AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ ಬಾಸ್​ ಮನೆಯಲ್ಲಿ ಯಾರೂ ಊಹಿಸಿರದ ಘಟನೆ; ವೀಕ್ಷಕರಿಗೆ ಇದು ನಿಜಕ್ಕೂ ಅಚ್ಚರಿ

ಬಿಗ್​ ಬಾಸ್​ ಆರಂಭವಾದಾಗ ಮಂಜು ಪಾವಗಡ ಹಾಗೂ ಪ್ರಶಾಂತ್​ ಸಂಬರಗಿ ಕ್ಲೋಸ್​ ಆಗಿದ್ದರು. ದಿವ್ಯಾ ಸುರೇಶ್​ ಜತೆಗಿನ ಪ್ರೀತಿ ನಾಟಕದಲ್ಲಿ ಪ್ರಶಾಂತ್​ ಅವರು ಮಂಜುಗೆ ಮಾವ ಹಾಗೂ ದಿವ್ಯಾ ಸುರೇಶ್​ಗೆ ಅಣ್ಣನಾಗಿದ್ದರು​.

ಬಿಗ್​​ ಬಾಸ್​ ಮನೆಯಲ್ಲಿ ಯಾರೂ ಊಹಿಸಿರದ ಘಟನೆ; ವೀಕ್ಷಕರಿಗೆ ಇದು ನಿಜಕ್ಕೂ ಅಚ್ಚರಿ
ಬಿಗ್​​ ಬಾಸ್​ ಮನೆಯಲ್ಲಿ ಯಾರೂ ಊಹಿಸಿರದ ಘಟನೆ; ವೀಕ್ಷಕರಿಗೆ ಇದು ನಿಜಕ್ಕೂ ಅಚ್ಚರಿ
TV9 Web
| Edited By: |

Updated on: Aug 05, 2021 | 2:26 PM

Share

ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇವೆ. ಅದಕ್ಕೂ ಮೊದಲು ವೀಕ್ಷಕರಿಗೆ ಸಾಕಷ್ಟು ಅಚ್ಚರಿಗಳು ಸಿಗುತ್ತಿವೆ. ಆಗಸ್ಟ್​ 4ರ ಎಪಿಸೋಡ್​ನಲ್ಲಿ ದಿವ್ಯಾ ಸುರೇಶ್​ ಎಲಿಮಿನೇಟ್​ ಆದರು. ಕೊನೆಯ ಬಾರಿಗೆ ಸ್ಪರ್ಧಿಗಳಿಗೆ ಬಾಯ್​ ಹೇಳಲೂ ಅವರಿಂದ ಸಾಧ್ಯವಾಗಿಲ್ಲ. ಈಗ ಆಗಸ್ಟ್​ 5ರ ಎಪಿಸೋಡ್​ನಲ್ಲಿ ವೀಕ್ಷಕರಿಗೆ ಸರ್​ಪ್ರೈಸ್​ ಸಿಗುತ್ತಿದೆ. ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದ್ದು, ಇದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ.

ಬಿಗ್​ ಬಾಸ್​ ಆರಂಭವಾದಾಗ ಮಂಜು ಪಾವಗಡ ಹಾಗೂ ಪ್ರಶಾಂತ್​ ಸಂಬರಗಿ ಕ್ಲೋಸ್​ ಆಗಿದ್ದರು. ದಿವ್ಯಾ ಸುರೇಶ್​ ಜತೆಗಿನ ಪ್ರೀತಿ ನಾಟಕದಲ್ಲಿ ಪ್ರಶಾಂತ್​ ಅವರು ಮಂಜುಗೆ ಮಾವ ಹಾಗೂ ದಿವ್ಯಾ ಸುರೇಶ್​ಗೆ ಅಣ್ಣನಾಗಿದ್ದರು​. ಆದರೆ, ಚಕ್ರವರ್ತಿ ಚಂದ್ರಚೂಡ್​ ಬಂದ ನಂತರದಲ್ಲಿ ಪ್ರಶಾಂತ್​ ಬದಲಾದರು. ಬಿಗ್​ ಬಾಸ್​ ಹೊರಗೆ ಇದನ್ನು ಬೇರೆ ರೀತಿ ಅರ್ಥೈಸುತ್ತಿದ್ದಾರೆ ಎಂಬುದನ್ನು ಪ್ರಶಾಂತ್​ ಕಿವಿಯಲ್ಲಿ ತುಂಬಿದ್ದರು ಚಕ್ರವರ್ತಿ. ಇದಾದ ನಂತರದಲ್ಲಿ ಮಂಜು ಬಗ್ಗೆ ದ್ವೇಷದ ಭಾವನೆಯನ್ನು ಪ್ರಶಾಂತ್​ ಬೆಳೆಸಿಕೊಂಡರು. ಮಂಜು ಹೇಳಿದ್ದನ್ನು ವಿರೋಧಿಸುತ್ತಲೇ ಬಂದರು.

ಆದರೆ, ಕೊನೆಯ ವಾರದಲ್ಲಿ ಪ್ರಶಾಂತ್​ ಬದಲಾಗಿದ್ದಾರೆ. ಅವರ ನಡೆ ಮನೆಯವರಿಗೆ ಅಚ್ಚರಿ ಮೂಡಿಸಿದೆ. ಆಗಸ್ಟ್​ 4ರ ಏಪಿಸೋಡ್​ನಲ್ಲಿ ಪ್ರಶಾಂತ್​ ಬಗ್ಗೆ ಮಂಜು ಮಾತನಾಡಿದ್ದರು. ‘ಪ್ರಶಾಂತ್​ ಜತೆ ಆರಂಭದಲ್ಲಿ ಕಳೆದ ದಿನಗಳು ತುಂಬಾನೇ ಖುಷಿ ಕೊಟ್ಟಿದೆ’ ಎಂದು ಮಂಜು ಹೇಳಿಕೊಂಡಿದ್ದರು.

ಆಗಸ್ಟ್​ 5ರಂದು ಪ್ರೋಮೋ ಒಂದನ್ನು ಬಿಡಲಾಗಿದೆ. ಈ ಪ್ರೋಮೋದಲ್ಲಿ ‘ಮಂಜುಗೆ ಮಸಾಜ್​ ಮಾಡ್ಕೊಡ್ತೀನಿ, ಕಾಫಿ ಮಾಡಿ ಕೊಡ್ತೀನಿ. ಮಂಜು ನನ್ನ ಬೆಸ್ಟ್​​ ಫ್ರೆಂಡ್​’ ಎಂದೆಲ್ಲ ಪ್ರಶಾಂತ್​ ಹೇಳಿಕೊಂಡಿದ್ದಾರೆ. ಇದನ್ನು ನೋಡಿದ ಮನೆ ಮಂದಿ ಹಾಗೂ ವೀಕ್ಷಕರು ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ. ಇಬ್ಬರ ನಡುವೆ ಇಷ್ಟೊಂದು ಒಳ್ಳೆ ಗೆಳೆತನ ಬೆಳೆದಿರುವ ಬಗ್ಗೆ ಅನೇಕರು ಸಂತಸ ಕೂಡ ಹೊರ ಹಾಕಿದ್ದಾರೆ.

ಇದನ್ನೂ ಓದಿ: Divya Suresh: ಬಿಗ್​ ಬಾಸ್​ ಸ್ಪರ್ಧಿಗಳಿಗೆ ಮುಖ ತೋರಿಸದೇ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್​

ದೊಡ್ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ದಿವ್ಯಾ ಸುರೇಶ್​ ಆಸೆ ಈಡೇರಿಸಿದ ಬಿಗ್​ ಬಾಸ್

Follow Us
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್