AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಂದೆ, ಮಗಳು ಮಾತ್ರ ನನ್ನ ಆಸ್ತಿ, ಬಿಗ್ ಬಾಸ್ ಕ್ರೆಡಿಟ್ ನನಗೆ ಬೇಡ’; ಸುದೀಪ್

ಬಿಗ್ ಬಾಸ್ ಕನ್ನಡ ಸೀಸನ್ 11ರ ಯಶಸ್ಸಿನ ಬಗ್ಗೆ ಕಿಚ್ಚ ಸುದೀಪ್ ಅವರು ತಮ್ಮ ಕೊಡುಗೆಯನ್ನು ಅಲ್ಲಗಳೆದಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ತಂಡದ ಕಠಿಣ ಪರಿಶ್ರಮವೇ ಕಾರಣ ಎಂದು ಅವರು ಹೇಳಿದ್ದಾರೆ. ಯೋಗರಾಜ್ ಭಟ್ ಅವರೊಂದಿಗಿನ ಸಂಭಾಷಣೆಯಲ್ಲಿ ಈ ವಿಷಯವನ್ನು ಸುದೀಪ್ ಸ್ಪಷ್ಟಪಡಿಸಿದ್ದಾರೆ.

‘ತಂದೆ, ಮಗಳು ಮಾತ್ರ ನನ್ನ ಆಸ್ತಿ, ಬಿಗ್ ಬಾಸ್ ಕ್ರೆಡಿಟ್ ನನಗೆ ಬೇಡ’; ಸುದೀಪ್
Sanjeev
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 31, 2025 | 7:49 AM

Share

ಸುದೀಪ್ ಅವರು ಬಿಗ್ ಬಾಸ್​ನ ಈ ಮೊದಲಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. 11 ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ. ಅವರು ಇದಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಈ ಕ್ರೆಡಿಟ್​ನ ವಾಹಿನಿಯವರು ಸುದೀಪ್​ಗೆ ಅನೇಕ ಬಾರಿ ನೀಡಿದ್ದಾರೆ. ಆದರೆ, ಇದನ್ನು ಸ್ವೀಕರಿಸಲು ಅವರು ಸಿದ್ಧರಿಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ವೇದಿಕೆ ಮೇಲೆ ಸುದೀಪ್ ಅವರು ಈ ಮಾತನ್ನು ಹೇಳಿದ್ದಾರೆ. ಕಲರ್ಸ್ ಕನ್ನಡದ ತಂಡ ಹಾಗೂ ಸ್ಪರ್ಧಿಗಳಿಗೆ ಅವರು ಧನ್ಯವಾದ ಹೇಳಿದ್ದಾರೆ.

ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಅನ್ನು ಜನವರಿ 26ರಂದು ಪೂರ್ಣಗೊಳಿಸಿದರು. 119 ದಿನಗಳ ಕಾಲ ನಡೆದ ಜರ್ನಿಯಲ್ಲಿ ಅವರು ಹಲವು ಬಾರಿ ಟೆಂಪರ್ ಕಳೆದುಕೊಂಡಿದ್ದು ಇದೆ. ಆದರೆ, ಇದನ್ನು ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಕ್ರೆಡಿಟ್​ನ ಸುದೀಪ್ ಅವರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.

ವೇದಿಕೆ ಏರಿದ ಯೋಗರಾಜ್ ಭಟ್ ಅವರು ಸುದೀಪ್ ಜೊತೆ ಮಾತನಾಡಿದರು. ನಿಮ್ಮಿಂದಾಗಿ ಟಿಆರ್​ಪಿ ಬರುತ್ತಿದೆ ಎಂಬರ್ಥದಲ್ಲಿ ಅವರು ಮಾತನಾಡಿದರು. ಆದರೆ, ಇದನ್ನು ಸುದೀಪ್ ಅವರು ಒಪ್ಪಿಕೊಂಡಿಲ್ಲ. ‘ಶೋ ಮುಂದೆ ಬರೋದಕ್ಕೆ ಪಿಸಿಆರ್​​ನಲ್ಲಿ ಒಂದು ಟೀಂ ಕುಳಿತಿದೆ. ಅದ್ಭುತ ತಂಡ. ಕಂಟೆಸ್ಟ್ ಬರಬಹುದು, ಹೋಗಬಹುದು. ಕಲರ್ಸ್ ಕನ್ನಡ ವಾಹಿನಿ, ಎಂಡಮೋಲ್ ಅವರು ಈ ತಂಡವನ್ನು ಕಾಪಾಡಿಕೊಂಡು ಬಂದರೆ, ವಾಹಿನಿ ಹೀಗೆ ಮುಂದಕ್ಕೆ ಹೋಗುತ್ತದೆ. ಶೋ ಮುಂದಕ್ಕೆ ಹೋಗುತ್ತದೆ. ಇದರ ಕ್ರೆಡಿಟ್​ನ ಅವರಿಗೆ ಕೊಡುತ್ತೇನೆ’ ಎಂದರು ಸುದೀಪ್.

‘ಒಳಗೆ ಮೂರು ಜನ (ಹನುಮಂತ, ತ್ರಿವಿಕ್ರಂ, ರಜತ್) ಕುಳಿತಿದ್ದಾರೆ ಅವರಿಗೆ ನಾನು ಕ್ರೆಡಿಟ್ ಕೊಡುತ್ತೇನೆ. ಅವರು ಇನ್​ಸ್ಟ್ರುಮೆಂಟ್, ನಾವು ಶ್ರುತಿ ಸೆಟ್ ಮಾಡುತ್ತೇವೆ ಅಷ್ಟೇ. ನಾನು ಅದಕ್ಕೆ ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ. ಅಲ್ಲಿ ಕೂತವರೇ (ಈ ಸೀಸನ್ ಸ್ಪರ್ಧಿಗಳು) ಈ ಸೀಸನ್​ನ ಆಸ್ತಿ’ ಎಂದರು ಸುದೀಪ್.

ಇದನ್ನೂ ಓದಿ: ಬಿಗ್ ಬಾಸ್ ತೊರೆಯುವ ಬಗ್ಗೆ ವೇದಿಕೆಯ ಮೇಲೆ ಸುದೀಪ್ ಹೇಳಿದ್ದೇನು?

‘ಇಷ್ಟು ದೊಡ್ಡ ವಿಚಾರನ ನಮ್ಮದಲ್ಲ ಎಂದು ಬಿಟ್ರಲ್ಲ’ ಎಂದು ಯೋಗರಾಜ್ ಭಟ್ ಹೇಳಿದರು. ‘ಅಲ್ಲಿ ಕುಳಿತ ನನ್ನ ಮಗಳು, ನನ್ನ ತಂದೆ ಮಾತ್ರ ನನ್ನ ಆಸ್ತಿ’ ಎಂದು ಸುದೀಪ್ ಹೆಮ್ಮೆಯಿಂದ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:07 pm, Mon, 27 January 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್