AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಅಶೋಕ್ ಆಡಿದ ಮಾತು ರಾಮ ಬದಲಾಗಲು ಸಹಾಯ ಮಾಡುತ್ತಾ? ಮತ್ತೆ ಪ್ರೀತಿಯಲ್ಲಿ ಬೀಳ್ತಾನಾ ರಾಮ್?

Seetha Raama Serial: ಆಫೀಸ್​ನಲ್ಲಿ ಫ್ರೆಂಡ್​ನನ್ನು ನೋಡಿದ ಸಿಹಿ, ಬಾಸ್ ಬಳಿ ರಾಮನನ್ನು ನನ್ನ ಜೊತೆ ಸುತ್ತಾಡಲು ಕಳಿಸಿಕೊಡಿ ಎಂದು ಕೇಳುತ್ತಾಳೆ. ಅದಕ್ಕೆ ಅಶೋಕ್​ನಿಂದ ಒಪ್ಪಿಗೆಯೂ ಸಿಗುತ್ತದೆ. ಮೂವರು ಸೇರಿ ಸುತ್ತಾಡಲು ಹೊರಡುತ್ತಾರೆ. ಮುಂದೇನಾಗಬಹುದು? ಅಶೋಕ್ ಆಡಿದ ಮಾತು ರಾಮನನ್ನು ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತಾ?

Seetha Raama Serial: ಅಶೋಕ್ ಆಡಿದ ಮಾತು ರಾಮ ಬದಲಾಗಲು ಸಹಾಯ ಮಾಡುತ್ತಾ? ಮತ್ತೆ ಪ್ರೀತಿಯಲ್ಲಿ ಬೀಳ್ತಾನಾ ರಾಮ್?
ವೈಷ್ಣವಿ ಗೌಡ, ಗಗನ್​ ಚಿನ್ನಪ್ಪ
ಪ್ರೀತಿ ಭಟ್​, ಗುಣವಂತೆ
| Updated By: ಮದನ್​ ಕುಮಾರ್​|

Updated on:Aug 28, 2023 | 11:07 PM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 31: ಹಬ್ಬದ ಊಟಕ್ಕೆ ಫ್ರೆಂಡ್​ಗಾಗಿ ಕಾದು ಕುಳಿತ ಸಿಹಿಗೆ, ಶ್ರೀರಾಮ ಬೇಸರ ಮಾಡಲು ಇಷ್ಟ ಪಡದೇ ಅವಳಿಗಾಗಿ ಬರುತ್ತಾನೆ. ಆದರೆ ಮನೆಯಲ್ಲಿಯೇ ಹಬ್ಬದ ಊಟ ಮಾಡಿ ಬಂದವನಿಗೆ ಮತ್ತೊಮ್ಮೆ ಊಟ ಮಾಡುವುದು ಕಷ್ಟವಾದರೂ ಸಿಹಿಗಾಗಿ ಒಪ್ಪಿಕೊಳ್ಳುತ್ತಾನೆ. ತನ್ನ ಫ್ರೆಂಡ್​ಗಾಗಿ ಅವಳೇ ಕೈ ತುತ್ತು ಮಾಡಿ ತಿನ್ನಿಸುತ್ತಾಳೆ. ಅವಳ ಪ್ರೀತಿಗೆ ಶ್ರೀರಾಮನೇ ಕರಗಿ ಹೋಗುತ್ತಾನೆ. ಇನ್ನು ಹಬ್ಬದ ಸಂಭ್ರಮ ಹೆಚ್ಚಿಸಲು ಎಲ್ಲರೂ ಸೇರಿ ಅಂತ್ಯಾಕ್ಷರಿ ಆಡುತ್ತಾರೆ. ಬಳಿಕ ರಾಮನಿಗೆ ಅಶೋಕನ ಫೋನ್ ಬಂದು ಮನೆಗೆ ಹೊರಡುತ್ತಾನೆ. ಅವನ ಗುಣವನ್ನು ನೋಡಿ ಅಜ್ಜಿ, ತಾತ ಅವನ ಗುಣಗಾನ ಮಾಡುತ್ತಾರೆ.

ಇನ್ನು ರುದ್ರ ಪ್ರತಾಪ, ಸೀತಾ ಬಳಿ ಮಾತನಾಡಲು ಒಂದು ನೆಪ ಹುಡುಕಿ ಫೋನ್ ಮಾಡಿ ತನ್ನ ಆಫೀಸ್​ಗೆ ಬರುವಂತೆ ಹೇಳುತ್ತಾಳೆ. ಆದರೆ ಸಿಹಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತೀನಿ ಎಂದು ಹೇಳಿದ್ದ ಸೀತಾ ಆರ್.ಪಿಯ ಮೋಸಕ್ಕೆ ಕತ್ತು ತೂಗಿಸುತ್ತಾಳೆ. ಮಗಳಿಗೆ ಬೇಸರ ಮಾಡಲು ಇಷ್ಟವಿಲ್ಲದೇ ಪ್ಲಾನ್​ನಲ್ಲಿ ಸ್ವಲ್ಪ ಬದಲಾವಣೆ ಮಾಡಿ ಸಿಹಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಾಳೆ.

ಇದನ್ನೂ ಓದಿ: ಸೀತಾ ತನ್ನ ಮನೆ ಮಾರಾಟ ಮಾಡುವ ನಿರ್ಧಾರವನ್ನು ಬದಲಿಸುತ್ತಾಳಾ? ಶ್ರೀರಾಮನ ಮುಂದಿನ ನಡೆಯೇನು?

ಇನ್ನು, ರಾಮ್ ಮನೆಯವರ ಮಧ್ಯೆ ಇರುವ ಗೊಂದಲ ಪರಿಹರಿಸಿ, ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಬೇಕು ಎಂದು ಅಶೋಕ್ ಬಳಿ ಹೇಳುತ್ತಾನೆ. ಮನೆಯ ಕೆಲವು ವಿಚಾರ ಅಶೋಕ್​ನಿಗೆ ಗೊತ್ತಿದ್ದರೂ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿರುತ್ತಾನೆ. ರಾಮನಿಗೆ ಸೀತಾ ಅವರು ಇರುವ ವಠಾರದ ಜನರ ಅವರ ಬಾಂಧವ್ಯ ನೋಡಿ ತಮ್ಮ ಮನೆಯಲ್ಲಿ ಆ ಸಂತೋಷವಿಲ್ಲವಲ್ಲ ಎಂದುಕೊಳ್ಳುತ್ತಾನೆ. ಇದಕ್ಕೆಲ್ಲಾ ಪರಿಹಾರ ನೀನು ಮದುವೆಯಾಗುವುದು ಎಂದು ಅಶೋಕ್ ಹೇಳುತ್ತಾನೆ. ಎಲ್ಲೇ ಹೋದರೂ ಅದೇ ವಿಷಯಕ್ಕೆ ಬರುವುದನ್ನು ನೋಡಿ ರಾಮನಿಗೆ ಬೇಸರವಾಗುತ್ತದೆ. ಜೊತೆಗೆ ಮಲೇಷ್ಯಾದಿಂದ ಇಂಡಿಯಾಗೆ ಬರುವಾಗ ತಾನು ಹೇಳಿದ ಮಾತನ್ನು ಅಶೋಕ್ ನೆನಪಿಸುತ್ತಾನೆ. ರಾಮನಿಗೆ ಭಾರತಕ್ಕೆ ಬಂದಾಗ ಮೊದಲು ಕಾಣುವ ಹುಡುಗಿಯ ಮೇಲೆ ಪ್ರೀತಿಯಾಗುತ್ತದೆ ಎಂದಿರುತ್ತಾನೆ. ಹಾಗೆ ಮೊದಲು ನೋಡಿದ ಹುಡುಗಿ ಸೀತಾ ಆಗಿರುವುದರಿಂದ ಅವಳ ಬಗ್ಗೆ ಮತ್ತು ಸಿಹಿಯ ಬಗ್ಗೆ ಮಾತನಾಡುತ್ತಾನೆ. ದೇವರೆ ನಿಮ್ಮನ್ನು ಒಂದು ಮಾಡಲು ಪ್ರಯತ್ನಿಸುತ್ತಿದ್ದಾನೆ ಎನ್ನುತ್ತಾನೆ. ಇದೆಲ್ಲವೂ ರಾಮನ ಕಿವಿಗೆ ಮಾತ್ರ ಬೀಳುವುದಿಲ್ಲ.

ಇದನ್ನೂ ಓದಿ: ಸಿಹಿಯ ಆಸೆಗೆ ತಣ್ಣೀರೆರಚಿದ ಸೀತಾ, ಮಗಳ ಮುನಿಸಿಗೆ ಕಾರಣವಾಗುತ್ತಾಳಾ?

ರಾಮ್, ಅಶೋಕ್ ಆಫೀಸ್​ನಲ್ಲಿ ಇರುವಾಗಲೇ ಸಿಹಿ, ಸೀತಾ ಬಂದಿರುತ್ತಾರೆ. ಫ್ರೆಂಡ್ ನೋಡಿದ ಸಿಹಿ, ಬಾಸ್ ಬಳಿ ರಾಮನನ್ನು ನನ್ನ ಜೊತೆ ಕಳಿಸಿಕೊಡಿ ಎಂದು ಕೇಳುತ್ತಾಳೆ. ಅದಕ್ಕೆ ಅಶೋಕ್​ನಿಂದ ಒಪ್ಪಿಗೆಯೂ ಸಿಗುತ್ತದೆ. ಮೂವರು ಸೇರಿ ಸುತ್ತಾಡಲು ಹೊರಡುತ್ತಾರೆ. ಅಶೋಕ್ ಆಡಿದ ಮಾತು ರಾಮ್ ಬದಲಾವಾಗುವಂತೆ ಮಾಡುತ್ತಾ? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:59 pm, Mon, 28 August 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು