‘ಸರಿಗಮಪ ಲಿಟಲ್​​ ಚಾಂಪ್ಸ್’ ವಿನ್ನರ್​ ಪ್ರಗತಿ ಬಡಿಗೇರ್​ಗೆ 21 ಲಕ್ಷ ಮೌಲ್ಯದ ಸೈಟ್​; ಶಿವಾನಿಗೆ ಏನು?

ಈ ಬಾರಿಯ ‘ಸರಿಗಮಪ’ ಫಿನಾಲೆ ಕೊಪ್ಪಳದಲ್ಲಿ ನಡೆದಿದೆ. ಅದ್ದೂರಿ ವೇದಿಕೆ ಮೇಲೆ ಅನುಶ್ರೀ ಅವರು ಆ್ಯಂಕರಿಂಗ್ ಮಾಡಿದರು.

‘ಸರಿಗಮಪ ಲಿಟಲ್​​ ಚಾಂಪ್ಸ್’ ವಿನ್ನರ್​ ಪ್ರಗತಿ ಬಡಿಗೇರ್​ಗೆ 21 ಲಕ್ಷ ಮೌಲ್ಯದ ಸೈಟ್​; ಶಿವಾನಿಗೆ ಏನು?
ಪ್ರಗತಿ-ಶಿವಾನಿ
Follow us
|

Updated on: Apr 17, 2023 | 11:12 AM

‘ಸರಿಗಮಪ’ (Sa Re Ga Ma Pa) ರಿಯಾಲಿಟಿ ಶೋ ಹಲವು ಸೀಸನ್​​ಗಳನ್ನು ಯಶಸ್ವಿ ಆಗಿ ಪೂರೈಸಿದೆ. ಏಪ್ರಿಲ್ 15 ಹಾಗೂ 16ರಂದು ‘ಸರಿಗಮಪ ಲಿಟಲ್​ ಚಾಂಪ್ಸ್​ ಸೀಸನ್ 19ರ’ ಫಿನಾಲೆ ಎಪಿಸೋಡ್ ಪ್ರಸಾರ ಕಂಡಿದೆ. ಪ್ರಗತಿ ಬಡಿಗೇರ್ ಅವರು ಈ ಟೈಟಲ್ ಗೆದ್ದಿದ್ದಾರೆ. ಅವರಿಗೆ ಒಂದು ಸೈಟ್ ಹಾಗೂ ನಗದು ಬಹುಮಾನ ಸಿಕ್ಕಿದೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಫಿನಾಲೇ ರೇಸ್​​ನಲ್ಲಿದ್ದ ಶಿವಾನಿ (Shivani) ಅವರು ಮೊದಲ ರನ್ನರ್ ಅಪ್ ಆದರೆ, ಮಂಗಳೂರಿನ ಪ್ರತಿಭೆ ತನುಶ್ರೀ ಎರಡನೇ ರನ್ನರ್ ಅಪ್ ಆಗಿದ್ದಾರೆ. ಅವರೆಲ್ಲರಿಗೂ ಶುಭಾಶಯ ಬರುತ್ತಿದೆ.

‘ಸರಿಗಮಪ’ ಶೋನ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತದೆ. ಆದರೆ, ಫಿನಾಲೆ ಮಾತ್ರ ರಾಜ್ಯದ ವಿವಿಧ ನಗರಗಳಲ್ಲಿ ನಡೆಸಲಾಗುತ್ತದೆ. ಈ ಬಾರಿಯ ‘ಸರಿಗಮಪ’ ಫಿನಾಲೆ ಕೊಪ್ಪಳದಲ್ಲಿ ನಡೆದಿದೆ. ಅದ್ದೂರಿ ವೇದಿಕೆ ಮೇಲೆ ಅನುಶ್ರೀ ಅವರು ಆ್ಯಂಕರಿಂಗ್ ಮಾಡಿದರು. ಹಂಸಲೇಖ ಅವರು ಮಹಾಗುರುಗಳಾಗಿ ವೇದಿಕೆ ಮೇಲಿದ್ದರು. ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಮೊದಲಾದವರು ಜಡ್ಜ್​ ಸ್ಥಾನದಲ್ಲಿದ್ದರು. ಅಂತಿಮ ಹಂತದಲ್ಲಿ ಪ್ರಗತಿ, ಶಿವಾನಿ ಹಾಗೂ ತನುಶ್ರೀ ಇದ್ದರು. ಈ ಪೈಕಿ ಪ್ರಗತಿ ಗೆದ್ದು ಬೀಗಿದ್ದಾರೆ.

ವಿನ್ನರ್ ಆದ ಪ್ರಗತಿ ಬಡಿಗೇರ್​ಗೆ ನೆಲಮಂಗಲ ಪ್ರಾಜೆಕ್ಟ್​​ನಲ್ಲಿ 30-40 ಅಡಿಯ ಸೈಟ್ ಸಿಕ್ಕಿದೆ. 21 ಲಕ್ಷ ರೂಪಾಯಿ ಇದರ ಮೌಲ್ಯ. ಇದರ ಜೊತೆ 4 ಲಕ್ಷ ರೂಪಾಯಿ ನಗದು ದೊರೆತಿದೆ. ಮೊದಲ ರನ್ನರ್​ಅಪ್​ ಶಿವಾನಿಗೆ 20 ಲಕ್ಷ ರೂಪಾಯಿ ಕ್ಯಾಶ್ ಸಿಕ್ಕಿದೆ. ಎರಡನೇ ರನ್ನರ್ ಅಪ್​ ತನುಶ್ರೀಗೆ ಐದು ಲಕ್ಷ ರೂಪಾಯಿ ಎಲೆಕ್ಟ್ರಿಕ್ ವಾಹನ ಹಾಗೂ ಐದು ಲಕ್ಷ ರೂಪಾಯಿ ನಗದು ದೊರೆತಿದೆ.

ಇದನ್ನೂ ಓದಿ: Anchor Anushree: ‘ಸರಿಗಮಪ’ ಜಡ್ಜ್​​ಗಳ ಜತೆ ಅನುಶ್ರೀ ಸಂಕ್ರಾಂತಿ ಸಂಭ್ರಮ; ಫೋಟೋ ವೈರಲ್

ಪ್ರತಿ ರಿಯಾಲಿಟಿ ಶೋನಲ್ಲಿ ಯಾರೇ ವಿನ್ ಆದರೂ ಒಂದು ಚರ್ಚೆ ಹುಟ್ಟಿಕೊಳ್ಳುತ್ತದೆ. ಅದೇ ರೀತಿ, ‘ಸರಿಗಮಪ ಲಿಟಲ್​ ಚಾಂಪ್ಸ್’ 19ನೇ ಸೀಸನ್ ಕೂಡ ಚರ್ಚೆ ಹುಟ್ಟುಹಾಕಿದೆ. ಅನೇಕರು ಶಿವಾನಿ ಅವರು ಗೆಲ್ಲಬೇಕಿತ್ತು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು, ‘ಶಿವಾನಿ ನಮ್ಮ ವಿನ್ನರ್’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ