AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸೀತಾ ತನ್ನ ಮನೆ ಮಾರಾಟ ಮಾಡುವ ನಿರ್ಧಾರವನ್ನು ಬದಲಿಸುತ್ತಾಳಾ? ಶ್ರೀರಾಮನ ಮುಂದಿನ ನಡೆಯೇನು?

Seetha Raama Serial: ಸೀತಾಳ ಮನೆ ಬಿಡಿಸಿಕೊಳ್ಳಲು ರಾಮ್ ಅಡ್ವಾನ್ಸ್ ಸ್ಯಾಲರಿ ಬಗ್ಗೆ ಹೇಳಿದರೂ ಅವಳು ಮಾತ್ರ ಅದರಿಂದ ಏನು ಉಪಯೋಗ ಆಗಲ್ಲ ಎನ್ನುತ್ತಾಳೆ. ಮುಂದೆ ಏನು ಮಾಡಬೇಕೆಂದು ತಿಳಿಯದ ರಾಮ್ ಮೌನಕ್ಕೆ ಜಾರುತ್ತಾನೆ. ಸೀತಾಳೆ ಅವನಿಗೆ ಸಣ್ಣದೊಂದು ಬಾಡಿಗೆ ಮನೆ ನೋಡುತ್ತೀರಾ ಎಂದು ಕೇಳುತ್ತಾಳೆ. ಅದಕ್ಕೆ ಒಪ್ಪಿಗೆ ಸೂಚಿಸಿದ ಶ್ರೀರಾಮ್ ಮನಸ್ಸಿಲ್ಲದೇ ಒಪ್ಪಿಗೆ ಸೂಚಿಸುತ್ತಾನೆ. ಮನೆ ಬಿಡಿಸಿಕೊಳ್ಳಲು ರಾಮ್ ಹೇಗೆ ಸಹಾಯ ಮಾಡಬಹುದು? ಕಾದು ನೋಡೋಣ.

Seetha Raama Serial: ಸೀತಾ ತನ್ನ ಮನೆ ಮಾರಾಟ ಮಾಡುವ ನಿರ್ಧಾರವನ್ನು ಬದಲಿಸುತ್ತಾಳಾ? ಶ್ರೀರಾಮನ ಮುಂದಿನ ನಡೆಯೇನು?
ಸೀತಾ ರಾಮ ಧಾರಾವಾಹಿ
Follow us
ಪ್ರೀತಿ ಭಟ್​, ಗುಣವಂತೆ
| Updated By: ಮಂಜುನಾಥ ಸಿ.

Updated on: Aug 24, 2023 | 11:00 PM

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 29: ಸಿಹಿ ಅಜ್ಜಿ, ತಾತನ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ತಯಾರಿ ನಡೆಯುತ್ತಿದೆ. ಜೊತೆಗೆ ಸಿಹಿ, ಹಬ್ಬದ ಬಗ್ಗೆ ಅನೇಕ ಪ್ರಶ್ನೆಗಳನ್ನು ಅಜ್ಜಿ ಬಳಿ ಕೇಳಿ ತಿಳಿದುಕೊಳ್ಳುತ್ತಾಳೆ. ಲಕ್ಷ್ಮೀಯನ್ನು ಯಾರು ಆರಾಧಿಸುತ್ತಾರೋ ಅವರಿಗೆ ಒಳ್ಳೆಯದಾಗುತ್ತದೆ ಎಂಬ ಅಜ್ಜಿ ಮಾತಿಗೆ, ಸಿಹಿ, ಅಪ್ಪ ಬೇಗ ಬರುವುದಾಗಿ ಕೇಳಬಹುದಿತ್ತು ಅಂದುಕೊಳ್ಳುತ್ತಾಳೆ. ಆದರೆ ಸೀತಾ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮನೆಗೆ ಬಂದ ಅವಳ ಗೆಳತಿ ಸೀತಾ ಕೂಡ ನಿನ್ನ ಜೀವನದಲ್ಲಿ ಆದದ್ದನ್ನು ನನ್ನ ಬಳಿ ಹಂಚಿಕೋ ಎನ್ನುತ್ತಾಳೆ. ಆದರೆ ಇದಕ್ಕೆಲ್ಲಾ ಸೀತಾಳದ್ದು ಮೌನವೇ ಉತ್ತರ.

ಇನ್ನು ಮನೆ ಬಿಡಿಸಿಕೊಳ್ಳುವ ವಿಚಾರವಾಗಿ ರಾಮ್, ಸೀತಾಳಿಗೆ ಫೋನ್ ಮಾಡುತ್ತಾನೆ. ಅಡ್ವಾನ್ಸ್ ಸ್ಯಾಲರಿ ಬಗ್ಗೆ ರಾಮ್ ಹೇಳಿದರೂ ಅದರಿಂದ ಮನೆ ಸಾಲ ತಿರುವುದಿಲ್ಲ ಎನ್ನುತ್ತಾಳೆ. ಅವಳ ನಿರ್ಧಾರ ಮಾತ್ರ ಮನೆ ಮಾರುವುದಾಗಿರುತ್ತದೆ. ಈ ಮಾತನ್ನು ಸಿಹಿಗೂ ಅರ್ಥ ಮಾಡಿಸುತ್ತೇನೆ, ಅವಳಿಗೂ ಈ ಕಷ್ಟ ಅರ್ಥವಾಗುತ್ತೆ ಎಂದು ರಾಮ್ ಬಳಿ ಸೀತಾ ಹೇಳುತ್ತಾಳೆ. ಅವನ ಬಳಿಯೇ ಬಾಡಿಗೆ ಮನೆಯನ್ನೂ ಹುಡುಕಲು ಹೇಳುತ್ತಾಳೆ. ಸಣ್ಣದಾದರೂ ತೊಂದರೆ ಇಲ್ಲ ಚಿಕ್ಕ ಮನೆ ಹುಡುಕಿ ಎನ್ನುತ್ತಾಳೆ. ಮನಸ್ಸಿಲ್ಲದಿದ್ದರೂ ಕಷ್ಟ ಪಟ್ಟು ರಾಮ್ ಅದಕ್ಕೆ ಒಪ್ಪಿಗೆ ಸೂಚಿಸುತ್ತಾನೆ.

ಅಜ್ಜಿ ಹೇಳಿದ ಮಾತನ್ನು ಸರಿಯಾಗಿ ಕೇಳಿಸಿಕೊಂಡ ಸಿಹಿ, ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಳಿಗ್ಗೆ ಬೇಗ ಎದ್ದು ತಯಾರಾಗಿ, ಅಮ್ಮನನ್ನು ರೆಡಿ ಮಾಡುತ್ತಾಳೆ. ಇನ್ನು ಒಬ್ಬರಿಗೊಬ್ಬರು ದೃಷ್ಟಿಯನ್ನು ತೆಗೆದು ಖುಷಿ ಹಂಚಿಕೊಳ್ಳುತ್ತಾರೆ. ಅಜ್ಜಿ ಮನೆಯ ಪೂಜೆಗೆ ಅಮ್ಮ ಮಗಳು ಹಾಜರಿ ಹಾಕುತ್ತಾರೆ. ಅಲ್ಲಿ ಬಂದವರೆಲ್ಲಾ ಅರಿಶಿನ, ಕುಂಕುಮ ಕೊಡುವುದನ್ನು ನೋಡಿ ತನ್ನ ಸೀತಮ್ಮನಿಗೂ ಕುಂಕುಮ ಕೊಡಿ ಎಂದು ಸಿಹಿ ಕೇಳುತ್ತಾಳೆ. ಆದರೆ ಅಲ್ಲಿದ್ದವರು ಮುತ್ತೈದೆಯರಿಗೆ ಮಾತ್ರ ಇದನ್ನು ಕೊಡಬೇಕು ಎನ್ನುತ್ತಾರೆ. ಅವಳ ಗಂಡ ಎಲ್ಲಿದ್ದಾನೋ ಏನೋ ಎಂದು ಮಾತನಾಡಿಕೊಳ್ಳುತ್ತಾರೆ. ಈ ಮಾತು ಸೀತಾಳನ್ನು ನೋಯಿಸುತ್ತದೆ. ಮುಂದೇನಾಗಬಹುದು? ಕಾದು ನೋಡಬೇಕಾಗಿದೆ.

ಅಧ್ಯಕ್ಷನಾಗಿ ಮುಂದುವರಿಯುವ ಬಗ್ಗೆ ಖಚಿತವಾಗಿ ಹೇಳದ ವಿಜಯೇಂದ್ರ
ಅಧ್ಯಕ್ಷನಾಗಿ ಮುಂದುವರಿಯುವ ಬಗ್ಗೆ ಖಚಿತವಾಗಿ ಹೇಳದ ವಿಜಯೇಂದ್ರ
ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ಪ್ರಧಾನಿ ಮೋದಿ: ಪವನ್ ಕಲ್ಯಾಣ್
ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ಪ್ರಧಾನಿ ಮೋದಿ: ಪವನ್ ಕಲ್ಯಾಣ್
VIDEO: ರೂಟ್ ಅತ್ಯುತ್ತಮ ಫೀಲ್ಡಿಂಗ್: ಭಾರತಕ್ಕೆ ಬಿಟ್ಟಿಯಾಗಿ ಸಿಕ್ತು 5 ರನ್
VIDEO: ರೂಟ್ ಅತ್ಯುತ್ತಮ ಫೀಲ್ಡಿಂಗ್: ಭಾರತಕ್ಕೆ ಬಿಟ್ಟಿಯಾಗಿ ಸಿಕ್ತು 5 ರನ್
ಹೆಣ್ಮಕ್ಕಳಲ್ಲಿ ಕಾಡುವ ಈ ಎರಡು ರೋಗಕ್ಕೆ ಯೋಗವೇ ಮುಕ್ತಿ, ಅದು ಹೇಗೆ?
ಹೆಣ್ಮಕ್ಕಳಲ್ಲಿ ಕಾಡುವ ಈ ಎರಡು ರೋಗಕ್ಕೆ ಯೋಗವೇ ಮುಕ್ತಿ, ಅದು ಹೇಗೆ?
ಕಷ್ಟಗಳನ್ನ ದೇವರೇ ಕಲ್ಪಿಸುವುದಾ ಅಥವಾ ಸ್ವಯಂಕೃತ ತಪ್ಪಾ?
ಕಷ್ಟಗಳನ್ನ ದೇವರೇ ಕಲ್ಪಿಸುವುದಾ ಅಥವಾ ಸ್ವಯಂಕೃತ ತಪ್ಪಾ?
Daily horoscope: ಇಂದು ಯಾವೆಲ್ಲಾ ರಾಶಿಗಳ ‘ಯೋಗ’ಬಲ ಹೇಗಿದೆ ತಿಳಿಯಿರಿ
Daily horoscope: ಇಂದು ಯಾವೆಲ್ಲಾ ರಾಶಿಗಳ ‘ಯೋಗ’ಬಲ ಹೇಗಿದೆ ತಿಳಿಯಿರಿ
Yoga Live: ವಿಶಾಖಪಟ್ಟಣಂನಲ್ಲಿ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
Yoga Live: ವಿಶಾಖಪಟ್ಟಣಂನಲ್ಲಿ ಯೋಗ ದಿನಾಚರಣೆ: ಪ್ರಧಾನಿ ಮೋದಿ ಭಾಗಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
ದೃಷ್ಟಿಹೀನ ಮಕ್ಕಳು ಹುಟ್ಟುಹಬ್ಬದ ಶುಭಾಶಯ ಕೋರಿದಾಗ ಕಣ್ಣೀರಿಟ್ಟ ರಾಷ್ಟ್ರಪತಿ
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
‘ಪಪ್ಪಿ’ ಸಿನಿಮಾಗೆ 50 ದಿನದ ಸಂಭ್ರಮ; ವೇದಿಕೆಯಲ್ಲಿ ಬಾಲ ನಟರ ಡೈಲಾಗ್
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ
ಸಿಎಂ ಮತ್ತು ಡಿಸಿಎಂ ಜೊತೆ ಹಲವಾರು ಸಚಿವರು ನಾಳೆ ತುಮಕೂರು ಆಗಮನ