AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷ್​​​ಗೆ ಕಾಟ ಕೊಟ್ಟ ಇಬ್ಬರು ಹೆಂಡತಿಯರು; ಅವರ ಒದ್ದಾಟವನ್ನು ನೀವೇ ನೋಡಿ

ಈ ಬಾರಿ ಕಿರುತೆರೆ ನಿರ್ದೇಶಕ ರಾಮ್​ಜಿ, ಅನುಪಮಾ ಗೌಡ, ನಮೃತಾ ಗೌಡ ಹಾಗೂ ರಕ್ಷ್​ ಆಗಮಿಸಿದ್ದಾರೆ. ಈ ವೇಳೆ ಗಣೇಶ್​ ನೀಡಿದ ಒಂದು ಟಾಸ್ಕ್​ ಸಖತ್ ಮಜಾ ನೀಡಿದೆ.

ರಕ್ಷ್​​​ಗೆ ಕಾಟ ಕೊಟ್ಟ ಇಬ್ಬರು ಹೆಂಡತಿಯರು; ಅವರ ಒದ್ದಾಟವನ್ನು ನೀವೇ ನೋಡಿ
ಗೋಲ್ಡನ್​ ಗ್ಯಾಂಗ್ ಶೋ
TV9 Web
| Edited By: |

Updated on: Mar 27, 2022 | 2:20 PM

Share

ರಕ್ಷ್​ (Raksh) ಅವರು ‘ಪುಟ್ಟಗೌರಿ ಮದುವೆ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಈಗ ಅವರು ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಈಗ ಅವರು ಗೋಲ್ಡನ್​ ಸ್ಟಾರ್​ ಗಣೇಶ್ (Golden Star Ganesh) ನಡೆಸಿಕೊಡುವ ‘ಗೋಲ್ಡನ್​ ಗ್ಯಾಂಗ್​’ ಶೋಗೆ ಬಂದಿದ್ದಾರೆ. ಅವರ ಜತೆಗೆ ಅನುಪಮಾ ಗೌಡ (Anupama Gowda) ಹಾಗೂ ನಮೃತಾ ಗೌಡ ಕೂಡ ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ನಡೆದ ಒಂದು ಸಣ್ಣ ಡ್ರಾಮಾ ಪ್ರೇಕ್ಷಕರಿಗೆ ಸಖತ್ ಮಜಾ ನೀಡಿದೆ. ಈ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್​ ವೈರಲ್ ಆಗುತ್ತಿದೆ.

‘ಗೋಲ್ಡನ್​ ಗ್ಯಾಂಗ್​’ ಕಾರ್ಯಕ್ರಮ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಅನೇಕ ಸೆಲೆಬ್ರಿಟಿಗಳು ತಮ್ಮ ಫ್ರೆಂಡ್ಸ್​ ಗ್ಯಾಂಗ್​ ಜತೆ ಈ ಶೋಗೆ ಬರುತ್ತಾರೆ. ಅಲ್ಲಿ ನಾನಾ ರೀತಿಯ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ಕಿರುತೆರೆ ನಿರ್ದೇಶಕ ರಾಮ್​ಜಿ, ಅನುಪಮಾ ಗೌಡ, ನಮೃತಾ ಗೌಡ ಹಾಗೂ ರಕ್ಷ್​ ಆಗಮಿಸಿದ್ದಾರೆ. ಈ ವೇಳೆ ಗಣೇಶ್​ ನೀಡಿದ ಒಂದು ಟಾಸ್ಕ್​ ಸಖತ್ ಮಜಾ ನೀಡಿದೆ.

‘ವ್ಯಕ್ತಿಯೊಬ್ಬರಿಗೆ ಇಬ್ಬರು ಹೆಂಡತಿಯರು. ಅವರಿಬ್ಬರೂ ಒಂದೇ ಮನೆಯಲ್ಲಿ ಇದ್ದಾರೆ. ಒಬ್ಬರು ವೆಜ್​ ಹಾಗೂ ಮತ್ತೊಬ್ಬರು ನಾನ್​ವೆಜ್ ಅಡುಗೆ ಮಾಡಿದ್ದಾರೆ. ಆದರೆ, ನೀವು ಬೇರೆ ಕಡೆ ಊಟ ಮಾಡಿ ಬಂದಿರುತ್ತೀರಿ. ಇಬ್ಬರನ್ನೂ ಹೇಗೆ ಮ್ಯಾನೇಜ್​ ಮಾಡ್ತೀರಾ ಅನ್ನೋದು ನಿಮಗೆ ಬಿಟ್ಟಿದ್ದು’ ಎಂದು ರಕ್ಷ್​ಗೆ ಟಾಸ್ಕ್​ ನೀಡಿದರು ಗಣೇಶ್​. ಅನುಪಮಾ ಗೌಡ ವೆಜ್​ ಅಡುಗೆ ಮಾಡಿಕೊಂಡು ಬಂದರೆ, ನಮೃತಾ ಗೌಡ ನಾನ್​ವೆಜ್​ ಅಡುಗೆ ಹಿಡಿದು ಬಂದಿದ್ದಾರೆ.

View this post on Instagram

A post shared by Zee Kannada (@zeekannada)

ನಮೃತಾ ಹಾಗೂ ಅನುಪಮಾ ಗೌಡ ಇಬ್ಬರೂ ರಕ್ಷ್​ಗೆ ಸಖತ್​ ಟಾರ್ಚರ್​ ನೀಡಿದ್ದಾರೆ. ನಾನು ಬೇರೆಕಡೆ ಊಟ ಮಾಡಿ ಬಂದಿದ್ದೇನೆ ಎಂದು ರಕ್ಷ್​ ಹೇಳಿದರೂ ಅದನ್ನು ಕೇಳದೇ ಊಟ ತಿನ್ನಿಸಿದ್ದಾರೆ. ಈ ವಿಡಿಯೋ ಸಖತ್​ ಮಜಾ ನೀಡಿದೆ. ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಕೆಲವರು ಈ ಶೋಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಶನಿವಾರ ಹಾಗೂ ಭಾನುವಾರ ಈ ಶೋ ಪ್ರಸಾರ ಆಗಿದೆ.

ಇದನ್ನೂ ಓದಿ: ಧಾರಾವಾಹಿ ಮುಗಿದು ಮೂರು ವರ್ಷವಾದರೂ ಬಂದಿಲ್ಲ ಸಂಭಾವನೆ; ಕಿರುತೆರೆ ನಟಿಯ ಅಸಮಾಧಾನ

ಉಕ್ರೇನ್​ನಲ್ಲಿ ಸಿಲುಕಿದ್ದಾರೆ ಕಿರುತೆರೆ ನಟಿ?; ಸ್ಪಷ್ಟನೆ ನೀಡಿದ ಪ್ರಿಯಾ ಮೋಹನ್  

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ