AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷನ ಸುಳ್ಳಿನಿಂದ ನೊಂದುಕೊಂಡ ಭುವಿ; ಕೋಟಿ ಕೋಟಿ ಒಡತಿಗೆ ಈಗ ಹಲವು ಅಡೆತಡೆ

ವರುಧಿನಿಗೆ ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎನ್ನುವ ಉದ್ದೇಶ ಇದೆ. ಇದಕ್ಕಾಗಿ ಆಕೆ ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದಾಳೆ. ಆದರೆ, ಯಾವ ಪ್ಲ್ಯಾನ್ ಕೂಡ ಯಶಸ್ವಿ ಆಗಿಲ್ಲ.

ಹರ್ಷನ ಸುಳ್ಳಿನಿಂದ ನೊಂದುಕೊಂಡ ಭುವಿ; ಕೋಟಿ ಕೋಟಿ ಒಡತಿಗೆ ಈಗ ಹಲವು ಅಡೆತಡೆ
ಭುವಿ-ಹರ್ಷ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Nov 25, 2022 | 8:24 AM

Share

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
Image
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರದಲ್ಲಿ ಸಾನಿಯಾಗೆ ಆಸ್ತಿ ಚಿಂತೆ; ಜೋರಾಗಿ ನಕ್ಕೇ ಬಿಟ್ಟಳು ವರುಧಿನಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾ ತನ್ನ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾಳೆ ಎಂಬ ವಿಚಾರ ಹರ್ಷನಿಗೆ ಗೊತ್ತಾಗಿದೆ. ಇದನ್ನು ಕೇಳಿ ಹರ್ಷನಿಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಆತನಿಗೆ ಈ ವಿಚಾರ ಶಾಕ್ ತಂದಿದೆ. ಇದರ ಲಾಭವನ್ನು ಪಡೆಯಲು ವರುಧಿನಿ ಮುಂದಾಗಿದ್ದಾಳೆ. ಆಕೆ ಹಲವು ಪ್ಲ್ಯಾನ್​​ಗಳನ್ನು ಮಾಡುತ್ತಿದ್ದಾಳೆ. ಈ ಪ್ಲ್ಯಾನ್​ನಿಂದ ಹರ್ಷ ಹಾಗೂ ಭುವಿ ಮಧ್ಯೆ ವೈಮನಸ್ಸು ಮೂಡಬಹುದು ಎನ್ನುವ ಸೂಚನೆ ಸಿಕ್ಕಿದೆ.

ಹರ್ಷನ ಸುಳ್ಳು

ವರುಧಿನಿಗೆ ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎನ್ನುವ ಉದ್ದೇಶ ಇದೆ. ಇದಕ್ಕಾಗಿ ಆಕೆ ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದಾಳೆ. ಆದರೆ, ಯಾವ ಪ್ಲ್ಯಾನ್ ಕೂಡ ಯಶಸ್ವಿ ಆಗಿಲ್ಲ. ಹರ್ಷನ ಬಿಟ್ಟುಕೊಡುವಂತೆ ಭುವಿ ಬಳಿ ಮದುವೆಯಂದು ವರು ಕೇಳಿದ್ದಳು. ಆದರೆ, ವರ್ಕೌಟ್ ಆಗಿಲ್ಲ. ಈಗ ಮದುವೆ ಆದ ನಂತರವೂ ವರುಧಿನಿ ಪ್ರಯತ್ನ ನಿಲ್ಲಿಸಿಲ್ಲ. ಈಗ ಆಕೆ ಹೊಸ ಅಸ್ತ್ರದೊಂದಿಗೆ ಬಂದಿದ್ದಾಳೆ.

‘ಹರ್ಷನಿಗೆ ಆಸ್ತಿ ವಿಚಾರ ಮೊದಲೇ ಗೊತ್ತಿತ್ತು. ರತ್ನಮಾಲಾ ಈ ವಿಚಾರವನ್ನು ಹರ್ಷನಿಗೆ ಮೊದಲೇ ಹೇಳಿದ್ದಳು’ ಎಂಬುದನ್ನು ಭುವಿ ಬಳಿ ವರುಧಿನಿ ಹೇಳಿದ್ದಳು. ಆದರೆ, ಇದನ್ನು ಭುವಿ ನಂಬಿಲ್ಲ. ವರುಧಿನಿ ಸುಳ್ಳು ಹೇಳುತ್ತಿದ್ದಾಳೆ ಎಂದು ಭುವಿಗೆ ಅನಿಸುತ್ತಲೇ ಇದೆ. ಈ ವಿಚಾರದಲ್ಲಿ ಸ್ಪಷ್ಟನೆ ಕೇಳಲು ಭುವಿ ಹರ್ಷನ ಬಳಿ ತೆರಳಿದ್ದಳು.

‘ಹರ್ಷ ಅವರೇ ನಿಜವಾಗಿ ಹೇಳಿ. ನಿಮಗೆ ರತ್ನಮಾಲಾ ನನ್ನ ಹೆಸರಿಗೆ ಆಸ್ತಿ ಬರೆದಿಟ್ಟ ವಿಚಾರ ಮೊದಲೇ ಗೊತ್ತಿತ್ತೇ’ ಎಂದು ಕೇಳಿದ್ದಾಳೆ ಭುವಿ. ಇದಕ್ಕೆ ಹರ್ಷ ‘ಇಲ್ಲ’ ಎನ್ನುವ ಉತ್ತರ ಹೇಳಬೇಕಿತ್ತು. ಆದರೆ, ಹರ್ಷ ಸುಳ್ಳು ಹೇಳಿದ್ದಾನೆ. ಇದಕ್ಕೆ ಹೌದು ಎನ್ನುವ ಉತ್ತರ ಅವನ ಕಡೆಯಿಂದ ಬಂದಿದೆ.

ವರ್ಕ್ ಆಗುತ್ತಿದೆ ವರುಧಿನಿ ಪ್ಲ್ಯಾನ್

ಭುವಿಯನ್ನು ಹರ್ಷ ಆಸ್ತಿಗೋಸ್ಕರ ಮದುವೆ ಆಗಿದ್ದಾನೆ ಎಂದು ಅರ್ಥ ಬರುವ ರೀತಿಯಲ್ಲಿ ಬಿಂಬಿಸಿದ್ದಳು ವರುಧಿನಿ. ಈಗ ಹರ್ಷ ಹೇಳಿದ ಸುಳ್ಳು ವರುಧಿನಿ ಹೇಳಿದ ಸುಳ್ಳು ತಾಳೆ ಆಗಿದೆ. ಇದರಿಂದ ಭುವಿ ಗೊಂದಲಕ್ಕೆ ಒಳಗಾಗಿದ್ದಾಳೆ. ಹರ್ಷ ತನಗೆ ಮೋಸ ಮಾಡಿದ್ದಾನೆ ಎಂದು ಆಕೆಗೆ ಅನಿಸಿದೆ.

ರತ್ನಮಾಲಾ ಮಾತು

ಭುವಿಗೆ ರತ್ನಮಾಲಾ ಜತೆ ಒಳ್ಳೆಯ ಒಡನಾಟ ಇತ್ತು. ಈಗ ಬಿಟ್ಟು ಹೋದ ನಂತರವೂ ರತ್ನಮಾಲಾ ನೆನಪು ಕಾಡುತ್ತಿದೆ. ಮನೆಯಲ್ಲಿ ಧೂಪ ಹಾಕಲು ಭುವಿ ಬಂದಿದ್ದಳು. ಆಗ ಆಕೆಗೆ ರತ್ನಮಾಲಾ ಬಂದಂತೆ ಅನಿಸಿದೆ. ‘ಭುವಿ, ಯಾಕಮ್ಮ ಬೇಸರದಲ್ಲಿ ಇದ್ದೀಯಾ? ನನ್ನ ಮಗ ಮೋಸ ಮಾಡಿದ್ದಾನೆ ಎಂದು ನಿನಗೆ ಅನಿಸಿದೆಯಾ? ನನ್ನ ಮಗ ಯಾರಿಗೂ ಮೋಸ ಮಾಡಿಲ್ಲ. ಅವನನ್ನು ನಿನಗೆ ವಹಿಸಿದ್ದು ನಾನು. ಅಂದರೆ ನಾನು ಮೋಸ ಮಾಡುತ್ತಿದ್ದೀನಿ ಅಂತ ಅರ್ಥನಾ? ಈ ರೀತಿಯ ಗೊಂದಲ ಸ್ಥಿತಿಯಲ್ಲಿ ಕೊಂಚ ಆಲೋಚಿಸುವುದು ಒಳ್ಳೆಯದು. ಏಕಾಏಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಭುವಿ’ ಎಂದು ರತ್ನಮಾಲಾ ಹೇಳಿದಂತೆ ಅನಿಸಿದೆ. ಕಣ್ತೆರೆದು ನೋಡುವಾಗ ರತ್ನಮಾಲಾ ಮಾಯವಾಗಿದ್ದಳು.

ಸಾನಿಯಾ ಪೇಚಾಟ

ಎಂಡಿ ಪಟ್ಟ ಕಳೆದುಕೊಂಡು ಸಾನಿಯಾಗೆ ಪೇಚಾಟ ಶುರುವಾಗಿದೆ. ಅವಳನ್ನು ಎಂಡಿಪಟ್ಟದಿಂದ ತೆಗೆದ ನಂತರದಲ್ಲಿ ಬಾಲ ಸುಟ್ಟ ಬೆಕ್ಕಿನಂತೆ ಆಗಿದ್ದಾಳೆ. ಈ ವಿಚಾರದಲ್ಲಿ ಕೋರ್ಟ್​ಗೆ ಹೋಗಲು ನಿರ್ಧರಿಸಿದ್ದಾಳೆ. ಇದರಲ್ಲಿ ಸಾನಿಯಾ ಯಶಸ್ಸು ಕಾಣಬಹುದು. ಇಡೀ ಆಸ್ತಿ ಭುವಿ ಹೆಸರಲ್ಲಿದೆ. ಹೀಗಾಗಿ, ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆಯುವ ಹಕ್ಕು ಇರುವುದು ಭುವಿಗೆ. ಹೀಗಾಗಿ, ಸಾನಿಯಾ ಪ್ರಯತ್ನ ಯಶಸ್ಸು ಕೊಡಬಹುದು.

ಶ್ರೀಲಕ್ಷ್ಮಿ ಎಚ್.

Published On - 8:23 am, Fri, 25 November 22

ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್