AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯಾನಕ ಸ್ಪರ್ಧಿ ಕಂಡು ಬೆಚ್ಚಿಬಿದ್ದ ಜಡ್ಜ್​ಗಳು; ‘ಸಾಕು ನಿಲ್ಲಿಸಿ’ ಎಂದು ಕೂಗಿಕೊಂಡ ಶಿಲ್ಪಾ ಶೆಟ್ಟಿ, ಕಿರಣ್​ ಖೇರ್​

India’s Got Talent: ಆದಿತ್ಯ ಮಾಳವೀಯ ಅವರು ತಮ್ಮ ದೇಹವನ್ನು ಮುರಿದು ಬಗ್ಗಿಸಿದ ರೀತಿಯನ್ನು ಕಂಡು ಶಿಲ್ಪಾ ಶೆಟ್ಟಿ ಅಕ್ಷರಶಃ ಕೂಗಿಕೊಂಡರು. ಸದ್ಯ ಈ ಕಾರ್ಯಕ್ರಮದ ಪ್ರೋಮೋ ವೈರಲ್​ ಆಗಿದೆ.

ಭಯಾನಕ ಸ್ಪರ್ಧಿ ಕಂಡು ಬೆಚ್ಚಿಬಿದ್ದ ಜಡ್ಜ್​ಗಳು; ‘ಸಾಕು ನಿಲ್ಲಿಸಿ’ ಎಂದು ಕೂಗಿಕೊಂಡ ಶಿಲ್ಪಾ ಶೆಟ್ಟಿ, ಕಿರಣ್​ ಖೇರ್​
ಶಿಲ್ಪಾ ಶೆಟ್ಟಿ, ಆದಿತ್ಯ ಮಾಳವೀಯ
TV9 Web
| Edited By: |

Updated on: Feb 07, 2022 | 2:31 PM

Share

ಪ್ರೇಕ್ಷಕರನ್ನು ಸೆಳೆಯಲು ಮನರಂಜನಾ ಕಿರುತೆರೆ ವಾಹಿನಿಗಳು ಎಲ್ಲಿಲ್ಲದ ಕಸರತ್ತು ಮಾಡುತ್ತವೆ. ಬಗೆಬಗೆಯ ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳನ್ನೂ ಆಯೋಜನೆ ಮಾಡುತ್ತವೆ. ಆ ಶೋಗಳಲ್ಲಿ ವಿಭಿನ್ನ ಟ್ಯಾಲೆಂಟ್​ಗಳನ್ನು ಪರಿಚಯಿಸಲಾಗುತ್ತದೆ. ಅಪರೂಪದ ಪ್ರತಿಭಾವಂತರನ್ನು ನೋಡಿದಾಗ ಎಲ್ಲರಿಗೂ ಖುಷಿ ಆಗುತ್ತದೆ. ಕಾರ್ಯಕ್ರಮದ ಜಡ್ಜ್​ಗಳು ಮೆಚ್ಚುಗೆ ಸೂಚಿಸುತ್ತಾರೆ. ಆದರೆ ನಟಿ ಶಿಲ್ಪಾ ಶೆಟ್ಟಿ ಜಡ್ಜ್​ ಆಗಿ ಭಾಗವಹಿಸಿರುವ ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್​’ (India’s Got Talent, Shilpa Shetty, Reality Show) ಕಾರ್ಯಕ್ರಮದಲ್ಲಿ ಬೇರೆ ರೀತಿಯ ಘಟನೆ ನಡೆದಿದೆ. ಈ ವೇದಿಕೆಯಲ್ಲಿ ಕಲೆ ತೋರಿಸಲು ಬಂದ ವ್ಯಕ್ತಿಯನ್ನು ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಇನ್ನುಳಿದ ನಿರ್ಣಾಯಕರಾದ ಕಿರಣ್​ ಖೇರ್​ ಮತ್ತು ಬಾದ್​ಶಾ ಕೂಡ ಹೌಹಾರಿದ್ದಾರೆ. ಸದ್ಯ ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಆಗಿದೆ. ಅದರಲ್ಲಿ ಭಯಾನಕ ಸ್ಪರ್ಧಿಯ ಟ್ಯಾಲೆಂಟ್​ ಏನೆಂಬುದರ ಝಲಕ್​ ತೋರಿಸಲಾಗಿದೆ. ಪೂರ್ತಿ ಎಪಿಸೋಡ್​ ಕೂಡ ಅಷ್ಟೇ ರೋಚಕವಾಗಿದೆ. ‘ಸೋನಿ ಟಿವಿ’ ವಾಹಿನಿಯಲ್ಲಿ ಈ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರ ಆಗುತ್ತಿದೆ.

ಈ ರೀತಿ ಭಯಾನಕವಾದ ಟ್ಯಾಲೆಂಟ್​ ತೋರಿಸಿರುವ ಸ್ಪರ್ಧಿ ಹೆಸರು ಆದಿತ್ಯ ಮಾಳವೀಯ. ಮೈ ಮೂಳೆಯನ್ನು ಹೇಗೆ ಬೇಕಾದರೂ ಬಳುಕಿಸಬಲ್ಲ ಸಾಮರ್ಥ್ಯ ಆದಿತ್ಯಗೆ ಇದೆ. ಆ ಪ್ರತಿಭೆಯನ್ನು ಅವರು ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್​’ ವೇದಿಕೆಯಲ್ಲಿ ತೋರಿಸಿದ್ದಾರೆ. ‘ನಮ್ಮ ಜಡ್ಜ್​ಗಳ ರೀತಿಯೇ ನೀವು ಕೂಡ ಆದಿತ್ಯ ಮಾಳವೀಯ ಅವರ ಟ್ಯಾಲೆಂಟ್​ ನೋಡಿ ಶಾಕ್​ ಆಗುತ್ತೀರಿ’ ಎಂಬ ಕ್ಯಾಪ್ಷನ್​ನೊಂದಿಗೆ ಈ ಪ್ರೋಮೋ ಹಂಚಿಕೊಳ್ಳಲಾಗಿದೆ.

‘ಇದು ಹೆದರಿಸುವಂತಹ ಶೋ’ ಎಂದು ಕಿರಣ್​ ಖೇರ್​ ಮೊದಲೇ ಊಹಿಸಿದರು. ಆದಿತ್ಯ ಮಾಳವೀಯ ಅವರು ತಮ್ಮ ದೇಹವನ್ನು ಮುರಿದು ಬಗ್ಗಿಸಿದ ರೀತಿಯನ್ನು ಕಂಡು ಶಿಲ್ಪಾ ಶೆಟ್ಟಿ ಅಕ್ಷರಶಃ ಕೂಗಿಕೊಂಡರು. ‘ದಯವಿಟ್ಟು ಇದನ್ನು ಮಾಡಬೇಡಿ’ ಎಂದು ಕಿರಣ್​ ಖೇರ್​ ಮನವಿ ಮಾಡಿಕೊಂಡರು. ಕೆಲವೊಂದು ಸಂದರ್ಭದಲ್ಲಿ ನಿರ್ಣಾಯಕ ಬಾದ್​ಶಾ ಕೂಡ ಬೆಚ್ಚಿ ಬಿದ್ದರು.

ಆದಿತ್ಯ ಮಾಳವೀಯ ಅವರು ವೇದಿಕೆಯಿಂದ ಕೆಳಗೆ ಇಳಿದು ಬಂದು, ಜಡ್ಜ್​ಗಳ ಎದುರಿನಲ್ಲೇ ಟ್ಯಾಲೆಂಟ್​ ತೋರಿಸಲು ಆರಂಭಿಸಿದರು. ಆಗಂತೂ ಶಿಲ್ಪಾ ಶೆಟ್ಟಿ ಅವರು ಭಯದಿಂದ ಗಡಗಡ ನಡುಗಿದರು. ಅಲ್ಲದೇ ಜೋರಾಗಿ ಕೂಗಿಕೊಂಡರು. ‘ಸಾಕು ನಿಲ್ಲಿಸಿ.. ಇನ್ನೆಷ್ಟು ಹೆದರಿಸುತ್ತೀರಿ’ ಎಂದು ಶಿಲ್ಪಾ ಶೆಟ್ಟಿ ಬೇಡಿಕೊಂಡರು.

ಸದ್ಯ ಈ ಪ್ರೋಮೋ ಸಖತ್​ ವೈರಲ್​ ಆಗಿದೆ. ಆದಿತ್ಯ ಮಾಳವೀಯ ಅವರ ಟ್ಯಾಲೆಂಟ್​​ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಕಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸಲಾಗುತ್ತಿದೆ.

ಇದನ್ನೂ ಓದಿ:

ಶಿಲ್ಪಾ ಶೆಟ್ಟಿಗೆ ಕೋಟ್ಯಂತರ ರೂಪಾಯಿ ಆಸ್ತಿ, ಮನೆ ಬರೆದುಕೊಟ್ಟ ರಾಜ್​ ಕುಂದ್ರಾ; ಅಚ್ಚರಿ ಮೂಡಿಸಿದ ನಡೆ

8 ಬಾದಾಮಿಗಾಗಿ ಶಿಲ್ಪಾ ಶೆಟ್ಟಿ ಜಗಳ; ‘ನೀನು ಕಂಜೂಸ್’​ ಎಂದು ಮುಖಕ್ಕೆ ಹೊಡೆದಂತೆ ಹೇಳಿದ ಹಿರಿಯ ನಟಿ

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!