AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸೀತಾಳ ಚಿಂತೆ ನೋಡಿ ಶ್ರೀರಾಮನ ಮನಸ್ಸು ಮರುಗಿದೆ! ಕಷ್ಟಕ್ಕೆ ಹೆಗಲು ಕೊಡುವ ಅವನ ನಿರ್ಧಾರ ಬಲವಾಗುತ್ತಾ?

‘ಸೀತಾ ರಾಮ’ ಧಾರಾವಾಹಿ ಸಂಚಿಕೆ 17: ಆಫೀಸ್ ನಿಂದ ಹೊರಟ ಸೀತಾಳನ್ನು ಹಿಂಬಾಲಿಸಿದ ರಾಮ್ ಅವಳ ಬಳಿ ಚಿಂತೆಗೆ ಕಾರಣ ಏನು? ಎಂದು ಕೇಳುತ್ತಾನೆ. ಆದರೆ ಎಷ್ಟು ಕೇಳಿದರೂ ಅದಕ್ಕೆ ಉತ್ತರಿಸದ ಸೀತಾ, ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ರುದ್ರ ಪ್ರತಾಪನ ಆಫೀಸಿಗೆ ಬರುತ್ತಾಳೆ. ಮುಂದೇನಾಗಬಹುದು ಕಾದು ನೋಡಬೇಕಾಗಿದೆ.

Seetha Raama Serial: ಸೀತಾಳ ಚಿಂತೆ ನೋಡಿ ಶ್ರೀರಾಮನ ಮನಸ್ಸು ಮರುಗಿದೆ! ಕಷ್ಟಕ್ಕೆ ಹೆಗಲು ಕೊಡುವ ಅವನ ನಿರ್ಧಾರ ಬಲವಾಗುತ್ತಾ?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Updated By: ಮಂಜುನಾಥ ಸಿ.|

Updated on:Aug 08, 2023 | 10:30 PM

Share

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 17: ಮನೆಗೆ ನೋಟಿಸ್ ಬಂದಿರುವ ವಿಚಾರ ತಿಳಿದಿರುವ ಅಜ್ಜ ಮತ್ತು ಸಿಹಿಗೆ ಅಜ್ಜಿಗೆ ಹೇಳಿಕೊಳ್ಳಲಾಗದ ಕಸಿವಿಸಿ. ಇನ್ನು ರಾಮ್ ಮನೆಯಲ್ಲಿ ಭಾರ್ಗವಿಗೆ ಆಫೀಸ್ ನಲ್ಲಿ ನಡೆಯುತ್ತಿರುವ ವಿಚಾರವನ್ನು ತನ್ನಿಂದ ಮುಚ್ಚಿಡುತ್ತಿದ್ದಾರೆ ಎಂಬ ಸಂಶಯ. ಅದಕ್ಕಾಗಿಯೇ ರಾಮ್ ಬಳಿ ಕೊಕ್ಕಿ ಕೊಕ್ಕಿ ಕೇಳುತ್ತಾಳೆ. ಆದರೆ ಅದಕ್ಕೆ ಆಸ್ಪದ ಕೊಡದ ಅಶೋಕ್, ರಾಮ್ ನನ್ನ ಪ್ರತಿ ಬಾರಿಯೂ ಸತ್ಯ ಹೇಳದಂತೆ ತಡೆಯುತ್ತಾನೆ.

ಸತ್ಯನನ್ನು ಹೀಯಾಳಿಸಿದ ಭಾರ್ಗವಿ

ಯಾರಿಂದಲೂ ವಿಷಯ ತಿಳಿದುಕೊಳ್ಳಲಾಗದ ಭಾರ್ಗವಿ ಮಾವನ ಬಳಿ ಬರುತ್ತಾಳೆ. ಮಾತ್ರೆ ಕೊಡುವ ನೆಪದಲ್ಲಿ ಆಫೀಸ್ ನಲ್ಲಿ ಆಗುತ್ತಿರುವ ವಿಷಯ ತಿಳಿದುಕೊಳ್ಳುವ ಹಂಬಲ ಅವಳದ್ದು ಆದರೆ ತಾತ ಕೂಡ ಯಾವ ವಿಚಾರವನ್ನೂ ಹೇಳುವುದಿಲ್ಲ. ಇದನ್ನೆಲ್ಲಾ ದೂರದಲ್ಲಿ ನಿಂತು ಕೇಳಿಸಿಕೊಳ್ಳುತ್ತಿರುವ ರಾಮ್ ಚಿಕ್ಕಪ್ಪ ಸತ್ಯನನ್ನು ನೋಡಿ ತಾತ ಕೋಪಗೊಳ್ಳುತ್ತಾರೆ. ಅದನ್ನೆಲ್ಲಾ ನೋಡಿದ ಭಾರ್ಗವಿ ನೀನು ಈ ಮನೆಗೆ ಅಪಶಕುನಾ ಎಂದು ಸತ್ಯನನ್ನು ಹಿಯಾಳಿಸುತ್ತಾಳೆ.

ಬಕ ಪಕ್ಷಿಯಂತೆ ಕಾದು ಕುಳಿತ ರುದ್ರ ಪ್ರತಾಪ

ಇನ್ನು ಸೀತಾ ಬರುತ್ತಾಳೋ ಇಲ್ಲವೋ ಎಂದು ರುದ್ರ ಪ್ರತಾಪ, ಬಕ ಪಕ್ಷಿಯಂತೆ ಕಾದು ಕುಳಿತುಕೊಳ್ಳುತ್ತಾನೆ. ಕಮಿಶನ್ ಕೇಳಿದ ಸೀತಾಳ ಅತ್ತಿಗೆಗೂ ಬೈದು, ಅವಳು ಬಂದರೆ ಮಾತ್ರ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ಕಳುಹಿಸುತ್ತಾನೆ. ಪ್ಲಾನ್ ಮಾಡಿ ಜಯ ಸಿಕ್ಕರೂ ದುಡ್ಡು ಸಿಗದ ಸೀತಾಳ ಅತ್ತಿಗೆ ಅಲ್ಲಿಂದ ನಡೆಯುತ್ತಾರೆ. ಇನ್ನು ಆಫೀಸ್ ಗೆ ಬರುವಾಗಲೇ ಸೀತಾ ಗಾಬರಿಯಿಂದ ಹೋಗುತ್ತಿರುವುದನ್ನು ನೋಡಿ ರಾಮ್ ಕೂಡ ಭಯದಿಂದ, ಸೀತಾಳ ಗೆಳತಿ ಪ್ರೀಯಾ ಬಳಿ ವಿಷಯ ಏನೆಂದು ಕೇಳುತ್ತಾನೆ. ಆದರೆ ಅವಳಿಗೂ ಆ ಬಗ್ಗೆ ಗೊತ್ತಿಲ್ಲದ ಕಾರಣ ರಾಮನಿಗೆ ವಿಷಯ ಏನೆಂದು ತಿಳಿಯುವುದಿಲ್ಲ. ಬಳಿಕ ಸೀತಾಳನ್ನು ಹಿಂಬಾಲಿಸಿದ ರಾಮ್ ಅವಳ ಬಳಿ ಚಿಂತೆಗೆ ಕಾರಣ ಏನು? ಎಂದು ಕೇಳುತ್ತಾನೆ. ಆದರೆ ಎಷ್ಟು ಕೇಳಿದರೂ ಅದಕ್ಕೆ ಉತ್ತರಿಸದ ಸೀತಾ, ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ರುದ್ರ ಪ್ರತಾಪನ ಆಫೀಸಿಗೆ ಬರುತ್ತಾಳೆ. ಮುಂದೇನಾಗಬಹುದು ಕಾದು ನೋಡಬೇಕಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:28 pm, Tue, 8 August 23

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್