AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ‘ಬಿಗ್​ ಬಾಸ್​’ ಮನೆಗೆ ಬಂದ ‘ಲಕ್ಷಣ’ ಧಾರಾವಾಹಿ ನಟಿ ಭಾಗ್ಯಶ್ರೀ; ವೀಕ್ಷಕರಿಂದ ಸಖತ್​ ಮೆಚ್ಚುಗೆ

ಕನ್ನಡದ ಬಿಗ್ ಬಾಸ್​ ಕಾರ್ಯಕ್ರಮಕ್ಕೆ ಈ ವರ್ಷ 10ರ ಸಂಭ್ರಮ. ಹತ್ತನೇ ಸೀಸನ್​ ಆದ್ದರಿಂದ ಸಂಭ್ರಮ ಜೋರಾಗಿದೆ. ಕಿಚ್ಚ ಸುದೀಪ್​ ಅವರು ಎಂದಿನ ಹುಮ್ಮಸ್ಸಿನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ‘ಲಕ್ಷಣ’ ಧಾರಾವಾಹಿ ನಟಿ ಭಾಗ್ಯಶ್ರೀ ಅವರು ಈ ರಿಯಾಲಿಟಿ ಶೋಗೆ ಬಂದಿದ್ದಾರೆ. ಅದ್ದೂರಿಯಾಗಿ ಶೋಗೆ ಚಾಲನೆ ಸಿಕ್ಕಿದೆ.

Bigg Boss Kannada: ‘ಬಿಗ್​ ಬಾಸ್​’ ಮನೆಗೆ ಬಂದ ‘ಲಕ್ಷಣ’ ಧಾರಾವಾಹಿ ನಟಿ ಭಾಗ್ಯಶ್ರೀ; ವೀಕ್ಷಕರಿಂದ ಸಖತ್​ ಮೆಚ್ಚುಗೆ
ಭಾಗ್ಯಶ್ರೀ
ಮದನ್​ ಕುಮಾರ್​
| Edited By: |

Updated on:Oct 09, 2023 | 9:04 AM

Share

ಡಿಫರೆಂಟ್​ ಸ್ವಭಾವದ ವ್ಯಕ್ತಿಗಳು ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದಿದ್ದಾರೆ. ವಿನಯ್​, ನೀತು ವನಜಾಕ್ಷಿ, ನಮ್ರತಾ ಗೌಡ, ಸ್ನೇಹಿತ್​ ಗೌಡ, ಈಶಾನಿ, ತುಕಾಲಿ ಸಂತೋಷ್​, ಸಿರಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ದೊಡ್ಮನೆ ಒಳಗೆ ಬಂದಿದ್ದಾರೆ. 9ನೇ ಸ್ಪರ್ಧಿಯಾಗಿ ಕಿರುತೆರೆಯ ‘ಲಕ್ಷಣ’ ಧಾರಾವಾಹಿ (Lakshana Serial) ನಟಿ ಭಾಗ್ಯಶ್ರೀ ಅವರು ಈ ರಿಯಾಲಿಟಿ ಶೋಗೆ ಬಂದಿದ್ದಾರೆ. ಝಗಮಗಿಸುವ ವೇದಿಕೆಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಸಮಾಜಸೇವೆ, ಕಿರುತೆರೆ, ಸಿನಿಮಾ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ಮಾತ್ರವಲ್ಲದೇ ಒಂದಷ್ಟು ವಿವಾದ ಮಾಡಿಕೊಂಡವರು ಕೂಡ ಬಿಗ್​ ಬಾಸ್​ (Bigg Boss Kannada) ಶೋಗೆ ಕಾಲಿಟ್ಟಿದ್ದಾರೆ. ಎಲ್ಲರನ್ನೂ ಸುದೀಪ್​ ಅವರು ಆಡಿಯನ್ಸ್​ ವೋಟಿಂಗ್​ ಮೂಲಕ ಆಯ್ಕೆ ಮಾಡಿ ಒಳಗೆ ಕಳಿಸಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

ಕನ್ನಡದ ಬಿಗ್ ಬಾಸ್​ ಕಾರ್ಯಕ್ರಮಕ್ಕೆ ಈ ವರ್ಷ 10ರ ಸಂಭ್ರಮ. ಹತ್ತನೇ ಸೀಸನ್​ ಆದ್ದರಿಂದ ಸಂಭ್ರಮ ಜೋರಾಗಿದೆ. ಕಿಚ್ಚ ಸುದೀಪ್​ ಅವರು ಎಂದಿನ ಹುಮ್ಮಸ್ಸಿನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಹೊಸದಾಗಿ ನಿರ್ಮಾಣ ಆಗಿರುವ ದೊಡ್ಮನೆಯ ವಿನ್ಯಾಸ ಬಹಳ ವಿಶೇಷವಾಗಿದೆ. ಹೊಸ ನಿಯಮಗಳನ್ನು ಕೂಡ ಸೇರ್ಪಡೆ ಮಾಡಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಮೇಲಿನ ಹೈಪ್​ ಹೆಚ್ಚಾಗಿದೆ.

Bigg Boss Kannada: ‘ರಂಗೋಲಿ’ ನಟಿ ಸಿರಿ ಈಗ ಬಿಗ್​ ಬಾಸ್​ ಸ್ಪರ್ಧಿ; 7ನೇ ಕಂಟೆಸ್ಟೆಂಟ್​ ಆಗಿ ದೊಡ್ಮನೆ ಪ್ರವೇಶ

ಕನ್ನಡ ಕಿರುತೆರೆಯ ಫೇಮಸ್​ ನಟಿ:

‘ಲಕ್ಷಣ’ ಧಾರಾವಾಹಿಯಲ್ಲಿ ನಟಿಸಿರುವ ಭಾಗ್ಯಶ್ರೀ ಅವರಿಗೆ ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವ ಇದೆ. ‘ಇದು ದೊಡ್ಡ ಚಾಲೆಂಜಿಂಗ್​. ಇದನ್ನು ನಾನು ಸ್ವೀಕರಿಸಬೇಕು. ಹಾಗಾಗಿ ಬಿಗ್​ ಬಾಸ್​ ಆಯೋಜಕರಿಂದ ಕರೆ ಬಂದಾಗ ನೋ ಎನ್ನಲಿಲ್ಲ. ಬದುಕು ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಪ್ರೇಕ್ಷಕರಿಗೆ ನಾನು ಇಷ್ಟ ಆಗುತ್ತೇನೆ ಎಂಬ ಭರವಸೆ ನನಗಿದೆ. ಯಾವಾಗಲೂ ಖುಷಿಯಾಗಿ ಇರುವುದು ಹೇಗೆ ಎಂಬುದನ್ನು ತಿಳಿಸಿಕೊಡಲು ನಾನು ಬಂದಿದ್ದೇನೆ’ ಎಂದಿದ್ದಾರೆ ಭಾಗ್ಯಶ್ರೀ.

ನಿರೀಕ್ಷಿತ ಪ್ರಮಾಣದಲ್ಲಿ ಆಡಿಯನ್ಸ್​ ವೋಟಿಂಗ್​ ಪಡೆಯದೇ ರಕ್ಷತ್​, ವರ್ತೂರು ಸಂತೋಷ್​, ಚಿತ್ರಾಲ್​, ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​ ಅವರು ಹೋಲ್ಡ್​ನಲ್ಲಿ ಇದ್ದಾರೆ. ಆದರೆ ಈ ವಿಚಾರದಲ್ಲಿ ಭಾಗ್ಯಶ್ರೀ ಅವರು ವೀಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ. ಆಡಿಯನ್ಸ್​ ವೋಟಿಂಗ್​ನಲ್ಲಿ ಶೇಕಡ 80 ಬಂದಿರಬಹುದು ಎಂದು ಭಾಗ್ಯಶ್ರೀ ಊಹಿಸಿದರು. ನಿರೀಕ್ಷೆಯಂತೆಯೇ 81 ಪರ್ಸೆಂಟ್​ ವೋಟ್​ ಪಡೆದು ಅವರು ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:47 pm, Sun, 8 October 23

Follow Us
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ