ಹೊಂಬಾಳೆ ನಿರ್ಮಾಣದ ಹೃತಿಕ್ ರೋಷನ್ ಚಿತ್ರಕ್ಕೆ ಡೈರೆಕ್ಷನ್ ಮಾಡಲಿದ್ದಾರೆ ದಕ್ಷಿಣದ ಖ್ಯಾತ ಹೀರೋ
ಕನ್ನಡದ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಹೃತಿಕ್ ರೋಷನ್ ಜೊತೆ ಸಿನಿಮಾ ಘೋಷಣೆ ಮಾಡಿದೆ. ಈ ವಿಚಾರ ಕನ್ನಡದ ಅನೇಕರಿಗೆ ಖುಷಿ ಕೊಟ್ಟಿದೆ. ಕನ್ನಡದ ಬ್ಯಾನರ್ ಒಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದು ಖುಷಿಯ ವಿಚಾರ. ಈಗ ಈ ಚಿತ್ರಕ್ಕೆ ನಿರ್ದೇಶನ ಯಾರು ಮಾಡಲಿದ್ದಾರೆ ಎನ್ನುವ ವಿಚಾರ ರಿವೀಲ್ ಆಗಿದೆ.

ವಿಜಯ್ ಕಿರಗಂದೂರು ನೇತೃತ್ವದ ‘ಹೊಂಬಾಳೆ ಫಿಲ್ಮ್ಸ್’ (Hombale Films) ಕನ್ನಡದಲ್ಲಿ ಯಶಸ್ಸು ಕಂಡ ಬಳಿಕ ತೆಲುಗು, ತಮಿಳು ಮೊದಲಾದ ಭಾಷೆಗಳಿಗೆ ತೆರಳಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಬಾಲಿವುಡ್ನಲ್ಲೂ ಈ ಸಂಸ್ಥೆ ಸಿನಿಮಾ ನಿರ್ಮಿಸುತ್ತಿದ್ದೆ. ಬಾಲಿವುಡ್ನ ಖ್ಯಾತ ನಟ ಹೃತಿಕ್ ರೋಷನ್ ಜೊತೆ ಹೊಂಬಾಳೆ ಕೈ ಜೋಡಿಸಿದೆ. ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ದಕ್ಷಿಣದ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರು ಈ ಚಿತ್ರದ ಜವಾಬ್ದಾರಿ ಹೊತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಪೃಥ್ವಿರಾಜ್ ಹಾಗೂ ಹೊಂಬಾಳೆ ಫಿಲ್ಮ್ಸ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ಮೊದಲು ಹೊಂಬಾಳೆ ನಿರ್ಮಾಣದ ‘ಸಲಾರ್’ ಚಿತ್ರದಲ್ಲಿ ಪೃಥ್ವಿರಾಜ್ ನಟಿಸಿದ್ದರು. ಈಗ ‘ಸಲಾರ್ 2’ ಚಿತ್ರಕ್ಕಾಗಿ ಅವರು ರೆಡಿ ಆಗುತ್ತಿದ್ದಾರೆ. ಈಗ ಅವರು ಈ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ನಿಜವಾಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
They call him the Greek God. He’s ruled hearts, shattered limits and we see the phenomenon he truly is! We are proud to welcome @iHrithik to the @hombalefilms family for a collaboration, years in the making. A tale of grit, grandeur and glory is set to unfold, where intensity… pic.twitter.com/ZU2FHKjKdm
— Hombale Films (@hombalefilms) May 28, 2025
ಪೃಥ್ವಿರಾಜ್ ಅವರು ‘ಲುಸಿಫರ್’ ಹಾಗೂ ‘ಎಲ್ 2: ಎಂಪುರಾನ್’ ಚಿತ್ರಗಳನ್ನು ನಿರ್ದೇಶಿಸಿದ್ದು ಇದಕ್ಕೆ ಮೋಹನ್ಲಾಲ್ ಅವರು ಹೀರೋ. ಮೋಹನ್ಲಾಲ್ ಅವರ ಸ್ಟಾರ್ಗಿರಿಗೆ ತಕ್ಕಂತೆ ಸಿನಿಮಾನ ಕಟ್ಟಿಕೊಟ್ಟಿದ್ದರು. ಅಷ್ಟು ದೊಡ್ಡ ಹೀರೋನ ಉತ್ತಮವಾಗಿ ನಿಭಾಯಿಸಿದ್ದರು ಪೃಥ್ವಿರಾಜ್. ಈಗ ಹೃತಿಕ್ ಸಿನಿಮಾದ ಜವಾಬ್ದಾರಿಯನ್ನು ಹೊಂಬಾಳೆ ಇವರಿಗೆ ವಹಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಾವು ಸಂಭವಿಸಿದ್ದು ಕಾಂತಾರ ಚಿತ್ರೀಕರಣದ ವೇಳೆ ಅಲ್ಲ: ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುವ ಸಿನಿಮಾ ಒಂದನ್ನು ಪೃಥ್ವಿರಾಜ್ ಅವರು ನಿರ್ದೇಶನ ಮಾಡಬೇಕಿದೆ. ಈ ಸಂಸ್ಥೆ ಪೃಥ್ವಿರಾಜ್ ಕಾಲ್ಶೀಟ್ ಪಡೆದು ಸಾಕಷ್ಟು ಸಮಯ ಆಗಿದೆ. ಈಗ ಅದಕ್ಕೆ ಮುಹೂರ್ತ ಕೂಡಿ ಬಂದಿದೆ ಎಂದು ಹೇಳಲಾಗುತ್ತಿದೆ. ಹೃತಿಕ್ ರೋಷನ್ ಅವರಿಗೆ ಬಾಲಿವುಡ್ನಲ್ಲಿ ಸಖತ್ ಬೇಡಿಕೆ ಇದೆ. ಅವರ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








