AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ಈ ವಾರವೂ ಇಲ್ಲ ಎಲಿಮಿನೇಷನ್; ಮತ್ತೊಂದು ಹೈಡ್ರಾಮಾಗೆ ರೆಡಿ ಆಗಿ

‘ಬಿಗ್ ಬಾಸ್ ಕನ್ನಡ ಸೀಸನ್ 11’ ರಲ್ಲಿ ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ ಎಂಬ ಸುದ್ದಿ ಹಬ್ಬಿದೆ. ಗೋಲ್ಡ್ ಸುರೇಶ್ ಅವರ ನಿರ್ಗಮನದ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಮೋಕ್ಷಿತಾ, ಹನುಮಂತ, ರಜತ್ ಮತ್ತು ತ್ರಿವಿಕ್ರಂ ಈ ವಾರ ನಾಮಿನೇಟ್ ಆಗಿದ್ದಾರೆ. ಆದರೆ, ಈ ವಾರ ಯಾರೂ ಹೊರಗೆ ಹೋಗುವುದಿಲ್ಲ ಎನ್ನಲಾಗಿದೆ.

ಬಿಗ್ ಬಾಸ್​ನಲ್ಲಿ ಈ ವಾರವೂ ಇಲ್ಲ ಎಲಿಮಿನೇಷನ್; ಮತ್ತೊಂದು ಹೈಡ್ರಾಮಾಗೆ ರೆಡಿ ಆಗಿ
ಈ ವಾರ ನಾಮಿನೇಟ್ ಆದವರು
Follow us
ರಾಜೇಶ್ ದುಗ್ಗುಮನೆ
|

Updated on: Dec 20, 2024 | 6:55 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ನಡೆದ ಹೈಡ್ರಮಾಗಳು ಒಂದೆರಡಲ್ಲ. ಅದರಲ್ಲೂ ಎಲಿಮಿನೇಷನ್ ವಿಚಾರದಲ್ಲಿ ಸಾಕಷ್ಟು ನಾಟಕಗಳು ನಡೆದೇ ಹೋಗಿವೆ. ಈ ಸೀಸನ್​ನಲ್ಲಿ ಮೂರು ಬಾರಿ ಎಲಿಮಿನೇಷನ್ ಮಾಡದೆ ವಾರ ಪೂರ್ಣಗೊಳಿಸಲಾಗಿದೆ. ಈಗ ಅದಕ್ಕೆ ಮತ್ತೊಂದು ಹೊಸ ಸೇರ್ಪಡೆ ಆಗುವ ಸೂಚನೆ ಸಿಕ್ಕಿದೆ. ಈ ವಾರ ಯಾವುದೇ ಎಲಿಮಿನೇಷನ್ ಇರೋದಿಲ್ಲ ಎನ್ನಲಾಗಿದೆ. ಅಲ್ಲದೆ, ಈ ವಾರ ಘಟಾನುಘಟಿಗಳೇ ನಾಮಿನೇಟ್ ಆಗಿದ್ದು, ಯಾರೂ ಹೊರ ಹೋಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಪ್ರತಿಬಾರಿ ಸೋಮವಾರ ಅಥವಾ ಮಂಗಳವಾರ ನಾಮಿನೇಷನ್ ಪ್ರಕ್ರಿಯೆಯ ಎಪಿಸೋಡ್ ಪ್ರಸಾರ ಕಾಣುತ್ತಿದ್ದವು. ಮಂಗಳವಾರದ ಬಳಿಕ ವೋಟಿಂಗ್ ಲೈನ್ ತೆರೆಯಲಾಗುತ್ತಿತ್ತು. ಶನಿವಾರದವರೆಗೆ ವೋಟ್ ಮಾಡಲು ಅವಕಾಶ ಇರುತ್ತಿತ್ತು. ಆದರೆ, ಈ ವಾರ ಗುರುವಾರ ನಾಮಿನೇಷ್ ಪ್ರಕ್ರಿಯೆ ಪೂರ್ಣಗೊಳಿಸಿರೋ ಎಪಿಸೋಡ್ ಪ್ರಸಾರ ಕಂಡಿದೆ. ಅಲ್ಲದೆ, ನಾಮಿನೇಟ್ ಆದವರಿಗೆ ವೋಟ್ ಮಾಡಿ ಎನ್ನುವ ಯಾವುದೇ ಪೋಸ್ಟ್ ಕೂಡ ತೋರಿಸಿಲ್ಲ.

ಕಲರ್ಸ್ ಕನ್ನಡ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿ ಪ್ರತಿ ವಾರ ನಾಮಿನೇಟ್ ಆದವರ ಫೋಟೋಗಳನ್ನು ಹಾಕಲಾಗುತ್ತದೆ. ಆದರೆ, ಈ ವಾರ ಯಾವುದೇ ಪೋಸ್ಟ್ ಹಾಕಿಲ್ಲ. ಅಲ್ಲದೆ, ವೋಟಿಂಗ್ ಲೈನ್ ಕೂಡ ತೆರೆದಿಲ್ಲ. ಹೀಗಾಗಿ, ಈ ವಾರ ‘ನೋ ಎಲಿಮಿನೇಷನ್ ವೀಕ್’ ಆಗಿರಲಿದೆ.

ಈ ವಾರ ಎಲಿಮಿನೇಷನ್ ಮಾಡದೆ ಇರಲು ಒಂದು ಕಾರಣವೂ ಇದೆ. ಕಳೆದ ವಾರಾಂತ್ಯದಲ್ಲಿ ಶಿಶಿರ್ ಅವರು ದೊಡ್ಮನೆಯಿಂದ ಹೊರ ಬಂದರು. ಇದಾದ ಬೆನ್ನಲ್ಲೇ ತುರ್ತುಪರಿಸ್ಥಿತಿಯ ಕಾರಣಕ್ಕೆ ಗೋಲ್ಡ್ ಸುರೇಶ್ ಬಿಗ್ ಬಾಸ್​ನ ಅರ್ಧಕ್ಕೆ ಬಿಟ್ಟರು. ಇದು ಅನಿರೀಕ್ಷಿತವಾಗಿತ್ತು. ಈ ಕಾರಣಕ್ಕೆ ಈ ವಾರ ಯಾವುದೇ ಎಲಿಮಿನೇಷನ್ ಮಾಡದಿರಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ಈ ವಾರ ಸಿಕ್ಕ ಟಿಆರ್​ಪಿ ಎಷ್ಟು? ಯಾವ ಧಾರಾವಾಹಿಗೆ ಟಾಪ್ ಸ್ಥಾನ?

ಈ ವಾರ ಮೋಕ್ಷಿತಾ, ಹನುಮಂತ, ರಜತ್ ಹಾಗೂ ತ್ರಿವಿಕ್ರಂ ನಾಮಿನೇಟ್ ಆಗಿದ್ದಾರೆ. ಸ್ಪರ್ಧಿಗಳ ಸಂಖ್ಯೆ ಕಡಿಮೆ ಇರುವುದರಿಂದ ನಾಮಿನೇಟ್ ಆದವರ ಸಂಖ್ಯೆಯೂ ಕಡಿಮೆ ಇದೆ. ಈ ವಾರ ಎಲಿಮಿನೇಷನ್ ವಿಚಾರದಲ್ಲಿ ಮತ್ತೊಂದು ಹೈಡ್ರಾಮಾ ನಡೆಯೋದು ಪಕ್ಕಾ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ