AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

36 ಸ್ಪರ್ಧಿಗಳ ಜತೆ ಬರುತ್ತಿದೆ ಸರಿಗಮಪ; ಅದ್ದೂರಿ ಪ್ರೋಮೋಗೆ ಪ್ರೇಕ್ಷಕರು ಫಿದಾ

ಈ ಬಾರಿ ಬರೋಬ್ಬರಿ 36 ಸ್ಪರ್ಧಿಗಳೊಂದಿಗೆ ‘ಸರಿಗಮಪ’ ಚಾಂಪಿಯನ್​ಶಿಪ್​ ಆರಂಭಗೊಳ್ಳುತ್ತಿದೆ. ಅಂದರೆ, ಈ ಬಾರಿಯ ಶೋ ಕೊಂಚ ದೀರ್ಘವಾಗಿರಲಿದೆ ಎಂಬುದಕ್ಕೆ ಈ ಶೋನ ಸ್ಪರ್ಧಿಗಳ ಸಂಖ್ಯೆಯೇ ಕಾರಣ. ಪ್ರ

36 ಸ್ಪರ್ಧಿಗಳ ಜತೆ ಬರುತ್ತಿದೆ ಸರಿಗಮಪ; ಅದ್ದೂರಿ ಪ್ರೋಮೋಗೆ ಪ್ರೇಕ್ಷಕರು ಫಿದಾ
36 ಸ್ಪರ್ಧಿಗಳ ಜತೆ ಬರುತ್ತಿದೆ ಸರಿಗಮಪ; ಅದ್ದೂರಿ ಪ್ರೋಮೋಗೆ ಪ್ರೇಕ್ಷಕರು ಫಿದಾ
TV9 Web
| Edited By: |

Updated on:Sep 15, 2021 | 12:31 PM

Share

‘ಸರಿಗಮಪ’ ಸಂಗೀತ ರಿಯಾಲಿಟಿ ಶೋಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಾಕಷ್ಟು ಮಂದಿ ಈ ವೇದಿಕೆ ಮೂಲಕ ಗುರುತಿಸಿಕೊಂಡಿದ್ದಾರೆ. ಇನ್ನು, ಈ ಕಾರ್ಯಕ್ರಮವನ್ನು ನೆಚ್ಚಿಕೊಂಡ ವೀಕ್ಷಕರ ಸಂಖ್ಯೆ ದೊಡ್ಡದಿದೆ. ಈಗ ಈ ಕಾರ್ಯಕ್ರಮ ಜೀ ಕನ್ನಡದಲ್ಲಿ ಸೆಪ್ಟೆಂಬರ್​ 18ರಿಂದ ಮತ್ತೆ ಪ್ರಸಾರವಾಗುತ್ತಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಈ ಸುದ್ದಿ ಕೇಳಿ ಸಂಗೀತ ಪ್ರಿಯರು ಖುಷಿಯಾಗಿದ್ದಾರೆ.

ಈ ಬಾರಿ ಬರೋಬ್ಬರಿ 36 ಸ್ಪರ್ಧಿಗಳೊಂದಿಗೆ ‘ಸರಿಗಮಪ’ ಚಾಂಪಿಯನ್​ಶಿಪ್​ ಆರಂಭಗೊಳ್ಳುತ್ತಿದೆ. ಅಂದರೆ, ಈ ಬಾರಿಯ ಶೋ ಕೊಂಚ ದೀರ್ಘವಾಗಿರಲಿದೆ ಎಂಬುದಕ್ಕೆ ಈ ಶೋನ ಸ್ಪರ್ಧಿಗಳ ಸಂಖ್ಯೆಯೇ ಕಾರಣ. ಪ್ರತಿ ವರ್ಷದಂತೆ ಈ ಬಾರಿಯೂ ನಾದಬ್ರಹ್ಮ ಹಂಸಲೇಖ ಅವರು ಈ ಶೋನ ಮಹಾಗುರು ಆಗಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್​ ಪ್ರಕಾಶ್​ ಹಾಗೂ ಅರ್ಜುನ್​ ಜನ್ಯ ಜಡ್ಜ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಖ್ಯಾತ ಆ್ಯಂಕರ್​ ಅನುಶ್ರೀ ಈ ಶೋನ ನಿರೂಪಣೆ ಮಾಡಲಿದ್ದಾರೆ.

‘ಸ್ವರ ಸಂಸ್ಥಾನದಲ್ಲಿ 36 ಚಾಂಪಿಯನ್ ಗಾಯಕರ ಸಂಗೀತ ಸಮರ. ಶಾರದಾಂಬೆಯ ಅನುಗ್ರಹ , ಮಹಾಗುರು ಹಂಸಲೇಖ ಅವರ ಸಾರಥ್ಯ. ಅರ್ಜುನ್ ಜನ್ಯ ,ವಿಜಯ್ ಪ್ರಕಾಶ್ ತೀರ್ಪುಗಾರಿಕೆಯೊಂದಿಗೆ  6 ಶ್ರೇಷ್ಠ ಸಂಗೀತಗಾರರ ಮಾರ್ಗದರ್ಶನದಲ್ಲಿ ಶುರುವಾಗಲಿದೆ ಸರಿಗಮಪ ಚಾಂಪಿಯನ್ ಶಿಪ್’ ಎಂದು ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋ ಅದ್ದೂರಿಯಾಗಿದೆ. ಈ ಪ್ರೋಮೋ ಸಾಕಷ್ಟು ಜನರ ಗಮನ ಸೆಳೆದಿದೆ. ಈ ಪ್ರೋಮೋದಲ್ಲಿ 36 ಸ್ಪರ್ಧಿಗಳೂ ಕಾಣಿಸಿಕೊಂಡಿದ್ದಾರೆ. ಅಂತಿಮವಾಗಿ ಒಬ್ಬರಿಗೆ ಸರಿಗಮಪ ಚಾಂಪಿಯನ್​ಶಿಪ್​ ಒಲಿಯಲಿದೆ.

View this post on Instagram

A post shared by Zee Kannada (@zeekannada)

ಸರಿಗಮಪ ಆರಂಭವಾದರೆ ಸಂಗೀತ ಪ್ರಿಯರಿಗೆ ರಸದೌತಣ ಸಿಕ್ಕಂತಾಗಲಿದೆ. ಈಗಾಗಲೇ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈಗ ಶನಿವಾರ ಹಾಗೂ ಭಾನುವಾರ ಜೀಕನ್ನಡ ವಾಹಿನಿಯಲ್ಲಿ ರಾತ್ರಿ 7:30ರಿಂದ ಸರಿಗಮಪ ಬರಲಿದೆ. ಇದು ಸಂಗೀತ ಪ್ರಿಯರ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ಹಂಸಲೇಖ-ರವಿಚಂದ್ರನ್ ದೂರ ಆಗಿದ್ದು ಏಕೆ; ಕ್ರೇಜಿ ಸ್ಟಾರ್​ ಕೊಟ್ರು ಉತ್ತರ

‘ಸರಿಗಮಪ’ ಸುಬ್ರಮಣಿ ಪತ್ನಿ ಸಾವಿನ ಕೇಸ್​​ಗೆ ಟ್ವಿಸ್ಟ್​; ಕೊರೊನಾ ಅಲ್ಲ, ಆತ್ಮಹತ್ಯೆಯಿಂದ ನಿಧನ?

Published On - 11:03 pm, Mon, 13 September 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?