ಬರಲಿದೆ ‘ಸೀತಾ ರಾಮ 2’; ಕ್ಲೈಮ್ಯಾಕ್ಸ್​ನಲ್ಲಿ ಸಿಕ್ತು ಅಪ್​ಡೇಟ್

Seetha Raama Serial: ಸೀತಾ ರಾಮ ಧಾರಾವಾಹಿಯು ಮೇ 30ರಂದು ತನ್ನ 490ನೇ ಮತ್ತು ಅಂತಿಮ ಎಪಿಸೋಡ್‌ನೊಂದಿಗೆ ಕೊನೆಗೊಂಡಿತು. ಆದರೆ, ಅಂತಿಮ ಎಪಿಸೋಡ್‌ನಲ್ಲಿ ಅಚ್ಚರಿಯ ಸುದ್ದಿಯೊಂದನ್ನು ಘೋಷಿಸಲಾಯಿತು. ಧಾರಾವಾಹಿಗೆ ಎರಡನೇ ಸೀಸನ್ ಬರಲಿದೆ ಎಂದು ತಿಳಿಸಲಾಗಿದೆ. ಈ ಧಾರಾವಾಹಿಯು ಮರಾಠಿ ಧಾರಾವಾಹಿಯ ರಿಮೇಕ್ ಆಗಿದೆ.

ಬರಲಿದೆ ‘ಸೀತಾ ರಾಮ 2’; ಕ್ಲೈಮ್ಯಾಕ್ಸ್​ನಲ್ಲಿ ಸಿಕ್ತು ಅಪ್​ಡೇಟ್
ಸೀತಾ ರಾಮ
Edited By:

Updated on: May 31, 2025 | 7:53 AM

‘ಸೀತಾ ರಾಮ’ ಧಾರಾವಾಹಿಯು (Seetha Raama Serial) ತನ್ನ ಕೊನೆಯ ಎಪಿಸೋಡ್​ನ ಮೇ 30ರಂದು ಪ್ರಸಾರ ಮಾಡಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಧಾರಾವಾಹಿಯು ಬರೋಬ್ಬರಿ 490 ಎಪಿಸೋಡ್​ಗಳನ್ನು ಪ್ರಸಾರ ಮಾಡಿತ್ತು. ಈಗ ಧಾರಾವಾಹಿಯ ಕೊನೆಯ ದಿನದ ಎಪಿಸೋಡ್​ನಲ್ಲಿ ಒಂದು ಅಚ್ಚರಿಯ ಮಾಹಿತಿಯನ್ನು ತಂಡದವರು ನೀಡಿದ್ದನ್ನು ನೀವು ಕಾಣಬಹುದು. ‘ಸೀತಾ ರಾಮ’ ಧಾರಾವಾಹಿಯು ಇಲ್ಲಿಗೆ ಕೊನೆ ಆಗಿಲ್ಲ. ಈ ಧಾರಾವಾಹಿಗೆ ಮತ್ತೊಂದು ಸೀಸನ್ ಬರಲಿದೆ ಎನ್ನುವ ಸೂಚನೆಯನ್ನು ತಂಡದವರು ನೀಡಿದ್ದಾರೆ.

‘ಸೀತಾ ರಾಮ’ ಧಾರಾವಾಹಿ 2023ರ ಜುಲೈ 17ರಂದು ಮೊದಲ ಎಪಿಸೋಡ್ ಪ್ರಸಾರ ಕಂಡಿತು. ಮೇ 30ರಂದು ಧಾರಾವಾಹಿ ಕೊನೆಯ ಎಪಿಸೋಡ್ ಪ್ರಸಾರ ಆಗಿದೆ. ಈ ಧಾರಾವಾಹಿಯು ಮರಾಠಿಯ ‘ಮಜಿ ತುಜಿ ರೇಶಿಮಾಗಢ’ ಧಾರಾವಾಹಿಯ ರಿಮೇಕ್ ಆಗಿದೆ. ಈ ಧಾರಾವಾಹಿ ಆರಂಭದಲ್ಲಿ ಮೆಚ್ಚುಗೆ ಪಡೆಯಿತು. ಆದರೆ, ಕೊನೆಯ ಹಂತದಲ್ಲಿ ಧಾರಾವಾಹಿಯು ಸಮಯ ಬದಲಾವಣೆ ಮತ್ತು ಕಥೆಯಲ್ಲಿ ಆದ ಕೆಲವು ಬದಲಾವಣೆ ಸಿಟ್ಟನ್ನು ತರಿಸಿತು.

ಇದನ್ನೂ ಓದಿ
ಟಾಲಿವುಡ್​ನಲ್ಲಿ ರೀ-ಯೂನಿಯನ್ ಸಂಭ್ರಮ; ಸ್ಯಾಂಡಲ್​ವುಡ್​ನಲ್ಲಿ ಯಾವಾಗ?
ಎಚ್​ಎಸ್​ ವೆಂಕಟೇಶ​ಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

‘ಸೀತಾ ರಾಮ’ ಧಾರಾವಾಹಿ ಮತ್ತೆ ಬರಲಿದೆಯಂತೆ. ಈ ಬಗ್ಗೆ ಧಾರಾವಾಹಿಯ ಕ್ಲೈಮ್ಯಾಕ್ಸ್​ನಲ್ಲಿ ಮಾಹಿತಿ ನೀಡಲಾಗಿದೆ. ‘ಮರಳಿ ಬರಲಿದ್ದಾರೆ ಸೀತಾ ರಾಮ’ ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಅಂದರೆ ಮುಂದಿನದ ದಿನಗಲ್ಲಿ ಎರಡನೇ ಪಾರ್ಟ್ ಮಾಡುವ ಉದ್ದೇಶ ಅವರಿಗೆ ಇದೆ. ಆದರೆ, ಇದು ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದಂತೂ ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ.

ಈ ಮೊದಲು ‘ಗಟ್ಟಿ ಮೇಳ’ ಧಾರಾವಾಹಿಯು ಕೊನೆಗೊಂಡಿತ್ತು ಮತ್ತು ಇದು ಕೊನೆಗೊಳ್ಳುವಾಗ ಈ ಧಾರಾವಾಹಿಗೆ ಮತ್ತೊಂದು ಪಾರ್ಟ್ ಬರಲಿದೆ ಎನ್ನುವ ಸೂಚನೆ ನೀಡಲಾಗಿತ್ತು. ಆದರೆ, ಆ ರೀತಿ ಆಗಲೇ ಇಲ್ಲ. ಈಗ ‘ಸೀತಾ ರಾಮ’ ಧಾರಾವಾಹಿ ತಂಡದವರು ನೀಡದ ಭರವಸೆಯೂ ಇದೇ ರೀತಿ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಕೊನೆ ಆದ ‘ಸೀತಾ ರಾಮ’ ಧಾರಾವಾಹಿ; ಭಾರ್ಗವಿಯ ಗತಿ ಏನಾಯಿತು?

‘ಸೀತಾ ರಾಮ’ ಧಾರಾವಾಹಿಯ ಕೊನೆಯಲ್ಲಿ ಭಾರ್ಗವಿ ಕೆಟ್ಟವಳು ಎಂದು ಗೊತ್ತಾಗಿದೆ. ಈ ಕಾರಣದಿಂದಲೇ ಆಕೆಯನ್ನು ಜೈಲಿಗೆ ಹಾಕಲಾಗಿದೆ. ಒಂದೊಮ್ಮೆ ಎರಡನೇ ಪಾರ್ಟ್​ ಮಾಡಿದರೆ ಇದರ ಕಥೆ ಮುಂದುವರಿಯುವ ಸಾಧ್ಯತೆ ಇರುತ್ತದೆ. ಆದರೆ, ಸದ್ಯಕ್ಕಂತೂ ಹಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us