AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಿಲನ’ ಕಥೆ ರೀತಿ ಸಾಗುತ್ತಿದೆ ‘ಕರ್ಣ’; ನಿತ್ಯಾ-ಸೂರಜ್ ಒಂದು ಮಾಡಲು ಮುಂದಾದ ಕರ್ಣ

ಪುನೀತ್ ರಾಜ್‌ಕುಮಾರ್ 'ಮಿಲನ' ಸಿನಿಮಾ ಮಾದರಿಯಲ್ಲೇ 'ಕರ್ಣ' ಧಾರಾವಾಹಿ ಸಾಗುತ್ತಿದೆ. ಕರ್ಣ ಮತ್ತು ನಿತ್ಯಾ ಮದುವೆಯಾಗಿದ್ದರೂ, ಕರ್ಣ ನಿತ್ಯಾಳನ್ನು ಆಕೆಯ ಪ್ರೇಮಿ ಸೂರಜ್‌ನೊಂದಿಗೆ ಸೇರಿಸಲು ಪ್ರಯತ್ನಿಸುತ್ತಾನೆ. ಸೂರಜ್ ಚಿಕ್ಕಮಗಳೂರಿನಲ್ಲಿರುವ ವಿಷಯ ತಿಳಿದಿದೆ. ಮುಂದಿನ ಕಥೆಯಲ್ಲಿ ನಿತ್ಯಾ ಸೂರಜ್‌ನೊಂದಿಗೆ ಒಂದಾಗುತ್ತಾಳೇ ಅಥವಾ ಕರ್ಣನ ಜೊತೆ ಅವಳ ಸಂಸಾರ ಮುಂದುವರಿಯುತ್ತದೆಯೇ ಎಂಬುದೇ ಕುತೂಹಲ.

‘ಮಿಲನ’ ಕಥೆ ರೀತಿ ಸಾಗುತ್ತಿದೆ ‘ಕರ್ಣ’; ನಿತ್ಯಾ-ಸೂರಜ್ ಒಂದು ಮಾಡಲು ಮುಂದಾದ ಕರ್ಣ
ಕರ್ಣ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 31, 2025 | 7:52 AM

Share

ಪುನೀತ್ ರಾಜ್​ಕುಮಾರ್ ನಟನೆಯ ‘ಮಿಲನ’ ಸಿನಿಮಾ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಪುನೀತ್ ಹಾಗೂ ಪಾರ್ವತಿ ನಟಿಸಿದ್ದರು. ಈ ಸಿನಿಮಾದಲ್ಲಿ ಕಥಾ ನಾಯಕ ಮದುವೆ ಆಗಿ ಬರುತ್ತಾನೆ. ಈ ರೀತಿ ಮದುವೆ ಆದ ಹುಡುಗಿಗೆ ಬೇರೆ ಲವರ್ ಇರುತ್ತಾಳೆ. ಇವರನ್ನು ಒಂದು ಮಾಡಲು ಕಥಾ ನಾಯಕ ಮುಂದಾಗುತ್ತಾನೆ. ಸದ್ಯ ‘ಕರ್ಣ’ (Karna Serial) ಧಾರಾವಾಹಿಯ ಕಥೆ ಕೂಡ ಹೀಗೆಯೇ ಸಾಗುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

‘ಕರ್ಣ’ ಧಾರಾವಾಹಿಯಲ್ಲಿ ಕರ್ಣ ಹಾಗೂ ನಿತ್ಯಾ ವಿವಾಹ ನೆರವೇರಿದೆ. ನಿತ್ಯಾ ಪ್ರೆಗ್ನೆಂಟ್ ಕೂಡ ಹೌದು. ಆದರೆ, ಈ ವಿಚಾರವನ್ನು ಕರ್ಣನು ನಿತ್ಯಾ ಬಳಿ ಹೇಳಿಲ್ಲ. ಆಕೆಯ ನಾಡಿ ಮಿಡಿತದಿಂದಲೇ ಈ ವಿಚಾರ ಗೊತ್ತಾಗಿದೆ. ನಿತ್ಯಾಗೆ ಓರ್ವ ಲವರ್ ಇದ್ದ. ಆತನೇ ಸೂರಜ್. ಸೂರಜ್ ಹಾಗೂ ನಿತ್ಯಾನ ಒಂದು ಮಾಡಬೇಕು ಎಂಬುದು ಕರ್ಣನ ಉದ್ದೇಶ. ಈಗ ಸೂರಜ್ ಎಲ್ಲಿದ್ದಾನೆ ಎನ್ನುವ ವಿಚಾರ ತಿಳಿದು ಕರ್ಣ ಹಾಗೂ ನಿತ್ಯಾ ಖುಷಿ ಪಟ್ಟಿದ್ದಾರೆ.

ಸೂರಜ್​ನ ರಮೇಶ್ (ಕರ್ಣನ ತಂದೆ) ಚಿಕ್ಕಮಗಳೂರಿನಲ್ಲಿ ಬಚ್ಚಿಟ್ಟಿದ್ದಾನೆ ಎಂಬ ವಿಚಾರ ಗೊತ್ತಾಗುತ್ತದೆ. ಹೀಗಾಗಿ, ಆಕೆಯನ್ನು ಕರೆದುಕೊಂಡು ಚಿಕ್ಕಮಗಳೂರಿಗೆ ಹೊರಡಲು ರೆಡಿ ಆಗುತ್ತಾರೆ. ಇವರಿಬ್ಬರೂ ಹನಿಮೂನ್​ಗೆ ಹೊರಟಿದ್ದಾರೆ ಎಂದು ರಮೇಶ್ ಅಂದುಕೊಳ್ಳುತ್ತಾನೆ. ಕರ್ಣ ಹಾಗೂ ನಿತ್ಯಾ ಆಪ್ತತೆ ನೋಡಿ ರಮೇಶ್​ಗೆ ಶಾಕ್ ಆಗುತ್ತದೆ.

ಇದನ್ನೂ ಓದಿ
Image
‘ಗಿಲ್ಲಿಗೆ ಕಳಪೆ ಕೊಡಬೇಕು’; ಮೊದಲೇ ಪ್ಲ್ಯಾನ್ ಮಾಡಿದ ಅಶ್ವಿನಿ, ರಿಷಾ
Image
ಪ್ರಪೋಸ್ ಮಾಡೇ ಬಿಟ್ಟ ಸೂರಜ್; ಅಚ್ಚರಿಯ ಉತ್ತರ ಕೊಟ್ಟ ರಾಶಿಕಾ
Image
ಗಿಲ್ಲಿಗೂ ಚಿಕ್ಕಪ್ಪನಿದ್ದಾನೆ, ಅವರದ್ದೂ ಒಂದು ಕತೆ ಇದೆ ಕೇಳಿ
Image
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

ಇದನ್ನೂ ಓದಿ: ಚಪ್ಪಡಿ ಕಲ್ಲು ಎಳೆದರೂ ನಗುತ್ತಲೇ ಇದ್ದಾನೆ ಕರ್ಣ; ರಮೇಶ್ ಶಾಕ್

ಇನ್ನು, ನಿತ್ಯಾಳನ್ನು ಸೂರಜ್ ಒಪ್ಪಿಕೊಳ್ಳೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಮದುವೆ ಟೈಮ್​ ಅಲ್ಲಿ ಸೂರಜ್​ನ ಕಿಡ್ನ್ಯಾಪ್ ಮಾಡಿಸಿದ್ದು ಕರ್ಣ ಎಂದು ಅನುಮಾನ ಬರುವಂತೆ ಮಾಡಲಾಗಿದೆ. ಈಗ ಸೂರಜ್ ಬಳಿ ನಿತ್ಯಾ ಹೋದಾಗ ಇದೇ ವಿಷಯ ಬರುತ್ತದೆ. ಆಗ ನಿತ್ಯಾ ಇದನ್ನು ನಂಬದೇ ಇರಬಹುದು. ಈ ವೇಳೆ ನಿತ್ಯಾ ಮರಳಿ ಮನೆಗೆ ಬರುತ್ತಾಳೆ. ಆ ಬಳಿಕ ಕರ್ಣ ಹಾಗೂ ನಿತ್ಯಾಳ ಸಂಸಾರ ಮುಂದುವರಿಯುತ್ತದೆ. ಈ ರೀತಿಯಲ್ಲಿ ಕಥೆ ಮೂಡಿ ಬರಬಹುದು ಎಂಬುದು ಪ್ರೇಕ್ಷಕರ ಊಹೆ. ಇಲ್ಲವೇ, ಕರ್ಣನ ಜೊತೆ ನಿತ್ಯಾಗೆ ಬೇಸರ ಮೂಡಬಹುದು. ಆ ಸಾಧ್ಯತೆಯೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ಕೈದಿಗಳಿಗೆ ರಾಜಾತಿಥ್ಯ: ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ವರ್ಗ
ಕೈದಿಗಳಿಗೆ ರಾಜಾತಿಥ್ಯ: ಮಂಡ್ಯ ಜೈಲು ಅಧೀಕ್ಷಕಿ ಶಾಂತಮ್ಮ ಬಳ್ಳಾರಿಗೆ ವರ್ಗ
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ
ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ