AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು

ಆಸ್ತಿ ವಿಚಾರದಲ್ಲಿ ಭುವಿಗೆ ತಲೆಬಿಸಿ ಶುರುವಾಗಿದೆ. ರತ್ನಮಾಲಾ ಬರೆದಿಟ್ಟ ಎಲ್ಲಾ ಆಸ್ತಿಯನ್ನು ಹರ್ಷನಿಗೆ ಬರೆಯಬೇಕು ಎಂದು ಆಕೆ ಆಲೋಚಿಸಿದ್ದಾಳೆ. ಆತನೇ ವಾರಸುದಾರ ಆಗಬೇಕು ಎಂಬುದು ಆಕೆಯ ಆಸೆ.

‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
ರತ್ನಮಾಲಾ-ಭುವಿ
TV9 Web
| Edited By: |

Updated on: Nov 29, 2022 | 8:15 AM

Share

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಹರ್ಷನ ಸುಳ್ಳಿನಿಂದ ನೊಂದುಕೊಂಡ ಭುವಿ; ಕೋಟಿ ಕೋಟಿ ಒಡತಿಗೆ ಈಗ ಹಲವು ಅಡೆತಡೆ
Image
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
Image
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಹರ್ಷ ಹಾಗೂ ಭುವಿ ಮಧ್ಯೆ ಅಂತರ ಮೂಡುವ ಸೂಚನೆ ಸಿಕ್ಕಿದೆ. ಇದಕ್ಕೆ ಕಾರಣ ಆಗಿದ್ದು ವರುಧಿನಿ ಪ್ಲ್ಯಾನ್. ಈ ದಂಪತಿಯನ್ನು ಕಂಡರೆ ಆತೆ ಸಾಕಷ್ಟು ಉರಿದುಕೊಳ್ಳುತ್ತಾಳೆ. ಇವರನ್ನು ಬೇರೆ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ. ಈಗ ಹೊಸ ಪ್ಲ್ಯಾನ್​ನೊಂದಿಗೆ ಆಕೆ ಬಂದಿದ್ದಾಳೆ. ಇದು ಯಶಸ್ಸು ಕಾಣುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅಸ್ಥಿ ವಿಸರ್ಜನೆ ವೇಳೆ ಡ್ರಾಮಾ

ರತ್ನಮಾಲಾ ಮೃತಪಟ್ಟ ಕೆಲವೇ ದಿನಕ್ಕೆ ದೊಡ್ಡ ಡ್ರಾಮಾ ಶುರುವಾಗಿದೆ. ಸುದರ್ಶನ್ ಆಸ್ತಿಯಲ್ಲಿ ಭಾಗ ಕೇಳಲು ಪ್ಲ್ಯಾನ್ ಮಾಡಿಕೊಂಡಿದ್ದಾನೆ. ಹರ್ಷನ ಅರೆಸ್ಟ್ ಮಾಡಿಸಲು ಸಾನಿಯಾ ಪ್ಲ್ಯಾನ್ ಮಾಡಿದ್ದಾಳೆ. ತನ್ನ ಮೇಲೆ ಕೊಲೆ ಪ್ರಯತ್ನಕ್ಕೆ ಹರ್ಷ ಮುಂದಾಗಿದ್ದಾನೆ ಎಂದು ಸಾನಿಯಾ ಈ ಮೊದಲಿನಿಂದಲೂ ಆರೋಪ ಮಾಡುತ್ತಲೇ ಬರುತ್ತಿದ್ದಾಳೆ. ಇದನ್ನೇ ಮುಂದಿಟ್ಟುಕೊಂಡು ಹರ್ಷನನ್ನು ಅರೆಸ್ಟ್ ಮಾಡಿಸಲು ಸಾನಿಯಾ ಯೋಚಿಸಿದ್ದಾಳೆ. ಶ್ರೀರಂಗಪಟ್ಟಣದಲ್ಲಿ ಅಸ್ಥಿ ಬಿಡುವ ಸಂದರ್ಭದಲ್ಲೇ ಭುವಿಯನ್ನು ಅರೆಸ್ಟ್​ ಮಾಡಿಸುವ ಆಲೋಚನೆ ಸಾನಿಯಾಗೆ ಇದೆ.

ಸುದರ್ಶನ್​ ಕೂಗಾಟ

ರತ್ನಮಾಲಾ ತಾನು ಮಾಡಿದ ಆಸ್ತಿಯನ್ನು ಭುವಿ ಹೆಸರಿಗೆ ಬರೆದು ಆಗಿದೆ. ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಈ ವಿಚಾರ ತಿಳಿದುಕೊಂಡ ವರುಧಿನಿ ಸಾಕಷ್ಟು ಆತಂಕಗೊಂಡಿದ್ದಾಳೆ. ಈ ಮಧ್ಯೆ ಸುದರ್ಶನ್ ತಾನು ಆಸ್ತಿಯಲ್ಲಿ ಭಾಗ ಕೇಳಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಸುದರ್ಶನ್ ಆಡುತ್ತಿದ್ದ ಮಾತುಗಳನ್ನು ಹರ್ಷ ಕೇಳಿಸಿಕೊಂಡಿದ್ದಾನೆ. ಇದು ಆತನಿಗೆ ಬೇಸರ ಮೂಡಿಸಿದೆ.

5 ವರ್ಷ ಆಸ್ತಿ ಹಸ್ತಾಂತರಿಸುವಂತಿಲ್ಲ

ಆಸ್ತಿ ವಿಚಾರದಲ್ಲಿ ಭುವಿಗೆ ತಲೆಬಿಸಿ ಶುರುವಾಗಿದೆ. ರತ್ನಮಾಲಾ ಬರೆದಿಟ್ಟ ಎಲ್ಲಾ ಆಸ್ತಿಯನ್ನು ಹರ್ಷನಿಗೆ ಬರೆಯಬೇಕು ಎಂದು ಆಕೆ ಆಲೋಚಿಸಿದ್ದಾಳೆ. ಆತನೇ ವಾರಸುದಾರ ಆಗಬೇಕು ಎಂಬುದು ಆಕೆಯ ಆಸೆ. ಭುವಿ ಹೆಸರಿಗೆ ಆಸ್ತಿ ಬರೆದರೆ ಆಕೆ ಇದೇ ರೀತಿ ಮಾಡುತ್ತಾಳೆ ಅನ್ನೋದು ರತ್ನಮಾಲಾಗೆ ಮೊದಲೇ ತಿಳಿದಂತಿತ್ತು. ಹೀಗಾಗಿ, ವಿಲ್​ನಲ್ಲಿ ಒಂದು ವಿಚಾರವನ್ನು ಸ್ಪಷ್ಟವಾಗಿ ಬರೆದಿದ್ದಳು.

ಭುವಿ ವಿಲ್​ನ ಹಿಡಿದುಕೊಂಡು ವಕೀಲರ ಬಳಿ ಬಂದಿದ್ದಾಳೆ. ಬಂದು ಈ ಆಸ್ತಿಯನ್ನು ಹರ್ಷನ ಹೆಸರಿಗೆ ಬರೆಯಬೇಕು ಎಂದುಕೊಂಡಿದ್ದೀನಿ ಎಂದು ಹೇಳಿದ್ದಾಳೆ. ‘ಮೇಡಂ, ನೀವು ವಿಲ್​ನಲ್ಲಿರುವ ವಿಚಾರವನ್ನು ಸರಿಯಾಗಿ ನೋಡಿಲ್ಲ ಅನಿಸುತ್ತದೆ. ನಿಮ್ಮ ಹೆಸರಲ್ಲಿರುವ ಆಸ್ತಿಯನ್ನು ಐದು ವರ್ಷ ಯಾರ ಹೆಸರಿಗೂ ಬದಲಾಯಿಸುವಂತಿಲ್ಲ ಎಂದು ಬರೆಯಲಾಗಿದೆ. ಹೀಗಾಗಿ ಯಾರ ಹೆಸರಿಗೂ ಅದನ್ನು ಬರೆಯುವಂತಿಲ್ಲ’ ಎಂದಿದ್ದಾರೆ ವಕೀಲರು. ವಿಲ್​ನಲ್ಲಿ ರತ್ನಮಾಲಾ ಹಾಕಿರುವ ಕಂಡೀಷನ್ ನೋಡಿ ಭುವಿಗೆ ಶಾಕ್ ಆಗಿದೆ.

ರತ್ನಮಾಲಾ ನಿರ್ಧಾರ ಒಪ್ಪಿಕೊಂಡ ಹರ್ಷ?

ಭುವಿ ಹೆಸರಿಗೆ ರತ್ನಮಾಲಾ ಆಸ್ತಿ ಬರೆಯುತ್ತಾಳೆ ಎಂದು ಹರ್ಷ ಊಹಿಸಿರಲಿಲ್ಲ. ಆಸ್ತಿ ಬರೆದ ವಿಚಾರ ಕೇಳಿ ಆತನಿಗೆ ಶಾಕ್ ಆಗಿದೆ. ಆದರೆ, ಇದನ್ನು ಆತ ಒಪ್ಪಿಕೊಳ್ಳುತ್ತಿದ್ದಾನೆ. ನೇರವಾಗಿ ಈ ವಿಚಾರ ಹೇಳದೆ ಇದ್ದರೂ ಪರೋಕ್ಷವಾಗಿ ಈ ವಿಚಾರವನ್ನು ಒಪ್ಪಿಕೊಂಡಂತಿದೆ. ಹರ್ಷನಿಗೆ ಆಸ್ತಿ ವಿಚಾರದಲ್ಲಿ ಚುಚ್ಚಿ ಚುಚ್ಚಿ ಮಾತನಾಡುವ ಕೆಲಸ ವರುಧಿನಿಯಿಂದ ಆಗಿತ್ತು. ಆದರೆ, ಅದು ಅಷ್ಟು ಪ್ರಭಾವ ಬೀರಿದಂತೆ ಕಾಣಲೇ ಇಲ್ಲ. ಇದನ್ನು ನೋಡಿ ವರುಧಿನಿಗೆ ಕೊಂಚ ಅಂಜಿಕೆ ಆಗಿದೆ.

ಸಾನಿಯಾ ಪ್ಲ್ಯಾನ್ ಫ್ಲಾಪ್

ಸಾನಿಯಾಳನ್ನು ಹರ್ಷ ಕೆಲಸದಿಂದ ತೆಗೆಸಿದ್ದ. ಈ ವಿಚಾರದಲ್ಲಿ ಆಕೆ ಠಾಣೆಯ ಮೆಟ್ಟಿಲೇರಿದ್ದಾಳೆ. ಹರ್ಷನನ್ನು ಅರೆಸ್ಟ್ ಮಾಡಲು ಸಾನಿಯಾ ಪ್ಲ್ಯಾನ್ ರೂಪಿಸಿರುವ ವಿಚಾರ ಭುವಿಗೆ ಗೊತ್ತಾಗಿದೆ. ಹೀಗಾಗಿ, ಸಾನಿಯಾ ಪ್ಲ್ಯಾನ್ ಫ್ಲಾಪ್ ಮಾಡಲು ಭುವಿ ಹೊಸ ಯೋಜನೆ ಹುಡುಕುತ್ತಿದ್ದಾಳೆ.

ಶ್ರೀಲಕ್ಷ್ಮಿ ಎಚ್.

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ