AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುತ್ತು ಕೊಡೋ ಸ್ಪರ್ಧೆಯಲ್ಲಿ ಮದುವೆ ಆದ ಧನರಾಜ್​ನೇ ಸೋಲಿಸಿದ ಬ್ಯಾಚುಲರ್ಸ್; ಪೋಲಿ ಮಾತು

ಬಿಗ್ ಬಾಸ್ ಕನ್ನಡದಲ್ಲಿ ನಡೆದ ಮುತ್ತು ಕೊಡುವ ಟಾಸ್ಕ್​ನಲ್ಲಿ ಚೈತ್ರಾ ಮತ್ತು ಹನುಮಂತ (ಬ್ಯಾಚುಲರ್​ಗಳು) ಧನರಾಜ್​ನ (ವಿವಾಹಿತ) ಸೋಲಿಸಿದ್ದಾರೆ. ಈ ಗೆಲುವು ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅವರಿಗೆ ಸ್ಥಾನ ಒದಗಿಸಿದೆ. ಧನರಾಜ್ ಅವರ ಸೋಲು ಮತ್ತು ಇಬ್ಬರು ಬ್ಯಾಚುಲರ್​ಗಳ ಗೆಲುವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮುತ್ತು ಕೊಡೋ ಸ್ಪರ್ಧೆಯಲ್ಲಿ ಮದುವೆ ಆದ ಧನರಾಜ್​ನೇ ಸೋಲಿಸಿದ ಬ್ಯಾಚುಲರ್ಸ್; ಪೋಲಿ ಮಾತು
ಮುತ್ತು ಕೊಡೋ ಸ್ಪರ್ಧೆಯಲ್ಲಿ ಮದುವೆ ಆದ ಧನರಾಜ್​ನೇ ಸೋಲಿಸಿದ ಬ್ಯಾಚುಲರ್ಸ್
ರಾಜೇಶ್ ದುಗ್ಗುಮನೆ
|

Updated on: Jan 04, 2025 | 7:32 AM

Share

ಬಿಗ್ ಬಾಸ್ ಮನೆಯಲ್ಲಿ ನಿತ್ಯ ಹೊಸ ಹೊಸ ಟಾಸ್ಕ್​ಗಳನ್ನು ನೀಡಲಾಗುತ್ತದೆ. ಇದನ್ನು ಸ್ಪರ್ಧಿಗಳು ಯಾವ ರೀತಿಯಲ್ಲಿ ಆಡುತ್ತಾರೆ ಅನ್ನೋದು ಮುಖ್ಯವಾಗುತ್ತದೆ. ಇದು ಅವರ ಭವಿಷ್ಯವನ್ನು ಕೂಡ ನಿರ್ಧರಿಸುತ್ತದೆ. ನೋಡೋಕೆ ಆಟ ಸಿಂಪಲ್ ಆಗಿ ಕಂಡ ಹೊರತಾಗಿಯೂ ಸ್ಪರ್ಧಿಗಳು ಸಾಕಷ್ಟು ಸಮಯ ತೆಗೆದುಕೊಂಡ ಉದಾಹರಣೆ ಇದೆ. ಈಗ ದೊಡ್ಮನೆಯಲ್ಲಿ ಹಾಗೆಯೇ ಆಗಿದೆ. ಮುತ್ತು ಕೊಡೋ ಸ್ಪರ್ಧೆಯಲ್ಲಿ ಧನರಾಜ್​ನ ಇಬ್ಬರು ಬ್ಯಾಚುಲರ್ಸ್ ಸೋಲಿಸಿದ್ದಾರೆ.

ಈ ವಾರದ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಆಗಲು ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನ ಚೈತ್ರಾ, ಹನುಮಂತ ಹಾಗೂ ಧನರಾಜ್ ಆಡಬೇಕಿತ್ತು. ಧನರಾಜ್ ಅವರು ವಿವಾಹ ಆದವರು. ಚೈತ್ರಾ ಹಾಗೂ ಹನುಮಂತ ಮದುವೆ ಫಿಕ್ಸ್ ಆಗಿದ್ದು, ದೊಡ್ಮನೆಯಿಂದ ಹೊರ ಹೋದ ಬಳಿಕ ಅವರು ವಿವಾಹ ಆಗಲಿದ್ದಾರೆ. ಇವರಿಬ್ಬರು ಗೆದ್ದು ಧನರಾಜ್​ನ ಸೋಲಿಸಿರೋದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.

ತುಟಿಗೆ ಲಿಪ್​ಸ್ಟಿಕ್ ಹಚ್ಚಿಕೊಂಡು ಖಾಲಿ ಹಾಳೆಯ ಮೇಲೆ ಮುತ್ತು ಕೊಡಬೇಕಿತ್ತು. ಈ ಸ್ಪರ್ಧೆಯಲ್ಲಿ ಹನುಮಂತ 70 ಮುತ್ತುಗಳು,  ಚೈತ್ರಾ 77 ಮುತ್ತನ್ನು ಕೊಟ್ಟು ಟಾಸ್ಕ್ ವಿನ್ ಆಗಿದ್ದಾರೆ. ಧನರಾಜ್ ಅವರು ಮುತ್ತಿನ ಸಂಖ್ಯೆ 51 ಮಾತ್ರ. ಈ ಮೂಲಕ ಅವರು ಟಾಸ್ಕ್​ನಲ್ಲಿ ಸೋತರು. ಈ ಬಗ್ಗೆ ಕೆಲವರು ಟೀಕೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ತ್ರಿವಿಕ್ರಂ, ‘ಇಬ್ಬರು ಬ್ಯಾಚುಲರ್ಸ್ ಸೇರಿ ಒಬ್ಬ ವಿವಾಹಿತನನ್ನು ಸೋಲಿಸಿದರಲ್ಲ. ಇವರಿಗೆ ಬೇಕು ಬೇಕು ಎನ್ನುವ ಹಂಬಲ ಇದೆ. ಧನರಾಜ್​ಗೆ ಸಾಕು ಸಾಕೆನಿಸಿದೆ’ ಎಂದು ಪೋಲಿ ಮಾತುಗಳನ್ನು ಆಡಿದರು. ‘ನನ್ನ ಪತ್ನಿ ರೊಮ್ಯಾಂಟಿಕ್ ಆಗಿ ಇರು ಎಂದು ಯಾಕೆ ಹೇಳುತ್ತಿದ್ದರು ಈಗ ಗೊತ್ತಾಗಿದೆ’ ಎಂದರು ಧನರಾಜ್.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್

ಕೊನೆಯ ವಾರಗಳಲ್ಲಿ ಕ್ಯಾಪ್ಟನ್ ಆಗೋದು ತುಂಬಾನೇ ಮುಖ್ಯವಾಗುತ್ತದೆ. ಈ ಬಾರಿ ರಜತ್ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರ ಆಡಳಿತದಲ್ಲಿ ಮನೆ ಸಾಗಲಿದೆ. ಈಗ ಅವರು ಕ್ಯಾಪ್ಟನ್ ಆಗಿರುವುದರಿಂದ ಮುಂದಿನ ವಾರದ ಎಲಿಮಿನೇಷನ್​ನಿಂದ ಅವರು ಬಚಾವ್ ಆಗಿದ್ದಾರೆ. ಕ್ಯಾಪ್ಟನ್ ಆಗುವ ಕನಸು ಕೂಡ ಈಡೇರಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​