AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ ಬಾಸ್​ ಮನೆಯಲ್ಲಿ ಯಾರೂ ಊಹಿಸಿರದ ಘಟನೆ; ವೀಕ್ಷಕರಿಗೆ ಇದು ನಿಜಕ್ಕೂ ಅಚ್ಚರಿ

ಬಿಗ್​ ಬಾಸ್​ ಆರಂಭವಾದಾಗ ಮಂಜು ಪಾವಗಡ ಹಾಗೂ ಪ್ರಶಾಂತ್​ ಸಂಬರಗಿ ಕ್ಲೋಸ್​ ಆಗಿದ್ದರು. ದಿವ್ಯಾ ಸುರೇಶ್​ ಜತೆಗಿನ ಪ್ರೀತಿ ನಾಟಕದಲ್ಲಿ ಪ್ರಶಾಂತ್​ ಅವರು ಮಂಜುಗೆ ಮಾವ ಹಾಗೂ ದಿವ್ಯಾ ಸುರೇಶ್​ಗೆ ಅಣ್ಣನಾಗಿದ್ದರು​.

ಬಿಗ್​​ ಬಾಸ್​ ಮನೆಯಲ್ಲಿ ಯಾರೂ ಊಹಿಸಿರದ ಘಟನೆ; ವೀಕ್ಷಕರಿಗೆ ಇದು ನಿಜಕ್ಕೂ ಅಚ್ಚರಿ
ಬಿಗ್​​ ಬಾಸ್​ ಮನೆಯಲ್ಲಿ ಯಾರೂ ಊಹಿಸಿರದ ಘಟನೆ; ವೀಕ್ಷಕರಿಗೆ ಇದು ನಿಜಕ್ಕೂ ಅಚ್ಚರಿ
TV9 Web
| Edited By: |

Updated on: Aug 05, 2021 | 2:26 PM

Share

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇವೆ. ಅದಕ್ಕೂ ಮೊದಲು ವೀಕ್ಷಕರಿಗೆ ಸಾಕಷ್ಟು ಅಚ್ಚರಿಗಳು ಸಿಗುತ್ತಿವೆ. ಆಗಸ್ಟ್​ 4ರ ಎಪಿಸೋಡ್​ನಲ್ಲಿ ದಿವ್ಯಾ ಸುರೇಶ್​ ಎಲಿಮಿನೇಟ್​ ಆದರು. ಕೊನೆಯ ಬಾರಿಗೆ ಸ್ಪರ್ಧಿಗಳಿಗೆ ಬಾಯ್​ ಹೇಳಲೂ ಅವರಿಂದ ಸಾಧ್ಯವಾಗಿಲ್ಲ. ಈಗ ಆಗಸ್ಟ್​ 5ರ ಎಪಿಸೋಡ್​ನಲ್ಲಿ ವೀಕ್ಷಕರಿಗೆ ಸರ್​ಪ್ರೈಸ್​ ಸಿಗುತ್ತಿದೆ. ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದ್ದು, ಇದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

ಬಿಗ್​ ಬಾಸ್​ ಆರಂಭವಾದಾಗ ಮಂಜು ಪಾವಗಡ ಹಾಗೂ ಪ್ರಶಾಂತ್​ ಸಂಬರಗಿ ಕ್ಲೋಸ್​ ಆಗಿದ್ದರು. ದಿವ್ಯಾ ಸುರೇಶ್​ ಜತೆಗಿನ ಪ್ರೀತಿ ನಾಟಕದಲ್ಲಿ ಪ್ರಶಾಂತ್​ ಅವರು ಮಂಜುಗೆ ಮಾವ ಹಾಗೂ ದಿವ್ಯಾ ಸುರೇಶ್​ಗೆ ಅಣ್ಣನಾಗಿದ್ದರು​. ಆದರೆ, ಚಕ್ರವರ್ತಿ ಚಂದ್ರಚೂಡ್​ ಬಂದ ನಂತರದಲ್ಲಿ ಪ್ರಶಾಂತ್​ ಬದಲಾದರು. ಬಿಗ್​ ಬಾಸ್​ ಹೊರಗೆ ಇದನ್ನು ಬೇರೆ ರೀತಿ ಅರ್ಥೈಸುತ್ತಿದ್ದಾರೆ ಎಂಬುದನ್ನು ಪ್ರಶಾಂತ್​ ಕಿವಿಯಲ್ಲಿ ತುಂಬಿದ್ದರು ಚಕ್ರವರ್ತಿ. ಇದಾದ ನಂತರದಲ್ಲಿ ಮಂಜು ಬಗ್ಗೆ ದ್ವೇಷದ ಭಾವನೆಯನ್ನು ಪ್ರಶಾಂತ್​ ಬೆಳೆಸಿಕೊಂಡರು. ಮಂಜು ಹೇಳಿದ್ದನ್ನು ವಿರೋಧಿಸುತ್ತಲೇ ಬಂದರು.

ಆದರೆ, ಕೊನೆಯ ವಾರದಲ್ಲಿ ಪ್ರಶಾಂತ್​ ಬದಲಾಗಿದ್ದಾರೆ. ಅವರ ನಡೆ ಮನೆಯವರಿಗೆ ಅಚ್ಚರಿ ಮೂಡಿಸಿದೆ. ಆಗಸ್ಟ್​ 4ರ ಏಪಿಸೋಡ್​ನಲ್ಲಿ ಪ್ರಶಾಂತ್​ ಬಗ್ಗೆ ಮಂಜು ಮಾತನಾಡಿದ್ದರು. ‘ಪ್ರಶಾಂತ್​ ಜತೆ ಆರಂಭದಲ್ಲಿ ಕಳೆದ ದಿನಗಳು ತುಂಬಾನೇ ಖುಷಿ ಕೊಟ್ಟಿದೆ’ ಎಂದು ಮಂಜು ಹೇಳಿಕೊಂಡಿದ್ದರು.

ಆಗಸ್ಟ್​ 5ರಂದು ಪ್ರೋಮೋ ಒಂದನ್ನು ಬಿಡಲಾಗಿದೆ. ಈ ಪ್ರೋಮೋದಲ್ಲಿ ‘ಮಂಜುಗೆ ಮಸಾಜ್​ ಮಾಡ್ಕೊಡ್ತೀನಿ, ಕಾಫಿ ಮಾಡಿ ಕೊಡ್ತೀನಿ. ಮಂಜು ನನ್ನ ಬೆಸ್ಟ್​​ ಫ್ರೆಂಡ್​’ ಎಂದೆಲ್ಲ ಪ್ರಶಾಂತ್​ ಹೇಳಿಕೊಂಡಿದ್ದಾರೆ. ಇದನ್ನು ನೋಡಿದ ಮನೆ ಮಂದಿ ಹಾಗೂ ವೀಕ್ಷಕರು ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ. ಇಬ್ಬರ ನಡುವೆ ಇಷ್ಟೊಂದು ಒಳ್ಳೆ ಗೆಳೆತನ ಬೆಳೆದಿರುವ ಬಗ್ಗೆ ಅನೇಕರು ಸಂತಸ ಕೂಡ ಹೊರ ಹಾಕಿದ್ದಾರೆ.

ಇದನ್ನೂ ಓದಿ: Divya Suresh: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಮುಖ ತೋರಿಸದೇ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್​

ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ದಿವ್ಯಾ ಸುರೇಶ್​ ಆಸೆ ಈಡೇರಿಸಿದ ಬಿಗ್​ ಬಾಸ್

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ