AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕನಿಗೆ ಗಾಜಿನ ಬಾಟಲಿಯಲ್ಲಿ ಹೊಡೆದ ಶಿಲ್ಪಾ ಶೆಟ್ಟಿ; ಅಡ್ಡ ಬಂದ ಗಾಯಕನಿಗೂ ಬಿತ್ತು ಏಟು

ಸೋಶಿಯಲ್​ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಅವರು ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಬಗೆಬಗೆಯ ವಿಡಿಯೋ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ.

ನಿರ್ದೇಶಕನಿಗೆ ಗಾಜಿನ ಬಾಟಲಿಯಲ್ಲಿ ಹೊಡೆದ ಶಿಲ್ಪಾ ಶೆಟ್ಟಿ; ಅಡ್ಡ ಬಂದ ಗಾಯಕನಿಗೂ ಬಿತ್ತು ಏಟು
ಶಿಲ್ಪಾ ಶೆಟ್ಟಿ, ರೋಹಿತ್ ಶೆಟ್ಟಿ
TV9 Web
| Edited By: |

Updated on: Mar 03, 2022 | 8:06 AM

Share

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಸಖತ್​ ಬ್ಯುಸಿ ಆಗಿದ್ದಾರೆ. ಸಿನಿಮಾ, ಕಿರುತೆರೆ, ಯೋಗ ತರಬೇತಿ, ಉದ್ಯಮ, ಜಾಹೀರಾತು ಹೀಗೆ ಹಲವು ಕ್ಷೇತ್ರದಲ್ಲಿ ಅವರು ತೊಡಗಿಕೊಂಡಿದ್ದಾರೆ. ಪತಿ ರಾಜ್​ ಕುಂದ್ರಾ ಅವರಿಂದ ಉಂಟಾದ ಅಶ್ಲೀಲ ಸಿನಿಮಾ ವಿವಾದದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಸ್ವಲ್ಪ ಮಂಕಾಗಿದ್ದರು. ಆದರೆ ಈಗ ಅವರ ಸಂಪೂರ್ಣವಾಗಿ ಹಳೇ ಚಾರ್ಮ್​ ಪಡೆದುಕೊಂಡಿದ್ದಾರೆ. ಎಲ್ಲ ಕಾರ್ಯಕ್ರಮಗಳಲ್ಲೂ ತುಂಬ ಲವಲವಿಕೆಯಿಂದ ಅವರು ಭಾಗವಹಿಸುತ್ತಿದ್ದಾರೆ. ಕಿರುತೆರೆಯಲ್ಲಿ ಶಿಲ್ಪಾ ಶೆಟ್ಟಿ ಜಡ್ಜ್​ ಆಗಿರುವ ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್​’ (India’s Got Talent) ಕಾರ್ಯಕ್ರಮ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ಶೋ ಸೆಟ್​ನಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಖ್ಯಾತ ನಿರ್ದೇಶಕ ರೋಹಿತ್​ ಶೆಟ್ಟಿ (Rohit Shetty) ಅವರಿಗೆ ಶಿಲ್ಪಾ ಶೆಟ್ಟಿ ಅವರು ಗಾಜಿನ ಬಾಟಲಿಯಿಂದ ಹೊಡೆದಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ/ಗಾಯಕ ಬಾದ್​ಷಾ ಕೂಡ ಜಡ್ಜ್​ ಆಗಿದ್ದಾರೆ. ಅವರಿಗೂ ಕೂಡ ಏಟು ಬಿದ್ದಿದೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಶಿಲ್ಪಾ ಶೆಟ್ಟಿ ಈ ರೀತಿ ಮಾಡಿದ್ದು ಯಾಕೆ? ಇಲ್ಲಿದೆ ವಿವರ..

ಸೋಶಿಯಲ್​ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಅವರು ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಬಗೆಬಗೆಯ ವಿಡಿಯೋ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 2.4 ಕೋಟಿ ಜನರು ಫಾಲೋ ಮಾಡುತ್ತಾರೆ. ತಮ್ಮನ್ನು ಫಾಲೋ ಮಾಡುವವರ ಮನರಂಜನೆಗಾಗಿ ಶಿಲ್ಪಾ ಶೆಟ್ಟಿ ಈ ರೀತಿ ಮಾಡಿದ್ದಾರೆ. ನಿರ್ದೇಶಕ ರೋಹಿತ್​ ಶೆಟ್ಟಿ ಜೊತೆ ನಡೆದಿರುವುದು ಒಂದು ಹುಸಿ ಹೊಡೆದಾಟ.

ಅಲ್ಲಿ ಆಗಿದ್ದು ಇಷ್ಟೇ.. ಶೂಟಿಂಗ್​ ಬಿಡುವಿನ ವೇಳೆ ಜಡ್ಜ್​ ಸೀಟ್​ನಲ್ಲಿ ಕುಳಿತಿದ್ದ ರೋಹಿತ್​ ಶೆಟ್ಟಿ ಮತ್ತು ಬಾದ್​ಷಾ ಅವರು ಗಾಢವಾಗಿ ಏನನ್ನೋ ಚರ್ಚೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಹಿಂದಿನಿಂದ ಬಂದ ಶಿಲ್ಪಾ ಶೆಟ್ಟಿ ಅವರು ರೋಹಿತ್​ ಶೆಟ್ಟಿಯ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರ ಕಡೆಗೆ ರೋಹಿತ್​ ಶೆಟ್ಟಿ ಗಮನ ಕೊಡಲಿಲ್ಲ. ಅದರಿಂದ ಶಿಲ್ಪಾ ಶೆಟ್ಟಿಗೆ ಕೋಪ ಬಂತು. ಪಕ್ಕದಲ್ಲಿ ಇದ್ದ ಗಾಜಿನ ಬಾಟಲ್​ ಎತ್ತಿಕೊಂಡು ರೋಹಿತ್​ ಶೆಟ್ಟಿಗೆ ಅವರು ಹೊಡೆದೇ ಬಿಟ್ಟರು. ‘ಸಿನಿಮಾದಲ್ಲಿ ಚಾನ್ಸ್​ ಕೊಡಿ ನನಗೆ’ ಎಂದು ಆವಾಜ್​ ಹಾಕಿದರು. ಅದರಿಂದ ಶಾಕ್​ ಆದ ರೋಹಿತ್​ ಶೆಟ್ಟಿ, ‘ಹುಚ್ಚು ಹಿಡಿದಿದೆಯಾ’ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯೆ ಮಾತನಾಡಲು ಬಂದ ಬಾದ್​ಷಾ ಅವರಿಗೂ ಶಿಲ್ಪಾ ಶೆಟ್ಟಿ ಗಾಜಿನ ಬಾಟೆಲ್​ನಿಂದ ಹೊಡೆದಿದ್ದಾರೆ. ಇದೆಲ್ಲೂ ನಡೆದಿರುವುದು ತಮಾಷೆಗಾಗಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಒಂದಿಲ್ಲೊಂದು ಕಾರಣಕ್ಕೆ ಶಿಲ್ಪಾ ಶೆಟ್ಟಿ ಸುದ್ದಿ ಆಗುತ್ತಲೇ ಇರುತ್ತಾರೆ. ಈ ಹಿಂದೆ ಇದೇ ಶೋ ಶೂಟಿಂಗ್​ ವೇಳೆ ಅವರು ಕೇವಲ 8 ಬಾದಾಮಿಗಾಗಿ ಜಗಳ ಮಾಡಿದ್ದರು. ಆ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಕಾರ್ಯಕ್ರಮದ ಸೆಟ್​ಗೆ ಬರುವಾಗ ಶಿಲ್ಪಾ ಶೆಟ್ಟಿ ಅವರು ಬಾದಾಮಿ ಬೀಜಗಳನ್ನು ತರುತ್ತಾರೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಉಪಯೋಗಗಳಿವೆ. ಆದರೆ ಶಿಲ್ಪಾ ಶೆಟ್ಟಿ ತಂದ ಬಾದಾಮಿಯನ್ನು ಇತರರು ತಿಂದು ಮುಗಿಸುತ್ತಾರೆ! ಅದು ಅವರ ಅಸಮಾಧಾನಕ್ಕೆ ಕಾರಣ ಆಗಿತ್ತು.

‘ಇವತ್ತು ನಾನು 6 ಬಾದಾಮಿ ತಂದಿದ್ದೇನೆ. ಕಳೆದ ಬಾರಿ ನಾನು 8 ಬಾದಾಮಿ ತಂದಿದ್ದೆ. ನನಗೆ ತಿನ್ನಲು ಸಿಕ್ಕಿದ್ದು ಒಂದು ಬಾದಾಮಿ ಮಾತ್ರ’ ಎಂದು ಅವರು ಟೇಬಲ್​ ಕುಟ್ಟಿ ಮಾತನಾಡಿದ್ದರು. ಇದನ್ನೆಲ್ಲ ಕೇಳಿಸಿಕೊಂಡ ಮತ್ತೋರ್ವ ಜಡ್ಜ್​, ಹಿರಿಯ ನಟಿ ಕಿರಣ್​ ಖೇರ್​ ಅವರು ಖಡಕ್​ ಉತ್ತರ ನೀಡಿದ್ದರು. ‘ನೀನು ಎಷ್ಟೊಂದು ಕಂಜೂಸ್. ಇಲ್ಲಿ ನಾವು ತುಂಬ ಜನ ಇದ್ದೇವೆ. ​ನೀನು ಕೇವಲ 6-8 ಬಾದಾಮಿ ತರುತ್ತೀದ್ದೀಯ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು. ಅದನ್ನು ಕೇಳಿ ಸೆಟ್​ನಲ್ಲಿ ಇದ್ದ ಎಲ್ಲರೂ ಜೋರಾಗಿ ನಕ್ಕಿದ್ದರು.

ಇದನ್ನೂ ಓದಿ:

ಭಯಾನಕ ಸ್ಪರ್ಧಿ ಕಂಡು ಬೆಚ್ಚಿಬಿದ್ದ ಜಡ್ಜ್​ಗಳು; ‘ಸಾಕು ನಿಲ್ಲಿಸಿ’ ಎಂದು ಕೂಗಿಕೊಂಡ ಶಿಲ್ಪಾ ಶೆಟ್ಟಿ, ಕಿರಣ್​ ಖೇರ್​

ಶಿಲ್ಪಾ ಶೆಟ್ಟಿಗೆ ಕೋಟ್ಯಂತರ ರೂಪಾಯಿ ಆಸ್ತಿ, ಮನೆ ಬರೆದುಕೊಟ್ಟ ರಾಜ್​ ಕುಂದ್ರಾ; ಅಚ್ಚರಿ ಮೂಡಿಸಿದ ನಡೆ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ