AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’; ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ಗೆದ್ದ ರಕ್ಷಿತಾ

ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್. ಕಿರಿಯ ಸ್ಪರ್ಧಿಯಾಗಿದ್ದ ರಕ್ಷಿತಾ, ಅಶ್ವಿನಿ ಗೌಡ ವಿರುದ್ಧದ ಚಾಲೆಂಜ್‌ನಲ್ಲಿ ಗೆದ್ದು, ‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’ ಎಂಬ ಸವಾಲನ್ನು ಪೂರ್ಣಗೊಳಿಸಿದ್ದಾರೆ. ಅಶ್ವಿನಿ ಅವರ ಕಿತ್ತಾಟಗಳು ರಕ್ಷಿತಾಗೆ ಮತ್ತಷ್ಟು ಪ್ರಚಾರ ತಂದುಕೊಟ್ಟವು. ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಅವರ ಪಯಣ ಅತ್ಯಂತ ಗಮನ ಸೆಳೆಯುವಂತದ್ದಾಗಿತ್ತು.

‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’; ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ಗೆದ್ದ ರಕ್ಷಿತಾ
ಅಶ್ವಿನಿ-ರಕ್ಷಿತಾ
ರಾಜೇಶ್ ದುಗ್ಗುಮನೆ
|

Updated on:Jan 19, 2026 | 10:12 AM

Share

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿ ನಟನ (Gilli Nata) ಪಕ್ಕ ಅವರು ನಿಂತಿದ್ದರು. ಅಂತಿಮವಾಗಿ ಗಿಲ್ಲಿಗಿಂತ ಕಡಿಮೆ ವೋಟ್ ಪಡೆದು ಮೊದಲ ರನ್ನರ್ ಅಪ್ ಆದರು. ರಕ್ಷಿತಾ ಶೆಟ್ಟಿಗೆ ಬಿದ್ದ ವೋಟ್​​​ಗಳನ್ನು ರಿವೀಲ್ ಮಾಡಿಲ್ಲ. ಗಿಲ್ಲಿಗೆ 40 ಕೋಟಿಗೂ ಅಧಿಕ ವೋಟ್​ಗಳು ಬಿದ್ದಿವೆ ಎನ್ನಲಾಗಿದೆ. ಈಗ ರಕ್ಷಿತಾ ಶೆಟ್ಟಿ ಅವರು ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ಗೆಲುವು ಕಂಡಿದ್ದಾರೆ. ‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’ ಎಂದು ಅಶ್ವಿನಿಗೆ ರಕ್ಷಿತಾ ಚಾಲೆಂಜ್ ಮಾಡಿದ್ದರು.

ರಕ್ಷಿತಾ ಶೆಟ್ಟಿ ಅವರು ಈ ಸೀಸನ್​​ನ ಅತ್ಯಂತ ಕಿರಿಯ ಸ್ಪರ್ಧಿ. ಅವರಿಗೆ ಸಾಕಷ್ಟು ಹೈಪ್ ಬರಲು ಅಶ್ವಿನಿ ಗೌಡ ಕಾರಣ ಎಂದರೂ ತಪ್ಪಾಗಲಾರದು. ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಸಾಕಷ್ಟು ಕಿತ್ತಾಟ ನಡೆದವು.ರಕ್ಷಿತಾನ ಕೆಳ ಹಾಕುವ ಪ್ರಯತ್ನವನ್ನು ಅಶ್ವಿನಿ ಗೌಡ ಮಾಡಿದ್ದರು. ಹೀಗೆ ಪ್ರತಿ ಬಾರಿ ನಡೆದಾಗಲೂ ರಕ್ಷಿತಾ ಮತ್ತಷ್ಟು ಮೇಲಕ್ಕೆ ಏರುತ್ತಿದ್ದರು.

ಇದನ್ನೂ ಓದಿ: ಏರಿದ ಏಣಿಯನ್ನು ಒದೆಯಲಿಲ್ಲ ಗಿಲ್ಲಿ ನಟ; ಬಿಗ್ ಬಾಸ್ ವಿನ್ನರ್ ನಡೆಗೆ ಮೆಚ್ಚುಗೆ

ರಕ್ಷಿತಾ ಶೆಟ್ಟಿ ಅವರು ಈ ಮೊದಲು ಅಶ್ವಿನಿ ಜೊತೆ ಜಗಳ ಆಡುವಾಗ ಚಾಲೆಂಜ್ ಒಂದನ್ನು ಮಾಡಿದ್ದರು. ‘ಬಿಗ್ ಬಾಸ್ ಮನೆಯಿಂದ ನಾನು ನಿಮ್ಮನ್ನು ಹೊರಹಾಕಿಯೇ ಹೋಗೋದು’ ಎಂದು ಹೇಳಿದ್ದರು. ಇಬ್ಬರ ಮಧ್ಯೆ ಸಾಕಷ್ಟು ದೊಡ್ಡ ಮಟ್ಟದ ಕಿತ್ತಾಟ ನಡೆದಿತ್ತು. ಈಗ ಆ ಚಾಲೆಂಜ್​​ನ ಅವರು ಪೂರ್ಣಗೊಳಿಸಿದಂತೆ ಆಗಿದೆ.

View this post on Instagram

A post shared by Sk trendings (@sk_trendings)

ಟಾಪ್ 6ರಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ, ರಘು ಹಾಗೂ ಧನುಷ್ ಇದ್ದರು. ಮೊದಲು ಧನುಷ್ ಎಲಿಮಿನೇಟ್ ಆದರೆ, ನಂತರ ರಘು ಹೊರ ಹೋದರು. ಆ ಬಳಿಕ ಕಾವ್ಯಾ ಔಟ್ ಆದರು. ಟಾಪ್ 3ನಲ್ಲಿ ರಕ್ಷಿತಾ, ಅಶ್ವಿನಿ ಹಾಗೂ ಗಿಲ್ಲಿ ಇದ್ದರು. ಟಾಪ್ 2ರಲ್ಲಿ ನಾನೇ ಇರಬಹುದು ಎಂಬ ಊಹೆ ಅಶ್ವಿನಿ ಅವರದ್ದಾಗಿತ್ತೇನೋ. ಆದರೆ, ಕೊನೆಯಲ್ಲಿ ಈ ಚಾಲೆಂಜ್​​​ನಲ್ಲಿ ಗೆದ್ದಿದ್ದು ರಕ್ಷಿತಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:02 am, Mon, 19 January 26

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ
Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ
ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ
ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ
ಶನಿವಾರದಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?
ಶನಿವಾರದಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?