AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಹಾಸಿನಿ ಸರಳತೆಗೆ ಅವರೇ ಸಾಟಿ; ಬೀದಿ ಬದಿ ಕಲಾವಿದನ ಹಾಡನ್ನು ಶ್ರದ್ಧೆಯಿಂದ ಕೇಳಿ ಮೆಚ್ಚಿದ ನಟಿ

ಪ್ರಸಿದ್ಧ ನಟಿ ಸುಹಾಸಿನಿ ಅವರ ಸರಳತೆ ಮತ್ತು ಕಲಾವಿದರನ್ನು ಗೌರವಿಸುವ ರೀತಿ ಜನರನ್ನು ಸೆಳೆದಿದೆ. ದಾರಿಯಲ್ಲಿ ಹಾಡುವ ಕಲಾವಿದನಿಗೆ ಗೌರವ ತೋರಿದ ವಿಡಿಯೋ ವೈರಲ್ ಆಗಿದೆ.ಇದರಿಂದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಜನಪ್ರಿಯರಾಗಿದ್ದಾರೆ. ಕನ್ನಡದಲ್ಲಿ ಅವರು ‘ಬಂಧನ’, ‘ಮುತ್ತಿನ ಹಾರ’ ರೀತಿಯ ಸಿನಿಮಾಗಳನ್ನು ನೀಡಿದರು.

ಸುಹಾಸಿನಿ ಸರಳತೆಗೆ ಅವರೇ ಸಾಟಿ; ಬೀದಿ ಬದಿ ಕಲಾವಿದನ ಹಾಡನ್ನು ಶ್ರದ್ಧೆಯಿಂದ ಕೇಳಿ ಮೆಚ್ಚಿದ ನಟಿ
ಸುಹಾಸಿನಿ
ರಾಜೇಶ್ ದುಗ್ಗುಮನೆ
|

Updated on: May 30, 2025 | 7:10 AM

Share

ಹಿರಿಯ ನಟಿ ಸುಹಾಸಿನಿ (Suhasini) ಅವರು ಕನ್ನಡ, ತಮಿಳು ಸೇರಿದಂತೆ ಅನೇಕ ಭಾಷಿಗರಿಗೆ ಪರಿಚಯ ಇದ್ದಾರೆ. ಅವರು ಯಾವಾಗಲೂ ತಮ್ಮ ಸರಳತೆಯ ಕಾರಣದಿಂದ ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಈಗ ಅವರ ಸರಳತೆಗೆ ಮತ್ತು ಕಲಾವಿದರನ್ನು ಗೌರವಿಸುವ ರೀತಿಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ನಟಿ ಸುಹಾಸಿನಿ ಸರಳತೆಯನ್ನು ನೋಡಿ ಎಲ್ಲರೂ ಕೊಂಡಾಡುತ್ತಿದ್ದಾರೆ.

ಸಾಮಾನ್ಯವಾಗಿ ದೊಡ್ಡ ಸೆಲೆಬ್ರಿಟಿಗಳು ಹಾಗೆಲ್ಲ ಕೈಗೆ ಸಿಗೋದಿಲ್ಲ. ದೊಡ್ಡ ದೊಡ್ಡ ಕಾರ್ಯಕ್ರಮದಲ್ಲಿ ಅವರು ಕಾಣ ಸಿಗುತ್ತಾರೆ. ಸುಹಾಸಿನಿ ಅವರು ಎಷ್ಟೇ ಜನಪ್ರಿಯತೆ ಪಡೆದಿದ್ದರು, ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪತಿ ಎನಿಸಿಕೊಂಡರೂ ಜನ ಸಾಮಾನ್ಯರನ್ನು ಭೇಟಿ ಆಗುತ್ತಾರೆ. ವಿಮಾನ ನಿಲ್ದಾಣದಲ್ಲಿ ಅವರು ಭೇಟಿ ಆದರೆ ಅಭಿಮಾನಿಗಳ ಬಳಿ ಮಾತನಾಡುತ್ತಾರೆ, ಆಟೋಗ್ರಾಫ್​ ನೀಡುತ್ತಾರೆ, ಸೆಲ್ಫಿಗೆ ಪೋಸ್ ಕೊಡುತ್ತಾರೆ. ಇದು ಅವರ ಸರಳತೆಗೆ ಹಿಡಿದ ಕನ್ನಡಿ.

ಇದನ್ನೂ ಓದಿ: ‘ನಾನು ನಿಮ್ಮ ದೊಡ್ಡ ಅಭಿಮಾನಿ’; ಮಣಿರತ್ನಂನಿಂದ ಸಾಯಿ ಪಲ್ಲವಿಗೆ ವಿಶೇಷ ಮೆಚ್ಚುಗೆ

ಇದನ್ನೂ ಓದಿ
Image
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?
Image
ಕಿಚ್ಚ ಸುದೀಪ್-ರಾಜೇಶ್ ಕೃಷ್ಣನ್ ಹಾಡಿನ್ ಜುಗಲ್​ಬಂದಿ; ಅಪರೂಪದ ವಿಡಿಯೋ
Image
ಎ,ಓಂ ಚಿತ್ರವನ್ನು ನಾನು ಮಾಡಿದ್ದರೆ ನಿವೃತ್ತಿ ಪಡೆಯುತ್ತಿದ್ದೆ; ಸುಕುಮಾರ್
Image
ಪವನ್ ಕಲ್ಯಾಣ್ ನಟನೆಯ ‘ಒಜಿ’ ಚಿತ್ರಕ್ಕೆ ಸೊಳ್ಳೆ ಕಾಟ; ಶೂಟಿಂಗ್ ಸ್ಥಗಿತ

ಇತ್ತೀಚೆಗೆ ಸುಹಾಸಿನಿ ಅವರು ದಾರಿಬದಿಯಲ್ಲಿ ನಿಂತು ಹನುಮಂತನ ವೇಷ ಧರಿಸಿ ಬಂದ ವ್ಯಕ್ತಿಯ ಹಾಡನ್ನು ಕೇಳಿದ್ದಾರೆ. ಈ ಹಾಡಿಗೆ ಅವರು ತಲೆದೂಗಿದ್ದಾರೆ. ಅತ್ಯಂತ ಶ್ರದ್ಧೆಯಿಂದ ಹಾಡನ್ನು ಆಲಿಸಿದ ಬಳಿಕ ಅವರು ಕಲಾವಿದನಿಗೆ ಧನ್ಯವಾದ ಹೇಳಿದ್ದಾರೆ. ಸುಹಾಸಿನಿ ಅವರು ಸಣ್ಣ ಕಲಾವಿದರನ್ನೂ ಎಷ್ಟು ಗೌರವಿಸುತ್ತಾರೆ ಎಂಬುದಕ್ಕೆ ಇದು ಒಂದು ಒಳ್ಳೆಯ ನಿದರ್ಶನ. ಈ ವಿಡಿಯೋ ಸಾಕಷ್ಟು ಲೈಕ್ಸ್ ಪಡೆದುಕೊಂಡಿದೆ.

ಸುಹಾಸಿನಿ ಹುಟ್ಟಿದ್ದು ತಮಿಳುನಾಡಿನಲ್ಲಿ. ಅವರು 1980ರಲ್ಲಿ ‘ನೆಂಜತಾಯ್ ಕಿಲ್ಲತ್ತೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದರು. 1981ರಲ್ಲಿ  ‘ಕೊತ್ತ ಜೀವಿತಲು’ ಸಿನಿಮಾದ ಮೂಲಕ ತೆಲುಗು ರಂಗ ಪ್ರವೇಶಿಸಿದರು. 1983ರಲ್ಲಿ ‘ಬೆಂಕಿಯಲ್ಲಿ ಅರಳಿದ ಹೂವು’ ಸಿನಿಮಾ ಮೂಲಕ ಕನ್ನಡಕ್ಕೆ ಪರಿಚಯ ಆದರು. ಕನ್ನಡದಲ್ಲಿ ಅವರು ‘ಬಂಧನ’, ‘ಮುತ್ತಿನ ಹಾರ’ ರೀತಿಯ ಸಿನಿಮಾಗಳನ್ನು ನೀಡಿದರು. 1997ರಲ್ಲಿ ಬಂದ ‘ಅಮೃತವರ್ಷಿಣಿ’ ಚಿತ್ರ ಈಗಲೂ ಅನೇಕರ ಫೇವರಿಟ್ ಸಿನಿಮಾ. ಈ ಚಿತ್ರದಲ್ಲಿ ಸುಹಾಸಿನಿ, ರಮೇಶ್ ಅರವಿಂದ್ ಹಾಗೂ ಶರತ್ ಬಾಬು ನಟಿಸಿದ್ದರು. 1988ರಲ್ಲಿ ಸುಹಾಸಿನಿ ಮಣಿರತ್ನಂ ಅವರನ್ನು ವಿವಾಹ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ