Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಪ್ಪಲಿ ಧರಿಸದೆ ಬಿಗ್​ಬಾಸ್ ವೇದಿಕೆಗೆ ಬಂದ ಸುದೀಪ್: ಕಾರಣವೇನು?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿದ್ದು ಈ ವಾರದ ಮೊದಲ ವಾರದ ಪಂಚಾಯಿತಿಯನ್ನು ಸುದೀಪ್ ನಿನ್ನೆ (ಶನಿವಾರ) ನಡೆಸಿಕೊಟ್ಟರು. ಶೋ ನಡೆಸಿಕೊಡಲು ಬರಿಗಾಲಲ್ಲಿ ವೇದಿಕೆಗೆ ಬಂದಿದ್ದರು ಸುದೀಪ್.

ಚಪ್ಪಲಿ ಧರಿಸದೆ ಬಿಗ್​ಬಾಸ್ ವೇದಿಕೆಗೆ ಬಂದ ಸುದೀಪ್: ಕಾರಣವೇನು?
Follow us
ಮಂಜುನಾಥ ಸಿ.
|

Updated on: Oct 06, 2024 | 1:36 PM

ಬಿಗ್​ಬಾಸ್ ಕನ್ನಡ ಸೀಸನ್ 11 ಒಂದು ವಾರದ ಹಿಂದಷ್ಟೆ ಪ್ರಾರಂಭವಾಗಿದೆ. ಈ ಸೀಸನ್​ನ ಮೊದಲ ವಾರದ ಪಂಚಾಯಿತಿ ನಿನ್ನೆ (ಶನಿವಾರ) ನಡೆಯಿತು. ಕಿಚ್ಚ ಸುದೀಪ್ ತುಸು ಭಿನ್ನ ಸ್ಟೈಲ್​ನಲ್ಲಿ ಬಿಗ್​ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡರು. ಪ್ರತಿ ಬಾರಿ ಮೊದಲ ವಾರದ ಪಮಚಾಯಿತಿ, ಭರ್ಜರಿ ಉಡುಪು ಧರಿಸಿ, ಸಖತ್ ಸ್ಟೈಲಿಷ್ ಆಗಿ ಆಗಮಿಸುತ್ತಿದ್ದ ಸುದೀಪ್ ಈ ಬಾರಿ ಸ್ಟೈಲಿಷ್ ಆಗಿದ್ದರೂ ಸಹ ಸಾಂಪ್ರದಾಯಿಕ ಉಡುಗೆ ತೊಟ್ಟು ವೇದಿಕೆ ಏರಿದ್ದರು. ಪ್ರೇಕ್ಷಕರು ಗುರುತಿಸಿದ ಪ್ರಮುಖ ಬದಲಾವಣೆ ಎಂದರೆ ಕಿಚ್ಚ ಸುದೀಪ್ ಬರಿಗಾಲಲ್ಲೆ ಬಿಗ್​ಬಾಸ್ ವೇದಿಕೆಗೆ ಬಂದಿದ್ದರು. ಹೀಗೆ ಬರಿಗಾಲಲ್ಲಿ ವೇದಿಕೆ ಬರಲು ಕಾರಣವೂ ಇತ್ತು.

ಕಿಚ್ಚ ಸುದೀಪ್ ಬೂದು ಬಣ್ಣದ ಶೇರ್ವಾನಿ ಮಾದರಿಯ ಉಡುಪು ಧರಿಸಿ ಸರಳವಾಗಿ ವೇದಿಕೆಗೆ ಎಂಟ್ರಿ ಕೊಟ್ಟರು. ಕಳೆದ ಬಾರಿ ‘ಕಿಚ್ಚ-ಕಿಚ್ಚ’ ಎಂದು ಮ್ಯೂಸಿಕ್ ಹಾಕಿ ಸುದೀಪ್ ಕಾಲಿನಿಂದ ಕ್ಯಾಮೆರಾ ಪ್ಯಾನ್ ಮಾಡಿ ಮುಖ ತೋರಿಸುತ್ತಿದ್ದರು. ಆದರೆ ಈ ಬಾರಿ ಹಾಗೆ ಸಹ ಮಾಡಲಿಲ್ಲ. ಬದಲಿಗೆ ಸರಳವಾಗಿ ಬಿಗ್​ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟರು, ಯಾವುದೇ ಗಾಗಲ್ಸ್ ಇಲ್ಲದೆ, ಸರಳವಾಗಿ ಆದರೆ ಸ್ಟೈಲಿಷ್​ ಆಗಿಯೇ ಕಿಚ್ಚ ಕಾಣುತ್ತಿದ್ದರು. ಎಲ್ಲಕ್ಕೂ ಮಿಗಿಲಾಗಿ ಅವರು ಬರಿಗಾಲಲ್ಲಿ ಬಿಗ್​ಬಾಸ್ ವೇದಿಕೆಗೆ ಬಂದಿದ್ದರು.

ಸುದೀಪ್ ಬರಿಗಾಲಲ್ಲಿ ಬಿಗ್​ಬಾಸ್​ಗೆ ಬರಲು ಕಾರಣವಿತ್ತು, ನವರಾತ್ರಿ ಪ್ರಾರಂಭ ಆಗಿರುವ ಕಾರಣ ಸುದೀಪ್, ಸಾಂಪ್ರದಾಯಿಕ ಉಡುಗೆ ತೊಟ್ಟುಕೊಂಡು ಬರಿಗಾಲಿನಲ್ಲಿಯೇ ಬಿಗ್​ಬಾಸ್ ವೇದಿಕೆ ಏರಿದ್ದರು. ನವರಾತ್ರಿ ಆಚರಣೆ ಮಾಡುವಂತೆ ಸುದೀಪ್ ಅವರ ತಾಯಿ ಹೇಳಿದ್ದರಂತೆ. ಅದೇ ಕಾರಣಕ್ಕೆ ನಿನ್ನೆ ವೇದಿಕೆಗೆ ಬಂದ ಕೂಡಲೇ ಕ್ಯಾಮೆರಾ ನೋಡಿ, ‘ಬರಿಗಾಲಲ್ಲಿ ಬಂದಿದ್ದೀನಿ, ಬೂದು ಬಣ್ಣದ ಶೇರ್ವಾನಿ ಮಾದರಿ ಬಟ್ಟೆ ಹಾಕಿಕೊಂಡಿದ್ದೀನಿ, ಓಕೆ ನಾ ಅಮ್ಮ’ ಎಂದು ಬಿಗ್​ಬಾಸ್ ಶೋ ಮೂಲಕ ತಾಯಿಯ ಒಪ್ಪಿಗೆ ಪಡೆದುಕೊಂಡರು ಸುದೀಪ್.

ಇದನ್ನೂ ಓದಿ:ಬಿಗ್​ಬಾಸ್ ಕನ್ನಡ: ಮೊದಲ ವಾರ ಎಲಿಮಿನೇಟ್ ಆಗಿದ್ದು ಇವರೇನಾ?

ಸುದೀಪ್ ಸಾಮಾನ್ಯವಾಗಿ ಸಖತ್ ಸ್ಟೈಲಿಷ್ ಆಗಿ ಬಿಗ್​ಬಾಸ್ ವೇದಿಕೆಗೆ ಬರುತ್ತಾರೆ. ಜನ ವೀಕೆಂಡ್​ನಲ್ಲಿ ಬಿಗ್​ಬಾಸ್ ಶೋ ನೋಡುವ ಜೊತೆಗೆ ಸುದೀಪ್ ಅವರ ಬಟ್ಟೆಯನ್ನು ನೋಡಲು ಸಹ ಟಿವಿ ಮುಂದೆ ಕೂತಿರುತ್ತಾರೆ. ಸೀಸನ್​ನಿಂದ ಸೀಸನ್​ಗೆ ಭಿನ್ನ ರೀತಿಯ ಹಾಗೂ ಪ್ರತಿಬಾರಿ ಒಂದು ಥೀಮ್ ಇಟ್ಟುಕೊಂಡು ಸುದೀಪ್​ ಅವರು ಬಟ್ಟೆಗಳನ್ನು ತೊಡುತ್ತಾರೆ. ಸುದೀಪ್ ಅವರ ಬಿಗ್​ಬಾಸ್​ನ ಉಡುಗೆಗಳನ್ನು ವಿನ್ಯಾಸ ಮಾಡಲು ಪ್ರತ್ಯೇಕ ತಂಡವೇ ಇದೆ. ಉಡುಗೆಗಳಿಗೆ ತಕ್ಕಂತೆ ದುಬಾರಿ ಶೂಗಳನ್ನು ಸುದೀಪ್ ಧರಿಸುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ