AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆ ಆಗುತ್ತಿದೆ ‘ಮಜಾ ಟಾಕೀಸ್’; ಈ ವಾರ ಫಿನಾಲೆ ವೀಕ್

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ "ಮಜಾ ಟಾಕೀಸ್" ಈ ವಾರ ತನ್ನ ಗ್ರ್ಯಾಂಡ್ ಫಿನಾಲೆಯನ್ನು ಆಚರಿಸಲಿದೆ. ಸೃಜನ್ ಲೋಕೇಶ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮವು ಅನೇಕ ಪ್ರತಿಭಾವಂತ ಕಲಾವಿದರನ್ನು ಪರಿಚಯಿಸಿದೆ. ಫಿನಾಲೆ ವಾರದಲ್ಲಿ ದೊಡ್ಡಣ್ಣ ಮತ್ತು ಚಿಕ್ಕಣ್ಣ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕೊನೆ ಆಗುತ್ತಿದೆ ‘ಮಜಾ ಟಾಕೀಸ್’; ಈ ವಾರ ಫಿನಾಲೆ ವೀಕ್
ಮಜಾ ಟಾಕೀಸ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: May 30, 2025 | 10:06 AM

Share

ಇಷ್ಟು ವರ್ಷಗಳ ಕಾಲ ಸೃಜನ್ ಲೋಕೇಶ್ (Srujan Lokesh) ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದ್ದುಕೊಂಡು ನಗಿಸುವ ಕೆಲಸ ಮಾಡಿದ್ದಾರೆ. ಜನವರಿಯಲ್ಲಿ ಅವರ ನೇತೃತ್ವದ ‘ಮಜಾ ಟಾಕೀಸ್’ ಶೋ ಆರಂಭ ಆಗಿತ್ತು. ಈಗ ಈ ಶೋ ಕೊನೆ ಆಗುತ್ತಿದೆ. ಈ ಬಗ್ಗೆ ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ವಾಹಿನಿಯವರು ಮಾಹಿತಿ ನೀಡಿದ್ದಾರೆ.

‘ಮಜಾ ಟಾಕೀಸ್’ ಶೋನ ನೇತೃತ್ವನ್ನು ಸೃಜನ್ ಲೋಕೇಶ್ ಅವರು ವಹಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ಅವರು ವಿಶೇಷ ಸ್ಥಾನ ಅಲಂಕರಿಸಿದ್ದರು. ಕುರಿ ಪ್ರತಾಪ್ ಸೇರಿದಂತೆ ಅನೇಕ ಕಲಾವಿದರು ಈ ಬಾರಿಯ ಮಜಾ ಮನೆಯಲ್ಲಿ ಇದ್ದರು. ಇಷ್ಟು ವಾರಗಳ ಕಾಲ ಶೋ ಪ್ರಸಾರ ಕಂಡಿತ್ತು. ಈಗ ‘ಮಜಾ ಟಾಕೀಸ್’ಗೆ ಗ್ರ್ಯಾಂಡ್ ಫಿನಾಲೆ ವೀಕ್ ಎನ್ನುವ ಪಟ್ಟವನ್ನು ಕೊಡಲಾಗಿದೆ.

ಇದನ್ನೂ ಓದಿ
Image
ಎಚ್​ಎಸ್​ ವೆಂಕಟೇಶ​ಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
Image
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
Image
ಸುಹಾಸಿನಿ ಸರಳತೆ; ಬೀದಿ ಬದಿ ಕಲಾವಿದ ಹಾಡು ಕೇಳಿ ಮೆಚ್ಚುಗೆ
Image
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

‘ಮಜಾ ಟಾಕೀಸ್’ ಶೋನಲ್ಲಿ ಈ ವಾರ ದೊಡ್ಡಣ್ಣ, ಚಿಕ್ಕಣ್ಣ ಇಬ್ಬರೂ ಅತಿಥಿಗಳಾಗಿ ಆಗಮಿಸಿದ್ದಾರೆ. ಅವರು ಪ್ರೇಕ್ಷಕರನ್ನು ರಂಜಿಸೋ ಕೆಲಸ ಮಾಡಲಿದ್ದಾರೆ. ಕೆಲವು ಫನ್ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಈ ಪೋಸ್ಟರ್​ಗೆ ‘ಮಜಾ ಟಾಕೀಸ್ ಗ್ರಾಂಡ್ ಫಿನಾಲೆ ಎನ್ನುವ ಕ್ಯಾಪ್ಶನ್ ಕೊಡಲಾಗಿದೆ. ಅಂದರೆ ಈ ಶೋ ಪೂರ್ಣಗೊಳ್ಳೋದು ಖಚಿತವಾಗಿದೆ.

ಕ್ವಾಟ್ಲೆ ಕಿಚನ್ ಹೆಸರಿನ ಹೊಸ ಶೋ ಬರಲಿದೆ. ಇದಕ್ಕೆ ಕುರಿ ಪ್ರತಾಪ್ ಹಾಗೂ ಅನುಪಮಾ ಗೌಡ ಅವರು ನಿರೂಪಕರಾಗಿ ಇರಲಿದ್ದಾರೆ. ಇವರು ಇಬ್ಬರು ಸೇರಿದರೆ ಫನ್ ಗ್ಯಾರಂಟಿ. ಹೊಸ ಶೋನಿಂದ ನಾವು ಅದನ್ನೇ ನಿರೀಕ್ಷಿಸಬಹುದು. ಈಗ ‘ಮಜಾ ಟಾಕೀಸ್​’ ಬಳಿಕ ಆ ಸಮಯದಲ್ಲಿ ಈ ಶೋ ಪ್ರಸಾರ ಕಾಣಬಹುದು ಎಂದು ಊಹಸಿಲಾಗುತ್ತಿದೆ.

ಇದನ್ನೂ ಓದಿ: ‘ಮಜಾ ಟಾಕೀಸ್​’ನಿಂದ ಬದಲಾಗಿದೆ ಹಲವರ ಬದುಕು; ವಿವರಿಸಿದ ಸೃಜನ್ ಲೋಕೇಶ್

ವಿಶೇಷ ಎಂದರೆ ಈಗಾಗಲೇ ಬಾಯ್ಸ್ vs ಗರ್ಲ್ಸ್ ಶೋ ಪೂರ್ಣಗೊಂಡಿದೆ. ಈ ಶೋ ಸಮಯಕ್ಕೆ ಈಗ ಧಾರಾವಾಹಿಗಳು ಪ್ರಸಾರ ಕಾಣಲಿವೆ. ಇದಲ್ಲದೆ, ಬೇರೆ ರಿಯಾಲಿಟಿ ಶೋಗಳನ್ನು ಕಲರ್ಸ್​ ಅವರು ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!