Seetha Raama: ಮದುವೆ ಸಂಬಂಧ ಮುರಿದುಕೊಳ್ಳುವಲ್ಲಿ ಯಶಸ್ವಿಯಾದ ರಾಮ; ಮುಂದಿನ ನಡೆಯೇನು?

ಮದುವೆ ಆಗಲ್ಲ ಎಂದು ಹೇಳುತ್ತಿದ್ದ ರಾಮ ತನಗೆ ಬಂದ ಸಂಬಂಧವನ್ನು ಉಪಾಯದಿಂದ ಮುರಿದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಸಿಹಿ, ರಾಮನ ಸ್ನೇಹಕ್ಕೆ ಮುನ್ನುಡಿ ಎಂಬಂತೆ ನಂಬರ್ ಬದಲಾವಣೆಯೂ ಆಗಿದೆ.

Seetha Raama: ಮದುವೆ ಸಂಬಂಧ ಮುರಿದುಕೊಳ್ಳುವಲ್ಲಿ ಯಶಸ್ವಿಯಾದ ರಾಮ; ಮುಂದಿನ ನಡೆಯೇನು?
ಸೀತಾ ರಾಮ ಧಾರಾವಾಹಿ
Follow us
| Updated By: ರಾಜೇಶ್ ದುಗ್ಗುಮನೆ

Updated on:Jul 25, 2023 | 10:11 AM

ಜೀ ಕನ್ನಡ ವಾಹಿನಿಯಲ್ಲಿ ವಾರದ ಹಿಂದೆ ಶುರುವಾಗಿರುವ ಧಾರವಾಹಿ ‘ಸೀತಾ ರಾಮ’ (Seetha Raama Serial) ಈಗ ಎಲ್ಲರ ಮನ ಗೆದ್ದಿದೆ. ‘ಇದರ ಹಿಂದೆ ಹಲವಾರು ಧಾರವಾಹಿ ಆರಂಭವಾಗಿದ್ದರೂ ಅವರಿಗಿಂತ ತಾವೇನು ಕಮ್ಮಿ ಇಲ್ಲ ಎಂಬಂತೆ ಈ ತಂಡ ತಯಾರಿ ನಡೆಸಿದೆ. ಇನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ಸಿರಿಯಲ್ ಟ್ರ್ಯಾಕ್, ಪ್ರೋಮೋ ದಿಂದಲೇ ಜನ ಧಾರಾವಾಹಿಯ ಆರಂಭಕ್ಕೆ ಕಾದಿದ್ದು, ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿತ್ತು ಅದಕ್ಕೆ ನಿರಾಶೆ ಮಾಡದ ಸೀತಾ ರಾಮ ತಂಡ, ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ನವಿರಾದ ಪ್ರೇಮಕಥೆ ಹೇಳಲು ಸಜ್ಜಾಗಿದ್ದ ಮೊದಲ ದಿನವೇ ಭರ್ಜರಿ ಆರಂಭ ಕೊಟ್ಟಿದ್ದ ಈ ಧಾರವಾಹಿ ತನ್ನೆಲ್ಲಾ ಎಪಿಸೋಡ್ ಗಳಲ್ಲಿ ವಿಭಿನ್ನತೆ ಕಾಯ್ದು ಕೊಂಡಿತ್ತು. ಪ್ರೇಕ್ಷಕರು ಸಿಹಿ (ರಿತು) ಪಾತ್ರವನ್ನು ನೋಡಿ ಫುಲ್ ಖುಷ್ ಆಗಿದ್ದರು. ಇನ್ನು ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದ್ದು ನಟಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ನಟಿ ಪೂಜಾ ಲೋಕೇಶ್, ಜೈದೇವ್ ಮೋಹನ್, ಮುಖ್ಯಮಂತ್ರಿ ಚಂದ್ರು, ಪಿ ಡಿ ಸತೀಶ್ಚಂದ್ರ, ಪೂರ್ಣಚಂದ್ರ, ಇನ್ನಿತರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಗಂಡು ದಿಕ್ಕಿಲ್ಲದ ಮನೆಯಲ್ಲಿನ ಹೆಣ್ಣಿನ ಸಮಸ್ಯೆ, ಇತ್ತ ಮೊದಲ ಪ್ರೀತಿಯಲ್ಲಿ ಸೋತಿರುವ ನಾಯಕ, ತಂದೆಯಿಲ್ಲದ ಮಗುವಿನ ತೊಳಲಾಟ ಎಲ್ಲವೂ ಈ ಧಾರಾವಾಹಿಯಲ್ಲಿ ನೀವು ನೋಡಬಹುದು.

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿ ಆರಂಭಕ್ಕೂ ಮೊದಲು ಸಖತ್ ಕ್ಯೂಟ್ ಲುಕ್​ನಲ್ಲಿ ಮಿಂಚಿದ ವೈಷ್ಣವಿ ಗೌಡ

ಇನ್ನು ಹಿಂದಿನ ಸಂಚಿಕೆಯ ಬಗ್ಗೆ ನೋಡುವುದಾದರೆ ಕಥಾನಾಯಕ ರಾಮನಿಗೆ ಅವನ ಚಿಕ್ಕಮ್ಮ ಹುಡುಗಿ ನೋಡುವ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ಇಷ್ಟವಿಲ್ಲದ ರಾಮ ಅದೇ ಕೋಪದಲ್ಲಿ ಸೀತಾಗೂ ಗದುರುತ್ತಾನೆ. ಬಳಿಕ ಆಕೆ ರಾಮನಲ್ಲಿ ಕ್ಷಮೆ ಕೇಳಿ ಹೋಗುತ್ತಾಳೆ. ಆಗ ಸಿಹಿ ಅಮ್ಮ ಸಪ್ಪಗಿರುವುದನ್ನು ಕಂಡು ಅಮ್ಮನ ಬಳಿ ಕಾರಣ ಕೇಳಬೇಕೆನ್ನುವಾಗ ರಾಮ ಎಲ್ಲಿಗೋ ಹೊರಟಿದ್ದಾನೆ ಎಂದು ತಿಳಿದು, ಅವನ ಬಳಿ ಓಡೋಡಿ ಬಂದು ತನ್ನ ಹೆಲಿಕಾಪ್ಟರ್ ಏರುವ ಇಂಗಿತ ವ್ಯಕ್ತ ಪಡಿಸುತ್ತಾಳೆ. ಆಗ ರಾಮ ತಾನು ಒಂದು ಕೆಲಸಕ್ಕೆ ಹೋರಟಿರುವುದಾಗಿ ಸಿಹಿ ಬಳಿ ಹೇಳುತ್ತಾನೆ. ಜೊತೆಗೆ ಆಕೆ ಮಾತನಾಡಲು ನನ್ನ ಬಳಿ ನಿನ್ನ ನಂಬರ್ ಇಲ್ಲ ಎಂದು ಕೇಳಿದಾಗ ಸಿಹಿಯ ಕೋರಿಕೆಯ ಮೇರೆಗೆ ಶ್ರೀ ರಾಮ್ ತನ್ನ ಫೋನ್ ನಂಬರ್ ಅನ್ನು ಸೀತೆಯ ಫೋನ್ ನಲ್ಲಿ ಫ್ರೆಂಡ್ ಎಂದು ಸೇವ್ ಮಾಡಿರುವುದಾಗಿ ಸಿಹಿ ಬಳಿ ತಿಳಿಸಿ ಹೋಗುತ್ತಾನೆ. ನಂತರ, ಶ್ರೀ ರಾಮ್ ಮನೆಗೆ ಬಂದು ತನ್ನ ಮದುವೆಯಾಗಲು ಬಂದ ಮಿಶಿಕಾಳನ್ನು ಭೇಟಿಯಾಗುತ್ತಾನೆ ಜೊತೆಗೆ ಆಕೆಗೆ ಕೆಲವು ಷರತ್ತುಗಳನ್ನು ಹಾಕುತ್ತಾನೆ. ಅದನ್ನು ಒಪ್ಪಿದರೆ ಮದುವೆಯಾಗುತ್ತೆನೆ ಎಂದು ಹೇಳುತ್ತಾನೆ. ಆದರೆ ರಾಮನ ಷರತ್ತುಗಳನ್ನು ಕೇಳಿದ ಮಿಶಿಕಾ ಹೆದರಿಕೊಂಡು ತನ್ನ ತಂದೆ ತಾಯಿ ಜೊತೆ ಅಲ್ಲಿಂದ ಕಾಲ್ಕಿತ್ತುತ್ತಾಳೆ. ಇದರಿಂದ ಬೇಸರಗೊಂಡಂತೆ ನಾಟಕವಾಡುತ್ತಾ ರಾಮನ ಚಿಕ್ಕಮ್ಮ ಅಲ್ಲಿಂದ ಎದ್ದು ನಡೆಯುತ್ತಾಳೆ. ಇನ್ನು ರಾಮನ ನಡೆಯೇನು? ಏನಾಗಬಹುದು? ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:39 am, Tue, 25 July 23

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು