AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

36 ಸ್ಪರ್ಧಿಗಳ ಜತೆ ಬರುತ್ತಿದೆ ಸರಿಗಮಪ; ಅದ್ದೂರಿ ಪ್ರೋಮೋಗೆ ಪ್ರೇಕ್ಷಕರು ಫಿದಾ

ಈ ಬಾರಿ ಬರೋಬ್ಬರಿ 36 ಸ್ಪರ್ಧಿಗಳೊಂದಿಗೆ ‘ಸರಿಗಮಪ’ ಚಾಂಪಿಯನ್​ಶಿಪ್​ ಆರಂಭಗೊಳ್ಳುತ್ತಿದೆ. ಅಂದರೆ, ಈ ಬಾರಿಯ ಶೋ ಕೊಂಚ ದೀರ್ಘವಾಗಿರಲಿದೆ ಎಂಬುದಕ್ಕೆ ಈ ಶೋನ ಸ್ಪರ್ಧಿಗಳ ಸಂಖ್ಯೆಯೇ ಕಾರಣ. ಪ್ರ

36 ಸ್ಪರ್ಧಿಗಳ ಜತೆ ಬರುತ್ತಿದೆ ಸರಿಗಮಪ; ಅದ್ದೂರಿ ಪ್ರೋಮೋಗೆ ಪ್ರೇಕ್ಷಕರು ಫಿದಾ
36 ಸ್ಪರ್ಧಿಗಳ ಜತೆ ಬರುತ್ತಿದೆ ಸರಿಗಮಪ; ಅದ್ದೂರಿ ಪ್ರೋಮೋಗೆ ಪ್ರೇಕ್ಷಕರು ಫಿದಾ
TV9 Web
| Edited By: |

Updated on:Sep 15, 2021 | 12:31 PM

Share

‘ಸರಿಗಮಪ’ ಸಂಗೀತ ರಿಯಾಲಿಟಿ ಶೋಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಾಕಷ್ಟು ಮಂದಿ ಈ ವೇದಿಕೆ ಮೂಲಕ ಗುರುತಿಸಿಕೊಂಡಿದ್ದಾರೆ. ಇನ್ನು, ಈ ಕಾರ್ಯಕ್ರಮವನ್ನು ನೆಚ್ಚಿಕೊಂಡ ವೀಕ್ಷಕರ ಸಂಖ್ಯೆ ದೊಡ್ಡದಿದೆ. ಈಗ ಈ ಕಾರ್ಯಕ್ರಮ ಜೀ ಕನ್ನಡದಲ್ಲಿ ಸೆಪ್ಟೆಂಬರ್​ 18ರಿಂದ ಮತ್ತೆ ಪ್ರಸಾರವಾಗುತ್ತಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಈ ಸುದ್ದಿ ಕೇಳಿ ಸಂಗೀತ ಪ್ರಿಯರು ಖುಷಿಯಾಗಿದ್ದಾರೆ.

ಈ ಬಾರಿ ಬರೋಬ್ಬರಿ 36 ಸ್ಪರ್ಧಿಗಳೊಂದಿಗೆ ‘ಸರಿಗಮಪ’ ಚಾಂಪಿಯನ್​ಶಿಪ್​ ಆರಂಭಗೊಳ್ಳುತ್ತಿದೆ. ಅಂದರೆ, ಈ ಬಾರಿಯ ಶೋ ಕೊಂಚ ದೀರ್ಘವಾಗಿರಲಿದೆ ಎಂಬುದಕ್ಕೆ ಈ ಶೋನ ಸ್ಪರ್ಧಿಗಳ ಸಂಖ್ಯೆಯೇ ಕಾರಣ. ಪ್ರತಿ ವರ್ಷದಂತೆ ಈ ಬಾರಿಯೂ ನಾದಬ್ರಹ್ಮ ಹಂಸಲೇಖ ಅವರು ಈ ಶೋನ ಮಹಾಗುರು ಆಗಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್​ ಪ್ರಕಾಶ್​ ಹಾಗೂ ಅರ್ಜುನ್​ ಜನ್ಯ ಜಡ್ಜ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಖ್ಯಾತ ಆ್ಯಂಕರ್​ ಅನುಶ್ರೀ ಈ ಶೋನ ನಿರೂಪಣೆ ಮಾಡಲಿದ್ದಾರೆ.

‘ಸ್ವರ ಸಂಸ್ಥಾನದಲ್ಲಿ 36 ಚಾಂಪಿಯನ್ ಗಾಯಕರ ಸಂಗೀತ ಸಮರ. ಶಾರದಾಂಬೆಯ ಅನುಗ್ರಹ , ಮಹಾಗುರು ಹಂಸಲೇಖ ಅವರ ಸಾರಥ್ಯ. ಅರ್ಜುನ್ ಜನ್ಯ ,ವಿಜಯ್ ಪ್ರಕಾಶ್ ತೀರ್ಪುಗಾರಿಕೆಯೊಂದಿಗೆ  6 ಶ್ರೇಷ್ಠ ಸಂಗೀತಗಾರರ ಮಾರ್ಗದರ್ಶನದಲ್ಲಿ ಶುರುವಾಗಲಿದೆ ಸರಿಗಮಪ ಚಾಂಪಿಯನ್ ಶಿಪ್’ ಎಂದು ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋ ಅದ್ದೂರಿಯಾಗಿದೆ. ಈ ಪ್ರೋಮೋ ಸಾಕಷ್ಟು ಜನರ ಗಮನ ಸೆಳೆದಿದೆ. ಈ ಪ್ರೋಮೋದಲ್ಲಿ 36 ಸ್ಪರ್ಧಿಗಳೂ ಕಾಣಿಸಿಕೊಂಡಿದ್ದಾರೆ. ಅಂತಿಮವಾಗಿ ಒಬ್ಬರಿಗೆ ಸರಿಗಮಪ ಚಾಂಪಿಯನ್​ಶಿಪ್​ ಒಲಿಯಲಿದೆ.

View this post on Instagram

A post shared by Zee Kannada (@zeekannada)

ಸರಿಗಮಪ ಆರಂಭವಾದರೆ ಸಂಗೀತ ಪ್ರಿಯರಿಗೆ ರಸದೌತಣ ಸಿಕ್ಕಂತಾಗಲಿದೆ. ಈಗಾಗಲೇ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈಗ ಶನಿವಾರ ಹಾಗೂ ಭಾನುವಾರ ಜೀಕನ್ನಡ ವಾಹಿನಿಯಲ್ಲಿ ರಾತ್ರಿ 7:30ರಿಂದ ಸರಿಗಮಪ ಬರಲಿದೆ. ಇದು ಸಂಗೀತ ಪ್ರಿಯರ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ಹಂಸಲೇಖ-ರವಿಚಂದ್ರನ್ ದೂರ ಆಗಿದ್ದು ಏಕೆ; ಕ್ರೇಜಿ ಸ್ಟಾರ್​ ಕೊಟ್ರು ಉತ್ತರ

‘ಸರಿಗಮಪ’ ಸುಬ್ರಮಣಿ ಪತ್ನಿ ಸಾವಿನ ಕೇಸ್​​ಗೆ ಟ್ವಿಸ್ಟ್​; ಕೊರೊನಾ ಅಲ್ಲ, ಆತ್ಮಹತ್ಯೆಯಿಂದ ನಿಧನ?

Published On - 11:03 pm, Mon, 13 September 21

Follow Us
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ