AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಡ್ ವೀಕ್ ಎಲಿಮಿನೇಷನ್; ಸೋಮವಾರದ ಸಂಚಿಕೆಯಲ್ಲೂ ಶಾಕ್ ಕೊಟ್ಟ ಸುದೀಪ್

ಕಳೆದ ವಾರ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆದರು. ಈಗ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ ಸೆಮಿ ಫೈನಲ್ ನಡೆಯುತ್ತಿದೆ. ಸೋಮವಾರದ (ಜನವರಿ 13) ಸಂಚಿಕೆಯಲ್ಲಿ ಸುದೀಪ್​ ಕಡೆಯಿಂದ ಬಿಗ್ ಬಾಸ್ ಸ್ಪರ್ಧಿಗಳಿಗೆ ಒಂದು ಮುಖ್ಯವಾದ ಸಂದೇಶ ನೀಡಲಾಗಿದೆ. ಅದನ್ನು ಕೇಳಿ ಎಲ್ಲರಿಗೂ ಶಾಕ್ ಆಗಿದೆ.

ಮಿಡ್ ವೀಕ್ ಎಲಿಮಿನೇಷನ್; ಸೋಮವಾರದ ಸಂಚಿಕೆಯಲ್ಲೂ ಶಾಕ್ ಕೊಟ್ಟ ಸುದೀಪ್
Bigg Boss Kannada 11
ಮದನ್​ ಕುಮಾರ್​
|

Updated on: Jan 13, 2025 | 10:03 PM

Share

ಮಿಡ್ ವೀಕ್ ಎಲಿಮಿನೇಷನ್​ ಎಂದರೆ ಎಲ್ಲ ಸ್ಪರ್ಧಿಗಳಿಗೂ ಢವ ಢವ ಶುರು ಆಗುತ್ತದೆ. ಯಾಕೆಂದರೆ, ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿಯ ಆಟ ಅಂತ್ಯವಾಗುತ್ತದೆ. ಅವರಿಗೆ ವಿದಾಯ ಹೇಳಲು ಸುದೀಪ್ ಇರುವುದಿಲ್ಲ. ಮಿಡ್​ ವೀಕ್​ನಲ್ಲಿ ಎಲಿಮಿನೇಟ್​ ಆದವರು ಆಗಿಂದಾಗಲೇ ದೊಡ್ಮನೆಗೆ ವಿದಾಯ ಹೇಳಬೇಕಾಗುತ್ತದೆ. ಸೋಮವಾರದ (ಜ.13) ಸಂಚಿಕೆ ಆರಂಭ ಆಗುತ್ತಿದ್ದಂತೆಯೇ ಬಿಗ್ ಬಾಸ್ ಮನೆಯ ಒಳಗಿನ ಟಿವಿಯಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಎಲ್ಲರಿಗೂ ಮಿಡ್ ವೀಕ್ ಎಲಿಮಿನೇಷನ್​ ಬಗ್ಗೆ ಅವರು ಎಚ್ಚರಿಕೆ ನೀಡಿದರು.

‘ಈ ವಾರ ಮಿಡ್​ ವೀಕ್​ ಎಲಿಮಿನೇಷನ್ ಇರುತ್ತದೆ. ಹನುಮಂತನ ಹೊರತುಪಡಿಸಿ ಎಲ್ಲರೂ ನಾಮಿನೇಟ್ ಆಗಿದ್ದೀರಿ. ಹೋಗುವವರಿಗೆ ಈಗಲೇ ಬ್ಯಾಡ್​ ಲಕ್ ಹೇಳುತ್ತಿದ್ದೇನೆ. ಎಲ್ಲರೂ ಚೆನ್ನಾಗಿ ಆಟ ಆಡಿ. ಎಲ್ಲರಿಗೂ ಗುಡ್ ಲಕ್’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು. ಕಳೆದ ವಾರವಷ್ಟೇ ಮಾರಿ ಹಬ್ಬದಂತಹ ಟಾಸ್ಕ್​ ನೀಡಲಾಗಿತ್ತು. ಈ ವಾರದ ಟಾಸ್ಕ್​ ಇನ್ನಷ್ಟು ಕಠಿಣವಾಗಿ ಇರಲಿದೆ.

ಇದನ್ನೂ ಓದಿ: ಬಿಗ್ ಬಾಸ್ ಬಿಟ್ಟರೂ ಸುದೀಪ್ ಬಿಡಲಿಲ್ಲ; ಭವ್ಯಾಗೆ ಸೂಕ್ತ ಶಿಕ್ಷೆ ಕೊಟ್ಟ ಕಿಚ್ಚ

ಈಗ ಬಿಗ್ ಬಾಸ್​ನಲ್ಲಿ ಸೆಮಿ ಫೈನಲ್. ವಾರದ ನಡುವಿನಲ್ಲಿ ಒಬ್ಬರು ಹೊರಗೆ ಹೋಗುವುದು ಬಹುತೇಕ ಖಚಿತ. ಧನರಾಜ್, ರಜತ್, ಗೌತಮಿ ಜಾದವ್​, ಮೋಕ್ಷಿತಾ ಪೈ, ಭವ್ಯಾ ಗೌಡ, ಉಗ್ರಂ ಮಂಜು, ತ್ರಿವಿಕ್ರಮ್ ಅವರು ತಮ್ಮ ಉಳಿವಿಗಾಗಿ ಹೋರಾಟ ಮಾಡಬೇಕು. ಈ ಎಲ್ಲರಿಗೂ ಟಾಸ್ಕ್ ನೀಡಲಾಗುತ್ತಿದೆ. ಮೊದಲು ಯಾರು ಆಟ ಆಡಬೇಕು ಎಂಬುದನ್ನು ನಿರ್ಧರಿಸುವ ಅವಕಾಶವನ್ನು ಮನೆಯ ಕ್ಯಾಪ್ಟನ್ ಆದಂತಹ ಹನುಮಂತ ಅವರಿಗೆ ನೀಡಲಾಯಿತು.

ಇದನ್ನೂ ಓದಿ: ಬಿಗ್ ಬಾಸ್ ಗೆಲ್ಲಲು ಮೋಕ್ಷಿತಾ ಪೈಗೆ ಸುದೀಪ್ ಕಿವಿಮಾತು

ಹನುಮಂತ ಅವರು ಮೊದಲ ಆಟಕ್ಕೆ ಭವ್ಯಾ ಅವರನ್ನು ಆಯ್ಕೆ ಮಾಡಿದರು. ಕಳೆದ ವಾರ ಟಾಸ್ಕ್ ಆಡುವಾಗ ಭವ್ಯಾ ಅವರು ಹನುಮಂತನಿಗೆ ಹೊಡೆದಿದ್ದರು. ಅದಕ್ಕಾಗಿ ಭವ್ಯಾ ಅವರನ್ನು ಜೈಲಿಗೆ ಕೂಡ ಕಳಿಸಲಾಗಿತ್ತು. ಭವ್ಯಾ ಹೊಡೆದಾಗ ಹನುಮಂತನಿಗೆ ಬೇಸರ ಆಗಿದ್ದು ನಿಜ. ಆದರೆ ಆ ನೋವನ್ನು ಮನಸ್ಸಿನಿಂದ ತೆಗೆದು ಹಾಕಿ, ಭವ್ಯಾ ಅವರನ್ನೇ ಟಾಸ್ಕ್​ಗೆ ಮೊದಲ ಸ್ಪರ್ಧಿಯಾಗಿ ಆಯ್ಕೆ ಮಾಡಿದ ಹನುಮಂತ ಅವರ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ