AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೊರ ಹೋದ್ಮೇಲೂ ಮಾತನಾಡಲ್ಲ’; ಸ್ನೇಹಿತ್ ಜೊತೆ ಗೆಳೆತನ ಮುರಿದುಕೊಂಡು ಮೂರು ಕಾರಣ ನೀಡಿದ ನಮ್ರತಾ

ನಮ್ರತಾ ಜೊತೆ ಸ್ನೇಹಿತ್ ಮೊದಲಿನಂತೆ ಮಾತನಾಡಿಲ್ಲ. ಇದು ನಮ್ರತಾಗೆ ಬೇಸರ ತಂದಿದೆ. ಮೂರು ಕಾರಣ ನೀಡಿ ಅವರು ಸ್ನೇಹಿತ್ ಜೊತೆ ಗೆಳೆತನ ಮುರಿದುಕೊಂಡಿದ್ದಾರೆ. ‘ಹೊರ ಹೋದಮೇಲೆ ಬಹುಶಃ ನಿಮ್ಮ ಜೊತೆ ಮತ್ತೆ ಮಾತನಾಡಲ್ಲ’ ಎಂದು ನಮ್ರತಾ ನೇರವಾಗಿ ಹೇಳಿದ್ದಾರೆ.

‘ಹೊರ ಹೋದ್ಮೇಲೂ ಮಾತನಾಡಲ್ಲ’; ಸ್ನೇಹಿತ್ ಜೊತೆ ಗೆಳೆತನ ಮುರಿದುಕೊಂಡು ಮೂರು ಕಾರಣ ನೀಡಿದ ನಮ್ರತಾ
ನಮ್ರತಾ-ಸ್ನೇಹಿತ್
ರಾಜೇಶ್ ದುಗ್ಗುಮನೆ
|

Updated on:Jan 19, 2024 | 10:16 AM

Share

ನಮ್ರತಾ ಗೌಡ (Namratha Gowda) ಹಾಗೂ ಸ್ನೇಹಿತ್ ಗೌಡ ಬಿಗ್ ಬಾಸ್ ಜರ್ನಿಯಲ್ಲಿ ಒಳ್ಳೆಯ ಫ್ರೆಂಡ್ಸ್ ಆಗಿದ್ದರು. ನಮ್ರತಾ ಎದುರು ಮದುವೆ ಪ್ರಪೋಸಲ್ ಕೂಡ ಇಟ್ಟಿದ್ದರು ಸ್ನೇಹಿತ್. ಆದರೆ, ಇದಕ್ಕೆಲ್ಲ ನಮ್ರತಾ ಸೊಪ್ಪು ಹಾಕಿಲ್ಲ. ಆ ಬಳಿಕ ಸ್ನೇಹಿತ್ ಎಲಿಮಿನೇಟ್ ಆದರು. ಇದು ದುಃಖದ ಬೀಳ್ಕೊಡುಗೆ ಆಗಿತ್ತು. ಸ್ನೇಹಿತ್ ಹಾಗೂ ನಮ್ರತಾ ಇಬ್ಬರೂ ಕಣ್ಣೀರು ಹಾಕಿದ್ದರು. ಇದೆಲ್ಲ ಘಟಿಸಿ ಹಲವು ವಾರಗಳು ಕಳೆದಿವೆ. ಇತ್ತೀಚೆಗೆ ಸ್ನೇಹಿತ್ ಅವರು ದೊಡ್ಮನೆಗೆ ಅಥಿತಿಯಾಗಿ ಮರಳಿದ್ದಾರೆ. ಎಲಿಮಿನೇಟ್ ಆದ ಸ್ಪರ್ಧಿಗಳ ರೀಯೂನಿಯನ್ ಆಗಿದೆ. ಈ ವೇಳೆ ಸ್ನೇಹಿತ್ ಜೊತೆ ಫ್ರೆಂಡ್​ಶಿಪ್ ಮುರಿದುಕೊಳ್ಳೋ ನಿರ್ಧಾರ ತೆಗೆದುಕೊಂಡಿದ್ದಾರೆ ನಮ್ರತಾ.

ಸ್ನೇಹಿತ್ ಅವರನ್ನು ಸಾಕಷ್ಟು ಟ್ರೋಲ್ ಮಾಡಲಾಗಿದೆ. ನಮ್ರತಾ ಜೊತೆ ಅವರು ಕ್ಲೋಸ್ ಆಗಿದ್ದನ್ನೂ ಕೆಲವರು ಟೀಕೆ ಮಾಡಲಾಗಿದೆ. ಇದರಿಂದ ಸ್ನೇಹಿತ್ ಅವರು ಅಂಜಿದ್ದಾರೆ. ಹೀಗಾಗಿ ನಮ್ರತಾ ಜೊತೆ ಮೊದಲಿನಂತೆ ಮಾತನಾಡಿಲ್ಲ. ಇದು ನಮ್ರತಾಗೆ ಬೇಸರ ಮೂಡಿಸಿದೆ. ಮೂರು ಕಾರಣ ನೀಡಿ ಅವರು ಸ್ನೇಹಿತ್ ಜೊತೆ ಗೆಳೆತನ ಮುರಿದುಕೊಂಡಿದ್ದಾರೆ. ‘ಹೊರ ಹೋದಮೇಲೆ ಬಹುಶಃ ನಿಮ್ಮ ಜೊತೆ ಮತ್ತೆ ಮಾತನಾಡಲ್ಲ’ ಎಂದಿದ್ದಾರೆ ನಮ್ರತಾ.

ಇದನ್ನೂ ಓದಿ: ತಮ್ಮ ಬಗ್ಗೆ ಹೊರಗಿರೋ ಅಭಿಪ್ರಾಯ ಕೇಳಿ ಕಣ್ಣೀರು ಹಾಕಿದ ನಮ್ರತಾ

‘ನೀವು ಎಲ್ಲಾ ಫ್ಯಾಮಿಲಿಯವರನ್ನು ಕಾಂಟ್ಯಾಕ್ಟ್ ಮಾಡಿದ್ದೀರಿ. ಆದರೆ, ನನ್ನ ಕುಟುಂಬದವರನ್ನು ನೀವು ಸಂಪರ್ಕಿಸಿಲ್ಲ. ಇದು ನನ್ನ ಮೊದಲ ಕಾರಣ. ವಿನಯ್​ ಗೆಲ್ಲಬೇಕು ಎಂದು ಪೂಜೆ ಮಾಡಿಸಿ, ಲಾಕೆಟ್ ತಂದಿದ್ದೀರಿ. ಹೊರಗೆ ನಿಂತು ಸಪೋರ್ಟ್ ಮಾಡ್ತೀನಿ ಅಂದ್ರಿ. ನಂಗೆ ಹೇಗೆ ಅನಿಸಿರುತ್ತದೆ ನೀವೆ ಯೋಚಿಸಿ. ಇದು ಎರಡನೇ ಕಾರಣ. ನಾನು ಕಾರ್ತಿಕ್ ಕ್ಲೋಸ್ ಆಗಿರೋದನ್ನು ನೀವು ಜಡ್ಜ್ ಮಾಡಿದ್ರಿ. ಈ ಮೂರು ಕಾರಣಕ್ಕೆ ನನಗೆ ನಿಮ್ಮ ಜೊತೆ ಮಾತನಾಡಬೇಕು ಅನಿಸುತ್ತಿಲ್ಲ. ಹೊರ ಹೋದಮೇಲೂ ಬಹುಶಃ ನಿಮ್ಮ ಜೊತೆ ಮಾತನಾಡಲ್ಲ’ ಎಂದರು ನಮ್ರತಾ. ಈ ಬಗ್ಗೆ ಸ್ನೇಹಿತ್ ಸ್ಪಷ್ಟನೆ ನೀಡೋಕೆ ಹೋದರು. ‘ಶಟಪ್​’ ಎಂದು ಬೈದರು ನಮ್ರತಾ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:01 am, Fri, 19 January 24

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್