AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕುಂದಾಪುರ ಬಗ್ಗೆ ಸುದೀಪ್​ಗೆ ಶುರುವಾಗಿದೆ ಭಯ; ಓಪನ್ ಆಗಿ ಹೇಳಿದ ಕಿಚ್ಚ

ಕಳೆದ ವಾರದ ಟಾಸ್ಕ್​ನಲ್ಲಿ ಚೈತ್ರಾ ಅವರನ್ನು ರಜತ್ ಅವರು ಆಟದಿಂದ ಹೊರಹಾಕಿದರು. ಇದರಿಂದ ಕೋಪಗೊಂಡ ಚೈತ್ರಾ ಅವರು ಶಾಪ ಹಾಕೋಕೆ ಆರಂಭಿಸಿದರು. ‘ನೀವು ಸೋಲಬೇಕು’ ಎಂದು ನೇರವಾಗಿ ಹೇಳಿದ ಚೈತ್ರಾ, ದೇವರ ಬಳಿ ಹೋಗಿಯೂ ಈ ಬಗ್ಗೆ ಕೇಳಿಕೊಂಡರು. ಈ ಬಗ್ಗೆ ಸುದೀಪ್​ಗೆ ಭಯ ಶುರುವಾಗಿದೆ.

ಚೈತ್ರಾ ಕುಂದಾಪುರ ಬಗ್ಗೆ ಸುದೀಪ್​ಗೆ ಶುರುವಾಗಿದೆ ಭಯ; ಓಪನ್ ಆಗಿ ಹೇಳಿದ ಕಿಚ್ಚ
ಚೈತ್ರಾ-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Dec 09, 2024 | 8:44 AM

Share

ಕಿಚ್ಚ ಸುದೀಪ್ ಅವರು ಯಾರಿಗೂ ಭಯಪಟ್ಟು ಬದುಕಿದವರಲ್ಲ. ಏನೇ ಇದ್ದರೂ ಅದನ್ನು ಓಪನ್ ಆಗಿ ಹೇಳುತ್ತಾರೆ. ಅವರ ನೇರಾನೇರ ಮಾತುಗಳು ಎಲ್ಲರಿಗೂ ಇಷ್ಟ ಆಗುತ್ತವೆ. ಬಿಗ್ ಬಾಸ್ ವೇದಿಕೆ ಮೇಲೆ ನಿಂತರೆ ಅವರು ಮಾತುಗಳು ಸಖತ್ ಇಷ್ಟ ಆಗುತ್ತವೆ. ಈಗ ಅವರಿಗೆ ಚೈತ್ರಾ ಕುಂದಾಪುರ ಅವರ ಮೇಲೆ ಭಯ ಶುರುವಾಗಿದೆ. ಈ ವಿಚಾರವನ್ನು ಅವರು ಫನ್ ರೂಪದಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಇದಕ್ಕೆ ಕಾರಣ ಚೈತ್ರಾ ಅವರ ಶಾಪ.

ಕಳೆದ ವಾರದ ಟಾಸ್ಕ್​ನಲ್ಲಿ ಚೈತ್ರಾ ಅವರನ್ನು ರಜತ್ ಅವರು ಆಟದಿಂದ ಹೊರಹಾಕಿದರು. ಇದರಿಂದ ಕೋಪಗೊಂಡ ಚೈತ್ರಾ ಅವರು ಶಾಪ ಹಾಕೋಕೆ ಆರಂಭಿಸಿದರು. ‘ನೀವು ಸೋಲಬೇಕು’ ಎಂದು ನೇರವಾಗಿ ಹೇಳಿದ ಚೈತ್ರಾ, ದೇವರ ಬಳಿ ಹೋಗಿಯೂ ಈ ಬಗ್ಗೆ ಕೇಳಿಕೊಂಡರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣ ಆಯಿತು. ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂತು.

ಯೆಸ್ ಆರ್ ನೋ ರೌಂಡ್​ನಲ್ಲಿ ‘ಚೈತ್ರಾ ಶಾಪ ಹಾಕಿದ್ದರಿಂದಲೇ ರಜತ್ ಔಟ್ ಆದರು’ ಎಂಬ ಸ್ಟೇಟ್​ಮೆಂಟ್​ನ ಸುದೀಪ್ ಕೊಟ್ಟರು. ಈ ಮಾತನ್ನು ರಜತ್ ಒಪ್ಪಿದರೆ ಚೈತ್ರಾ ಅವರು ಒಪ್ಪಿಕೊಳ್ಳಲಿಲ್ಲ. ‘ಚೈತ್ರಾ ಪದೇ ಪದೇ ಶಾಪ ಹಾಕುತ್ತಿದ್ದರು. ಅವರ ಶಾಪ ತಾಗಿದೆ. ಈ ಕಾರಣಕ್ಕೆ ನಾನು ಔಟ್ ಆದೆ’ ಎಂದು ರಜತ್ ಅವರು ಹೇಳಿಕೊಂಡರು.

ಇದನ್ನೂ ಓದಿ: ‘ಬಿಗ್ ಬಾಸ್​ಗೆ ಒಳ್ಳೆಯ ಟಿಆರ್​ಪಿ ಬರೋಕೆ ನೀವಲ್ಲ, ನಾನು ಕಾರಣ’; ಓಪನ್ ಆಗಿ ಹೇಳಿದ ಸುದೀಪ್

ಇದರಿಂದ ಸುದೀಪ್ ಭಯವಾದಂತೆ ನಟಿಸಿದರು. ‘ನಾನು ಇನ್ಮುಂದೆ ಚೈತ್ರಾ ಅವರ ಬಳಿ ಎಚ್ಚರಿಕೆಯಿಂದ ಮಾತನಾಡುತ್ತೇನೆ. ಚೈತ್ರಾ ನನಗೆ ಶಾಪ ಹಾಕಬೇಡಿ. ನಿಮ್ಮ ಕೈನ ಮೇಲೆ ಎತ್ತಬೇಡಿ. ಒಳಕ್ಕೆ ಇಟ್ಟುಕೊಳ್ಳಿ. ಅದರಿಂದ ಶಾಪ ಹಾಕಿದ್ರೆ ಕಷ್ಟ’ ಎಂದು ಸುದೀಪ್ ಅವರು ಹೇಳುತ್ತಿದ್ದಂತೆ ಎಲ್ಲರೂ ನಕ್ಕರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ