AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲಿನಲ್ಲೂ ಬಿಗ್ ಬಾಸ್ ನೋಡ್ತಾರೆ’: ಈ ಮಾತು ವಿವಾದ ಆಗತ್ತೆ ಎಂದಿದ್ದಕ್ಕೆ ಸುದೀಪ್ ಹೇಳಿದ್ದೇನು?

ಕಿಚ್ಚ ಸುದೀಪ್​ ಅವರು ಸತತ 11ನೇ ಸೀಸನ್​ಗೆ ‘ಬಿಗ್​ ಬಾಸ್​ ಕನ್ನಡ’ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಜೈಲಿನ ಒಳಗೆ ಇರುವ ಖೈದಿಗಳು ಕೂಡ ನೋಡುತ್ತಾರೆ. ಆ ಬಗ್ಗೆ ಮಾತನಾಡಿದರೆ ವಿವಾದ ಆಗಬಹುದು ಎಂಬ ಅಭಿಪ್ರಾಯ ಬಂತು. ಆದರೆ ಆ ಮಾತನ್ನು ಕಿಚ್ಚ ಸುದೀಪ್​ ಅವರು ತಳ್ಳಿಹಾಕಿದರು. ಆ ಘಟನೆ ಬಗ್ಗೆ ಇಲ್ಲಿದೆ ಮಾಹಿತಿ..

‘ಜೈಲಿನಲ್ಲೂ ಬಿಗ್ ಬಾಸ್ ನೋಡ್ತಾರೆ’: ಈ ಮಾತು ವಿವಾದ ಆಗತ್ತೆ ಎಂದಿದ್ದಕ್ಕೆ ಸುದೀಪ್ ಹೇಳಿದ್ದೇನು?
ಕಿಚ್ಚ ಸುದೀಪ್
ಮದನ್​ ಕುಮಾರ್​
|

Updated on: Sep 30, 2024 | 5:47 PM

Share

ವಿವಾದಗಳಿಂದಲೇ ಸುದ್ದಿಯಾದ ಚೈತ್ರಾ ಕುಂದಾಪುರ ಅವರ ಈಗ ‘ಬಿಗ್​ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ಸ್ಪರ್ಧಿಯಾಗಿ ದೊಡ್ಮನೆಗೆ ಬಂದಿದ್ದಾರೆ. ಮೊದಲ ಸಂಚಿಕೆಯಲ್ಲಿ ಅವರನ್ನು ಸುದೀಪ್​ ಮಾತನಾಡಿಸಿದರು. ತಾವು ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದು ಹೇಗೆ ಎಂಬುದನ್ನು ಚೈತ್ರಾ ಕುಂದಾಪುರ ವಿವರಿಸಿದರು. ಈ ಮೊದಲು ಅವರು ಜೈಲಿಗೆ ಹೋಗಿದ್ದರು. ಆಗಲೇ ಅವರು ಬಿಗ್​ ಬಾಸ್​ ಕಾರ್ಯಕ್ರಮವನ್ನು ಪೂರ್ತಿಯಾಗಿ ನೋಡಿದ್ದು. ಆ ಕುರಿತು ಮಾತನಾಡುವಾಗ ಜೈಲಿನ ವಿಷಯ ಪ್ರಸ್ತಾಪ ಆಯಿತು.

‘ಮೊದಲು ಇದು ಸ್ಕ್ರಿಪ್ಟೆಡ್​ ಶೋ ಅಂತ ನನಗೆ ಅನಿಸಿತ್ತು. ನಾನು ಬಿಗ್​ ಬಾಸ್​ ಸೀಸನ್​ 10 ನೋಡಿದ್ದ ಜೈಲಿನಲ್ಲಿ. ಆಗ ವರ್ತೂರು ಸಂತೋಷ್​ ಕೂಡ ಜೈಲಿಗೆ ಬಂದಿದ್ದರು. ಅವರು ಬಂದಿದ್ದರಿಂದ ಇದು ಸ್ಕ್ರಿಪ್ಟೆಡ್​ ಅಲ್ಲ ಅಂತ ತಿಳಿಯಿತು. ಕಾಮನ್ ಸೆನ್ಸ್​ ಇರುವವರಿಗೆ ಇದು ಗೊತ್ತಾಗುತ್ತದೆ. ಕಳೆದ ಸೀಸನ್​ ಅನ್ನು ನಾನು ಪೂರ್ತಿಯಾಗಿ ನೋಡಿದ್ದರಿಂದ ಈ ಬಾರಿ ಬಿಗ್​ ಬಾಸ್​ಗೆ ಬರಲು ಒಪ್ಪಿಕೊಂಡೆ’ ಎಂದರು ಚೈತ್ರಾ ಕುಂದಾಪುರ.

‘ಬಿಗ್​ ಬಾಸ್​ಗೆ ಹೊರಗಡೆ ಎಷ್ಟು ಫ್ಯಾನ್ ಫಾಲೋಯಿಂಗ್​ ಇದೆಯೋ ಅದಕ್ಕಿಂತಲೂ ಜಾಸ್ತಿ ಫ್ಯಾನ್​ ಫಾಲೋಯಿಂಗ್​ ಜೈಲಿನ ಒಳಗೂ ಇದೆ ಅಂತ ನನಗೆ ಅನಿಸುತ್ತೆ’ ಎಂದು ಚೈತ್ರಾ ಹೇಳಿದಾಗ, ‘ಇದರ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡಬೇಕೋ ನನಗೆ ಗೊತ್ತಿಲ್ಲ’ ಎಂದರು ಸುದೀಪ್​. ‘ಇದು ಕೂಡ ಕಾಂಟ್ರವರ್ಸಿ ಆಗಬಹುದೇನೋ’ ಎಂದು ಚೈತ್ರಾ ಪ್ರತಿಕ್ರಿಯಿಸಿದರು. ‘ಹಾಗೇನೂ ಇಲ್ಲ. ಇದರಲ್ಲಿ ಕಾಂಟ್ರವರ್ಸಿ ಏನಿದೆ? ನಮ್ಮ ಕಾರ್ಯಕ್ರಮವನ್ನು ಎಲ್ಲ ಕಡೆ ಜನರು ನೋಡಿ ಮೆಚ್ಚುತ್ತಿದ್ದಾರೆ. ಅದಕ್ಕೆ ನಮಗೆ ಖುಷಿ ಇದೆ. ಈ ಕಾರ್ಯಕ್ರಮಕ್ಕೂ ಜೈಲಿಗೂ ಇರುವ ಸಂಬಂಧ ಏನು ಅಂತ ನಮಗೂ ಈಗಲೇ ಗೊತ್ತಾಗುತ್ತಿರುವುದು’ ಎಂದರು ಸುದೀಪ್​.

ಇದನ್ನೂ ಓದಿ: ತುಕಾಲಿ ಸಂತು ಪತ್ನಿ ಮಾನಸಾಗೆ ಸವಾಲು ಹಾಕಿ ಬಿಗ್​ ಬಾಸ್​ಗೆ ಬಂದ ನಟಿ ಹಂಸಾ

ಜೈತ್ರಾ ಕುಂದಾಪುರ ಮಾತ್ರವಲ್ಲದೇ ಲಾಯರ್​ ಜಗದೀಶ್​ ಕೂಡ ಈ ಮೊದಲು ಜೈಲಿಗೆ ಹೋಗಿದ್ದರು. ಅವರು ಕೂಡ ಜೈಲಿನಲ್ಲಿ ಇದ್ದಾಗಲೇ ಬಿಗ್​ ಬಾಸ್​ ಕಾರ್ಯಕ್ರಮವನ್ನು ನೋಡಿದ್ದರು. ಈಗ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಸ್ಪರ್ಧಿಯಾಗಿದ್ದಾರೆ. ಒಟ್ಟು 17 ಮಂದಿ ಈ ಬಾರಿ ಸ್ಪರ್ಧಿಸುತ್ತಿದ್ದಾರೆ. ಸಿನಿಮಾ, ಸೀರಿಯಲ್​, ಕ್ರೀಡೆ, ಸೋಶಿಯಲ್​ ಮೀಡಿಯಾದಲ್ಲಿ ಖ್ಯಾತಿ ಗಳಿಸಿದವರು ದೊಡ್ಮನೆಗೆ ಎಂಟ್ರಿ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್