ್ದಳು. ಇದರಿಂದ ಸಂಜು ಸಿಕ್ಕಾಪಟ್ಟೆ ಟೆನ್ಷನ್​​ಗೆ ಒಳಗಾಗಿದ್ದಾನೆ. ಆತನಿಗೆ ಏನು ಹೇಳಬೇಕು ಎಂಬುದೇ ತೋಚುತ್ತಿಲ್ಲ.

ಝೇಂಡೆಗೆ ಟೆನ್ಷನ್

ವರ್ಧನ್ ಕಂಪೆನಿಯಲ್ಲಿ ಝೇಂಡೆ ಸಾಕಷ್ಟು ಅಕ್ರಮ ಮಾಡಿದ್ದ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ಕಂಪೆನಿಯ ದುಡ್ಡನ್ನು ಬೇರೆಡೆ ಕಳಿಸುವ ಕೆಲಸ ಆಗುತ್ತಿತ್ತು. ಈ ವಿಚಾರವನ್ನು ಸಂಜು ಹೊರಗೆ ತೆಗೆದಿದ್ದ. ಕಂಪನಿಗೆ ಬಂದ ಮೊದಲ ದಿನವೇ ಆತ ಈ ಕೆಲಸ ಮಾಡಿದ್ದ. ಈ ವಿಚಾರ ಈಗ ಝೇಂಡೆಗೆ ಗೊತ್ತಾಗಿದೆ. ತಡವಾಗಿ ಈ ವಿಚಾರ ಆತನಿಗೆ ಗೊತ್ತಾದರೂ ಈ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎನ್ನುವ ನಿರ್ಧಾರಕ್ಕೆ ಝೇಂಡೆ ಬಂದಿದ್ದಾನೆ.

ಮೀರಾಳನ್ನು ಭೇಟಿ ಮಾಡಲು ಝೇಂಡೆ ತೆರಳಿದ್ದ. ‘ಸಂಜು ಎಂದು ಹೇಳಿಕೊಂಡು ಬಂದ ವ್ಯಕ್ತಿ ಈಗಾಗಲೇ ಸತ್ತು ಹೋಗಿದ್ದಾನೆ. ಆತನ ಹೆಸರಲ್ಲಿ ಬೇರೆ ಯಾರೋ ಬಂದಿದ್ದಾರೆ. ಅದು ಯಾರು ಎಂದು ನಾವು ಪತ್ತೆಹಚ್ಚಬೇಕು’ ಎಂದು ಮೀರಾ ಬಳಿ ಹೇಳಿದ್ದಾನೆ ಝೇಂಡೆ. ಇದನ್ನು ಕೇಳಿ ಮೀರಾಗೆ ಶಾಕ್ ಆಗಿದೆ. ಇದೇವೇಳೆ ಮೀರಾಳಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಝೇಂಡೆ ಮಾಡಿದ್ದಾನೆ.

‘ಆರ್ಯವರ್ಧನ್​ನ ಬಿಟ್ಟರೆ ಆ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿ ಎಂದರೆ ಅದು ನೀನು ಮಾತ್ರ. ಆ ಸ್ಥಾನವನ್ನು ಬೇರೆ ಯಾರಿಗೋ ನೀಡಿದರೆ ಸರಿ ಆಗುವುದಿಲ್ಲ. ಆರ್ಯವರ್ಧನ್​ನ ಹೆಂಡತಿ ಎಂದ ಮಾತ್ರಕ್ಕೆ ಎಲ್ಲವನ್ನೂ ಅನು ವಹಿಸಿಕೊಳ್ಳೋಕೆ ಆಗುತ್ತಾ?’ ಎಂದು ಝೇಂಡೆ ಪ್ರಶ್ನೆ ಮಾಡಿದ್ದಾನೆ. ಇದು ಮೀರಾಗೂ ಸರಿ ಎನಿಸಿದೆ.

ಈ ಸಂದರ್ಭದಲ್ಲಿ ಕಂಪನಿಯಲ್ಲಿ ನಡೆದ ಅಕ್ರಮದ ಬಗ್ಗೆ ಮೀರಾ ಮಾತನಾಡಿದ್ದಾಳೆ. ‘ಸಂಜು ಸಾಮಾನ್ಯದವನಲ್ಲ. ನೀವು ಮಾಡಿದ ಅಕ್ರಮವನ್ನು ಸಂಜು ಕೇವಲ ಒಂದೇ ಒಂದು ದಿನದಲ್ಲಿ ಪತ್ತೆ ಹಚ್ಚಿದ್ದಾನೆ’ ಎಂದು ಮೀರಾ ಹೇಳಿದ್ದಾಳೆ. ಇದನ್ನು ಕೇಳಿ ಝೇಂಡೆಗೆ ನಡುಕ ಶುರುವಾಗಿದೆ.

‘ನಾನು ಮಾಡಿದ ಅಕ್ರಮಗಳು ನನ್ನ ಜತೆ ಸೇರಿ ಮಾಡಿದವರಿಗೆ ಮಾತ್ರ ಗೊತ್ತಿತ್ತು. ಆದರೆ, ಇದನ್ನು ಸಂಜು ಕಂಡು ಹಿಡಿದಿದ್ದಾನೆ ಎಂದರೆ ಏನು ಅರ್ಥ? ಅದೂ ಒಂದೇ ದಿನದಲ್ಲಿ. ಈ ಸಂಜು ಸಾಮಾನ್ಯದವನಲ್ಲ. ಆತ ಬಂದಿರುವುದರ ಹಿಂದೆ ಏನೋ ಮಾಸ್ಟರ್ ಪ್ಲ್ಯಾನ್ ಇದೆ. ಆತನನ್ನು ಮುಗಿಸಬೇಕು. ಇಲ್ಲದಿದ್ದರೆ ಉಳಿಗಾಲ ಇಲ್ಲ’ ಎಂದು ಝೇಂಡೆ ತನಗೆ ತಾನೇ ಹೇಳಿಕೊಂಡಿದ್ದಾನೆ.

ಸಂಜುಗೆ ಬಂತು ಸಿಟ್ಟು

ಆರಾಧನಾಳನ್ನು ರಾಜ ನಂದಿನಿ ವಿಲಾಸಕ್ಕೆ ಕರೆದುಕೊಂಡು ಬಂದ ವಿಚಾರದಲ್ಲಿ ಸಂಜುಗೆ ಸಿಟ್ಟಿದೆ. ಅನು ಜತೆ ಸಂಜು ಕ್ಲೋಸ್ ಆಗಬೇಕು ಎಂದು ಬಯಸುತ್ತಿದ್ದಾನೆ. ಆದರೆ, ಇದಕ್ಕೆ ಅನು ಟ್ವಿಸ್ಟ್​ ನೀಡಿದ್ದಾಳೆ. ಸಂಜುನ ಹೆಂಡತಿ ಆಗಿದ್ದ ಆರಾಧನಾಳನ್ನು ಕರೆದುತಂದಿದ್ದಾಳೆ. ಇದರಿಂದ ಆತನಿಗೆ ಸಿಟ್ಟು ನೆತ್ತಿಗೇರಿದೆ. ಈ ವಿಚಾರವನ್ನು ಅನು ಎದುರು ಪ್ರಸ್ತಾಪಿಸಲು ಬಂದಿದ್ದಾನೆ. ಆ ಸಮಯಕ್ಕೆ ಸರಿಯಾಗಿ ಆರಾಧನಾ ಬಂದಿದ್ದಾಳೆ. ಹೀಗಾಗಿ ಈ ವಿಚಾರವನ್ನು ಮಾತನಾಡಲು ಸಾಧ್ಯವಾಗೇ ಇಲ್ಲ. ಅನು ಮಾಡಿದ ಕೆಲಸಕ್ಕೆ ಆತ ಕೋಪ ಮಾಡಿಕೊಂಡಿದ್ದಾನೆ. ಅನು ಈ ರೀತಿ ಮಾಡಬಾರದಿತ್ತು ಎಂದು ಆತನಿಗೆ ಅನಿಸಿದೆ. ಅಷ್ಟೇ ಅಲ್ಲ, ತನ್ನಿಂದ ದೂರ ಆಗಲು ಅನು ಈ ರೀತಿ ಮಾಡುತ್ತಿದ್ದಾಳೆ ಎಂಬುದು ಆತನ ಊಹೆ.

ಶ್ರೀಲಕ್ಷ್ಮಿ ಎಚ್.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್