AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಳ ತಲೆಗೂದಲನ್ನು ಕತ್ತರಿಸಿ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡ ಅನುಪಮಾ ಗೌಡ; ಇದಕ್ಕಿದೆ ಮಹತ್ತರ ಕಾರಣ

Anupama Gowda donates hair: ನಟಿ, ನಿರೂಪಕಿ ಅನುಪಮಾ ಗೌಡ ಇದೀಗ ತಮ್ಮ ಗೆಟಪ್ ಬದಲಾಯಿಸಿದ್ದಾರೆ. ಉದ್ದ ಕೂದಲಿನ ಮೂಲಕ ಗುರುತಿಸಿಕೊಂಡಿದ್ದ ನಟಿ ಈಗ ಕೂದಲನ್ನು ಕತ್ತರಿಸಿದ್ದಾರೆ. ಅನುಪಮಾ‌ ಅವರ ಈ ನಿರ್ಧಾರಕ್ಕೊಂದು ಮಹತ್ತರ ಉದ್ದೇಶವಿದೆ.

ನೀಳ ತಲೆಗೂದಲನ್ನು ಕತ್ತರಿಸಿ ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡ ಅನುಪಮಾ ಗೌಡ; ಇದಕ್ಕಿದೆ ಮಹತ್ತರ ಕಾರಣ
ಹೊಸ ಗೆಟಪ್​ನಲ್ಲಿ ಅನುಪಮಾ ಗೌಡ
Follow us
TV9 Web
| Updated By: shivaprasad.hs

Updated on:Apr 12, 2022 | 9:15 AM

ಕನ್ನಡ ಕಿರುತೆರೆಯಲ್ಲಿ ಅನುಪಮಾ ಗೌಡ (Anupama Gowda) ದೊಡ್ಡ ಹೆಸರು. ಚಿತ್ರರಂಗದಲ್ಲೂ ಅವರು ಸಕ್ರಿಯರಾಗಿದ್ದಾರೆ. ಸದ್ಯ ನಿರೂಪಕಿಯಾಗಿ ಜನಮನ ಗೆದ್ದಿರುವ ಅನುಪಮಾ, ಇದೀಗ ಹೊಸ ಕಾರ್ಯದ ಮೂಲಕ ಸುದ್ದಿಯಾಗಿದ್ದಾರೆ. ಬಿಗ್ ಬಾಸ್ 5ರಲ್ಲಿ ತಾರಾ ಸ್ಪರ್ಧಿಯೂ ಆಗಿದ್ದ ಅನುಪಮಾ ಗೌಡ, ಇದೀಗ ತಮ್ಮ ಗೆಟಪ್ ಬದಲಾಯಿಸಿದ್ದಾರೆ. ಉದ್ದ ಕೂದಲಿನ ಮೂಲಕ ಗುರುತಿಸಿಕೊಂಡಿದ್ದ ನಟಿ ಈಗ ಕೂದಲನ್ನು ಕತ್ತರಿಸಿದ್ದಾರೆ. ಅನುಪಮಾ‌ ಅವರ ಈ ನಿರ್ಧಾರಕ್ಕೊಂದು ಮಹತ್ತರ ಉದ್ದೇಶವಿದೆ. ಕ್ಯಾನ್ಸರ್ ನಿಂದ ಕೂದಲು ಕಳೆದುಕೊಂಡಿರುವವರಿಗಾಗಿ ಕೂದಲು ದಾನ ಮಾಡುವುದಕ್ಕಾಗಿ ತಮ್ಮ ನೀಳ ತಲೆಗೂದಲನ್ನು ಕತ್ತರಿಸಿದ್ದಾರೆ ನಟಿ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅನುಪಮಾ, ಹೊಸ ಲುಕ್​ನೊಂದಿಗೆ ಕೂದಲು ದಾನದ ಹಿಂದಿನ ಉದ್ದೇಶವನ್ನು ತೆರೆದಿಟ್ಟಿದ್ದಾರೆ.

‘‘ನನ್ನ ನೀಳ ತಲೆಗೂದಲು ಇದುವರೆಗಿನ ಪಯಣದಲ್ಲಿ ಜತೆಯಿದ್ದು ದೊಡ್ಡ ಮಟ್ಟದಲ್ಲಿ ಆತ್ಮವಿಶ್ವಾಸ ತುಂಬಿತ್ತು’’ ಎಂದು ಬರಹ ಆರಂಭಿಸಿದ್ದಾರೆ ಅನುಪಮಾ ಗೌಡ. ‘‘ಈಗ ಈ ತಲೆಗೂದಲು ಆತ್ಮವಿಶ್ವಾಸದ ಅಗತ್ಯವಿರುವವರಿಗೆ ನೆರವಾಗಲಿದೆ ಎನ್ನುವುದುನ್ನು ಹೇಳಲು ಖುಷಿಯಾಗುತ್ತಿದೆ. ಬಹಳ ಕಾಲದಿಂದ ಕೂದಲು ಕತ್ತರಿಸುವುದನ್ನು ತಡೆದಿದ್ದೆ. ಈಗ ಅಗತ್ಯವಿರುವ ಕ್ಯಾನ್ಸರ್ ಪೀಡಿತ ಹೋರಾಟಗಾರರಿಗೆ ನನ್ನ ಕಡೆಯ ಸಣ್ಣ ಬೆಂಬಲ ನೀಡಲು ಸಮಯ ಬಂದಿದೆ’’

‘‘ಎಲ್ಲಾ ಮನುಷ್ಯರೂ ಕೂದಲಿದ್ದರೂ- ಇಲ್ಲದಿದ್ದರೂ ಅವರವರ ರೀತಿಯಲ್ಲಿ ಸುಂದರವಾಗಿಯೇ ಇರುತ್ತಾರೆ ಎಂಬುದಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಅವರೂ ಕೂಡ ನಗುತ್ತಿರಬೇಕು, ಅವರೂ ಕೂಡ ಉತ್ತಮ ಕೂದಲನ್ನು ಹೊಂದಲು ಅರ್ಹರು’’ ಎಂದು ಬರೆದಿದ್ದಾರೆ ಅನುಪಮಾ ಗೌಡ.

ತಮ್ಮ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ವಿಗ್ ತಯಾರಿಸುವ ಸಂಸ್ಥೆಗೆ ದಾನ ಮಾಡಿರುವದಾಗಿ ಅನುಪಮಾ ತಿಳಿಸಿದ್ದಾರೆ. ‘‘ಜನರಿಗೆ ಈ ಬಗ್ಗೆ ಅರಿವು ಮೂಡಿಸಲು ಹಾಗೂ ಜನರು ಇದರಿಂದ ಪ್ರೇರಣೆಗೊಂಡು ಮುಂದೆ ಬಂದು ಕೂದಲು ದಾನ ಮಾಡಲು ಪೋಸ್ಟ್ ಹಂಚಿಕೊಂಡಿದ್ದೇನೆ’’ ಎಂದು ಬರಹ ಮುಕ್ತಾಯ ಮಾಡಿದ್ದಾರೆ ಅನುಪಮಾ.

ನೆಚ್ಚಿನ ನಟಿಯ ಹೊಸ ಗೆಟಪ್​ಅನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಅದಕ್ಕೂ ಮೇಲಾಗಿ ಅದರ ಹಿಂದಿರುವ ಮಹತ್ತರ ಕಾರಣವನ್ನು ತಿಳಿದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾಮೆಂಟ್​ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಅನುಪಮಾ ಗೌಡ ಹಂಚಿಕೊಂಡಿರುವ ಪೋಸ್ಟ್:

ಹೊಸ ಲುಕ್​ನಲ್ಲಿ ಅನುಪಮಾ ಗೌಡ:

ಅನುಪಮಾ ಗೌಡ ಇತ್ತೀಚೆಗೆ ಮುಕ್ತಾಯವಾಗ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದ ನಿರೂಪಕಿಯಾಗಿದ್ದರು.

ಇದನ್ನೂ ಓದಿ: Anupama Parameswaran: ಸಾಂಪ್ರದಾಯಿಕ ಗೆಟಪ್​ನಲ್ಲಿ ಮಿಂಚಿದ ‘ನಟಸಾರ್ವಭೌಮ’ ಬೆಡಗಿ; ಅನುಪಮಾ ಪರಮೇಶ್ವರನ್ ಕ್ಯೂಟ್ ಫೋಟೋ ಗ್ಯಾಲರಿ

Dr Rajkumar Death Anniversary: ಡಾ. ರಾಜ್ ಪುಣ್ಯಸ್ಮರಣೆ; ಸಹನಟರು, ಕುಟುಂಬದೊಂದಿಗೆ ಅಣ್ಣಾವ್ರು- ಅಪರೂಪದ ಫೋಟೋಗಳು ಇಲ್ಲಿವೆ

Published On - 9:15 am, Tue, 12 April 22

ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ