AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್​ ಬಗ್ಗೆ ಸೃಜನ್​ ಲೋಕೇಶ್​ ಮಾತು

‘ನನ್ನಮ್ಮ ಸೂಪರ್​ ಸ್ಟಾರ್​’ ವೇದಿಕೆ ಮೇಲೆ ಸುಕೃತ್​ ‘ತೇರಾ ಏರಿ ಅಂಬರದಾಗೆ..’ ಹಾಡಿಗೆ ಹೆಜ್ಜೆ ಹಾಕಿದನು. ಅವನು ಡ್ಯಾನ್ಸ್​ ಮಾಡಿದ ರೀತಿಗೆ ಸೃಜನ್​ ಲೋಕೇಶ್​ ಸಂತೋಷಪಟ್ಟಿದ್ದಾರೆ.

‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್​ ಬಗ್ಗೆ ಸೃಜನ್​ ಲೋಕೇಶ್​ ಮಾತು
ಸೃಜನ್​ ಲೋಕೇಶ್, ಸುಕೃತ್​
TV9 Web
| Updated By: ಮದನ್​ ಕುಮಾರ್​|

Updated on:Feb 07, 2022 | 8:16 AM

Share

ನಟ ಸೃಜನ್​ ಲೋಕೇಶ್ (Srujan Lokesh)​ ಅವರು ಕಿರುತೆರೆ ಲೋಕದಲ್ಲಿ ತುಂಬಾನೇ ಫೇಮಸ್​. ಅವರು ನಡೆಸಿಕೊಡುತ್ತಿದ್ದ ‘ಮಜಾ ಟಾಕೀಸ್​’ ಶೋ ಸಾಕಷ್ಟು ಖ್ಯಾತಿ ಗಳಿಸಿಕೊಂಡಿತ್ತು. ಈಗ ಅವರು ಕಲರ್ಸ್​​ ಕನ್ನಡದ ಶೋಗಳಿಗೆ ಜಡ್ಜ್​​ ಆಗಿ ಬರುತ್ತಿದ್ದಾರೆ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Super Star) ಕಾರ್ಯಕ್ರಮಕ್ಕೆ ನಿರ್ಣಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಶೋಗೆ ಅನೇಕ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಈ ಶೋ ಕಿರುತೆರೆ ಪ್ರೇಕ್ಷಕರನ್ನು ಸೆಳೆಯೋಕೆ ಯಶಸ್ವಿಯಾಗಿದೆ. ಈಗ ಈ ವೇದಿಕೆ ಮೇಲೆ ಸೃಜನ್​ ಲೋಕೇಶ್​ ಮಗ ಸುಕೃತ್​ ಆಗಮಿಸಿದ್ದ. ಈ ವೇಳೆ ಸುಕೃತ್ (Sukruth) ಬಗ್ಗೆ​ ಸೃಜನ್​ ಅವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

‘ನನ್ನಮ್ಮ ಸೂಪರ್​ ಸ್ಟಾರ್​’ ಕಾರ್ಯಕ್ರಮ ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿದೆ. ಪ್ರತಿ ಬಾರಿ ನೀಡುವ ನಾನಾ ಟಾಸ್ಕ್​ಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ಸೆಲೆಬ್ರಿಟಿ ಮಕ್ಕಳು ಮಾಡುವ ಕೀಟಲೆಗಳು ಒಂದೆರಡಲ್ಲ. ಅವರಾಡುವ ಚೂಟಿ ಮಾತುಗಳು ವೀಕ್ಷಕರಿಗೆ ಇಷ್ಟವಾಗುತ್ತಿದೆ. ಆದರೆ, ಈ ವಾರ ಈ ವೇದಿಕೆ ಹಲವು ಭಾವನಾತ್ಮಕ ವಿಚಾರಗಳಿಗೆ ಸಾಕ್ಷಿ ಆಯಿತು. ಸೃಜನ್​ ಹಾಗೂ ಸುಕೃತ್​ ನಡುವೆ ನಡೆದ ಸಂಭಾಷಣೆ ಕೇಳಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಅಪ್ಪ-ಮಗನ ಸಂಬಂಧದ ಬಗ್ಗೆ ಕೇಳಿ ಖುಷಿಪಟ್ಟಿದ್ದಾರೆ.

‘ನನ್ನಮ್ಮ ಸೂಪರ್​ ಸ್ಟಾರ್​’ ವೇದಿಕೆ ಮೇಲೆ ಸುಕೃತ್​ ‘ತೇರಾ ಏರಿ ಅಂಬರದಾಗೆ..’ ಹಾಡಿಗೆ ಹೆಜ್ಜೆ ಹಾಕಿದನು. ಅವನು ಡ್ಯಾನ್ಸ್​ ಮಾಡಿದ ರೀತಿಗೆ ಸೃಜನ್​ ಲೋಕೇಶ್​ ಸಂತೋಷಪಟ್ಟಿದ್ದಾರೆ. ಇದು ಸುಕೃತ್​ ತಾತ ಲೋಕೇಶ್​ ಡ್ಯಾನ್ಸ್​ ಮಾಡಿದ್ದ ಹಾಡಾಗಿತ್ತು ಅನ್ನೋದು ವಿಶೇಷ. ಇದು ವೀಕ್ಷಕರಿಗೆ ಖುಷಿ ನೀಡಿದೆ.

ಈ ಡ್ಯಾನ್ಸ್​ ಬಳಿಕ ಮಾತನಾಡಿದ ಸೃಜನ್​ ಅವರು, ‘ಇವನು ಡ್ಯಾನ್ಸ್​ ಮಾಡಿದ್ದು ನಿಜಕ್ಕೂ ಸರ್​ಪ್ರೈಸಿಂಗ್​ ಆಗಿತ್ತು’ ಎಂದರು.  ಎಲ್ಲರೂ ಸುಕೃತ್​ ಡ್ಯಾನ್ಸ್​ಅನ್ನು ಕೊಂಡಾಡಿದರು. ‘ಸುಕೃತ್​ ಅಪ್ಪನ ಮಗ. ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ. ನಾನು ಮನೆಯಲ್ಲಿದ್ದಾಗ ದಿನಕ್ಕೆ ಒಮ್ಮೆ ಆದರೂ ಊಟ ಮಾಡಿಸುತ್ತೇನೆ. ಇಲ್ಲ ಎಂದರೆ ನನಗೆ ಸಮಾಧಾನ ಆಗೋದೆ ಇಲ್ಲ’ ಎಂದರು ಸೃಜನ್​. ಆ ಬಳಿಕ ಇಬ್ಬರೂ ‘ತೇರಾ ಏರಿ ಅಂಬರದಾಗೆ’ ಹಾಡಿಗೆ ಹೆಜ್ಜೆ ಹಾಕಿದರು.

ಇದನ್ನೂ ಓದಿ: ‘ದೇವರು ಇದ್ದಾನೋ ಇಲ್ಲವೋ?’: ಸಮನ್ವಿ ನಿಧನದ ಬಳಿಕ ಸೃಜನ್​ ಲೋಕೇಶ್​ ನೋವಿನ ನುಡಿ

ಮಾಸ್ಟರ್​ ಆನಂದ್​ ಮಗಳು ವಂಶಿಕಾ ಭರ್ಜರಿ ಶಾಪಿಂಗ್​; ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್​ ಲೋಕೇಶ್​

Published On - 6:10 am, Mon, 7 February 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ