ಕನ್ನಡಾಂಬೆ ಭುವನೇಶ್ವರಿ ದೇವಸ್ಥಾನ ಹೇಗಿದೆ? ವಿಶೇಷ ವಿಡಿಯೋ ಮಾಡಿ ಪರಿಚಯಿಸಿದ ನಟಿ ರಂಜನಿ ರಾಘವನ್

ನಟಿ ರಂಜನಿ ರಾಘವನ್ ಅವರು ಭುವನಗಿರಿ ಕನ್ನಡಾಂಬೆಯ ದೇವಸ್ಥಾನದ ಪರಿಚಯ ಮಾಡಿದ್ದಾರೆ. ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಅವರು ರೀಲ್ಸ್​ ಮಾಡಿದ್ದಾರೆ.

ಕನ್ನಡಾಂಬೆ ಭುವನೇಶ್ವರಿ ದೇವಸ್ಥಾನ ಹೇಗಿದೆ? ವಿಶೇಷ ವಿಡಿಯೋ ಮಾಡಿ ಪರಿಚಯಿಸಿದ ನಟಿ ರಂಜನಿ ರಾಘವನ್
ರಂಜನಿ ರಾಘವನ್
Follow us
| Updated By: ರಾಜೇಶ್ ದುಗ್ಗುಮನೆ

Updated on: May 25, 2022 | 7:59 PM

‘ಕನ್ನಡತಿ’ ಧಾರವಾಹಿ (Kannadathi Serial) ಪ್ರಮುಖ ಘಟ್ಟ ತಲುಪಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಹರ್ಷ ಹಾಗೂ ಭುವಿಯ ಮದುವೆಗೆ ಸಕಲ ಸಿದ್ಧತೆ ನಡೆದಿದೆ. ಹರ್ಷ ಹಾಗೂ ಭುವಿ ಮದುವೆಗೆ ಹಲವು ವಿಘ್ನಗಳು ಎದುರಾದವು. ಭುವಿಯನ್ನು ಕೊಲ್ಲಲು ಪ್ರಯತ್ನ ಕೂಡ ನಡೆಯಿತು. ಅದೃಷ್ಟವಶಾತ್ ಭುವಿ ಬದುಕಿದ್ದಾಳೆ. ಗಾಯಗಳಿಂದ ಚೇತರಿಸಿಕೊಂಡಿದ್ದಾಳೆ. ಈಗ ಈ ಧಾರಾವಾಹಿ ಹೊಸ ತಿರುವು ಪಡೆದುಕೊಂಡು ಸಾಗುತ್ತಿದೆ. ಹರ್ಷ ಹಾಗೂ ಭುವಿ ಶೀಘ್ರವೇ ಮದುವೆ ಆಗಲಿದ್ದಾರೆ. ಇವರ ಮದುವೆ ನಡೆಯುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ಭುವನೇಶ್ವರಿ ದೇವರ (Bhuvanagiri Temple ) ಸನ್ನಿಧಿಯಲ್ಲಿ ಅನ್ನೋದು ವಿಶೇಷ.

ಭುವನಗಿರಿಯ ಕನ್ನಡಾಂಬೆ ದೇವಸ್ಥಾನ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದು ಕರ್ನಾಟಕದಲ್ಲಿರುವ ಏಕೈಕ ಕನ್ನಡಾಂಬೆ ದೇವಸ್ಥಾನ ಎಂದು ರಂಜನಿ ರಾಘವನ್ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳ ಕಾಲ ಈ ಧಾರಾವಾಹಿ ಶೂಟಿಂಗ್ ಇಲ್ಲಿ ನಡೆದಿದೆ. ಸದ್ಯ, ‘ಕನ್ನಡತಿ’ಯಲ್ಲಿ ಈ ಎಪಿಸೋಡ್ ಪ್ರಸಾರವಾಗುತ್ತಿದೆ.

ಇದನ್ನೂ ಓದಿ
Image
ಭುವಿಗೆ ತಿಳಿದೇ ಹೋಯ್ತು ಸಾನಿಯಾ ಅಸಲಿ ಮುಖ; ಮದುವೆಗೂ ಮುನ್ನ ಎಲ್ಲವನ್ನೂ ಅರಿತುಕೊಂಡ ಹರ್ಷನ ಪ್ರೇಯಸಿ
Image
ಹರಿದ ಬಟ್ಟೆ, ಹಣೆಯಲ್ಲಿ ರಕ್ತ; ನಟಿ ರಂಜನಿ ರಾಘವನ್ ಹಂಚಿಕೊಂಡ ವಿಡಿಯೋ ನೋಡಿ ಗಾಬರಿಗೊಳ್ಳಬೇಡಿ
Image
ಐಸಿಯುನಲ್ಲಿ ಭುವಿ: ಸಾನಿಯಾಗೆ ತಿರುಮಂತ್ರ ಆಯ್ತು ಪ್ಲ್ಯಾನ್​; ಮುಂದಿದೆ ಮಾರಿ ಹಬ್ಬ
Image
 ಬೆಟ್ಟದಿಂದ ಭುವಿಯನ್ನು ತಳ್ಳೇ ಬಿಟ್ಟ ಕಿಲ್ಲರ್; ವರುಧಿನಿಯಿಂದ ಮತ್ತಷ್ಟು ದೂರವಾದ ಹರ್ಷ

ನಟಿ ರಂಜನಿ ರಾಘವನ್ ಅವರು ಭುವನಗಿರಿ ಕನ್ನಡಾಂಬೆಯ ದೇವಸ್ಥಾನದ ಪರಿಚಯ ಮಾಡಿದ್ದಾರೆ. ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಅವರು ರೀಲ್ಸ್​ ಮಾಡಿದ್ದಾರೆ. ಇದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ವಿಡಿಯೋದಲ್ಲಿ ರಂಜನಿ ಅವರು ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೊರ ಭಾಗದಲ್ಲಿ ನಿಂತು ದೇವಸ್ಥಾನದ ಬಗ್ಗೆ ರಂಜನಿ ರಾಘವನ್ ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಳಿಕ ಅವರು ನೇರವಾಗಿ ದೇವಸ್ಥಾನದ ಒಳಗೆ ತೆರಳಿದ್ದಾರೆ. ಫ್ಯಾನ್ಸ್​ಗೆ ಅವರು ದೇವರ ದರ್ಶನ ಮಾಡಿಸಿದ್ದಾರೆ. ಈ ವಿಡಿಯೋದಲ್ಲಿ ದೇವಸ್ಥಾನದ ಒಳಭಾಗದಲ್ಲಿ ಶೂಟಿಂಗ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದ ಕಂಡು ಬಂದಿದೆ.

ಇದನ್ನೂ ಓದಿ: ‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​

ಹರ್ಷ ಹಾಗೂ ಭುವಿ ಪರಸ್ಪರ ಪ್ರೀತಿಸುತ್ತಿದ್ದಾರೆ. ರತ್ನಮಾಲಾ ಮಾಡಿರುವ ಆಸ್ತಿಗೆ ಒಡೆತನ ಹೊಂದಲಿದ್ದಾಳೆ ಭುವಿ. ಈ ವಿಚಾರ ಕೇಳಿ ಸಾನಿಯಾಗೆ ಹೊಟ್ಟೆಉರಿ ಶುರುವಾಗಿದೆ. ಹೀಗಾಗಿ ಮದುವೆ ನಿಲ್ಲಿಸಲು ನಾನಾ ಪ್ರಯತ್ನ ಮಾಡುತ್ತಿದ್ದಾಳೆ. ಈ ಮಧ್ಯೆ ಹರ್ಷನ ತಾಯಿ ರತ್ನಮಾಲಾಗೆ ಅನಾರೋಗ್ಯ ಕಾಡಿದೆ. ಭುವಿ ಗೆಳತಿ ವರುಧಿನಿ ಕೂಡ ಮದುವೆ ವಿಚಾರ ತಿಳಿದು ಅಸಮಾಧಾನಗೊಂಡಿದ್ದಾಳೆ. ಮದುವೆಯ ಎಪಿಸೋಡ್ ಯಾವ ರೀತಿಯಲ್ಲಿ ಮೂಡಿ ಬರಲಿದೆ ಅನ್ನೋದು ಸದ್ಯದ ಕುತೂಹಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.